Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಲಾರ್ ಅರಸ್ತಾನದ ಮದ್ರ ಪ್ರಕಾಶನ ಪ್ರಕಟಿಸಿದ ಪತ್ರಕರ್ತ ಹಂಝ ಮಲಾರ್ ಇವರು ಬ್ಯಾರಿ ಭಾಷೆಯಲ್ಲಿ ಬರೆದ ಫೇಸ್ ಬುಕ್ (ಕಥಾ ಸಂಕಲನ), ಬಿಂದಾಸ್ (ನಾಟಕ ಸಂಕಲನ), ಪಾಲುಂ-ಬಾಲೆ (ಅಂಕಣ ಬರಹಗಳ ಸಂಕಲನ) ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ದಿನಾಂಕ 07 ಮೇ 2025ರಂದು ಸಂಜೆ 4-00 ಗಂಟೆಗೆ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಮೇಲ್ತೆನೆ ಸಂಘಟನೆಯ ಗೌರವಾಧ್ಯಕ್ಷ ಆಲಿಕುಂಞು ಪಾರೆ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಧ್ಯಕ್ಷ ವಿ. ಇಬ್ರಾಹಿಂ ನಡುಪದವು, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಬ್ಯಾರಿ ವಾರ್ತೆಯ ಉಪಸಂಪಾದಕ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಮದನಿ ಪಿ.ಯು. ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಇಸ್ಮಾಯಿಲ್ ಮಾಸ್ಟರ್, ಹಿರಿಯ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಭಾಗವಹಿಸಲಿದ್ದಾರೆ.
ಬೆಳಗಾವಿ : ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಜೀವಮಾನ ಸಾಧನೆಗಾಗಿ 2024ನೇ ಸಾಲಿನ ‘ಕಾದಂಬರಿ ಸಾಹಿತ್ಯ ಪ್ರಶಸ್ತಿ’ಗೆ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಇವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ. ಐವತ್ತು ಸಾವಿರ ನಗದು, ಸ್ಮರಣಿಕೆ ಹೊಂದಿದ್ದು, ದಿನಾಂಕ 25 ಮೇ 2025ರಂದು ಸಮಾರಂಭ ನಡೆಯಲಿದೆ. ಬರಗೂರು ರಾಮಚಂದ್ರಪ್ಪನವರು 18 ಅಕ್ಟೋಬರ್ 1946ರಂದು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿವಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಇವರು ಸೇವೆ ಸಲ್ಲಿಸಿದ್ದು, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಇವರು ಕೆಲಸ ನಿರ್ವಹಿಸಿದ್ದಾರೆ. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬಸವರಾಜ ಕಟ್ಟೀಮನಿ ಇವರ ತತ್ವ-ಆದರ್ಶಗಳಂತೆ ಬರೆಯುತ್ತ, ಬದುಕು ನಡೆಸಿದ್ದಾರೆ. 13 ಕಾದಂಬರಿ ರಚಿಸಿದ್ದು, ಈ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ. ‘ಸುಂಟರಗಾಳಿ’ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ.
