Author: roovari

ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ ಇದರ ವತಿಯಿಂದ ‘ಕನ್ನಡ ಮಾಧ್ಯಮ ಕ್ಷೇತ್ರ ಅವಕಾಶಗಳು ಮತ್ತು ಕೌಶಲ್ಯಗಳು’ ರಾಷ್ಟ್ರೀಯ ಕಾರ್ಯಾಗಾರವನ್ನು ದಿನಾಂಕ 07, 08 ಮಾತು 09 ಮೇ 2025ರಂದು ಬೆಳಗ್ಗೆ 10-00 ಗಂಟೆಗೆ ಯು.ಆರ್. ರಾವ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 07 ಮೇ 2025ರಂದು ಈ ಕಾರ್ಯಾಗಾರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ ಇವರು ಉದ್ಘಾಟನೆ ಮಾಡಲಿದ್ದಾರೆ. ‘ನುಡಿಚಿತ್ರ ಸ್ವರೂಪ ಮತ್ತು ಬರವಣಿಗೆ’ ಎಂಬ ವಿಷಯದ ಬಗ್ಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ನಿರಂಜನ ವಾನಳ್ಳಿ, ‘ಬರವಣಿಗೆಯ ಭಾಷೆ ಮತ್ತು ಸಂವೇದನೆ’ ಎಂಬ ವಿಷಯದ ಬಗ್ಗೆ ಪ್ರಸಿದ್ಧ ಅಂಕಣಕಾರ ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ, ‘ಪತ್ರಿಕಾ ಛಾಯಾಗ್ರಹಣ ಇಂದಿನ ಸವಾಲುಗಳು’ ಎಂಬ ವಿಷಯದ ಬಗ್ಗೆ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಹಾಗೂ…

Read More

ಹಿರಿಯ ಪತ್ರಕರ್ತ, ವಿವಿಧ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಕೈಕೊಂಡ ಶ್ರೀ ಮಲಾರ್ ಜಯರಾಮ ರೈ ಅವರು ಪಾರ್ವತಿ ಜಿ. ಐತಾಳ್ ಕೃತಿ ಬಿಡುಗಡೆ ಮಾಡಿದ ರೀತಿಯನ್ನೂ, ಹಾಗೆಯೇ ಡಾ. ರಮಾನಂದ ಬನಾರಿ ಅಶರೀರವಾಣಿಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ರೀತಿಯನ್ನೂ, ಕಿರಿಯ ಕಥೆಗಾರ್ತಿಯರು ತಮ್ಮ ಸ್ವರಚಿತ ಕಥೆಗಳನ್ನು ಪ್ರಸ್ತುತ ಪಡಿಸುವುದಕ್ಕೆ ಸಿಕ್ಕ ಅವಕಾಶದ ಸದುಪಯೋಗ ಮಾಡಿಕೊಂಡದ್ದನ್ನೂ ಮೆಚ್ಚಿಕೊಂಡರು. ಅವರು ಕಂಡುಕೊಂಡಂತೆ ಮಂಜೇಶ್ವರದ ಬಾಯಿಕಟ್ಟೆಯಲ್ಲಿ ನಡೆಸಲ್ಪಟ್ಟ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಏರ್ಪಡಿಸಿದ ಈ ಸಮಾರಂಭ ವಿವಿಧ ಬಗೆಯಲ್ಲಿ ಸ್ಮರಣೀಯವೆನ್ನಿಸುವಂಥಾದ್ದು. ಅನಿರೀಕ್ಷಿತ ದುರದೃಷ್ಟದ ಕಾರಣದಿಂದ ದ. ಕ. ದಲ್ಲಿ ಕರ್ಫ್ಯೂ ಜ್ಯಾರಿಯಾಗಿದ್ದು, ಪುಸ್ತಕ ಬಿಡುಗಡೆ ಮಾಡಬೇಕಾಗಿದ್ದ ಪಾರ್ವತಿ ಜಿ. ಐತಾಳ್ ಹೊರಟವರು ಹಿಂದಿರುಗಿದಾಗ ಅವರೊಂದಿಗೆ ಜಾಲತಾಣದ ಮೂಲಕ ಕಾರ್ಯನಿರ್ವಹಣೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಉತ್ತಮ ಸಂದೇಶಗಳ ಮೂಲಕ ಸಭಾಸದರಿಗೆ ಅವರ ಭಾಷಣ ಸಿಕ್ಕಿತು. “ಇನ್ನೇನು ಕುಂದಾಪುರದಿಂದ ಬಸ್ಸು ಹತ್ತುವುದರಲ್ಲಿದ್ದವಳು ಹಿಂದಿರುಗಿದೆ. ನಾನು ಭಂಡಾರ್ಕಾರ್ಸ್ ನಲ್ಲಿರುತ್ತ, ಇವರ ಜೊತೆಗೆ ಹದಿನೈದು ವರ್ಷ ಒಡನಾಡಿದ ನೆನಪಿದೆ. ಆಕಾಶವಾಣಿ…

