Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಸಂಪ್ರದಾಯ ದಿನ’

    March 28, 2026

    ಬಂಗಾಳಿ ಲೇಖಕ ಡಾ. ರಾಮ್‌ಕುಮಾ‌ರ್ ಇವರ ಕೃತಿಗೆ ‘ಸರಸ್ವತಿ ಸಮ್ಮಾನ್ ಪ್ರಶಸ್ತಿ’

    March 28, 2026

    ಮಂಗಳೂರಿನಲ್ಲಿ ‘ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿ’ ಪ್ರದಾನ

    March 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಶ್ರೀ ಅಭಿರಾಮ ಧಾಮದಲ್ಲಿ ಉಚಿತ ವಸಂತ ಶಿಬಿರ | ಏಪ್ರಿಲ್‌ 12ರಿಂದ 28
    Camp

    ಶ್ರೀ ಅಭಿರಾಮ ಧಾಮದಲ್ಲಿ ಉಚಿತ ವಸಂತ ಶಿಬಿರ | ಏಪ್ರಿಲ್‌ 12ರಿಂದ 28

    March 14, 2026Updated:March 16, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಈಗಾಗಲೇ ಮೂರು ವರ್ಷಗಳಿಂದ ಸತತವಾಗಿ ಬೇಸಿಗೆಯಲ್ಲಿ ಮಕ್ಕಳ ಶಿಬಿರ ನಡೆಸಿಕೊಂಡು ಯಶಸ್ವಿಯಾಗಿರುವ ಉಡುಪಿಯ ಶ್ರೀ ಅಭಿರಾಮ ಧಾಮದಲ್ಲಿ ಮುಂದಿನ ತಿಂಗಳು, ಏಪ್ರಿಲ್‌ 12ರಿಂದ 28ರ ತನಕ ‘ವಸಂತ ಶಿಬಿರ’ ಆಯೋಜಿಸಲಾಗುತ್ತಿದೆ. ಸುದೀರ್ಘ 16 ದಿನಗಳ ಕಾಲ ಪ್ರತೀ ದಿನ ಮುಂಜಾನೆ 6-30ಯಿಂದ 10ರ ತನಕ ಹಾಗೂ ಮಧ್ಯಾಹ್ನ 4-00ರಿಂದ 7-30ರ ತನಕ ಶಿಬಿರವು ಜರುಗಲಿದ್ದು ದಿನಂ ಪ್ರತೀ ಏಳು ತಾಸುಗಳ ಪೂರ್ವ ಆಯೋಜಿತ ಅವಧಿಗಳಲ್ಲಿ 11 ವಿಶಿಷ್ಟ ವಿಷಯ- ತಜ್ಞರ ಮೂಲಕ ಸುಜ್ನ್ಯಾನ ಪ್ರಸರಣ ಉಡುಪಿಯ ಮಕ್ಕಳಿಗೆ ನಿತ್ಯವೂ ನೀಡಲಾಗುತ್ತದೆ ಎಂದು ಅಭಿರಾಮ ಧಾಮದ ಸಂಸ್ಥಾಪಕ ಅಧ್ಯಕ್ಷರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ತಿಳಿಸಿದ್ದಾರೆ.

    ಉಡುಪಿಯ 8ರಿಂದ 16 ವಯಸ್ಸಿನ ಚಿಣ್ಣರಲ್ಲಿ ಸನಾತನ ಧರ್ಮದ ಹೊಳಹುಗಳನ್ನು, ಸದ್ವರ್ತನೆಯ ಮಾದರಿಯನ್ನು, ಸುಜ್ನ್ಯಾನಗಳ ಹೊಂಬೆಳಕನ್ನು, ರಾಷ್ಟ್ರ ಭಕ್ತಿಯ ಮೆರುಗನ್ನು ಪುನರುಚ್ಚರಿಸುವುದರಿಂದ ಅವರು ಕೇವಲ ಸಾಮಾನ್ಯ ವ್ಯಕ್ತಿಗಳಾಗದೇ ವಿಚಾರವಂತ ವ್ಯಕ್ತಿತ್ವಗಳಾಗಿ ಬೆಳೆಯುವಲ್ಲಿ ಈ ಶಿಬಿರ ಸಹಾಯಕಾರಿಯಾಗಲಿದೆ. ಬೆಳಿಗ್ಗೆ ಹಾಗೂ ಸಂಜೆ ಶುದ್ಧವೂ, ಸ್ವಾದಿಷ್ಟವೂ ಆದ ಖಾದ್ಯಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಸಂಸ್ಕೃತ- ಯೋಗ- ಸಂಗೀತ- ನೃತ್ಯ- ಭಾಷಣಕಲೆ- ಯಕ್ಷಗಾನ- ಉತ್ತಮನಡೆ- ನುಡಿ- ವರ್ತನೆ ಕುರಿತಂತೆ ರಂಗ ಚಟುವಟಿಕೆಗಳು, ಧರ್ಮಶಾಸ್ತ್ರಗಳ ಬಗ್ಗೆ ಪಕ್ಷಿನೋಟ, ವಿದ್ವತ್‌ ಜನರೊಡನೆ ಒಡನಾಟ ಮುಂತಾದ ಕಾರ್ಯಕ್ರಮಗಳು ಈ ಶಿಬಿರದ ಗರ್ಭದಲ್ಲಿವೆ. ಪುಟ್ಟಪುಟ್ಟ ಬದುಕಲ್ಲಿ ಮಹತ್ತರ ಗುರಿಗಳನ್ನಿರಿಸಿಕೊಂಡು ಸಾಧನೆಯ ಪಥದಲ್ಲಿ ಸಾಗುವ ಪರಿ, ಸೃಜನಶೀಲತೆಗಳ ಮೂಸೆಯಲ್ಲಿ ಹೊಮ್ಮಬೇಕಾದ ಚಿಣ್ಣರ ಮನಗಳಲ್ಲಿ ಚಿಗುರಿಸಲಾಗುವ ಭವ್ಯ ಕನಸುಗಳು ಇತ್ಯಾದಿ ವಿಚಾರಗಳ ಕುರಿತು ವಿಷಯ ತಜ್ನ್ಯರಿಂದ ಕಮ್ಮಟ-ಪಾಠ-ಪ್ರವಚನಗಳನ್ನು ಆಟಗಳ ಮೂಲಕ ಹೆಣೆಹೆಣೆದು ಭಾರತೀಯತೆಯ ನವ ಪ್ರತೀಕವಾಗಿಸುವಲ್ಲಿ ಶತಪ್ರಯತ್ನಗಳನ್ನು ನಿಸ್ವಾರ್ಥವಾಗಿ ಮಾಡಲಿದ್ದೇವೆ ಎಂದು ಸ್ವರಸಾಮ್ರಾಟ್. ವಿದ್ವಾನ್‌ ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ವಿದುಷಿ ಸುಷ್ಮಾ ಸುದರ್ಶನ್‌ ಈ ಸಂಧರ್ಭದಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ 70222 74686 ಮತ್ತು 88926 34006 ಸಂಖ್ಯೆಯನ್ನು ಸಂಪರ್ಕಿಸಿರಿ.

     

    baikady Cultural dance Literature Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ಸಮುದಾಯ ಬೆಂಗಳೂರು ಇವರ ‘ಭಗವಂತನ ಮರಣ’ ನಾಟಕ | ಮಾರ್ಚ್ 14
    Next Article ಬೆಂಗಳೂರಿನಲ್ಲಿ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ 2026’ ಪ್ರದಾನ ಸಮಾರಂಭ | ಮಾರ್ಚ್ 15
    roovari

    Add Comment Cancel Reply


    Related Posts

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಸಂಪ್ರದಾಯ ದಿನ’

    March 28, 2026

    ಬಂಗಾಳಿ ಲೇಖಕ ಡಾ. ರಾಮ್‌ಕುಮಾ‌ರ್ ಇವರ ಕೃತಿಗೆ ‘ಸರಸ್ವತಿ ಸಮ್ಮಾನ್ ಪ್ರಶಸ್ತಿ’

    March 28, 2026

    ಮಂಗಳೂರಿನಲ್ಲಿ ‘ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿ’ ಪ್ರದಾನ

    March 28, 2026

    ಉದಯೋನ್ಮುಖ ನೃತ್ಯ ಕಲಾವಿದೆ ಎಂ. ವಸುಧಾ ರಂಗಪ್ರವೇಶ | ಏಪ್ರಿಲ್ 03

    March 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.