Author: roovari

ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ.) ಅರ್ಪಿಸುವ ‘ಕರ್ನಾಟಕ ರಾಜ್ಯೋತ್ಸವ’, ‘ಶಾಂತಲಾ ನಾಟ್ಯ’ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯ ಸರಣಿ-ಮಾಲಿಕೆ 25ರ ‘ನಾಟ್ಯಮೋಹನ ನವತ್ಯುತ್ಸಹ’ ಕಾರ್ಯಕ್ರಮವನ್ನು ದಿನಾಂಕ 30 ಜನವರಿ 2026ರಂದು ಸಂಜೆ 6-00 ಗಂಟೆಗೆ ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಖ್ಯಾತ ಪ್ರಸಾದನ ಕಲಾವಿದ ಮಧು ತೂಮಿನಾಡು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ತಕ್ಷ್ ದಿಜಿಟಲ್ಸ್ ಮಾಲಕರಾದ ವಿದುಷಿ ಕವಿತಾ ಯಶ್ ಪಾಲ್ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

Read More

ಸುಳ್ಯ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ, ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಇವರ ಮಾತಾ-ಪಿತೃಗಳ ನೆನಪಿನಲ್ಲಿ ಕೊಡ ಮಾಡುವ 2026ನೇ ಸಾಲಿನ ‘ವನಜ-ಸುಜನಾ ರಂಗಮನೆ ಪ್ರಶಸ್ತಿ’ಗೆ ಶ್ರೀ ಧರ್ಮಸ್ಥಳ ಮೇಳದ ಪ್ರಸಿದ್ಧ ಹಾಸ್ಯಗಾರ ಮಹೇಶ ಮಣಿಯಾಣಿಯವರನ್ನು ಆಯ್ಕೆ ಮಾಡಲಾಗಿದೆ. ಸುಳ್ಯ ತಾಲೂಕಿನ ದೊಡ್ಡ ತೋಟದವರಾದ ಮಹೇಶ ಮಣಿಯಾಣಿ ಅವರು ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಉಬರಡ್ಕ ಉಮೇಶ್ ಶೆಟ್ಟಿಯವರಿಂದ ಹೆಜ್ಜೆಗಾರಿಕೆ ಕಲಿತು ಮೇಳ ಸೇರಿದವರು. ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಅವರ ಮಾರ್ಗದರ್ಶನದಲ್ಲಿ ಕಟೀಲು ಮೇಳ ಸೇರಿದ ಅವರು, ಆರಂಭದಲ್ಲಿ ಬಪ್ಪನಾಡು ಮೇಳ, ನಂತರ ಧರ್ಮಸ್ಥಳ ಮೇಳಗಳಲ್ಲಿ ಸ್ತ್ರೀವೇಷ, ಪುಂಡುವೇಷ ನಂತರ ಪೂರ್ಣಪ್ರಮಾಣದ ಹಾಸ್ಯಗಾರರಾಗಿ ಒಟ್ಟು 37 ವರ್ಷ ಯಕ್ಷ ಸೇವೆ ಮಾಡಿದವರು. ಮಳೆಗಾಲದ ತಿರುಗಾಟದಲ್ಲಿ ಏಳು ವರ್ಷದಿಂದ ಮಹಿಳಾ ಕಲಾವಿದೆ ವಿದ್ಯಾ ಕೋಳ್ಳೂರು ಮತ್ತು ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ತಂಡದೊಂದಿಗೆ ಅಮೇರಿಕಾ. ಯುರೋಪ್ ಯಕ್ಷ ಪ್ರವಾಸದ ಖಾಯಂ ಕಲಾವಿದರಾಗಿದ್ದಾರೆ. ವಿಶಿಷ್ಟ ಬಣ್ಣಗಾರಿಕೆ, ಆಂಗಿಕ…