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ, ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಸಂಯುಕ್ತ ಆಶ್ರಯದಲ್ಲಿ 23 ದಿನಗಳ ಕಾಲದ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 04 ಮೇ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಿಬಿರ ನಿರ್ದೇಶಕರಾದ ಶ್ರೀಷ ತೆಕ್ಕಟ್ಟೆ, ರಂಜಿತ್ ಶೆಟ್ಟಿ ಕುಕ್ಕುಡೆ, ಅಶೋಕ್ ಮೈಸೂರು ಹಾಗೂ ಕೃಷ್ಣ ಬಡಿಗೇರ ಅವರಿಗೆ ಗುರುವಂದನೆ ಸಲ್ಲಿಸಿದ ಉದಯ್ ಗಾಂವ್ಕರ್ ಮಾತನಾಡಿ “ಶಿಬಿರಗಳಲ್ಲಿ ಪ್ರತಿಭೆಗಳ ಅನಾವರಣಕ್ಕೆ ಅವಕಾಶಗಳು ಹೆಚ್ಚು ಸಾಧ್ಯ. ಪೋಷಕರು ತಮ್ಮಿಂದ ಸಾಧಿಸುವುದಕ್ಕೆ ಸಾಧ್ಯವಾಗದ್ದನ್ನು ಮಕ್ಕಳ ಮೇಲೆ ಹೇರಿ ತನ್ಮೂಲಕ ಮಕ್ಕಳನ್ನು ಬಂಧನಕ್ಕೊಳಗಾಗಿಸುತ್ತಾರೆ. ಇದರಿಂದ ಮಗು ತಾನಾಗಬೇಕಾದದ್ದೇನೂ ಆಗದೇ ತಂದೆ ತಾಯಿಗಳು ಆಗಬೇಕಾದದ್ದನ್ನು ಆಗಬೇಕಾದ ಪರಿಸ್ಥಿತಿ ಸರಿಯಲ್ಲ. ಮಕ್ಕಳು ಇನ್ನೊಬ್ಬರ ಮಾತು ಕೇಳುವುದೇ ಜಾಣತನವಲ್ಲ, ಸ್ವತಂತ್ರವಾಗಿ ಯೋಚಿಸುವುದು ಜಾಣತನ” ಎಂದು ಅಭಿಪ್ರಾಯಪಟ್ಟರು. “ಸಂಸ್ಕಾರ ಬೆಳೆಸಿಕೊಳ್ಳುವ ವ್ಯಕ್ತಿತ್ವ ಶಿಬಿರದಲ್ಲಾಗುತ್ತಿರುವುದು ಗಮನಿಸಿದ್ದೇವೆ” ಎಂದು ಯಕ್ಷಗುರು ಲಂಬೋದರ ಹೆಗಡೆ ಹೇಳಿದರು.“ಯಶಸ್ವೀ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ದಿನಾಂಕ 17 ಮೇ 2025ರಂದು ಉಡುಪಿಯ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರ ಇಲ್ಲಿನ ಸಭಾಂಗಣದಲ್ಲಿ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರೊ. ಎಂ.ಎಲ್. ಸಾಮಗ ಇವರ ಸಮ್ಮೇಳನ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಮ್ಮೇಳನದ ಸಭಾಂಗಣದಲ್ಲಿ ಪುಸ್ತಕ ಮಳಿಗೆಗಳಿಗೆ ಅವಕಾಶವಿರುತ್ತದೆ. ಆಸಕ್ತರು ಕ.ಸಾ.ಪ. ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್ 94803 46069 ಇವರನ್ನು ಸಂಪರ್ಕಿಸಬಹುದು ಎಂದು ಉಡುಪಿ ತಾಲೂಕು ಕ.ಸಾ.ಪ. ತಿಳಿಸಿದೆ.

Read More

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು 45 ವರ್ಷದೊಳಗಿನ ಉದಯೋನ್ಮುಖ ಲೇಖಕ/ಲೇಖಕಿಯರನ್ನು ಪ್ರೋತ್ಸಾಹಿಸಲು ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳ ಸಂಪುಟವೊಂದನ್ನು ಯುವ ಲೇಖಕ/ಲೇಖಕಿಯರಾದ ಡಾ. ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಮಧು ಕಾರಗಿಯವರ ಸಂಪಾದಕತ್ವದಲ್ಲಿ ಪ್ರಕಟಿಸಲಿದೆ. ಆಸಕ್ತರು ನಿಯಮಾನುಸಾರವಾಗಿ ಬರಹಗಳನ್ನು ಕಳುಹಿಸಬೇಕು. ನಿಯಮಗಳು : # ಈ ಸಂಪುಟಕ್ಕೆ ಸ್ವತಂತ್ರ ಮತ್ತು ಅಪ್ರಕಟಿತ ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳನ್ನು ಮಾತ್ರ ಕಳುಹಿಸಬೇಕು. # ಅನುವಾದ, ಅನುಸೃಷ್ಟಿ, ರೂಪಾಂತರ ಮಾಡಿದ ರಚನೆಗಳಿಗೆ ಅವಕಾಶವಿಲ್ಲ. # ಒಬ್ಬರು ಒಂದು ಕವಿತೆ, ಕಥೆ, ಪ್ರಬಂಧ ಅಥವಾ ಲೇಖನವನ್ನು ಮಾತ್ರ ಕಳುಹಿಸಬೇಕು. # ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳನ್ನು ಕಡ್ಡಾಯವಾಗಿ docx & pdf ಎರಡೂ ರೂಪದಲ್ಲಿ ಕಳಿಸಬೇಕು. ಬರಹಗಾರರ ಸಂಕ್ಷಿಪ್ತ ಪರಿಚಯ, ವಯೋಮಿತಿ ದೃಢೀಕರಣದ ದಾಖಲೆ, ಪೂರ್ಣ ವಿಳಾಸ ಮತ್ತು ಒಂದು ಫೋಟೋ ಪ್ರತ್ಯೇಕವಾಗಿ ಕಳಿಸಬೇಕು. # ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ, ಕವಿತೆ, ಕಥೆ, ಪ್ರಬಂಧ ಮತ್ತು ಲೇಖನಗಳ…

