Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಬಾಲ ಭವನ್ ವಿದ್ಯಾಕೇಂದ್ರ ಅಶ್ವಿನಿ ನಗರ ಹಾಗೂ ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಯಕ್ಷಗಾನ ಸಂಶೋಧನಾ ತರಬೇತಿ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 27 ಜೂನ್ 2025ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ಗ್ರಂಥಾಲಯ ವಾಚನ ವಾರಾಚರಣೆ ಸಮಾರಂಭವು ಉದ್ಘಾಟನೆಗೊಂಡಿತು. ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಇವರು ಮಾತನಾಡಿ “ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಹೊಂದುವುದರೊಂದಿಗೆ ಉತ್ತಮ ಸಂಸ್ಕಾರವಂತರಾಗಬೇಕು. ಉತ್ತಮ ಸಂಸ್ಕಾರ ಹೊಂದಬೇಕಾದರೆ ಪಠ್ಯ ಪುಸ್ತಕ ಮಾತ್ರವಲ್ಲದೆ ಇತರ ಉತ್ತಮ ಪುಸ್ತಕಗಳನ್ನು ಓದಬೇಕು. ಆಗ ಭಾಷಾ ಸ್ನೇಹ, ಸಾಹಿತ್ಯ ಸಂಪರ್ಕ, ತನ್ ಮೂಲಕ ಉತ್ತಮ ಸಾಮಾಜಿಕ ಕಳಕಳಿಯ ಸಂಸ್ಕಾರ ಮೈಗೂಡಿ ಸಮಾಜಕ್ಕೆ ಹಿತವಾಗುವ ವ್ಯಕ್ತಿಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು. ಕನ್ನಡ ಭವನ ಗ್ರಂಥಾಲದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ…
ಶಿವಮೊಗ್ಗ : ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಚಿಂತಕರ ಚಾವಡಿ ಶಿವಮೊಗ್ಗ ಇವರ ಸಹಯೋಗದಲ್ಲಿ ‘ಚಕೋರ’ ಸಾಹಿತ್ಯ ವಿಚಾರ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ದಿನಾಂಕ 29 ಜೂನ್ 2025ರಂದು ಸಂಜೆ 5-00 ಗಂಟೆಗೆ ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭವನ್ನು ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಇವರು ಉದ್ಘಾಟನೆ ಮಾಡಲಿದ್ದು, ಸದಸ್ಯ ಸಂಚಾಲಕರಾದ ಡಾ. ಪಿ. ಚಂದ್ರಿಕಾ ಆಶಯ ನುಡಿಗಳನ್ನಾಡಲಿದ್ದಾರೆ. ಪ್ರಾಧ್ಯಾಪಕರು ಬರಹಗಾರರಾದ ಡಾ. ಕುಂಸಿ ಉಮೇಶ್ ಇವರು ‘ಬಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕಥೆಗಳು’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿರುವರು.
ಧಾರವಾಡ ಜಿಲ್ಲೆಯ ಗದಗ ತಾಲೂಕು ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದ ಚೆನ್ನವೀರ ಕಣವಿಯವರು ನವೋದಯ ಹಾಗೂ ನವ್ಯಸಾಹಿತ್ಯಗಳೆರಡರಲ್ಲೂ ಸಕ್ರಿಯವಾಗಿ ಪಾಲುಗೊಂಡವರು. ತಂದೆ ಸಕ್ರಪ್ಪ ಹಾಗೂ ತಾಯಿ ಪಾರ್ವತವ್ವ. ಕಣವಿಯವರು ಶಿರುಂಡ, ಗರಗಗಳಲ್ಲಿ ವಿದ್ಯಾಭ್ಯಾಸ ಆರಂಭಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು. ಕಣವಿ ಕನ್ನಡದ ಹೋರಾಟದ ಕವಿ. ಅರ್ಥ ಕಳೆದುಕೊಂಡ ಸಂಪ್ರದಾಯಗಳನ್ನು ಮೀರಿ ನಿಂತು ಹೊಸ ಪರಂಪರೆ ಅನುಕರಿಸುವ ಸುಧಾರಣಾವಾದಿಯಾಗಿದ್ದರು. ಕನ್ನಡ ನಾಡಿಗಾಗಿ ಚಳುವಳಿಗಳಲ್ಲಿ ಭಾಗಿಯಾಗಿದ್ದರು. ಅವರು ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕಾವ್ಯ ಸಂಕಲನಗಳು ಹಲವು. ‘ಕಾವ್ಯಾಕ್ಷಿ’, ‘ಭಾವಜೀವಿ’, ‘ಆಕಾಶಬುಟ್ಟಿ’, ‘ಮಧುಚಂದ್ರ’ ಪ್ರಮುಖವಾದವುಗಳು. ‘ಸಾಹಿತ್ಯ ಚಿಂತನ’, ‘ಕಾವ್ಯಾನುಸಂಧಾನ’, ‘ಸಮಾಹಿತ’, ‘ಸಮತೋಲನ’ ಇತ್ಯಾದಿ ವಿಮರ್ಶಾ ಗ್ರಂಥಗಳು. ‘ಹಕ್ಕಿಪುಕ್ಕ’, ‘ಚಿನ್ನರ ಲೋಕವ ಹೈಕು’ ಮಕ್ಕಳ ಕವಿತೆಗಳು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ಆರಂಭಿಸಿದ ಕಣವಿಯವರು ಅದರ ನಿರ್ದೇಶಕರಾಗಿಯೂ ದುಡಿದಿದ್ದಾರೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಪಂಪ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’,…
ತೆಕ್ಕಟ್ಟೆ: ಕೊಮೆ-ಕೊರವಡಿ ಶ್ರೀ ಬೊಬ್ಬರ್ಯ ಶ್ರೀ ಹಳೆಯಮ್ಮ ದೇವಸ್ಥಾನ ವಠಾರ ಕೊಮೆಯಲ್ಲಿ ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂದಿರ, ಶ್ರೀ ಮಲಸಾವರಿ ಶ್ರೀ ಮಹಾಕಾಳಿ ದೇವಸ್ಥಾನ, ಶ್ರೀ ಶನೇಶ್ವರ ದೇವಸ್ಥಾನ, ಕೊಮೆ ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘ, ಅಭಿಮಾನ್ ಯುವಕ ಮಂಡಲ, ಶ್ರೀ ಮಹಾಕಾಳಿ ಫ್ರೆಂಡ್ಸ್, ಯಶಸ್ವೀ ಕಲಾವೃಂದ ಕೊಮೆ ಸಂಯುಕ್ತ ಆಶ್ರಯದಲ್ಲಿ ದಿ. ಎಸ್. ವಿಠ್ಠಲ ಪೈ ಸಾಲಿಗ್ರಾಮ ಇವರಿಗೆ ಭಕ್ತಿ ನಮನ, ನುಡಿ ನಮನ ಮತ್ತು ಗಾನ ನಮನ ಕಾರ್ಯಕ್ರಮ ದಿನಾಂಕ 26 ಜೂನ್ 2025 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ತೆಕ್ಕಟ್ಟೆ ಕೃಷ್ಣರಾಯ ಶಾನುಭಾಗ್ “ವಿಠ್ಠಲ ಪೈ ಸಾಲಿಗ್ರಾಮ ಕೇವಲ ದಾನಿಗಳಲ್ಲ. ಕೆಲಸಗಾರರೊಂದಿಗೆ ಕೆಲಸ ಮಾಡುವ ಕೆಲಸಗಾರ. ಹುಟ್ಟಿದವನು ಪ್ರತಿಯೊಬ್ಬನೂ ಸಾಯಲೇಬೇಕು. ಆದರೆ ಹುಟ್ಟು ಸಾವಿನ ನುಡವೆ ನಾವು ಮಾಡಬೇಕಾದದ್ದೇನು? ಅವೆಲ್ಲವನ್ನು ಕಿರು ಅವಧಿಯಲ್ಲಿಯೇ ಮುಗಿಸಿ ವಿಠ್ಠಲ್ ಪೈ ಮುಕ್ತಿ ಕಂಡುಕೊಂಡವರು. ದೇಗುಲವನ್ನು ನಿರ್ಮಾಣ ಮಾಡುವುದು ಸಣ್ಣ ವಿಷಯವಲ್ಲ. ಆ ಕಾರ್ಯದಲ್ಲಿಯೂ…
ಉಡುಪಿ : ಇತಿಹಾಸ ತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಅವರು 2025ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ (ಜಂಟಿ ಹೆಸರಲ್ಲಿ) ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ. ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ರೂಪಾಯಿ 20000 ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. ಡಾ. ಮಾಲತಿ ಕೃಷ್ಣಮೂರ್ತಿ ಇವರು ಉಡುಪಿಯ ಕಲ್ಯಾಣಪುರ ಸಮೀಪದ ಮೂಡುಕುದುರು ಎಂಬಲ್ಲಿ ಶ್ರೀನಿವಾಸ ರಾವ್ ಮತ್ತು ವರದಾಲಕ್ಷ್ಮೀ ಇವರ ಮಗಳಾಗಿ 1952ರಲ್ಲಿ ಜನಿಸಿದರು. ಮಿಲಾಗ್ರಿಸ್ ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿನಿಯಾಗಿ, ಮೈಸೂರು ವಿ. ವಿ. ಯಲ್ಲಿ ಬಿ. ಎ. ಪದವಿ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್, ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ, ಮೈಸೂರು ವಿ.ವಿ. ಇತಿಹಾಸ ವಿಭಾಗದಲ್ಲಿ ಎಂ.…
ಧಾರವಾಡ : ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಇದರ ಧಾರವಾಡ ಜಿಲ್ಲಾ ಘಟಕ ವತಿಯಿಂದ ಗಾನಯೋಗಿ ಪಂ.ಪಂಚಾಕ್ಷರ ಗವಾಯಿಗಳವರ ಪುಣ್ಯ ಸ್ಮರಣೆ ಕಾರ್ಯಕ್ರಮ ದಿನಾಂಕ 22 ಜೂನ್ 2025ರಂದು ಧಾರವಾಡದ ಸಾಂಸ್ಕೃತಿಕ ಸುವರ್ಣ ಸಮುಚ್ಚಯ ಭವನ ರಂಗಾಯಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿದ ಪೂಜ್ಯ ಶ್ರೀ ಡಾ. ಬಸವರಾಜ ದೇವರು ಶ್ರೀ ರೇವಣಸಿದ್ದೇಶ್ವರಮಠ ಮನಸೂರ ಇವರು ಮಾತನಾಡಿ “25 ವರ್ಷಗಳಿಂದ ಡಾಕ್ಟರ್ ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಅನೇಕ ಕಡೆ ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಮತ್ತು ಇದರ ಜೊತೆಗೆ ಸಂಗೀತ ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಉತ್ತಮ ಪಾತ್ರ ವಹಿಸಿದೆ. ಇದರ ಸಂಸ್ಥಾಪಕರಾದ ಚನ್ನವೀರ ಸ್ವಾಮಿಗಳು ಇನ್ನೂ ಹೆಚ್ಚಿನ ಧರ್ಮ ಕಾರ್ಯ ಮಾಡಲು ಅವರಿಗೆ ಪಂಚಾಕ್ಷರ ಗವಾಯಿಗಳ ಆಶೀರ್ವಾದ ಇದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸುರೇಶ ಡಿ. ಕಳಸಣ್ಣವರ ಮಾತನಾಡಿ “ಸರ್ವಜ್ಞನೆಂಬುವನು ಗರ್ವದಿಂದಾದನೆ ? ಸರ್ವರ ಒಳಗೊಂದು ನುಡಿ ಕಲಿತು ವಿದ್ಯೆ ಪರ್ವತವೇ ಆದ…
ಮೈಸೂರು : ‘ನಿರ್ದಿಗಂತ’ ಪ್ರಸ್ತುತ ಪಡಿಸುವ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಅಮಿತ್ ಜೆ. ರೆಡ್ಡಿ ಇವರ ನಿರ್ದೇಶನದಲ್ಲಿ ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನವನ್ನು ದಿನಾಂಕ 29 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಆಯೋಜಿಸಲಾಗಿದೆ. ಅಕ್ಷತಾ ಕುಮಟಾ ಮತ್ತು ರಾಜೇಶ್ ಮಾಧವನ್ ರಂಗದ ಅಭಿನಯಿಸಲಿದ್ದು, ಅನುಶ್ ಎ. ಶೆಟ್ಟಿ ಸಂಗೀತ ವಿನ್ಯಾಸ, ಬಾಷಾಸಾಬ್ ಬೆಳಕಿನ ವಿನ್ಯಾಸ, ಶ್ವೇತಾರಾಣಿ ಹೆಚ್.ಕೆ. ವಸ್ತ್ರ ವಿನ್ಯಾಸ ಮಾಡಿರುತ್ತಾರೆ.
