Subscribe to Updates
Get the latest creative news from FooBar about art, design and business.
Author: roovari
ಉಜಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಸ್.ಡಿ.ಎಂ. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ವನಜಾ ಜೋಶಿಯವರ ‘ನಕ್ಕು ಬಿಡು ಬಾನಕ್ಕಿ’ ಗಜಲ್ ಸಂಕಲನದ ಬಿಡುಗಡೆ ಹಾಗೂ ಗಜಲ್ ರಚನಾ ಕಾರ್ಯಾಗಾರವು ದಿನಾಂಕ 06 ಡಿಸೆಂಬರ್ 2025ರಂದು ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಕರ್ಷಕವಾಗಿ ನೆರವೇರಿತು. ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಂತೋಷ್ ಆಲ್ಬರ್ಟ್ ಸಲ್ದಾನಾ ಉದ್ಘಾಟನೆ ನೆರವೇರಿಸಿದರು. ಎನ್.ವಿ. ಡಿಗ್ರಿ ಕಾಲೇಜು, ಕಲಬುರಗಿಯ ಗಜಲ್ ಕವಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿನಾಥ ಎಸ್. ತಳವಾರ ಇವರು ಗಜಲ್ ರಚನಾ ಕಾರ್ಯಾಗಾರ ನಡೆಸಿ ಗಜಲ್ ಸಾಹಿತ್ಯದ ವಿನ್ಯಾಸ, ಪರಂಪರೆ ಮತ್ತು ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಳವಾದ ತಿಳಿವಳಿಕೆ ನೀಡಿದರು. ಸಾಹಿತಿ ಸುಮನಾ ಆರ್. ಹೇರ್ಳೆ ಪುಸ್ತಕ ಪರಿಚಯ ನೀಡಿ, ಕೃತಿಯ ಭಾವನಾತ್ಮಕ ವ್ಯಾಪ್ತಿ ಮತ್ತು ಸಂಗತಿಯನ್ನೆತ್ತಿಹಿಡಿದರು. ಕೃತಿಕಾರರಾದ…
ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವಾರ್ಷಿಕ 2025ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಮೊಗಸಾಲೆ ಪ್ರತಿಷ್ಠಾನದಿಂದ ನೀಡುವ ‘ಸಾಹಿತ್ಯ ಪ್ರಶಸ್ತಿ’ಯನ್ನು ಕಾಸರಗೋಡಿನ ಸಾಹಿತಿ ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರಿಗೆ, ಶ್ರೀಪತಿ ಮಂಜನಬೈಲು ದತ್ತಿನಿಧಿಯ ‘ರಂಗಸನ್ಮಾನ ಪ್ರಶಸ್ತಿ’ಯನ್ನು ಮಂಗಳೂರಿನ ರಂಗಕರ್ಮಿ ಶ್ರೀ ಶಶಿರಾಜ ಕಾವೂರು ಇವರಿಗೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಸರೋಜಿನಿ ನಾಗಪ್ಪಯ್ಯ ಈಶ್ವರ ಮಂಗಲ ಅವರ ದತ್ತಿನಿಧಿಯ ‘ಯಕ್ಷಗಾನ ಸಾಹಿತ್ಯ ಸಂಶೋಧನ ಪ್ರಶಸ್ತಿ’ಯನ್ನು ಶಿರಸಿಯ ಹಿರಿಯ ಸಾಹಿತಿ ಶ್ರೀ ಅಶೋಕ ಹಾಸ್ಯಗಾರ ಇವರಿಗೆ, ಸಂಘದ ‘ವಾರ್ಷಿಕ ಗೌರವ ಪ್ರಶಸ್ತಿ’ಯನ್ನು ಶ್ರೀ ಹುಲಿಮನೆ ಜಯರಾಮ ಹೆಗಡೆ ಮಿಜಾರು ಇವರಿಗೆ ನೀಡಲು ನಿರ್ಣಯಿಸಲಾಗಿದೆ. ಇವುಗಳಲ್ಲಿ ದತ್ತಿ ಪ್ರಶಸ್ತಿಗಳ ಮೌಲ್ಯ ರೂಪಾಯಿ ಹತ್ತು ಸಾವಿರವಾದರೆ ವಾರ್ಷಿಕ ಗೌರವ ಪ್ರಶಸ್ತಿಯು ರೂಪಾಯಿ ಐದು ಸಾವಿರದಾಗಿದ್ದು ಪ್ರತೀ ಪ್ರಶಸ್ತಿಗಳು ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿವೆ. ಇವುಗಳ ಪ್ರದಾನ ಸಮಾರಂಭವನ್ನು ದಿನಾಂಕ 28 ಡಿಸೆಂಬರ್ 2025ರಂದು ಕಾಂತಾವರ ಕನ್ನಡ ಭವನದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ…
ಉಡುಪಿ : ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ. ಪುತ್ತೂರು ಇವರ ನೇತೃತ್ವದಲ್ಲಿ 25 ದಿನಗಳ ಅವಧಿಯ ಅಳಿವಿನಂಚಿನ ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರವು ದಿನಾಂಕ 14 ಡಿಸೆಂಬರ್ 2025ರಂದು ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಸಂಪನ್ನಗೊಂಡಿತು. ಹಾವಂಜೆ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಆಶಾ ಪೂಜಾರಿಯವರು “ನಮ್ಮ ಗ್ರಾಮದಲ್ಲಿ ಈ ರೀತಿಯ ಕಾರ್ಯಾಗಾರಗಳು ನಡೆಯುತ್ತಿರುವುದು ಬಹಳ ಸಂತೋಷದ ವಿಷಯ, ಕಾವಿ ಕಲಾವಿದ ಜನಾರ್ದನ ಹಾವಂಜೆ ನಮ್ಮೂರಿನ ಹೆಮ್ಮೆ. ಸ್ಥಳೀಯ ಕರಕುಶಲಕರ್ಮಿಗಳು ಇನ್ನಷ್ಟು ಈ ಕಲಾಪ್ರಕಾರದಲ್ಲಿ ತೊಡಗಿಸಿಕೊಂಡು ನಮ್ಮ ಗ್ರಾಮದ ಅಭಿವೃದ್ಧಿಯೂ ಆಗಲಿ” ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಕರಕುಶಲ ಅಭಿವೃದ್ಧಿ ಮಂಡಲಿಯ ಸಹ ನಿರ್ದೇಶಕಿ ರಾಜೇಶ್ವರಿಯವರು “ಗ್ರಾಮೀಣ ಭಾಗದಲ್ಲಿನ ಕುಶಲಕರ್ಮಿಗಳಿಗೆ ಈ ರೀತಿಯ ವಿನ್ಯಾಸಗಳನ್ನು ಬೆಳೆಸುವ ವಿವಿಧ ರೀತಿಯ ಕಾರ್ಯಕ್ರಮಗಳು ದಿನಭತ್ಯೆಯೊಂದಿಗೆ ನಡೆಸಲ್ಪಡುತ್ತದೆ. ಅಲ್ಲದೇ ಮಾರುಕಟ್ಟೆಗೆ ಸಹಕಾರ ನೀಡುವ ಪ್ರದರ್ಶನಗಳೂ ಇಲಾಖೆಯಲ್ಲಿದೆ. ಪ್ರಸ್ತುತ ಅಳಿವಿನಂಚಿನ ಕಾವಿ ಕಲೆಯನ್ನು…