ಉಡುಪಿ : ನೃತ್ಯ ವಸಂತ ನಾಟ್ಯಾಲಯ (ರಿ.) ಕುಂದಾಪುರ ಇದರ ವತಿಯಿಂದ ಪ್ರಸ್ತುತ ಪಡಿಸುವ ‘ಸುಮಂಜುಳ’ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 10 ಮೇ 2025ರಂದು ಸಂಜೆ 5-00 ಗಂಟೆಗೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದುಷಿ ಪ್ರವೀತಾ ಅಶೋಕ್ ಇವರ ಶಿಷ್ಯೆಯರಾದ ಯುಕ್ತಿ ಉಡುಪ, ಪೂರ್ವಿಕಾ, ಸುನಿಧಿ ಉಡುಪ, ಗಾರ್ಗಿದೇವಿ ಮತ್ತು ಮಹಾಲಕ್ಷ್ಮೀ ಸಿ.ಜಿ. ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ವಿದುಷಿ ಪ್ರವೀತಾ ಅಶೋಕ್ ಇವರ ನಟುವಾಂಗ ಮತ್ತು ನಿರ್ದೇಶನದಲ್ಲಿ ಪ್ರಸ್ತುತಗೊಳ್ಳುವ ಈ ಕಾರ್ಯಕ್ರಮದಲ್ಲಿ ಚೆನ್ನೈಯ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಇವರು ಹಾಡುಗಾರಿಕೆ, ಬೆಂಗಳೂರಿನ ವಿದ್ವಾನ್ ವಿನಯ್ ನಾಗರಾಜನ್ ಮೃದಂಗದಲ್ಲಿ, ಚೆನ್ನೈಯ ವಿದ್ವಾನ್ ಅನಂತ ನಾರಾಯಣನ್ ವೀಣೆಯಲ್ಲಿ ಮತ್ತು ಬೆಂಗಳೂರಿನ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಕೊಳಲಿನಲ್ಲಿ ಸಹಕರಿಸಲಿದ್ದಾರೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕ.ಸಾ.ಪ. ಮಂಗಳೂರು ತಾಲೂಕು ಘಟಕದ ವತಿಯಿಂದ ಮಂಗಳೂರಿನ ಅಳಕೆಯ ‘ಗುಲಾಬಿ ಶ್ರೀಪಾದ ನಿವಾಸ’ದ ಸಭಾಂಗಣದಲ್ಲಿ ದಿನಾಂಕ 05-05-2025ರಂದು ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದೇಶ ನೀಡಿದ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶ್ರೀಕೃಷ್ಣ ಭಟ್ಟ ಸುಣ್ಣಂಗುಳಿ “ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಮೂಲಕ ಇಂದಿನ ಯುವ ಜನತೆಯಲ್ಲಿ ಕನ್ನಡದ ಅಭಿಮಾನ ಮತ್ತು ಮಮತೆ ತುಂಬಬೇಕು. ಕನ್ನಡ ಸಾಹಿತ್ಯ ಪರಿಷತ್ತನ್ನು ಸಂಸ್ಥಾಪಿಸಿ, ಅದ್ಭುತವಾದ ಸಮಾಜಮುಖೀ ಕಾರ್ಯಗಳನ್ನು ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯದಂತೆ ಇಂದಿಗೂ ಪರಿಷತ್ತು ಕನ್ನಡದ ಧ್ವನಿಯಾಗಿ ಹತ್ತು ಹಲವು ಮಹತ್ತರ ಕಾರ್ಯಗಳನ್ನೆಸಗುತ್ತಾ ಮುಂದುವರಿಯುತ್ತಿರುವುದು ಹೆಮ್ಮೆಯ ವಿಚಾರ. ಶಾಲೆ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದತ್ತ ಒಲವು ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತಿದ್ದು, ಈ ಪರಿಷತ್ತು ಕನ್ನಡಿಗರ ಏಕತೆಯ…
ಮಂಗಳೂರು : ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಮತ್ತು ‘ಕರ್ಮಯೋಗಿ’ ಬಿರುದು ಪ್ರದಾನ ಸಮಾರಂಭವನ್ನು ದಿನಾಂಕ 10 ಮೇ 2025ರಂದು ಸಂಜೆ 4-00 ಗಂಟೆಗೆ ಮಂಗಳೂರು ಪಿಲಿಕುಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 4-00 ಗಂಟೆಗೆ ಶ್ರೀ ಲೋಕೇಶ್ ಸಂಪಿಗೆ ಇವರಿಂದ ಸುರ್ ಸಾಗರ್ ಫ್ಯೂಷನ್ ಬ್ಯಾಂಡ್, ಪುನರೂರು ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಮೆರವಣಿಗೆ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರು ವಹಿಸಲಿದ್ದು, ಖ್ಯಾತ ಸಾಹಿತಿ ಹಾಗೂ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರು ಅಭಿನಂದನ ನುಡಿಗಳನ್ನಾಡಲಿದ್ದಾರೆ.