Read More

ಕಟೀಲು : ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 01 ಮಾರ್ಚ್ 2026ರ ಭಾನುವಾರ ಕಟೀಲಿನ ಕುದ್ರುವಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ದಿನಾಂಕ 22 ಜನವರಿ 2026ರಂದು ಕಟೀಲು ಸರಸ್ವತೀ ಸದನದಲ್ಲಿ ನಡೆದ ದ.ಕ. ಜಿಲ್ಲಾ ಕ.ಸಾ.ಪ. ಮೂಲ್ಕಿ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಯಿತು. ನಂದಿನೀ ನದಿ ಹರಿಯುವ ಕಟೀಲಿನಲ್ಲಿ ಎರಡು ಪುಟ್ಟ ದ್ವೀಪಗಳಿದ್ದು, ಒಂದರಲ್ಲಿ ದೇವಸ್ಥಾನವಿದೆ. ಇನ್ನೊಂದರಲ್ಲಿ ಮೂಲ ಸ್ಥಾನವಿದ್ದು, ಪ್ರಕೃತಿಯ ಮಡಿಲಲ್ಲಿ ಎರಡು ಸಮಾನಾಂತರ ವೇದಿಕೆಗಳಲ್ಲಿ ಸಮ್ಮೇಳನ ನಡೆಯಲಿದೆ. ಒಂದು ವೇದಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಹಿರಿಯರ ನೆನಪು ಮಾಡಲಾಗುವುದು. ಇನ್ನೊಂದರಲ್ಲಿ ಕವಿ, ಕಥಾ ಗೋಷ್ಟಿಗಳು ನಡೆಯಲಿದ್ದು, ತಾಲೂಕಿನ ಯುವ ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಲಾಗುತ್ತದೆ. ಈ ದ್ವೀಪದಲ್ಲಿ ಬ್ರಹ್ಮಕಲಶೋತ್ಸವದ ಸಂದರ್ಭ ನಾಗಮಂಡಲ ನಡೆಯುತ್ತದೆ. ಇಲ್ಲಿ ನಾಗಾರಾಧನೆಗೆ ಮಹತ್ವವಿದೆ. ತಾಲೂಕು ಮಾತ್ರವಲ್ಲದೆ ಜಿಲ್ಲೆಯ ಖ್ಯಾತ ಹಾಗೂ ಯುವ ಚಿತ್ರಕಲಾವಿದರಿಂದ ನಂದಿನೀ ನದಿ, ಕಟೀಲು ಕ್ಷೇತ್ರದ…

Read More

ಬೆಂಗಳೂರು : ‘ಈ ಹೊತ್ತಿಗೆ ಟ್ರಸ್ಟ್’ ನೀಡುವ 2026ನೇ ಸಾಲಿನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ವಿಮರ್ಶಕಿ ತಾರಿಣಿ ಶುಭದಾಯಿನಿ ಅವರ ‘ಪೆನಲೊಪಿ’ ಅಪ್ರಕಟಿತ ಕವನ ಸಂಕಲನ, ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಕಥೆಗಾರ ಎಂ. ಮನೋಹರ ಪೈ ಇವರ ‘ಲಾಧಾಕ್ಷಿಸ್ಣ ಮತ್ತು ಇಂದಿಲಾ ಕ್ಯಾಂಟೀನು’ ಅಪ್ರಕಟಿತ ಕಥಾಸಂಕಲನ ಆಯ್ಕೆಯಾಗಿವೆ. ಪ್ರಶಸ್ತಿಗಳು ತಲಾ ರೂ.10,000/- ನಗದು ಒಳಗೊಂಡಿವೆ. ಕಾವ್ಯ ವಿಭಾಗದಲ್ಲಿ ಕವಿ ಆನಂದ ಝುಂಜರವಾಡ ಮತ್ತು ಕಥಾ ವಿಭಾಗದಲ್ಲಿ ಲೇಖಕಿ ಜಯಶ್ರೀ ದೇಶಪಾಂಡೆ ತೀರ್ಪುಗಾರರಾಗಿದ್ದರು. ಚಿತ್ರದುರ್ಗದ ತಾರಿಣಿ ಶುಭದಾಯಿನಿ ಅವರ ಹಲವು ಕವನ ಸಂಕಲನ, ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ. ಕಾರ್ಕಳದ ಮನೋಹರ ಪೈ ಅವರ ಕಥಾ ಸಂಕಲನ ಮತ್ತು ಕಾದಂಬರಿಗಳು ಪ್ರಕಟವಾಗಿವೆ. ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿನ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ ತಿಳಿಸಿದ್ದಾರೆ.

Read More

ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಬಸಂತ್ ಉತ್ಸವ್’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 01 ಫೆಬ್ರುವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಉರ್ವ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪೂರ್ವಾಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಪಂಡಿತ್ ಮಲ್ಯಬನ್ ಚಟರ್ಜಿಯವರ ಶಾಸ್ತ್ರೀಯ ಗಾಯನ, ತದನಂತರ ಪಂಡಿತ್ ಆಶಿಶ್ ಸೇನ್‌ ಗುಪ್ತಾ ಇವರ ತಬ್ಲಾ ಸೋಲೋ ಕೊನೆಯ ಭಾಗದಲ್ಲಿ ಪಂಡಿತ್ ಪಾರ್ಥ ಬೋಸ್‌ರವರಿಂದ ಸಿತಾರ್ ವಾದನ ನಡೆಯಲಿದೆ. ಈ ಬಸಂತ್‌ಉತ್ಸವ್‌ ಕಾರ್ಯಕ್ರಮಕ್ಕೆ ಸಾರಂಗಿಯಲ್ಲಿ ಸರ್ಫ್ರಾಜ್‌ ಖಾನ್ ಮತ್ತು ತಬ್ಲಾದಲ್ಲಿ ಗುರುರಾಜ ಆಡುಕ್ಕಳ ರವರು ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ನರೇಂದ್ರ ಎಲ್. ನಾಯಕ್‌ರವರು ಕೋರಿದ್ದಾರೆ.