ಮೈಸೂರು : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದೊಂದಿಗೆ ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ನಿರಂತರ ರಂಗ ಉತ್ಸವ – 2025’ವು ದಿನಾಂಕ 17ರಿಂದ 21 ಡಿಸೆಂಬರ್ 2025 ರವರೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ಪ್ರಸ್ತುತಗೊಳ್ಳಲಿದೆ. ವೇದಿಕೆ ಕಾರ್ಯಕ್ರಮಗಳ ವಿವರ : ದಿನಾಂಕ 17 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ಹಾಸನದ ಮಾನವ ತಂಡದಿಂದ ‘ಜಡೆ ಕೋಲಾಟ’, ಸಂಜೆ ಗಂಟೆ 6-15ಕ್ಕೆ ಉದ್ಘಾಟನಾ ಸಮಾರಂಭ ನಮ್ಮೊಂದಿಗೆ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಎಸ್.ಜಿ. ಸಿದ್ದರಾಮಯ್ಯ, ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಮತ್ತು ನಿರಂತರದ ಪ್ರಸಾದ್ ಕುಂದೂರು ಭಾಗವಹಿಸಲಿದ್ದಾರೆ. ಸಂಜೆ ಗಂಟೆ 7-00ಕ್ಕೆ ರಾಜೇಶ್ವರಿ ತೇಜಸ್ವಿಯವರ ಆತ್ಮಕಥೆ ಆಧಾರಿತ ನಾಟಕ ‘ನನ್ನ ತೇಜಸ್ವಿ’ ನಾಟಕವನ್ನು ಬೆಂಗಳೂರಿನ ಕಲಾಮಾಧ್ಯಮ ತಂಡ ಪ್ರಸ್ತುತಪಡಿಸಲಿದೆ. ಸಂಗೀತ : ಭರತ್ ಬಿ.ಜೆ. ರಂಗರೂಪ, ವಿನ್ಯಾಸ ಮತ್ತು ನಿರ್ದೇಶನ : ಬಿ.ಎಂ. ಗಿರಿರಾಜ. ದಿನಾಂಕ 18 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ದೇವಾನಂದ್…
ಗಿಡದಲ್ಲರಳಿದ ಗೊಂಚಲು ಗೊಂಚಲು ಗುಲಾಬಿ ಕಂಡಾಗ ಮರಳುತ್ತದೆ ನನ್ನ ಮನ ಬಾಲ್ಯದತ್ತ ಆಹಾ ಅದೆಂತಹ ಅದ್ಭುತ ಬಾಲ್ಯ ಒಂದೇ ಮನೆಯಲ್ಲಿ ಹತ್ತಾರು ಮಕ್ಕಳು ದೊಡ್ಡಪ್ಪನ ಮಕ್ಕಳು ಚಿಕ್ಕಪ್ಪನ ಮಕ್ಕಳು ಎಲ್ಲರೂ ಒಟ್ಟಾಗಿ ಅಂಗಳದಲ್ಲಿ ಆಡುವಾಗ ಏನು ಮೋಜು ಏನು ಮೋಜು ಕಿತ್ತಾಟ ಕಚ್ಚಾಟ ಮತ್ತೆ ಒಟ್ಟುಗೂಡಿ ಆಟ ಬಾಲ್ಯವೆಂದರೆ ಹಾಗೇ ಅಲ್ಲವೇ ಅವ ಹಿರಿಯವ ಇವ ಕಿರಿಯವ ಎಂಬ ಭಾವ ಮೂಡುವುದೇ ಇಲ್ಲ ಅವ ಅಣ್ಣನ ಮಗ ಇವ ತಮ್ಮನ ಮಗ ಎಂಬ ಭೇದವಿಲ್ಲ ನಾವೆಲ್ಲರೂ ಒಂದು ಎಂಬ ಸದ್ಭಾವ ನಾವು ಕಚ್ಚಾಡಿದರೆ ನಾವು ಜಗಳಾಡಿದರೆ ಎಂದೂ ಬರುತ್ತಿರಲಿಲ್ಲ ನಮ್ಮ ಮಧ್ಯೆ ಹಿರಿಯರು ನಾವು ನಾವೇ ಜಗಳಾಡಿ ಮತ್ತೆ ಮರೆತು ಒಂದುಗೂಡಿ ಆಡುತ್ತಿದ್ದ ಆ ದಿನಗಳು ಎಷ್ಟು ಚೆಂದ ಅಂದು ನೋವಿರಲಿಲ್ಲ ಎಂಬ ತೀರ್ಮಾನ ಬೇಡ ಹೂವಿನ ಮುಂದೆ ಮುಳ್ಳಿರುವಂತೆ ನಮಗೂ ಹಲವು ನೋವುಗಳಿದ್ದರೂ ಅರಳಿದ ಗುಲಾಬಿಗಳಂತೆ ನೋವ ಮರೆತು ಸದಾ ನಗುತ್ತಿದ್ದೆವು ಆ ದಿನಗಳು ಆ ಬದುಕು ಎಷ್ಟು ಚಂದ…
ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್ ಮತ್ತು ಜನವರಿ ಮಾಹೆಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಮಾಣ ವರ್ಷ ನಡೆಸುವ ಈ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ನಮ್ಮದು ಎಂದು ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ. ಡಿಸೆಂಬರ್ ಕೊನೆಯ ವಾರದಲ್ಲಿ ಎಲ್ಲಾ ತಾಲೂಕು ಮಟ್ಟದಲ್ಲಿ ಸಮ್ಮೇಳನ ಏರ್ಪಡಿಸಲಾಗುವುದು. ಜನವರಿ ಮೊದಲ ವಾರ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಂತರ ರಾಜ್ಯ ಮಟ್ಟದ ಸಮ್ಮೇಳನ ಏರ್ಪಡಿಸಲಾಗುವುದು. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸ್ವಂತ ಕವನ, ಕಥೆ, ಪ್ರಬಂಧ ಬರೆಯುತ್ತಿದ್ದರೆ, ಆಶುಭಾಷಣದಲ್ಲಿ ಆಸಕ್ತಿಯಿದ್ದರೆ ನಿಮಗೆ ಸಾಮೂಹಿಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳು ತಮ್ಮ…
ಮಂಗಳೂರು : ತುಳು ಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ 13 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರೂ, ಧರ್ಮದರ್ಶಿಗಳೂ ಆದ ಡಾ. ಪುನರೂರು “ತುಳುವಿಗಾಗಿ ಈ ಹಿಂದೆಯೂ ಅನೇಕ ಹೋರಾಟಗಳು ನಡೆದಿವೆ. ಹಳ್ಳಿಯಿಂದ ದಿಲ್ಲಿಯವರೆಗೂ ಸಾಗಿದ್ದೇವೆ. ಅದರಲ್ಲೆಲ್ಲಾ ದಾಮೋದರ ನಿಸರ್ಗರೂ ಇದ್ದರು. ಇಂದು ಅವರ ನೆನಪಿನಲ್ಲಿ ಸಂಸ್ಮರಣಾ ಸಪ್ತಾಹ ನಡೆಸಿರುವುದು ಸಾಮಯಿಕವೇ ಆಗಿದೆ. ತುಂಬು ಅಭಿಮಾನದ ಕಾರ್ಯಕ್ರಮವಿದು” ಎಂದು ಹೇಳಿದರು. ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗರು ಸಪ್ತಾಹವನ್ನು ಯಶಸ್ವಿಗೊಳಿಸಿದವರನ್ನು ಅಭಿನಂದಿಸುತ್ತಾ ನಿವೃತ್ತ ಬ್ಯಾಂಕ್ ಉದ್ಯೋಗಿ ರೊ. ಜೆ.ವಿ. ಶೆಟ್ಟರನ್ನು ತುಳು ಕೂಟ ಹಾಗೂ ಸರಯೂ ಬಳಗದ ವತಿಯಿಂದ ಸನ್ಮಾನಿಸಿದರು. ಹಿರಿಯರಾದ ಶ್ರೀ ಗಂಗಾಧರ ಶಾಂತಿ, ಯೋಗೀಶ್ ಶೆಟ್ಟಿ ಜೆಪ್ಪು,…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಳಲಿಯ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಮಣೇಲ್ ರಾಣಿ ಅಬ್ಬಕ್ಕ ಚಾವಡಿ ಸಂಯುಕ್ತ ಆಶ್ರಯದಲ್ಲಿ ದಿನಾಂಕ 14 ಡಿಸೆಂಬರ್ 2025ರಂದು ಮಳಲಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ ‘ಮಣೇಲಿನ ಹೆಮ್ಮೆ ರಾಣಿ ಅಬ್ಬಕ್ಕ’ ವಿಚಾರ ಸಂಕಿರಣ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ “ರಾಣಿ ಅಬ್ಬಕ್ಕನ ಅರಮನೆ ಇದ್ದಂತಹ ಹಾಗೂ ವಿದೇಶಿ ಪ್ರವಾಸಿ ಅಬ್ಬಕ್ಕನನ್ನು ಭೇಟಿ ಮಾಡಿದ ಗಂಜೀಮಠ ಗ್ರಾಂ.ಪಂ ವ್ಯಾಪ್ತಿಯ ಮಣೇಲಿನಲ್ಲಿ ಅಬ್ಬಕ್ಕ ರಾಣಿಯ ಉತ್ಸವ ಗ್ರಾಮೋತ್ಸವದ ರೂಪದಲ್ಲಿ ಆರಂಭಗೊಳ್ಳಬೇಕು, ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ ‘ಅಬ್ಬಕ್ಕ’ ಸಾಂಸ್ಕೃತಿಕ ಗ್ರಾಮವನ್ನು ಕಟ್ಟುವ ಕಾರ್ಯ ನಡೆಯಬೇಕು. ರಾಣಿ ಅಬ್ಬಕ್ಕ ಕುರಿತು ಚಾರಿತ್ರ್ಯಿಕ ಸಾಧನೆಗಳ ಬಗ್ಗೆ ಇನ್ನೂ ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆದಿಲ್ಲ.…
‘ನೃತ್ಯಾಂಕುರ’- ನೃತ್ಯ ಸಂಸ್ಥೆಯ ರೂವಾರಿ, ನಾಟ್ಯಗುರು- ಕಲಾವಿದೆ ಪಾದರಸದ ವ್ಯಕ್ತಿತ್ವದ ಶ್ರೀಮತಿ ಅಮೃತಾ ರಮೇಶ್ ಬಹುಮುಖಿ ಪ್ರತಿಭೆ. ನೀಳ ನಿಲುವಿನ ತೆಳುಕಾಯದ ಅಮೃತಾ, ತನ್ನ ದೇಹವನ್ನು ಹಾವಿನಂತೆ ಬಾಗಿ- ಬಳುಕಿಸಿ, ಕಾಲನ್ನು ಎತ್ತರಕ್ಕೆ ಆಕಾಶಚಾರಿಯಲ್ಲಿ ಮಿನುಗಿಸಿ, ಅರೆಮಂಡಿಯಲ್ಲಿ, ಮಂಡಿ ಅಡವುಗಳಲ್ಲಿ ವೇದಿಕೆಯ ತುಂಬಾ ಸಲೀಸಾಗಿ ಚಲಿಸುವ ಮೋಡಿಕಾರ್ತಿ. ತನ್ನ ನೀಳ ತೋಳು, ಕಾಲ್ಗಳು – ಸೊಂಟವನ್ನು ದ್ರವೀಕೃತ ಚಲನೆಗಳಿಂದ ತಿರುಗಿಸಿ ಕಣ್ಮನ ಸೆಳೆಯುವ ಮೆರುಗಿನ ಪ್ರತಿಭೆ. ಅದ್ಭುತ ಭಂಗಿಗಳನ್ನು ನಿರಾಯಾಸವಾಗಿ, ಕಡೆದಿಟ್ಟ ಶಿಲ್ಪದಂತೆ ಸುಮನೋಹರವಾಗಿ ಭಂಗಿಗಳನ್ನು ರಚಿಸಿ ಕಲಾರಸಿಕರನ್ನು ಬೆರಗುಗೊಳಿಸುವ ಕಲಾವಂತೆ. ಇದ್ಯಾವುದೂ ಅತಿಶಯೋಕ್ತಿಯಲ್ಲ ಬಣ್ಣನೆಯಲ್ಲ. ಈ ಕಲಾವಿದೆಯ ವಿಶಿಷ್ಟ ಕಲಾವಂತಿಕೆಯನ್ನು ಕಣ್ಣಾರೆ ಕಂಡವರಿಗೆ ಮನವರಿಕೆಯಾಗುವ ಸತ್ಯ. ಎಲ್ಲಕ್ಕಿಂತ ಮೆಚ್ಚಾದುದು ಶಾಸ್ತ್ರೀಯತೆಗೇ ಅಂಟಿದ ಮಡಿವಂತಿಕೆಯಿಲ್ಲದ ಮುಕ್ತ ಮುನ್ನಡೆಗೆ ಖುಷಿಯಾಯಿತು. ಮಕ್ಕಳಿಗೆ ಭರತನಾಟ್ಯದ ಶಾಸ್ತ್ರೀಯ ನೃತ್ಯದ ಪರಿಚಯವೂ ಉಂಟು ಎಂಬುದನ್ನು ಮನದಟ್ಟು ಮಾಡಿ, ಸಮಕಾಲೀನ ನೃತ್ಯ ಪ್ರಯೋಗ- ಪರಿಕಲ್ಪನೆಗಳಿಗೆ ಮುಂದಾಗಿದ್ದು ಅಮೃತಾರ ವೈಶಿಷ್ಟ್ಯ- ಅಸ್ಮಿತೆ. ಇತ್ತೀಚೆಗೆ ಮಲ್ಲತ್ತಳ್ಳಿಯ ಕಲಾಗ್ರಾಮ ವೇದಿಕೆಯ ಮೇಲೆ ಮೂರು…
ಉಡುಪಿ : ಎಂ.ಜಿ.ಎಂ. ಪದವಿ ಪೂರ್ವ ಕಾಲೇಜಿನ ವತಿಯಿಂದ ಪ್ರಸಿದ್ಧ ನೃತ್ಯಗಾರ, ಅಂತರಾಷ್ಟ್ರೀಯ ಕಲಾವಿದ ಪಂಡಿತ್ ರಾಹುಲ್ ಆಚಾರ್ಯ ಇವರ ಒಡಿಸ್ಸಿ ನೃತ್ಯ ಪ್ರದರ್ಶನವು ದಿನಾಂಕ 11 ಡಿಸೆಂಬರ್ 2025ರಂದು ನಡೆಯಿತು. ‘ಸೊಸೈಟಿ ಫಾರ್ ದ ಪ್ರೊಮೋಷನ್ಸ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಂಡ್ ಕಲ್ಚರ್ ಅಮೊಂಗ್ಸ್ಟ್ ಯೂಥ್’ [SPICMACAY) ಆಶ್ರಯದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮ ನೆರೆದಿದ್ದ ಕಲಾಭಿಮಾನಿಗಳ ಮನ ಸೆಳೆಯಿತು. ‘ಡಿವೈನ್ ಡ್ಯಾನ್ಸರ್’ ಎಂದೇ ಖ್ಯಾತರಾದ ರಾಹುಲ್ ಆಚಾರ್ಯ ಇವರ ಶಾಸ್ತ್ರೀಯವಾದ, ಶುದ್ಧವಾದ ನೈಜ ಕಲಾ ಪ್ರದರ್ಶನ ಹಾಗೂ ಅವರ ಪಾಂಡಿತ್ಯ ಮತ್ತು ಮೃದು ಮಾತು ನೆರೆದಿದ್ದ ಕಲಾರಸಿಕರಿಗೆ ರಸದೌತಣ ನೀಡಿತು. ಅವರೊಂದಿಗೆ ಸಹಕಲಾವಿದರಾಗಿ ಸಂಗೀತದಲ್ಲಿ ಸುಕಾಂತ ಕುಮಾರ್ ಕುಂಡ, ಮರ್ಧಲಾದಲ್ಲಿ ದಿಬಾಕರ್ ಪಾರಿದಾ, ವಯಲಿನ್ನಲ್ಲಿ ಪ್ರದೀಪ್ ಕುಮಾರ್ ಮಹಾರಣ ಮತ್ತು ಮಂಜೀರದಲ್ಲಿ ಸುಮುಖ ತಮಂಕರ್ ಸಹಕಾರ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಉಪ ಪ್ರಾಂಶುಪಾಲ ಡಾ.…