ಉಡುಪಿ : ಮಣಿಪಾಲದ ವಿ.ಪಿ. ನಗರದ ತಸ್ವ ಕಟ್ಟಡದ 2ನೇ ಮಹಡಿಯಲ್ಲಿ ಯುವ ಜಾನಪದ ಕಲಾವಿದ ಹೇಮಂತ್ ಇವರು ಹುಟ್ಟುಹಾಕಿರುವ ‘ಕಲಾಮಯಂ’ ಸಾಂಸ್ಕೃತಿಕ ಸಂಘಟನೆಯ ನೂತನ ಕಚೇರಿಯ ಉದ್ಘಾಟನೆಯು ದಿನಾಂಕ 30 ಏಪ್ರಿಲ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರೂ ಆಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ “ಉಡುಪಿ ಜಿಲ್ಲೆಯಂತಹ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಹೊಂದಿರುವ ನಾಡಿನಲ್ಲಿ ಜಾನಪದ, ಸಾಂಸ್ಕೃತಿಕ ತಂಡಗಳಿಗೆ ಉತ್ತಮ ಭವಿಷ್ಯವಿದೆ. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿ ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ವಿವಿಧ ಜಾನಪದ ತಂಡಗಳಿಗೆ ಪ್ರದರ್ಶನ ನೀಡಲು ‘ಜಾನಪದೋತ್ಸವ’ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಸಂಘಟಿಸಲಾಗಿದೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ ಪ್ರಶಸ್ತಿಯನ್ನೂ ಜಾನಪದ ಕಲಾವಿದರಿಗೆ, ಸಂಘಟಕರಿಗೆ ನೀಡಲಾಗುತ್ತಿದೆ. ಪ್ರಸ್ತುತ ಪ್ರತಿಭಾನ್ವಿತ ಯುವ ಕಲಾವಿದರನ್ನು ಒಳಗೊಂಡಿರುವ ಈ ಕಲಾಮಯಂ ಸಂಸ್ಥೆ ಅತ್ಯಲ್ಪ ಸಮಯದಲ್ಲಿಯೇ ನಾಡಿನ ಜಾನಪದ ಆಸಕ್ತರ ಮನೆಗೆದ್ದಿರುವುದು ದೊಡ್ಡ…
ಮಂಗಳೂರು : ಮಾಂಡ್ ಸೊಭಾಣ್ ಆಯೋಜಿಸಿದ ಮಕ್ಕಳ ವಸತಿಯುತ ರಜಾ ಶಿಬಿರ ‘ಕಾಜಳ್’ (ಕಣ್ಣ ಕಾಡಿಗೆ) ಇದರ ಸಮಾರೋಪ ದಿನಾಂಕ 04 ಮೇ 2025ರಂದು ಕಲಾಂಗಣದಲ್ಲಿ ನೆರವೇರಿತು. ಮುಖ್ಯ ಅತಿಥಿ ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ. ವೆನಿಸ್ಸಾ ಎ.ಸಿ. ಇವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ‘ಒಂದೆರಡು ದಿನ ಶಿಬಿರ ನಡೆಸುವಾಗ ಸುಸ್ತಾಗುವ ಸಂದರ್ಭದಲ್ಲಿ ಹತ್ತು ದಿನ ವಸತಿ ಶಿಬಿರ ನಡೆಸುವುದು ಬಹು ದೊಡ್ಡ ಸಂಗತಿ. ಶಿಬಿರದಲ್ಲಿ ಮಾತೃಭಾಷೆ ಕೊಂಕಣಿಗೆ ಮಹತ್ವ ನೀಡಿದ್ದಾರೆ. ವಿವಿಧ ಸ್ಥಳಗಳಿಂದ ಬಂದ ನೀವು ಒಬ್ಬರನ್ನೊಬ್ಬರು ಅರಿತು ತಂಡದ ಮನೋಭಾವ ಬೆಳೆಸಿದ್ದೀರಿ. ನಿಮಗಿದು ಮುಂದಿನ ಜೀವನದಲ್ಲಿ ಸಹಕಾರಿಯಾಗಲಿ. ನಿಮಗೂ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಗೆ ಶುಭ ಹಾರೈಸುತ್ತೇನೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ರಿಯೊನಾ ಡಿಸೋಜ ಕೆಲರಾಯ್ (ಕೊಂಕಣಿ ಶ್ರೇಷ್ಟ), ಪ್ರಿನ್ಶೆಲ್ ಪಿರೇರಾ ಕುಲ್ಶೇಕರ್ (ನೃತ್ಯ ಶ್ರೇಷ್ಟ), ಸಿಯೊನಾ ಡಿಕುನ್ಹಾ ಕುಲ್ಶೇಕರ್ (ನಾಟಕ ಶ್ರೇಷ್ಟ), ಆಸ್ಟನ್ ಲೆಸ್ಟರ್ ಫೆರ್ನಾಂಡಿಸ್ ಅಮ್ಮುಂಜೆ (ಗಾಯಾನ ಶ್ರೇಷ್ಟ)…
ದಾವಣಗೆರೆ : ರಂಗಮಿಡಿತ (ರಿ.) ಇದರ ವತಿಯಿಂದ 9ನೇ ‘ಚಿಣ್ಣರ ಚಿಗುರು’ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಮತ್ತು 11 ಮೇ 2025ರಂದು ಬೆಳಗ್ಗೆ 10-00ರಿಂದ ಸಂಜೆ 4-00 ಗಂಟೆ ತನಕ ಗೊಪ್ಪೇನಹಳ್ಳಿ ಪಾಂಡೋಮಟ್ಟಿಯ ಶ್ರೀ ರುದ್ರೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದೆ. ಈ ಶಿಬಿರವು ಸಂಪೂರ್ಣವಾಗಿ ಉಚಿತವಾಗಿದ್ದು, 4ರಿಂದ 10ನೇ ತರಗತಿಯ ಮಕ್ಕಳು ಭಾಗವಹಿಸಬಹುದು. ಕ್ಯೂಆರ್ ಕೋಡ್ ಲಿಂಕ್ ಬಳಸಿ ದಿನಾಂಕ 08 ಮೇ 2025ರ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 9481986116 ಸಂಖ್ಯೆಯನ್ನು ಸಂಪರ್ಕಿಸಿರಿ.