Read More

ಪುತ್ತೂರು : ಗಂಗಾ ಪ್ರತಿಷ್ಠಾನ ಕುಮಾರಪುರ ಅರ್ಪಿಸುವ ‘ಕಲ್ಲುರ್ಟಿ ಕಥನ’ ಕಲ್ಲುರ್ಟಿ ದೈವದ ಕುರಿತಾದ ಒಂದು ಸಮಗ್ರ ಮತ್ತು ರೋಚಕವಾದ ಗೀತ ಕಥನ ‘ನಮ್ಮ ಕೊಂಬಾರು’ ಯೂಟ್ಯೂಬ್ ವಾಹಿನಿಯಲ್ಲಿ ದಿನಾಂಕ 14 ಜನವರಿ 2026ರಂದು ಬಿಡುಗಡೆಗೊಂಡಿದೆ ಎಂದು ಯೂಟ್ಯೂಬ್ ಸಂಚಾಲಕ ಹಾಗೂ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿರುವ ಪ್ರವೀಣ ಕುಮಾರ್ ಕಟ್ಟೆ ತಿಳಿಸಿದ್ದಾರೆ. ಹಿರಿಯ ಕವಿ, ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರ ಸಾಹಿತ್ಯಕ್ಕೆ ಖ್ಯಾತ ಗಾಯಕ ಎಂ. ರವೀಂದ್ರ ಪ್ರಭು ಧ್ವನಿ ನೀಡಿದ್ದಾರೆ. ಕಥಾ ಹಂದರ : ತುಳುನಾಡಿನ ಸತ್ಯ ದೇವತೆ ಕಾರಣೀಕದ ಶ್ರೀ ಕಲ್ಲುರ್ಟಿ ದೈವದ ಆರಾಧನಾ ಕ್ಷೇತ್ರಗಳು ಹಲವು. ಬಂಟ್ವಾಳ ತಾಲೂಕಿನ ಪಣೋಲಿಬೈಲು, ಬಾಳ್ತಿಲ ಗ್ರಾಮದ ಚೆಂಡೆ ಮೊದಲಾದೆಡೆ ನೆಲೆ ನಿಂತು ನಂಬಿದವರನ್ನು ಪವಾಡ ಸದೃಶವಾಗಿ ಅನುಗ್ರಹಿಸುವ ಕಲ್ಲುರ್ಟಿ ಅಮ್ಮನ ಕಥನವು ಅಷ್ಟೇ ಹೃದಯಂಗಮವಾದುದು. ತುಳು ಜನಪದ ಸಾಹಿತ್ಯದಲ್ಲಿ ಕೆಲ್ಲತ್ತ ಮಾರ್ನಾಡಿನ ಬಡ ಕಲ್ಲು ಕುಟಿಗರ ಕುಟುಂಬವೊಂದರಲ್ಲಿ ಹುಟ್ಟಿದ ಅಣ್ಣ – ತಂಗಿಯರು…