Read More

ಕನ್ನಡದ ನವೋದಯ ಕಾಲದಲ್ಲಿ ಜನಪದ ಸಾಹಿತ್ಯವು ಆ ಕಾಲದ ಮನಸ್ಸನ್ನು ಸೆರೆ ಹಿಡಿದಿತ್ತು. ಭಾಷೆ ಮತ್ತು ಸತ್ವದ ದೃಷ್ಟಿಯಿಂದ ಆಂಗ್ಲ ಭಾಷೆಯ ಕಾವ್ಯದಷ್ಟೇ ಪ್ರಭಾವವನ್ನು ಬೀರಿತ್ತು. ನೆಲದ ಬದುಕಿನ ಭದ್ರ ಪರಂಪರೆಯನ್ನು ತೋರಿಸಿಕೊಟ್ಟಿತ್ತು. ಉತ್ತರ ಕರ್ನಾಟಕದಲ್ಲಿ ದ.ರಾ. ಬೇಂದ್ರೆ, ಮಧುರಚೆನ್ನ ಮತ್ತು ಆನಂದಕಂದ ಮುಂತಾದವರು ಜನಪದ ಕಾವ್ಯದಿಂದ ಪ್ರಭಾವಿತರಾಗಿದ್ದರು. ಜಾನಪದ ಸತ್ವವನ್ನು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಮಾತನ್ನು ನವೋದಯದ ನಂತರದ ತಲೆಮಾರಿಗೆ ಸೇರಿದ ಸುನಂದಾ ಬೆಳಗಾಂವಕರರ ಕವಿತೆಗಳಿಗೂ ಅನ್ವಯಿಸಬಹುದು. ಸುನಂದಾ ಬೆಳಗಾಂವಕರರ ‘ಶಾಲ್ಮಲಿ’ಯು ಉತ್ತಮ ಕವಿತೆಗಳ ಸುಂದರ ಗುಚ್ಛ. ಧಾರವಾಡದ ಜನಜೀವನದ ಅಂಗವಾಗಿ ಮೂಡಿದ 42 ಕವನಗಳು ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತವೆ. ಕೈಕೈ ಹಿಡಿದು ನಡೆದಾಡುವ ಪುಟ್ಟ ಮಕ್ಕಳಂತಿರುವ ಪ್ರಾಸಗಳು ತಾವಾಗಿಯೇ ಬೆಳೆದು ಮೈಗೂಡಿದ್ದು ಅಲ್ಲಲ್ಲಿ ಒಪ್ಪುವ ನುಡಿಗಳು ಛಂದೋಬದ್ಧವಾಗಿ ಮೈವೆತ್ತು ಮಿಂಚುತ್ತವೆ. ರಾಗಬದ್ಧವಾಗಿ ಹಾಡಬಲ್ಲ, ಭಾವಬದ್ಧವಾಗಿ ಓದಬಲ್ಲ, ಪುಟ್ಟ ಮಕ್ಕಳಿಂದ ನೃತ್ಯರೂಪಕವಾಗಿಸಲು ಯೋಗ್ಯವಾದ ‘ನವಿಲು’, ‘ಚಾಡಿ’, ‘ನಾಗ’, ‘ಗುಬ್ಬಿ’, ‘ಚುರಮುರಿ’ ಮೊದಲಾದ ಕವಿತೆಗಳ ಒಳನೋಟ-ಹೊರನೋಟಗಳಲ್ಲಿ…

Read More

ಮೈಸೂರು : ಕಾವಲುಮನೆ ಸಾಂಸ್ಕೃತಿಕ ಕೇಂದ್ರ ಮೈಸೂರು ಪ್ರಯೋಗಿಸುವ ದೇವನೂರು ಮಹಾದೇವ ಇವರು ರಚಿಸಿರುವ ಸಿ. ಬಸವ ಲಿಂಗಯ್ಯ ಇವರ ಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನವನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನಲ್ಲಿ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ದಿನಾಂಕ 4, 9, 17, 23, 24, 25 ಮೇ 2025ರಂದು ಸಂಜೆ 6-30 ಗಂಟೆಗೆ, ಮೈಸೂರು ವಿಶ್ವವಿದ್ಯಾನಿಲಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ದಿನಾಂಕ 15 ಮೇ 2025ರಂದು ಹಾಗೂ ಬೆಂಗಳೂರು ಕಲಾಗ್ರಾಮ ಸಮಾಚ್ಚಯ ಭವನದಲ್ಲಿ ದಿನಾಂಕ 20 ಮೇ 2025ರಂದು ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ ಗಾಗಿ 9964024281 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಕಾಸರಗೋಡು : ನಮ್ಮ ನಾಡಿನ ಗಣ್ಯ ಸಂಗೀತ ಕಲಾವಿದರಾದ ಗಾನಪ್ರವೀಣ ಶ್ರೀ ಯೋಗೀಶ ಶರ್ಮ ಬಳ್ಳಪದವು ಇವರನ್ನು ಕಲ್ಯಾಸ್ಸೇರಿ ಕೃಷ್ಣನ್ ನಂಬಿಯಾರ್ ಭಾಗವತರ್ ಸ್ಮಾರಕ ಸಂಗೀತ ಸಭಾದಿಂದ ಕೊಡಮಾಡಲ್ಪಡುವ ಪ್ರತಿಷ್ಠಿತ ‘ಸಂಗೀತ ಜ್ಯೋತಿಶ್ರೀ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಇವರು ತೋರಿಸಿರುವ ದೀರ್ಘಕಾಲದ ನಿಷ್ಠೆ ಮತ್ತು ಸಾಧನೆ, ಭಾರತದಾದ್ಯಂತ ಹಾಗೂ ಹೊರದೇಶಗಳಲ್ಲಿ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿ ಕೇಳುಗರ ಮನಮೆಚ್ಚಿದ ಕಲಾವಿದರಾಗಿ ಹಾಗೂ ನೂರಾರು ವಿದ್ಯಾರ್ಥಿಗಳಿಗೆ ಗುರುಗಳಾಗಿ ಸಂಗೀತ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗೆ ಹಾಗೂ ಮಹತ್ವಪೂರ್ಣ ಕೊಡುಗೆಗಳಿಗೆ ಈ ಪ್ರಶಸ್ತಿ ಸಿಕ್ಕಿದ್ದು, ಇವರ ಸಾಧನೆಗೆ ಈ ಪದಕ ಮಾನ್ಯತೆಯಾಗಿದೆ. ಕಾಸರಗೋಡು ಜಿಲ್ಲೆಯ ಬಳ್ಳಪದವು ಮೂಲದ ಶ್ರೀ ಯೋಗೀಶ ಶರ್ಮರವರು, ತನ್ನೂರಲ್ಲಿ ವೀಣಾವಾದಿನಿ ಸಂಗೀತ ವಿದ್ಯಾಪೀಠವನ್ನು ಸ್ಥಾಪಿಸಿ, ಇದೀಗ ಈ ಸಂಸ್ಥೆ ತನ್ನ ಬೆಳ್ಳಿಹಬ್ಬವನ್ನೂ ಆಚರಿಸಿದೆ. ಈ ಪ್ರಶಸ್ತಿಯನ್ನು ದಿನಾಂಕ 04 ಮೇ 2025ರಂದು ಸಂಜೆ ಪಡಿಞ್ಞಾಟ್ಟಂ ಕೊಳುವ್ವಲ್ ಎನ್‌.ಎಸ್‌.ಎಸ್. ಆಡಿಟೋರಿಯಂನಲ್ಲಿ ನಡೆಯಲಿರುವ ಸಂಗೀತ ಸಭೆಯ ಮೂರನೇ ವಾರ್ಷಿಕೋತ್ಸವದಲ್ಲಿ ಪ್ರದಾನ…

Read More

ಹೊನ್ನಾವರ : ಪ್ರೀತಿ ಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪು -4 ಕಾರ್ಯಕ್ರಮವನ್ನು ದಿನಾಂಕ 04 ಮೇ 2025ರಂದು ಬೆಳಿಗ್ಗೆ 10-30 ಗಂಟೆಗೆ ಹೊನ್ನಾವರ ಕೆರೆಕೋಣ ಸಹಯಾನದ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10-00 ಗಂಟೆಗೆ ‘ನಮನ’ ಸ್ವಾಮಿ ಗಾಮನಹಳ್ಳಿ ಇವರಿಂದ ಹಾಡುಗಳು, ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಸಾಹಿತಿ ಕೃಷ್ಣ ನಾಯಕ ಇವರು ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಸಹಾಯಕ ಪ್ರಾಧ್ಯಾಪಕರಾದ ಡಾ. ಅನಸೂಯಾ ಕಾಂಬಳೆ ಇವರಿಂದ ‘ಜನಜೀವನ ಮತಧರ್ಮ ನಿರಪೇಕ್ಷತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಸಂಧ್ಯಾ ನಾಯ್ಕ, ಸುನೈಫ್ ವಿಟ್ಲ, ವಿಲ್ಸನ್ ಕಟೀಲು, ಚಿನ್ಮಯ ಹೆಗಡೆ, ಹೆಬಸೂರ ರಂಜಾನ್ ಇವರಿಂದ ಕಾವ್ಯ ಓದು ಪ್ರಸ್ತುತಗೊಳ್ಳಲಿದೆ. ‘ಅನ್ವೇಷಣೆ’ ಸಂಪಾದಕರಾದ ಆರ್.ಜಿ. ಹಳ್ಳಿ ನಾಗರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಸಮಕಾಲೀನ ಸಂವಾದ’ದಲ್ಲಿ ನ್ಯಾಯವಾದಿ ಪ್ರಕಾಶ ಉಡಿಕೇರಿ, ಸುರಭಿ ರೇಣುಕಾಂಬಿಕೆ ಮತ್ತು ಕಾರವಾರ ಕ.ಸಾ.ಪ.ದ ಅಧ್ಯಕ್ಷರಾದ ರಾಮಾ…

Read More

ಕಿನ್ನಿಗೋಳಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಿನ್ನಿಗೋಳಿ ಘಟಕದ ಉದ್ಘಾಟನೆಯನ್ನು ದಿನಾಂಕ 09 ಮೇ 2025ರಂದು ಮಧ್ಯಾಹ್ನ 3-00 ಗಂಟೆಗೆ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಟಪದ ಎದುರು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಸಾಧಕ ಕಲಾವಿದರಿಗೆ ಗೌರವಾರ್ಪಣೆ ನೀಡಿ ಸನ್ಮಾನಿಸಲಾಗುವುದು. ಮಧ್ಯಾಹ್ನ 3-00 ಗಂಟೆಗೆ ರವಿಚಂದ್ರ ಕನ್ನಡಿಕಟ್ಟೆ, ಅಮೃತ ಅಡಿಗ, ಸಿದ್ಧಕಟ್ಟೆ ಭರತ್ ಶೆಟ್ಟಿ, ಡಾ. ಪ್ರಖ್ಯಾತ್ ಶೆಟ್ಟಿ, ಮನ್ವಿತ್ ರೈ ಇರಾ ಇವರಿಂದ ನಡೆಯಲಿರುವ ‘ಯಕ್ಷಗಾನ ಗಾನ ವೈಭವ’ಕ್ಕೆ ಗುರುಪ್ರಸಾದ್ ಬೊಳಿಂಜಡ್ಕ ಮತ್ತು ಕೌಶಿಕ್ ರಾವ್ ಚೆಂಡೆ ಮತ್ತು ಮದ್ದಳೆಯಲ್ಲಿ ಹಾಗೂ ಪೂರ್ಣೇಶ್ ಆಚಾರ್ಯ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ. ಸಂಜೆ 5-00 ಗಂಟೆಗೆ ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಹೇರಂಭ ಇಂಡಸ್ಟ್ರೀಸ್ ಇದರ ಮಾಲಕರಾದ ಕನ್ಯಾನ ಸದಾಶಿವ ಶೆಟ್ಟಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ ಸಭಾ ಕಾರ್ಯಕ್ರಮದ ಬಳಿಕ…

Read More