ಕಡಬ : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಹಾಗೂ ಶ್ರವಣರಂಗ ಸವಣೂರು ಹಮ್ಮಿಕೊಂಡಿರುವ ‘ಯಕ್ಷಾಷಾಢ -4’ ತಾಳಮದ್ದಳೆ ಕಾರ್ಯಕ್ರಮವು ಆಲಂಕಾರು ಸಮೀಪದ ಶ್ರೀ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ದಿನಾಂಕ 22 ಜುಲೈ 2026ರಂದು ‘ಜಾಬಾಲಿ ನಂದಿನಿ’ ಎಂಬ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಗೋಪಾಲಕೃಷ್ಣ ಭಟ್ ನೇಮಿಷ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಮೋಹನ ಶರವೂರು, ತಾರಾನಾಥ ಸವಣೂರು, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಗಣರಾಜ ಕುಂಬ್ಳೆ (ಜಾಬಾಲಿ), ಭಾಸ್ಕರ್ ಬಾರ್ಯ (ದೇವೇಂದ್ರ), ಶುಭಾ ಜೆ.ಸಿ. ಅಡಿಗ (ನಂದಿನಿ) ಸಹಕರಿಸಿದರು. ಶ್ರೀದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ತಾರಾನಾಥ ಸವಣೂರು ಸ್ವಾಗತಿಸಿ, ಪ್ರಧಾನ ಅರ್ಚಕ ರಾಘವೇಂದ್ರ ಭಟ್ ವಂದಿಸಿದರು.

