ಮಂಗಳೂರು : ಚಾಮರ ಫೌಂಡೇಶನ್ (ರಿ.) ಮತ್ತು ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ (ರಿ.) ಇವರ ಸಹಭಾಗಿತ್ವದಲ್ಲಿ ವೃತ್ತಿಪರ ರಂಗ ಕಲಾವಿದೆ ತೃಷಾ ಶೆಟ್ಟಿಯವರ ನಿರ್ದೇಶನದಲ್ಲಿ ನಡೆದ ಮಕ್ಕಳ ‘ರಂಗ ಶಿಬಿರ’ದ ಸಮಾರೋಪ ಸಮಾರಂಭವನ್ನು ದಿನಾಂಕ 23 ಮೇ 2026ರಂದು ಸಂಜೆ 7-00 ಗಂಟೆಗೆ ಮಂಗಳೂರಿನ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರಾರ್ಥಿಗಳು ನಡೆಸಿಕೊಡುವ ರಂಗ ಪ್ರಯೋಗ ‘ಅರಿವಿನ ಕಥನ’ (ಝೆನ್ ಕಥಾ ಪ್ರಸ್ತುತಿ) ಪ್ರಶಾಂತ್ ಉದ್ಯಾವರ್ ರಂಗ ಪಠ್ಯ, ತೃಷಾ ಶೆಟ್ಟಿ ವಿನ್ಯಾಸ ಮತ್ತು ನಿರ್ದೇಶನ, ನಿಶಾಂತ್ ಸಂಗೀತ ನಿರ್ದೇಶನ ಮತ್ತು ಅವನೀಶ್ ಮತ್ತು ಯುವರಾಜ್ ಸಾಂಗತ್ಯ ನೀಡಲಿದ್ದಾರೆ. ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಕ್ಲಿಪ್ತ ಸಮಯಕ್ಕೆ ಪ್ರದರ್ಶನ ಶುರುವಾಗಲಿದ್ದು, ಮಕ್ಕಳು ತಮ್ಮ ಸೃಜನಶೀಲತೆ, ಉತ್ಸಾಹ ಮತ್ತು ಪ್ರತಿಭೆಯನ್ನು ರಂಗಭೂಮಿಯಲ್ಲಿ ತೋರಿಸಲಿದ್ದಾರೆ.

