Author: roovari

ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ -2025 ‘ಪರಿಕ್ರಮ’ ಕನ್ನಡ ಕಥಾ ಸಾಹಿತ್ಯದ ಚಿಂತನ-ಮಂಥನ ಕಾರ್ಯಕ್ರಮವು ಖ್ಯಾತ ಕಥೆಗಾರ, ಹಿರಿಯ ಸಾಹಿತಿ, ಸಾಮಾಜಿಕ ಕಾರ್ಯಕರ್ತ ಫಕೀರ್ ಮುಹಮ್ಮದ್ ಕಟ್ಟಾಡಿ ಇವರ ಸರ್ವಾಧ್ಯಕ್ಷತೆಯಲ್ಲಿ ದಿನಾಂಕ 15 ನವೆಂಬರ್ 2025ರಂದು ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಜರಗಲಿದೆ. ಬೆಳಿಗ್ಗೆ ಗಂಟೆ 8-00ಕ್ಕೆ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿ, ಕನ್ನಡ ಮಾತೆ ಭುವನೇಶ್ವರೀ ದೇವಿಯ ಶೋಭಾಯಾತ್ರೆಗೆ ಚಾಲನೆ ದೊರೆಯಲಿದೆ. ಬಳಿಕ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಎ. ಮೆಂಡನ್ ರಾಷ್ಟ್ರ ಧ್ವಜಾರೋಹಣಗೈಯಲಿದ್ದಾರೆ. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. ಕಾಪುವಿನ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪಾಂಗಾಳ ಬಾಬು…

Read More

Mumbai : In the city that never sleeps – where the hum of traffic meets the rhythm of dreams – Mumbai witnessed an evening of divine resonance and cultural splendour as Arunodaya Kala Niketan, the city’s eminent 66-year-old institution, celebrated its Suvarna Mahotsavam on 2nd November 2025, a festival of music and dance paying homage to its illustrious founder, Vidwan Guru M. N. Suvarna Ji. The grand event was curated by Dr. Guru Meenakshi Shriyan, Artistic Director of Arunodaya Kala Niketan, who continues the glorious legacy of her father with devotion and artistic excellence. The festival commenced with a musical…

Read More

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ಹೋಬಳಿ ಘಟಕ ಇವರ ವತಿಯಿಂದ ‘ಸಂಸ್ಕೃತಿ ಚಿಂತನ ಸಮಾರಂಭ’ವನ್ನು ದಿನಾಂಕ 16 ನವೆಂಬರ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಮೂಡುಬಿದಿರೆ ಕಲ್ಲಬೆಟ್ಟು ಮುರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ಹೋಬಳಿ ಘಟಕದ ಅಧ್ಯಕ್ಷರಾದ ಡಾ. ರಾಮಕೃಷ್ಣ ಶಿರೂರು ಇವರು ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಇವರು ಶುಭ ನುಡಿಗಳನ್ನಾಡಲಿದ್ದಾರೆ. ‘ಮಾನವ ಜನ್ಮ – ಮಾನವ ಧರ್ಮ’ ಎಂಬ ವಿಷಯದ ಬಗ್ಗೆ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆಯ ಪ್ರಧಾನ ಅಧ್ಯಾಪಕರಾದ ದಿನಕರ ಕುಂಭಾಶಿ ಇವರು ಉಪನ್ಯಾಸ ನೀಡಲಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮಲೆನಾಡ ಬರಹಗಾರರ ಸೃಜನಾತ್ಮಕ ಅಭಿವ್ಯಕ್ತಿಯ ವೇದಿಕೆಯಾಗಿ ʼಮಲೆನಾಡ ಬರಹಗಾರರ ವೇದಿಕೆʼ ರೂಪುಗೊಂಡಿದೆ. ಪುಸ್ತಕ ಪ್ರಕಟಣೆ, ವಿಚಾರ ಸಂಕಿರಣ, ಚಿಂತನಾ ಕಮ್ಮಟಗಳು, ಸಮ್ಮೇಳನಗಳು ಹೀಗೆ ವಿಭಿನ್ನ ಯೋಜನೆಗಳನ್ನು ಹೊಂದಿರುವ ಈ ವೇದಿಕೆಯ ಮೊದಲ ಪುಸ್ತಕವಾಗಿ ‘ಕಾಡಸುರಗಿ’ ಎಂಬ ನಲವತ್ತು ಮಲೆನಾಡು ಸಾಧಕರ ಜೀವನ ಸಾಧನೆಯನ್ನು ಪರಿಚಯಿಸುವ ಕೃತಿಯು ದಿನಾಂಕ 15 ನವಂಬರ್‌ 2025ರ ಶನಿವಾರ ಸಂಜೆ ಗಂಟೆ 5-30ಕ್ಕೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರಾದ ಪದ್ಮಶ್ರೀ ಗಿರೀಶ್‌ ಕಾಸರವಳ್ಳಿಯವರು ಕೃತಿಯನ್ನು ಬಿಡುಗಡೆ ಮಾಡಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್‌, ಪ್ರಖ್ಯಾತ ಗಾಯಕಿ ನಾಡೋಜ ಡಾ. ಬಿ.ಕೆ. ಸುಮಿತ್ರ, ಜವಹರಲಾಲ್‌ ನೆಹರು ತಾರಾಲಯದ ನಿರ್ದೇಶಕರಾದ ಡಾ. ಬಿ.ಆರ್. ಗುರುಪ್ರಸಾದ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಲೆನಾಡು ಬರಹಗಾರರ ವೇದಿಕೆ ಅಧ್ಯಕ್ಷರಾದ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಒಟ್ಟು ಹದಿನೆಂಟು ಲೇಖಕರ ಲೇಖನಗಳ ಕೃತಿಯನ್ನು…