Read More

ನೃತ್ಯ ಪ್ರಸ್ತುತಿಯ ಕಾರ್ಯಕ್ರಮದಲ್ಲಿ, ಕಲಾರಸಿಕರ ಸಮ್ಮುಖದಲ್ಲಿ ಕಲಾವಿದರು ಏಕವ್ಯಕ್ತಿ ನೃತ್ಯ ಪ್ರದರ್ಶನ ಮಾಡುವುದಕ್ಕೂ ಮತ್ತು ಸಮೂಹ ನೃತ್ಯದಲ್ಲಿ ಒಂದು ಕಥಾವಸ್ತುವಿನ ಸುತ್ತ ಹೆಣೆಯಲಾದ ‘ನೃತ್ಯರೂಪಕ’ವನ್ನು ಬಹು ಕಲಾವಿದರು ಸೇರಿ ಸಾಕಾರಗೊಳಿಸುವುದಕ್ಕೂ ಅಪಾರ ವ್ಯತ್ಯಾಸವಿದೆ ಹಾಗೂ ಅದರಲ್ಲಿ ಅಷ್ಟೇ ಪರಿಶ್ರಮವಿದೆ – ಸಮಗ್ರತೆಯ ಸಾತತ್ಯವಿದೆ. ದಿನಾಂಕ 26 ಜನವರಿ 2026ರಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ಖ್ಯಾತ ನಾಟ್ಯಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಅವರ ಶಿಷ್ಯೆ ಹಾಗೂ ಮಗಳಾದ ಡಾ. ಪಿ. ಸಾಧನಶ್ರೀ ನೇತೃತ್ವದಲ್ಲಿ ‘ಸಾಧನ ಸಂಗಮ ಟ್ರಸ್ಟ್’ ನೃತ್ಯಶಾಲೆಯು ನಡೆಸಿದ ‘ಬಹುಳ ನೃತ್ಯೋತ್ಸವ’ ಬಹು ಯಶಸ್ವಿಯಾಗಿ ಮೂರು ಹೃದಯಸ್ಪರ್ಶಿ ನೃತ್ಯರೂಪಕಗಳೊಂದಿಗೆ ಕಣ್ಮನ ತಣಿಸಿತು. ಶುಭಾರಂಭದಲ್ಲಿ ‘ನಾಟ್ಯ ದೇಗುಲ ಡ್ಯಾನ್ಸ್ ಸ್ಕೂಲ್’ ಕಲಾತ್ಮಕ ನಿರ್ದೇಶಕ ವಿ.ಎಂ. ಸ್ವಾಮಿ ಅವರ ಶಿಷ್ಯರಿಂದ ಸ್ವಾಗತ ನರ್ತನ ಮತ್ತು ಭಾರತೀಯ ವಿವಿಧ ಶಾಸ್ತ್ರೀಯ ನೃತ್ಯಶೈಲಿಗಳ ಸಮಾಗಮದಲ್ಲಿ ಅರ್ಪಿಸಲಾದ ‘ಮಹಾ ಗಣಪತಿ’ಯ ಪ್ರಾರ್ಥನೆ ಚೇತೋಹಾರಿಯಾಗಿತ್ತು. ಮೊದಲಿಗೆ ಯಕ್ಷಗಾನದ ಮಟ್ಟುವಿನಲ್ಲಿ ಮೂಡಿ ಬಂದ ಭಾಗವತರ ಹಾಡುಗಾರಿಕೆಗೆ ವಿಶಿಷ್ಟ ಹೆಜ್ಜೆ…

Read More

ಮಂಗಳೂರು : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗವು ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ‘ಅಬ್ಬಕ್ಕ : 500 ಪ್ರೇರಣಾದಾಯಿ 100 ಸರಣಿ ಉಪನ್ಯಾಸ’ದ 99ನೇ ಕಾರ್ಯಕ್ರಮ ಮತ್ತು ಸಾಧಕರ ಸಮ್ಮಾನ ಸಮಾರಂಭವು ದಿನಾಂಕ 12 ಜನವರಿ 2026ರಂದು ವಿದ್ಯಾ ಸಂಸ್ಥೆಯ ‘ರಾಜ ಸಭಾಂಗಣ’ದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಮೂಡಬಿದಿರೆ ಚೌಟ ಮನೆತನದ ಅಬ್ಬಕ್ಕ ವಂಶಸ್ಥೆ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿ “ರಾಣಿ ಅಬ್ಬಕ್ಕರ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನ ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿದೆ. ಯುವ ಜನಾಂಗ ಅದರಿಂದ ಪ್ರೇರಣೆ ಪಡೆದು ಯಶಸ್ವಿ ಜೀವನವನ್ನು ನಡೆಸುವುದಕ್ಕೆ ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶ ಪ್ರೇಮವನ್ನು ಬೆಳೆಸಿ ಸಾರ್ಥಕ ಬದುಕನ್ನು ಕಾಣಬೇಕು” ಎಂದರು. ಯಕ್ಷಗಾನ ಕಲಾವಿದ ಮತ್ತು ಶಿಕ್ಷಕ ವರ್ಕಾಡಿ ರವಿ ಅಲೆವೂರಾಯ, ರಾಣಿ ಅಬ್ಬಕ್ಕ ವಿದೇಶಿ ಆಕ್ರಮಣಕಾರರ ವಿರುದ್ಧ ನಡೆಸಿದ ಹೋರಾಟ, ಅವರ ನಾಯಕತ್ವ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ವಿವರಿಸಿದರು. ‌ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ವಿಶೇಷ ಪುರಸ್ಕಾರವನ್ನು…

