Subscribe to Updates

    Get the latest creative news from FooBar about art, design and business.

    What's Hot

    ‘ಆಸ್ರಣ್ಣ ಪ್ರಶಸ್ತಿ’ಗೆ ಹಿರಿಯ ಚೆಂಡೆ, ಮದ್ದಳೆ ವಾದಕ ಮೋಹನ ಶೆಟ್ಟಿಗಾ‌ರ್ ಆಯ್ಕೆ

    August 19, 2026

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಶ್ರಾವಣ ಸಂಗೀತೋತ್ಸವ 2026’ | ಆಗಸ್ಟ್ 22 ಮತ್ತು 23

    August 19, 2026

    ಬೆನಕ ಜ್ಯೋತಿಷ್ಯಾಲಯದಲ್ಲಿ ದಶಮ ವರ್ಷದ ಸರಣಿಯ ಸಮಾರೋಪ ಸಮಾರಂಭ

    August 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉಡುಪಿಯಲ್ಲಿ ವಿನೂತನ ಪರಿಕಲ್ಪನೆಯ ‘ಗ್ರಂಥಾಲಯದಲ್ಲಿ ನಮ್ಮ ಸಾಹಿತಿ’ ಕಾರ್ಯಕ್ರಮ
    Literature

    ಉಡುಪಿಯಲ್ಲಿ ವಿನೂತನ ಪರಿಕಲ್ಪನೆಯ ‘ಗ್ರಂಥಾಲಯದಲ್ಲಿ ನಮ್ಮ ಸಾಹಿತಿ’ ಕಾರ್ಯಕ್ರಮ

    August 18, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿಯ ನಗರ ಕೇಂದ್ರ ಗ್ರಂಥಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆ ಹಾಗೂ ವಿನೂತನ ಪರಿಕಲ್ಪನೆಯ ‘ಗ್ರಂಥಾಲಯದಲ್ಲಿ ನಮ್ಮ ಸಾಹಿತಿ’ ಎಂಬ ಕಾರ್ಯಕ್ರಮವು ದಿನಾಂಕ 14 ಆಗಸ್ಟ್ 2026ರಂದು ಉಡುಪಿ ಅಜ್ಜರಕಾಡು ಇಲ್ಲಿರುವ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮೊದಲ ಸಾಹಿತಿಯಾಗಿ ಮಾತನಾಡಿದ ಡಾ. ಪಾರ್ವತಿ ಜಿ. ಐತಾಳ್ “ನಾನು ಅನುವಾದಿಸಿದ್ದು ಓದುಗರಿಂದ ಅಪಾರ ಮೆಚ್ಚುಗೆ ಪಡೆದ ಕೃತಿ ನೋಬೆಲ್ ಪ್ರಶಸ್ತಿ ವಿಜೇತ ಪರ್ಲ್ ಎಸ್. ಬಕ್ ಅವರ ‘ಗುಡ್ ಅರ್ತ್’. ಮನುಷ್ಯ ಮತ್ತು ಮಣ್ಣುಗಳ ನಡುವಣ ಗಾಢವಾದ ಬಂಧವೇ ಇದರ ಮುಖ್ಯ ಕಥಾವಸ್ತು. 1930ರ ದಶಕದ ಚೀನಾದ ರೈತರ ಬದುಕು ಇದರ ಹಿನ್ನೆಲೆ. ಅಂದಿನ ದಿನಗಳಲ್ಲಿ ಚೀನಾದಲ್ಲಿ ಭೂಮಾಲೀಕರ ಅಹಂಕಾರ ಹಾಗೂ ಅಟ್ಟಹಾಸಗಳ ನಡುವೆ ತುಳಿತಕ್ಕೊಳಗಾದ ರೈತರ ಕಥೆ, ಕಥಾನಾಯಕ ವಾಂಗ್ ಲುಂಗ್ ತನ್ನ ಪುಟ್ಟ ಭೂಮಿಯಲ್ಲಿ ಶ್ರದ್ಧಾಭಕ್ತಿಗಳಿಂದ ಅಪಾರ ಪರಿಶ್ರಮದಿಂದ ದುಡಿದು ಚಿನ್ನವನ್ನೇ ಬೆಳೆದು ಶ್ರೀಮಂತನಾದ ಕಥೆ, ತಾಳ್ಮೆಯ ಪ್ರತಿಮೂರ್ತಿಯಾಗಿ ಅವನಿಗೆ ಸದಾ ಸಾಥ್ ನೀಡಿದ ಅವನ ಹೆಂಡತಿ ಓಲನ್-ಹೀಗೆ ಒಂದು ಅಪೂರ್ವ ಚಿತ್ರಣ ಈ ಕಾದಂಬರಿಯಲ್ಲಿ ನಮಗೆ ಸಿಗುತ್ತದೆ.” ಎಂದು ಹೇಳಿದರು.

    ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ. ಉದ್ಘಾಟಿಸಿ “ಈ ಯೋಜನೆಯಲ್ಲಿ ಹೆಚ್ಚು ಹೆಚ್ಚು ಸ್ಥಳೀಯ ಸಾಹಿತಿಗಳು ಬಂದು ತಮ್ಮ ಸಾಹಿತ್ಯ ರಚನೆಗಳ ಕುರಿತು ಮಾತನಾಡಬೇಕು ಅನ್ನುವುದೇ ನಮ್ಮ ಉದ್ದೇಶ” ಎಂದರು. ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಹೆಚ್.ಪಿ. ಮಾತನಾಡಿದರು. ಮುಖ್ಯ ಗ್ರಂಥಪಾಲಕಿ ಸುರೇಖಾ ರಾವ್ ಯೋಜನೆಯ ರೂಪುರೇಷೆಗಳನ್ನು ಕುರಿತು ವಿವರಿಸಿದರು. ಗ್ರಂಥಾಲಯವು ಶಾಲಾಮಕ್ಕಳಿಗಾಗಿ ಏರ್ಪಡಿಸಿದ್ದ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಾಯಿತು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous ArticleBharathanatya Rangapravesha of Kum. Disha Karthik
    Next Article ಮಹಾಕವಿ ಪರಮದೇವ ಸಂಸ್ಮರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ | ಆಗಸ್ಟ್ 21
    roovari

    Add Comment Cancel Reply


    Related Posts

    ‘ಆಸ್ರಣ್ಣ ಪ್ರಶಸ್ತಿ’ಗೆ ಹಿರಿಯ ಚೆಂಡೆ, ಮದ್ದಳೆ ವಾದಕ ಮೋಹನ ಶೆಟ್ಟಿಗಾ‌ರ್ ಆಯ್ಕೆ

    August 19, 2026

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಶ್ರಾವಣ ಸಂಗೀತೋತ್ಸವ 2026’ | ಆಗಸ್ಟ್ 22 ಮತ್ತು 23

    August 19, 2026

    ಬೆನಕ ಜ್ಯೋತಿಷ್ಯಾಲಯದಲ್ಲಿ ದಶಮ ವರ್ಷದ ಸರಣಿಯ ಸಮಾರೋಪ ಸಮಾರಂಭ

    August 19, 2026

    ಪೆರ್ಲದ ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ರಾಷ್ಟ್ರೀಯ ವಿಚಾರಸಂಕಿರಣ’

    August 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.