Read More

ಮೈಸೂರು : ನಟನ ರಂಗಶಾಲೆಯ ವತಿಯಿಂದ 2025-26ನೇ ಸಾಲಿನ ವಾರಾಂತ್ಯ ರಂಗಶಾಲೆಯ ಮಕ್ಕಳ ಅಭ್ಯಾಸಿ ಪ್ರಯೋಗದ ಪ್ರಯುಕ್ತ ‘ಅಲೀಬಾಬಾ ಮತ್ತು 40 ಕಳ್ಳರು’ ನಾಟಕ ಪ್ರದರ್ಶನವನ್ನು ದಿನಾಂಕ 15 ಮತ್ತು 16 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಡಾ. ಚಂದ್ರಶೇಖರ ಕಂಬಾರರು ರಚಿಸಿದ್ದು, ರಾಗ ಸಂಯೋಜನೆ ರಾಜು ಅನಂತಸ್ವಾಮಿ, ನಿರ್ದೇಶನ ಸಹಾಯ ವಿನೀತ್ ಗೋಖಲೆ ಹಾಗೂ ವಿರಂಗ್ ಅಮೋಘ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಖ್ಯೆಗಳನ್ನು ಸಂಪರ್ಕಿಸಿರಿ.

Read More

ಕೊಡಗು : “ಕಲಾ ಉತ್ಸವ ಕೊಡಗು 2025” ಕಾರ್ಯಕ್ರಮದ ವತಿಯಿಂದ ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಕರ್ನಾಟಕ ವಿಕಾಸ ರಂಗ ಮತ್ತು ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು ಬಳಗಗಳ ಸದಸ್ಯರಿಂದ ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ವಿರಾಜಪೇಟೆ ಮೊಗರಗಲ್ಲಿ ಏರ್ಪಡಿಸಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಕವಿಗಳು, ಕವಯಿತ್ರಿಯರು, ಗಾಯಕರು ವೈಲೇಶ್ ಪಿ.ಎಸ್. ಕೊಡಗು 8861405738, ಕಲಾ ಉತ್ಸವ ಕೊಡಗು 2025ರ ರೂವಾರಿ ಸಾದಿಕ್ ಹಂಸ +91 98458 20257, ಹಿರಿಯ ಕವಿಗಳಾದ ಗಿರೀಶ ಕಿಗ್ಗಾಲು 091413 95426, ಕವಯಿತ್ರಿ ವಿಮಲ ದಶರಥ +91 90086 13729, ರಾಜ್ಯ ಸಂಚಾಲಕರಾದ ಭಾಗ್ಯವತಿ ಅಣ್ಣಪ್ಪ +91 98454 75153, ಇವರ ದೂರವಾಣಿ ಸಂಖ್ಯೆಗಳಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಲವಿನ್ ಲೋಪೇಸ್‌ರವರ ಕೃತಿ ಲೋಕಾರ್ಪಣೆ ಇರುತ್ತದೆ.