ಬೆಂಗಳೂರು : ವಿರಾಜಪೇಟೆಯ ಕುಟ್ಟಂದಿ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕಲಾವಿದ ಶಿವಣ್ಣ ಎಸ್. ಅವರಿಗೆ ವಂದೇ ಮಾತರಂ ಲಲಿತಕಲಾ ಅಕಾಡಮಿಯು ಪ್ರತಿವರ್ಷ ನೀಡುವ ‘ಇಂಡಿಯನ್ ಐಕಾನ್ ಅವಾರ್ಡ್’ ಹಾಗೂ ನಾಟ್ಯ ಮಯೂರಿ ನೃತ್ಯ ಶಾಲೆ ನೀಡುವ ‘ಕರುನಾಡ ನಾಟ್ಯ ಕಲ್ಪವೃಕ್ಷ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ವಿಧಾನಸೌಧದ ಕಲಾಕ್ಷೇತ್ರ ಭವನದಲ್ಲಿ ನಡೆದ ‘ಇಂಡಿಯನ್ ಐಕಾನ್ ಅವಾರ್ಡ್’ ಪ್ರದಾನ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತರಾದ ನಂತೋಷ್ ಹೆಗ್ಡೆ, ಹಿರಿಯ ರಾಜಕಾರಣಿ ಖಾದರ್ ಮತ್ತಿತರ ಪ್ರಮುಖರು ಹಾಜರಿದ್ದರು. ಬೆಂಗಳೂರಿನ ನಯನ ಕಲಾಕ್ಷೇತ್ರದಲ್ಲಿ ನಡೆದ ‘ನಾಟ್ಯ ಮಯೂರಿ ನೃತ್ಯ ಶಾಲೆ’ಯ ಕಾರ್ಯಕ್ರಮದಲ್ಲಿ ಶಿವಣ್ಣ ಎನ್. ಇವರಿಗೆ ‘ಕರುನಾಡ ನಾಟ್ಯ ಕಲ್ಪವೃಕ್ಷ ಪ್ರಶಸ್ತಿ’ ನೀಡಲಾಯಿತು. ಈ ಸಂದರ್ಭ ಹಿರಿಯ ಚಿತ್ರನಟಿ ಭವ್ಯ, ಪ್ರಮುಖರಾದ ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿವಣ್ಣ ಎಸ್. ಅವರು ತಮ್ಮ ನಟನೆ ಮತ್ತು ಗಾಯನ ಪ್ರದರ್ಶನದ ಮೂಲಕ ಸಾವಿರಾರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ರಂಗಭೂಮಿ ಕಲಾವಿದರಾಗಿರುವ ಶಿವಣ್ಣ…
ಬೆಂಗಳೂರು : ಶ್ರೀ ಗುರು ಪಂಚಾಕ್ಷರಿ ಪುಟ್ಟರಾಜ ಸಂಗೀತ ಶಾಲೆ ಬೆಂಗಳೂರು, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಮತ್ತು ಗೀತಾ ಸಂಗೀತ ಅಕಾಡೆಮಿ ಟ್ರಸ್ಟ್ (ರಿ) ಇವರ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ‘ಸಾಹಿತ್ಯ ಮತ್ತು ಕಲಾ ಉತ್ಸವ – 2025’ ಕಾರ್ಯಕ್ರಮವನ್ನು ದಿನಾಂಕ 28 ಜೂನ್ 2025 ಶನಿವಾರ ಮದ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ಗೀತ ಗಾಯನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ರಾಯಚೂರಿನ ಸಾಹಿತಿ ಡಾ. ಮಹೇಂದ್ರ ಕುರ್ಡಿ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್ (ರಿ.) ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ. ಭಾಗ್ಯ ಸರವನ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ರಾಮನಗರ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಂಬರೀಷ್ ಇವರು ವಿವಿಧ…
ಬೆಂಗಳೂರು : ಬೆಂಗಳೂರು ಕನ್ನಡ ಜಾನಪದ ಪರಿಷತ್ ವತಿಯಿಂದ ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಅವರಿಗೆ 2025ನೇ ಸಾಲಿನ ‘ನಾಡೋಜ ಕರೀಂ ಖಾನ್ ರಾಜ್ಯ ಪ್ರಶಸ್ತಿ’ಯನ್ನು ದಿನಾಂಕ 25 ಜೂನ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಥಮ ಕನ್ನಡ ಜಾನಪದ ಸಮ್ಮೇಳನದಲ್ಲಿ ನೀಡಿ ಗೌರವಿಸಲಾಯಿತು. ಡಾ.ಜಮೀರ್ ಅಹಮದ್ ಇವರಿಗೆ ಕರ್ನಾಟಕ ಜಾನಪದ ಕಲೆ, ಸಾಹಿತ್ಯದ ಸಂರಕ್ಷಣೆಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ವಿದ್ಯಾರ್ಥಿಯಾಗಿರುವ ಜಮೀರ್ ಅಹಮದ್ ಇವರು ಶ್ರೀ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಬದುಕಿನುದ್ದಕ್ಕೂ ಮೈಗೂಡಿಸಿಕೊಂಡು ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದಾರೆ. ಭಾಷೆ ನನ್ನ ಅಂತರಂಗದ ಮೃದಂಗ ಎಂಬ ಕನ್ನಡ ಪ್ರೇಮಿ ‘ಕಾಳಜಿಯ ಕನ್ನಡಿಗ’ ಎಂದೇ ಚಿರಪರಿಚಿತರು. ಕನ್ನಡ ಉಪನ್ಯಾನಕರಾಗಿ ಮತ್ತು ಪತ್ರಕರ್ತರಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಜೀವನದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಆರ್ಥಿಕವಾಗಿ ದುರ್ಬಲವಾಗಿರುವ ರೋಗಿಗಳಿಗೆ ಅದರಲ್ಲೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ…