Author: roovari

ಸೃಜನಶೀಲ ಸಾಹಿತ್ಯ ಅರಳುವುದು ನೋವು, ಕಷ್ಟ, ಜಂಜಾಟಗಳ ಜೀವನದ ನಡುವೆ ಎಂಬುದು ಜನಜನಿತ ಮಾತು. ಈ ರೀತಿಯ ಜೀವನ ನಡೆಸಿ ಪ್ರಸಿದ್ಧರಾದ ಎಷ್ಟೋ ಸೃಜನಶೀಲ ಸಾಹಿತಿಗಳನ್ನು ನಮ್ಮ ನಾಡು ಕಂಡಿದೆ. ಇಂತಹ ಸಾಹಿತಿಗಳ ನಡುವೆ ಎದ್ದು ಕಾಣುವ ಮಹಿಳಾ ಸಾಹಿತಿ, ಹಲವು ಪ್ರಥಮಗಳಿಗೆ ಸಾಕ್ಷಿಯಾದವರು ನಾಡೋಜ ಗೀತಾ ನಾಗಭೂಷಣ. ಅವರು ಅನುಭವಿಸಿದ ಕಷ್ಟ, ನೋವು, ತಿರಸ್ಕಾರ, ಅಪಮಾನ, ಕಹಿ ಘಟನೆಗಳ ಪ್ರೇರಣೆಯಿಂದಲೇ ಅವರೊಳಗಿನ ಸಾಹಿತಿ ಬೆಳಕಿಗೆ ಬಂದದ್ದು. ಗುಲ್ಬರ್ಗ ಜಿಲ್ಲೆಯ ಹಿಂದುಳಿದ ಪುಟ್ಟ ಹಳ್ಳಿಯಾದ ಸಾವಳಗಿ ಎಂಬಲ್ಲಿ 1942 ಮಾರ್ಚ್ 25ರಂದು ಗೀತಾ ಜನಿಸಿದರು. ಗುಲ್ಬರ್ಗದ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶಾಂತಪ್ಪ ಮತ್ತು ಶರಣಮ್ಮ ದಂಪತಿಗಳ ಸುಪುತ್ರಿ. ಕನ್ನಡದ ಪ್ರಸಿದ್ಧ ಲೇಖಕಿಯಾದ ಇವರು ಬಡ ಕುಟುಂಬದಲ್ಲಿ ಜನಿಸಿ ಸಿಟ್ಟು, ತಿರಸ್ಕಾರ, ಅಪಮಾನಗಳ ಮಧ್ಯೆ ಎಲ್ಲವನ್ನೂ ಎದುರಿಸಿ ತ್ರಿವಿಕ್ರಮನಂತೆ ಎದ್ದು ನಿಂತವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನ ಹುಟ್ಟೂರಿಯನಲ್ಲಿ ಮುಗಿಸಿದ ಇವರು ಒಂದು ಕಲೆಕ್ಟರ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದುಕೊಂಡು ದುಡಿಯುತ್ತಲೇ ಕಾಲೇಜಿನ ಪದವಿ ಶಿಕ್ಷಣವನ್ನು…

Read More

ಸುಳ್ಯ : ಚಂದನ ಸಾಹಿತ್ಯ ವೇದಿಕೆ ಸುಡ್ಯ ಇದರ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರ ನೇತೃತ್ವದಲ್ಲಿ ‘ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ 2025’ ಕಾರ್ಯಕ್ರಮವು ದಿನಾಂಕ 23 ಮಾರ್ಚ್ 2025ರಂದು ಸುಳ್ಯದ ದೇದಮ್ಮ ಕಾಂಪ್ಲೆಕ್ಸ್ ಇಲ್ಲಿ ನಡೆಯಿತು. ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಯುವ ಸಾಹಿತಿ ಪ್ರಿಯಾ ಸುಳ್ಯ ಇವರನ್ನು 2025ನೇ ಸಾಲಿನ ‘ಚಂದನ ಸಾಹಿತ್ಯ ರತ್ನ ಪ್ರಶಸ್ತಿ’ ನೀಡಿ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಚಿಗುರೆಲೆ’ ಸಾಹಿತ್ಯ ಬಳಗದ ಸದಸ್ಯರಾಗಿರುವ ಇವರು ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಸೇವೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಮಾರಂಭದಲ್ಲಿ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠ ರ್ ಸುಳ್ಯ, ಹಿರಿಯ ಸಾಹಿತಿ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ, ಹಿರಿಯ ಸಾಹಿತಿಗಳಾದ ನಾರಾಯಣ ಕುಕ್ಕುವಳ್ಳಿ, ಶ್ರೀ ಮೋಹನ್ ನಂಗಾರು, ಶ್ರೀ ಚನ್ನಕೇಶವ ಜಾಲ್ಸೂರು, ಶ್ರೀ ಪಿ. ವೆಂಕಟೇಶ್ ಬಾಗವಾಡ ಹಾಗೂ ನವೀನ್…

Read More

ಕಾಸರಗೋಡು : “ಸರಳತೆಯಿಂದ ಶ್ರದ್ಧೆಯಿಂದ ಶರಣಾಗತಿಯಿಂದ ಮತ್ತು ಅಂತರಾಳದಿಂದ ಹುಟ್ಟುವ ಧ್ವನಿಯೇ ‘ಅಂತರ್ಧ್ವನಿ’.. ನಾವು ಭಕ್ತಿಯಿಂದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಅಭಿಷೇಕ, ಪೂಜೆ, ಪ್ರಾರ್ಥನೆ ಮಾಡಿ ಅದರಲ್ಲಿ ದೇವರನ್ನು ಕಾಣುತ್ತೇವೆ. ಅದೇ ದೇವಸ್ಥಾನ. ಈ ವೇದಿಕೆಯು ಕಲಾವಿದರಿಗೆ ದೇವಸ್ಥಾನವಿದ್ದಹಾಗೆ ನೂರಾರು ಸಾಹಿತಿಗಳು, ರಂಗ ನಿರ್ದೇಶಕರು, ನಟರು, ಸಂಗೀತಗಾರರು, ನಾಡಿನ ಶ್ರೇಷ್ಠ ಸಾಧಕರು ತಮ್ಮ ಕಲೆಯನ್ನು ಅನುಭವವನ್ನು ಹಂಚಿಕೊಂಡು ಈ ವೇದಿಕೆಯನ್ನು ಶ್ರೀಮಂತಗೊಳಿಸಿದ್ದಾರೆ. ಇಲ್ಲಿ ಒಳ್ಳೆಯ ಕಂಪನವಿದೆ. ಅದಕ್ಕೆ ವೇದಿಕೆ ಹತ್ತುವ ಮೊದಲು ವೇದಿಕೆಗೆ ನಮಸ್ಕರಿಸುತ್ತೇವೆ” ಎಂದು ಖ್ಯಾತ ಚಲನಚಿತ್ರ ನಟರಾದ ಕೆ. ಎಸ್. ಶ್ರೀಧರ್ ಹೇಳಿದರು. ಅವರು ‘ರಂಗ ಚಿನ್ನಾರಿ’ ಹಾಗೂ ‘ಸ್ವರ ಚಿನ್ನಾರಿ’ಯು ದಿನಾಂಕ 23 ಮಾರ್ಚ್ 2025ರಂದು ಏರ್ಪಡಿಸಿದ ‘ಅಂತರ್ಧ್ವನಿ-2’ ಕರೋಕೆ ಗಾಯಕರ ಕಾರ್ಯಕ್ರಮವನ್ನು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಮಾತನಾಡಿದ ತುಳು ಚಲನಚಿತ್ರ ನಿರ್ಮಾಪಕ ಹಾಗೂ ವಿತರಕರಾದ ಟಿ. ಎ. ಶ್ರೀನಿವಾಸ ಅವರು ಸಾಂಸ್ಕೃತಿಕ ಸಾಹಿತ್ಯ ಸಂಘಟನೆಯನ್ನು ಕಟ್ಟುವ ಕಷ್ಟಗಳ…

Read More

ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಮಡಿಕೇರಿ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಅರಮನ ಪಾಲೆರ ಕೆ.ಮಂದಣ್ಣ ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನಿರ್ದೇಶನದಂತೆ ಮಡಿಕೇರಿ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ದಿನೇಶ್ ಪೆಗ್ಗೋಲಿ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತಾ ಶೆಟ್ಟಿ ಮನವಳಿಕೆ ಗುತ್ತು ಹಾಗೂ ಸದಸ್ಯರಾಗಿ ಕೂಡಕಂಡಿ ಓಂ ಶ್ರೀದಯಾನಂದ, ಬೊಟ್ಟೋಳಂಡ ನಿವ್ಯ ಕಾವೇರಮ್ಮ, ಸುಮಿತ್ರಾ ಮೂರ್ನಾಡು, ಚೇನಂಡ ಜಯಂತಿ ಹರೀಶ್, ಲವೀನ್ ಲೋಪೇಜ್, ಎನ್.ಬಿ.ದಿಲೀಪ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂದಣ್ಣ ತಿಳಿಸಿದ್ದಾರೆ.

Read More

ಮಂಗಳೂರು : ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲ, ಇವರು ಕಲಾಭಿ (ರಿ.), ಅಸ್ತಿತ್ವ (ರಿ.), ರೂವಾರಿ.com ಹಾಗೂ ಆಯನ ನಾಟಕದ ಮನೆ ಇವರ ಸಹಯೋಗದೊಂದಿಗೆ ಆಯೋಜಿಸುತ್ತಿರುವ 10ನೇ ವರ್ಷದ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 27 ಮಾರ್ಚ್ 2025 ರಿಂದ 31 ಮಾರ್ಚ್ 2025ರವರೆಗೆ ನಡೆಯಲಿದ್ದು, ಈ ಸಂದರ್ಭ ಸಾರ್ವಜನಿಕರಿಗೆ ‘ನಾಟಕ ವಿಮರ್ಶಾ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ ರೂಪಾಯಿ 2500, ದ್ವಿತೀಯ ಬಹುಮಾನ ರೂಪಾಯಿ 1500, ತೃತೀಯ ಬಹುಮಾನ ರೂಪಾಯಿ 1000, ಹಾಗೂ ಎರಡು ಸಮಾಧಾನಕರ ಬಹುಮಾನವಾಗಿ ರೂಪಾಯಿ 500ನ್ನು ನೀಡಲಾಗುವುದು. ನಿಯಮಗಳು : ಸ್ಪರ್ಧೆಗೆ ವಯೋಮಿತಿ ಇಲ್ಲ, ವಿಮರ್ಶೆಯನ್ನು ಕನ್ನಡದಲ್ಲಿಯೇ ಬರೆಯಬೇಕು ಮತ್ತು 1200 ಪದಗಳ ಮಿತಿಯಲ್ಲಿರಬೇಕು, ಐದೂ ನಾಟಕಗಳನ್ನು ನೋಡಿ ವಿಮರ್ಶೆ ಬರೆಯಬೇಕು, ಮೊದಲ ದಿನ ಹೆಸರು ನೋಂದಾಯಿಸಿರಬೇಕು, ವಿಮರ್ಶೆಗಳನ್ನು 3 ಏಪ್ರಿಲ್ 2025ರ ಒಳಗಾಗಿ ಮೇಲ್ ಮೂಲಕ ಅಥವಾ what’s app ಮೂಲಕ ಕಳುಹಿಸಬೇಕು. ಬಹುಮಾನಿತ ವಿಮರ್ಶೆಗಳನ್ನು ರೂವಾರಿ.com ನಲ್ಲಿ ಪ್ರಕಟಿಸಲಾಗುವುದು. ಬಹುಮಾನಗಳ ವಿತರಣೆಯ ದಿನಾಂಕವನ್ನು…

Read More

ಮಂಗಳೂರು : ಅರೆಹೊಳೆ ಪ್ರತಿಷ್ಠಾನ ಹಾಗೂ ಕಲಾಭಿ (ರಿ.) ಮಂಗಳೂರು ಆಯೋಜಿಸುವ ಕಲಾಗ್ರಾಮ ಉದ್ಘಾಟನೆ, ವಿಶ್ವರಂಗಭೂಮಿ ದಿನಾಚರಣೆ, ಅರೆಹೊಳೆ ರಂಗಭೂಮಿ ಪ್ರಶಸ್ತಿ ಪ್ರದಾನ ಹಾಗೂ ಅರೆಹೊಳೆ ನಾಟಕೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ 27 ಮಾರ್ಚ್ 2025 ರಂದು ನಡೆಯಲಿರುವುದು. ಅರೆಹೊಳೆ ನಾಟಕೋತ್ಸವವು ದಿನಾಂಕ  ಮಾರ್ಚ್ 27 ರಿಂದ 31, 2025 ರ ವರೆಗೆ ಐದು ದಿನಗಳ ಪರ್ಯಂತ ಮಂಗಳೂರಿನ ಬೊಂದೆಲ್ – ಮೂಡುಶೆಡ್ಡೆ ರಸ್ತೆಯಲ್ಲಿರುವ ಕಲಾಗ್ರಾಮದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡಬಿದಿರೆ ಇದರ ಮ್ಯಾನೇಜಿಂಗ್ ಟ್ರಸ್ಟಿಯಾದ ವಿವೇಕ್ ಎಮ್. ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ತಾರನಾಥ್ ಗಟ್ಟಿ ಕಾಪಿಕಾಡ್, ರಂಗಭೂಮಿ ಹಾಗೂ ಸಿನೆಮಾ ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಬಿ. ರಾಜೇಶ್, ನಾಟಕಕಾರರಾದ…

Read More

ಬೆಂಗಳೂರು : ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ನಾಟ್ಯದರ್ಪಣ ಅರ್ಪಿಸುವ ‘ಮಥನ’ ನಾಟಕ ಪ್ರದರ್ಶನವನ್ನು ದಿನಾಂಕ 27 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್.ಎಸ್. ವೆಂಕಟೇಶ್ ಮೂರ್ತಿ ಇವರು ರಚಿಸಿರುವ ಈ ನಾಟಕವನ್ನು ಅಬ್ಬೂರು ಜಯತೀರ್ಥ ಇವರು ನಿರ್ದೇಶನ ಮಾಡಿರುತ್ತಾರೆ.

Read More

ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಂಜೇಶ್ವರದ ಗಿಳಿವಿಂಡುವಿನಲ್ಲಿ ದಿನಾಂಕ 23 ಮಾರ್ಚ್ 2025ರಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ 142ನೇ ಜನ್ಮದಿನಾಚರಣೆ ಸಮಾರಂಭವು ನಡೆಯಿತು. ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ ವೈದ್ಯ ಡಾ. ರಮಾನಂದ ಬನಾರಿ ಮಾತನಾಡುತ್ತಾ “ಗೋವಿಂದ ಪೈಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಹಾಚೇತನರಾಗಿದ್ದು, ಅವರ ನಿವಾಸ ಗಿಳಿವಿಂಡು ಆ ಮಟ್ಟದಲ್ಲಿ ಅಭಿವೃದ್ಧಿಗೊಳ್ಳಬೇಕಾದುದು ನಮ್ಮೆಲ್ಲರ ಹೊಣೆಯಾಗಿದೆ. ಬಹುಮುಖಿ ವ್ಯಕ್ತಿತ್ವದ ಪೈಗಳು ಎಂದಿಗೂ ಕನ್ನಡ ಸಹಿತ ದೇಶದ ಎಲ್ಲಾ ಸಾಹಿತ್ಯ ವಲಯಗಳಲ್ಲೂ ಅಸಾಮಾನ್ಯ ಕೊಡುಗೆ ನೀಡಿದ ಅಪೂರ್ವ ಮಹಾಪುರುಷರಾಗಿದ್ದರು. ರಾಷ್ಟ್ರಕವಿಯ ಕನಸುಗಳನ್ನು ಸಾಕಾರಗೊಳಿಸಲು, ಸಾಹಿತ್ತಿಕ ಮೌಲ್ಯಗಳನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಲು ಪರಂಪರೆಗೆ ಧಕ್ಕೆ ಬಾರದಂತೆ ಆಧುನಿಕ ಕೌಶಲ್ಯಗಳಿಂದೊಡಗೂಡಿ ಸ್ಮಾರಕ ನಿವೇಶನವನ್ನು ಇನ್ನಷ್ಟು ಪ್ರವರ್ಧಮಾನಕ್ಕೆ ತರಬೇಕು” ಎಂದು ಹೇಳಿದರು. ಸಮಾರಂಭದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕೊಡಮಾಡುವ…

Read More

ಕಾಸರಗೋಡಿನ ಸಾಧಕರನ್ನು ಹೊರಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಪ್ರಕಟಿಸಿದ ‘ಕನ್ನಡಿಯಲ್ಲಿ ಕನ್ನಡಿಗರು’ ಎಂಬ ಕೃತಿಯ ಎರಡು ಸಂಚಿಕೆಗಳು ಹಿರಿಯ ಕವಿ, ಸಂಘಟಕ ಡಾ. ರಮಾನಂದ ಬನಾರಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಮೊದಲ ಸಂಚಿಕೆಯನ್ನು ಅವರೇ ಸಂಪಾದಿಸಿದ್ದು, ಎರಡನೇ ಸಂಚಿಕೆಯನ್ನು ಹಿರಿಯ ವಿದ್ವಾಂಸ ಡಾ. ವಸಂತಕುಮಾರ ಪೆರ್ಲರು ಸಂಪಾದಿಸಿದ್ದಾರೆ. ಕಾಸರಗೋಡಿನ ಕನ್ನಡಿಗರ ಬಹುಮುಖಿ ಸಾಧನೆಗಳನ್ನು ಪ್ರತಿಬಿಂಬಿಸುವುದರೊಂದಿಗೆ ಅವರ ಸಾಧನೆಗಳ ಹೆಗ್ಗುರುತುಗಳನ್ನು ದಾಖಲಿಸುವಲ್ಲಿ ಸಂಪಾದಕರಿಬ್ಬರೂ ಯಶಸ್ವಿಯಾಗಿದ್ದಾರೆ. ಆಡಳಿತಾತ್ಮಕವಾಗಿ ಹಿಂದುಳಿದ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಭಾಷಾ ಅಲ್ಪಾ ಸಂಖ್ಯಾತರು ಇತ್ತ ಕೇರಳಕ್ಕೂ ಅತ್ತ ಕರ್ನಾಟಕಕ್ಕೂ ಸಲ್ಲದವರು. ಎರಡೂ ರಾಜ್ಯಗಳ ಸಾಹಿತ್ಯಕ ಸಾಂಸ್ಕೃತಿಕ ಕ್ಷೇತ್ರಗಳು ರಾಜಕೀಯ ಮಸಲತ್ತು, ಹಿಂಬಾಗಿಲ ಪ್ರವೇಶ, ಅರ್ಹರನ್ನು ಪದಚ್ಯುತಗೊಳಿಸುವ ತಂತ್ರಗಳು ಕಾಸರಗೋಡಿನವರನ್ನು ಮುಖ್ಯವಾಹಿನಿಯಿಂದ ದೂರ ಮಾಡುತ್ತಿವೆ. ಕಾಸರಗೋಡಿನವರ ಹಿಂಜರಿಕೆಯ ಮನಸ್ಥಿತಿಯೂ ಅವರ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದೆ ಎಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದರೆ ಕಾಸರಗೋಡಿನ ಸಾಧಕರ ಮೇಲೆ ಕವಿದ ಕತ್ತಲನ್ನು ಹೋಗಲಾಡಿಸಿ ಅವರ ಕಡೆಗೆ ಬೆಳಕನ್ನು ಬೀರಿರುವ ಈ ಸಂಚಿಕೆಗಳು ಕಾಸರಗೋಡಿನವರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವ ಕೊರತೆಯನ್ನು…

Read More

ಉಡುಪಿ : ರಂಗಭೂಮಿ ಉಡುಪಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’, ‘ವಿಶ್ವ ರಂಗಭೂಮಿ ಸನ್ಮಾನ’ ಹಾಗೂ ‘ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ಪ್ರದಾನ’ ಸಮಾರಂಭವು ದಿನಾಂಕ 27 ಮಾರ್ಚ್ 2025ರಂದು ಸಂಜೆ ಘಂಟೆ 5.00ರಿಂದ ಉಡುಪಿಯ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿದ ರಂಗಭೂಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ “ರಂಗಭೂಮಿಯ ಗೌರವಾಧ್ಯಕ್ಷರಾದ ಡಾ. ಎಚ್.ಎಸ್. ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ಅಂದು ಸಂಜೆ ಘಂಟೆ 6.00ರಿಂದ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಎಚ್. ಗೋಪಾಲ ಭಟ್ಟ (ಕು.ಗೋ.) ಇವರಿಗೆ ‘ವಿಶ್ವ ರಂಗಭೂಮಿ ಪ್ರಶಸ್ತಿ’ ಮತ್ತು ಲೇಖಕ ಎನ್. ಸಿ. ಮಹೇಶ್ ಇವರಿಗೆ ‘ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.…

Read More