Read More

ಮಂಗಳೂರು : ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ದಿನಾಂಕ 23 ನವೆಂಬರ್ 2025ರಿಂದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಸುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ – 2025’ ಹದಿಮೂರನೇ ವರ್ಷದ ನುಡಿಹಬ್ಬ ಕಾರ್ಯಕ್ರಮದ ವರ್ಣರಂಜಿತ ಪೋಸ್ಟರನ್ನು ದಿನಾಂಕ 11 ನವೆಂಬರ್ 2025ರಂದು ಬಿಡುಗಡೆಗೊಳಿಸಲಾಯಿತು. ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಎ.ಜೆ. ಶೆಟ್ಟಿಯವರು ಪೋಸ್ಟರ್ ಬಿಡುಗಡೆಗೊಳಿಸಿ, “ಕಳೆದ ಹನ್ನೆರಡು ವರ್ಷಗಳಿಂದ ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ನುಡಿ ಹಬ್ಬ ರೂಪದಲ್ಲಿ ನಡೆಸುವ ಯಕ್ಷಾಂಗಣದ ಸಪ್ತಾಹ ಯಶಸ್ವಿಯಾಗುವಲ್ಲಿ ಕಾರ್ಯಕರ್ತರ ಪಾತ್ರ ಬಹಳ ದೊಡ್ಡದು” ಎಂದವರು ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ರೂಪು ರೇಷೆಗಳ ವಿವರ ನೀಡಿದರು. ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕಿ ನಿವೇದಿತಾ ಎನ್.…

Read More

ಕೋಟ : ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಉಸಿರು ಕೋಟ ಸಹಕಾರದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ರಾಜ್ಯೋತ್ಸವದ ಅಂಗವಾಗಿ ದಿನಾಂಕ 02 ನವೆಂಬರ್ 2025ರಂದು ಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಬೆಳ್ಳಂಬೆಳಗೆ ಕವಿಗೋಷ್ಠಿ’ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಂಸ್ಕೃತಿಕ ಚಿಂತಕ ಡಾ. ಬಾಲಕೃಷ್ಣ ಶೆಟ್ಟಿ ಇವರು ಮಾತನಾಡಿ “ಒಬ್ಬ ಕವಿಯಾದವನು ಗುಣಗ್ರಾಹಿಯಾಗಿರಬೇಕು ತನ್ನ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿರಬೇಕು. ಜೊತೆಗೆ ಇತರ ಕವಿಗಳ ಕವಿತೆಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಒಂದು ಪರಿಪಕ್ವವಾದಂತಹ ಕೃತಿ ಮೂಡಬಲ್ಲದು. ಆ ದಿಸೆ ಯಲ್ಲಿ ಎಲ್ಲ ಕವಿಗಳು ಜಾಗೃತ ರಾಗಬೇಕು” ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ ಕುಂದರ್ ಬಾರಿಕೆರೆಯವರು “ಇದೊಂದು ಅಪೂರ್ವವಾದ ಕಾರ್ಯಕ್ರಮ ಬೆಳಿಗ್ಗೆ 6-00 ಗಂಟೆಗೆ ಕವಿಗೋಷ್ಠಿ ನಡೆಯುತ್ತಿರುವುದು ಇದೇ ಮೊದಲ ಬಾರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟಿ…