ಕಾಸರಗೋಡು : ಕಾಸರಗೋಡಿನ ಭರವಸೆಯ ಕವಯತ್ರಿ ಮೇಘಾ ಶಿವರಾಜ್ ಇವರ ಕವನ ಸಂಕಲನವನ್ನು ಕನ್ನಡ ಭವನದ ರೂವಾರಿಯಾಗಿರುವ ಸಂದ್ಯಾ ರಾಣಿ ಟೀಚರ್ ಇವರು ಕನ್ನಡ ಭವನ ಪ್ರಕಾಶದ ಮೂಲಕ ಕೃತಿ ಪ್ರಕಟಿಸಿದ್ದು, ದಿನಾಂಕ 27 ಏಪ್ರಿಲ್ 2025ರಂದು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆದ ‘ಬೇಕಲ ರಾಮನಾಯಕ ಸ್ಮರಣಾಂಜಲಿ’ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ ಗೌರವ ಅಧ್ಯಕ್ಷರಾಗಿರುವ ಡಾ. ರವೀಂದ್ರ ಜೆಪ್ಪು ಇವರು ರಾಮರಾಜ ಕ್ಷತ್ರಿಯ ಸೇವಾ ಸಂಘ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿರುವ ಶ್ರೀ ಕಮಲಾಕ್ಷ ಕಲ್ಲುಗದ್ದೆಯವರಿಗೆ ಪುಸ್ತಕ ನೀಡುವ ಮೂಲಕ ‘ಮೌನ ಮಾತಾದಾಗ’ ಕೃತಿ ಬಿಡುಗಡೆಗೊಳಿಸಲಾಯಿತು. ಈ ಕೃತಿಗೆ ಮುನ್ನುಡಿ ಬರೆದ ಮಂಗಳೂರಿನ ಖ್ಯಾತ ಸಾಹಿತಿ, ಕವಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಕೃತಿ ಪರಿಚಯ ಮಾಡಿದರು. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರೂ ಸಾಹಿತ್ಯ ಪರಿಚಾರಕರಾದ ಶ್ರೀ ಶಶಿಧರ್ ನಾಯ್ಕ್ ಬೆನ್ನುಡಿ ಬರೆದು ಲೇಖಕಿಯನ್ನು ಹರಸಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಭವನ…
ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ 89ನೇ ಶಾಸ್ತ್ರೀಯ ನೃತ್ಯ ‘ನೃತ್ಯ ಭಾನು’ ಕಾರ್ಯಕ್ರಮವನ್ನು ದಿನಾಂಕ 09 ಮೇ 2025ರಂದು ಸಂಜೆ 06-30 ಗಂಟೆಗೆ ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಇದು ಶಾಂತಲಾ ನಾಟ್ಯ ಸಿರಿ ಪುರಸ್ಕೃತ ಗುರು ಬಿ. ಭಾನುಮತಿ ಇವರಿಗೆ ಸಮರ್ಪಿತ ಉತ್ಸವವಾಗಿದೆ. ಗುರುಗಳಾದ ನಂದಿನಿ ಮೆಹ್ತಾ ಮತ್ತು ಮುರಳಿ ಮೋಹನ್ ಕಲ್ವಾಕಾಲ್ವ ಇವರ ಶಿಷ್ಯೆ ಸೌಮ್ಯ ರವಿ ಇವರಿಂದ ‘ಕಥಕ್’ ಮತ್ತು ಗುರು ಸೀತಾ ಗುರುಪ್ರಸಾದ್ ಮತ್ತು ಗುರು ಬಿ. ಭಾನುಮತಿ ಇವರ ಶಿಷ್ಯೆ ಭುವನಾ ಜಿ. ಪ್ರಸಾದ್ ಇವರಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಲಿದೆ.