ಉಡುಪಿ : ರಜತ ಸಂಭ್ರಮದಲ್ಲಿರುವ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಉಡುಪಿ ಇದರ ವತಿಯಿಂದ ಪರ್ಯಾಯ ಶ್ರೀ ಶಿರೂರು ಮಠ, ಶ್ರೀ ಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ –12’ ರಾಧಾಕೃಷ್ಣಾರ್ಪಣ ನೃತ್ಯ ಕಾರ್ಯಕ್ರಮವನ್ನು ದಿನಾಂಕ 04 ಆಗಸ್ಟ್ 2026ರಂದು ಸಂಜೆ 7-00 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ನೃತ್ಯ ಕಾರ್ಯಕ್ರಮಕ್ಕೆ ನೃತ್ಯ ನಿರ್ದೇಶನ ಮತ್ತು ಹಾಡುಗಾರಿಕೆ ವಿದುಷಿ ವೀಣಾ ಎಂ. ಸಾಮಗ, ನಟುವಾಂಗ ವಿದ್ವಾನ್ ಕೆ. ಭವಾನಿ ಶಂಕರ್, ಮೃದಂಗದಲ್ಲಿ ಬಾಲಚಂದ್ರ ಭಾಗವತ್, ಪಿಟೀಲಿನಲ್ಲಿ ಶ್ರೀಧರ್ ಪಾಡಿಗಾರ್ ಹಿಮ್ಮೇಳ ಸಹಕಾರವನ್ನು ನೀಡಲಿದ್ದಾರೆ. ವಿದ್ವಾನ್ ಕೆ. ಭವಾನಿ ಶಂಕರ್, ವಿದುಷಿ ಶಿಫಾಲಿ ರಾಜೇಶ್ ರಾವ್, ವಿದುಷಿ ಸಂಜನಾ ಜೆ. ಸುವರ್ಣ, ವಿದುಷಿ ಯಶಸ್ವಿ, ವಿದುಷಿ ಕಾತ್ಯಾಯಿನಿ, ಸ್ವಾತಿ, ಸಾನ್ವಿ ಕೋಟ್ಯಾನ್, ಸಾನ್ವಿ, ರಚನಾ ಆಚಾರ್ಯ, ಅದಿತಿ ಮಂಡೀಚ, ಶ್ರೀಮತಿ ಗೀತಾ, ಶ್ರೀಮತಿ ದೀಪಾ, ಕ್ಷಿತಿ ಬಿ. ಪೂಜಾರಿ, ಸಂಹಿತಾ, ಶ್ರುತಿ, ಭ್ರಮರಿ ಬಿ.ಎಸ್., ಚಾರ್ವಿಕ, ಋತ್ವಿ, ಸಾತ್ವಿಕ್ ಕೆ., ಆದಿತ್ಯ ಆಚಾರ್ಯ, ದಿಗಂತ್, ಆರುಷ್, ಪ್ರಜ್ವಲ್, ದಿಶಾನ್, ವರ್ಷಿಣಿ, ವೈಷ್ಣವಿ, ಕಾಯಿರಾ, ವೈಶಾನಿ, ಮಾನ್ವಿ ಎಸ್., ಪ್ರೇಕ್ಷಿತಾ ಪಿ. ರಾವ್, ದಿಯಾ, ನಿವೇದಿತಾ ಕೆ. ಪೂಜಾರಿ, ಪ್ರಕೃತಿ, ಭೂಮಿಕಾ, ಪ್ರಣಮ್ಯ, ಪ್ರಥ್ವಿ ಎಸ್. ಕೋಟ್ಯಾನ್, ಶ್ರೀನೀತಿ, ಧೃತಿ ಎಸ್. ಕಾಂಚನ್, ಮಹೀ. ಎಮ್. ಪೂಜಾರಿ, ಅವನಿ ಯು. ರಾವ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.