Read More

ಮಂಗಳೂರು : ಮಂಗಳೂರಿನ ಕದ್ರಿ ಕಂಬಳ ರಸ್ತೆ ಮಲ್ಲಿಕಾ ಬಡಾವಣೆಯ ‘ಮಂಜುಪ್ರಾಸಾದ’ ವಾದಿರಾಜ ಮಂಟಪದ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ದಿನಾಂಕ 27 ಜನವರಿ 2026ರಂದು ‘ಮಧ್ವಜಯಂತಿ’ ಆಚರಿಸಲಾಯಿತು. ಹರಿಪಾದಕ್ಕೈದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಹಾಗೂ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಕಲ್ಕೂರ ಪ್ರತಿಷ್ಠಾನ ಮಂಗಳೂರು ಆಯೋಜಿಸಿದ್ದ ಮಧ್ವ ನವಮಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ “ಆಚಾರ್ಯ ಮಧ್ವರ ದ್ವೈತ ಸಿದ್ಧಾಂತ ಮತ್ತು ಚಿಂತನೆಗಳು ದೇವರು ಹಾಗೂ ಜೀವರ ತಾರತಮ್ಯವನ್ನು ಆಧರಿಸಿವೆ; ಅವು ವಸ್ತು ಮತ್ತು ಅದರ ಗುಣ ಲಕ್ಷಣಗಳ ನಡುವಿನ ವ್ಯತ್ಯಾಸವನ್ನು ತಿಳಿಸುವುದಲ್ಲದೆ ವಾಸ್ತವಿಕ ಜಗತ್ತು ಹಾಗೂ ಆತ್ಮದ ಮುಕ್ತಿಗಾಗಿ ಭಕ್ತಿಯನ್ನು ಒತ್ತಿ ಹೇಳುತ್ತದೆ. ಮಧ್ವಾಚಾರ್ಯರ ವಿಚಾರಗಳು ವೇದ ಮತ್ತು ಪುರಾಣಗಳ ಆಧಾರದ ಮೇಲೆ ಸ್ಥಾಪಿತವಾಗಿವೆ. ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಮಾರ್ಗಗಳ ಮೂಲಕ ಅವರು ವಸ್ತುಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ. ಅವರು ರಚಿಸಿರುವ ಸುಮಾರು 39ರಷ್ಟು ಗ್ರಂಥಗಳು…

Read More

ಮೂಲ್ಕಿ : ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 01 ಮಾರ್ಚ್ 2026ರ ಭಾನುವಾರ ಕಟೀಲು ದೇಗುಲದ ಕುದ್ರುವಿನಲ್ಲಿ ನಡೆಯಲಿದೆ. ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದ ಸಲುವಾಗಿ ಮೂಲ್ಕಿ ತಾಲೂಕಿನ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ ರಚನೆ (ಎ4 ಹಾಳೆಯಲ್ಲಿ ಒಂದು ಪುಟ), ಕವನ ರಚನೆ ಸ್ಪರ್ಧೆ (12 ಸಾಲುಗಳು), ಹಾಸ್ಯ ಬರಹ ಸ್ಪರ್ಧೆ (ಎರಡು ಪುಟ), ನಾನು ಓದಿದ ಉತ್ತಮ ಪುಸ್ತಕ – ಪ್ರಬಂಧ ಸ್ಪರ್ಧೆ (ಎರಡು ಪುಟ) ಆಯೋಜಿಸಲಾಗಿದೆ. ಮೂಲ್ಕಿ ತಾಲೂಕಿನಲ್ಲಿ ವಾಸವಾಗಿರುವ, ಉದ್ಯೋಗದಲ್ಲಿರುವ ಮತ್ತು ಮೂಲತಃ ಮೂಲ್ಕಿ ತಾಲೂಕಿನವರಾಗಿ ಬೇರೆ ಕಡೆಗಳಲ್ಲಿ ಇರುವ ಸಾಹಿತ್ಯಾಸಕ್ತರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಪ್ರತಿ ವಿಭಾಗದಲ್ಲಿ ಉತ್ತಮವಾದ ಎರಡು ಬರಹಗಳಿಗೆ ಬಹುಮಾನ ನೀಡಲಾಗುವುದು. ಸ್ಪರ್ಧಿಗಳು ತನ್ನ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಬರಹಗಳನ್ನು ರಘುನಾಥ್ ಕಾಮತ್, ಅಂಚೆ ಕಚೇರಿ ಕಿನ್ನಿಗೋಳಿ, ಮೂಲ್ಕಿ ತಾಲೂಕು – 574150 ದೂರವಾಣಿ 9448887697 ಈ ವಿಳಾಸಕ್ಕೆ ದಿನಾಂಕ 21…

Read More