Read More

ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಆಶ್ರಯದಲ್ಲಿ, ಸಸಿಹಿತ್ಲು ಘಟಕದ ಆತಿಥ್ಯದಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ, ವಿಶುಕುಮಾರ್ ದತ್ತಿನಿಧಿ ಸಂಚಾಲನ ಸಮಿತಿ ಸಹಯೋಗದಲ್ಲಿ ‘ವಿಶುಕುಮಾರ್ ತುಳು ಸಾಹಿತ್ಯೋತ್ಸವ’ದ ಅಂಗವಾಗಿ ದಿನಾಂಕ 09 ನವೆಂಬರ್ 2025ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ತುಳು ಕುಣಿತ ಭಜನಾ ಸ್ಪರ್ಧೆ ಮತ್ತು ‘ವಿಶುಕುಮಾ‌ರ್ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಹಾಗೂ ಪಿಲಿಕುಳ ನಿಸರ್ಗಧಾಮ ಸಮಿತಿ ಸದಸ್ಯ ಎಂ.ಜಿ. ಮೋಹನ್ “ವಿಶುಕುಮಾ‌ರ್ ಈ ಜಗತ್ತನ್ನು ಅಗಲಿ ದಶಕಗಳೇ ಕಳೆದರೂ, ಅವರು ಬದುಕಿದ ರೀತಿ ಹಾಗೂ ಸಾಧನೆಗಳು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿಸುವ ಕೆಲಸವನ್ನು ಯುವವಾಹಿನಿ ಸಂಸ್ಥೆ ಮಾಡಿದೆ. ಯಾರು ಸಮಾಜಕ್ಕಾಗಿ ತಮ್ಮ ಜೀವ ತೇಯುತ್ತಾರೋ, ನಾನಾ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಾರೋ, ಅಂತಹ ವ್ಯಕ್ತಿಗಳು ಸಮಾಜದಲ್ಲಿ ಬಹುಕಾಲ ನೆನಪಿನಲ್ಲಿತ್ತಾರೆ. ಅಂತಹ ವ್ಯಕ್ತಿಗಳಲ್ಲಿ ವಿಶುಕುಮಾರ್ ಒಬ್ಬರು” ಎಂದು ಹೇಳಿದರು. ಹಿರಿಯ ಸಾಹಿತಿ ಹಾಗೂ ಸಂಶೋಧಕ ಬೆನೆಟ್ ಜಿ.ಅಮ್ಮಣ್ಣ ಇವರಿಗೆ ‘ವಿಶುಕುಮಾರ್ ಪ್ರಶಸ್ತಿ’…

Read More

ಮಂಗಳೂರು : ಮಂಗಳೂರಿನ ಡಾನ್ ಬೋಸ್ಕೊ ಸಭಾಂಗಣದಲ್ಲಿ ದಿನಾಂಕ 09 ನವೆಂಬರ್ 2025ರಂದು ನಡೆದ ಭರತನಾಟ್ಯ ಪ್ರದರ್ಶನವು ಸಂಸ್ಕೃತಿ ಪ್ರೇಮಿಗಳನ್ನು ಮೋಡಿ ಮಾಡಿತು. ಖ್ಯಾತ ಭರತನಾಟ್ಯ ಕಲಾವಿದೆ ಮೀರಾ ಶ್ರೀನಾರಾಯಣನ್ ಅವರ ನೃತ್ಯ ವೈಭವವು ಶ್ರಾವಣೀಯ ಸಂಗೀತ, ದೃಢ ತಾಳ ಮತ್ತು ಮನಸ್ಸಿಗೆ ತಾಕುವ ಅಭಿನಯಗಳ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿತು. ಈ ನೃತ್ಯ ಸಂಜೆಯನ್ನು ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭರತಾಂಜಲಿ ಕೊಟ್ಟಾರ, ಮಂಗಳೂರು ಇವರ 30 ವರ್ಷಗಳ ಸಂಭ್ರಮಾಚರಣೆಯ ‘ಕಿಂಕಿಣಿ ತ್ರಿಂಶತ್’ ಪ್ರಯುಕ್ತ ಆಯೋಜಿಸಲಾಗಿತ್ತು. ಮಂಗಳೂರಿನ ಸಾಂಸ್ಕೃತಿಕ ವಲಯಕ್ಕೆ ಇದೊಂದು ಕಲಾಮಧುರ ಕ್ಷಣವಾಯಿತು. ಮೀರಾ ಶ್ರೀನಾರಾಯಣನ್ ಅವರು ವೇದಿಕೆಯ ಮೇಲೆ ತೋರಿಸಿದ ನೃತ್ಯಾಭಿನಯವು ಕೇವಲ ಕೌಶಲ್ಯವಲ್ಲ, ಅದು ಭಾವನೆ ಮತ್ತು ಭಕ್ತಿ ತುಂಬಿದ ಕಲಾತ್ಮಕ ಪ್ರಯಾಣವಾಗಿತ್ತು. ಆಕೆಯ ತಾಳ, ಲಯ ಮತ್ತು ಭಾವ ಸಂಯೋಜನೆಗಳು ಪ್ರೇಕ್ಷಕರನ್ನು ಆಳವಾಗಿ ಸ್ಪರ್ಶಿಸಿತು. ಪರಂಪರೆ, ಕಲಾತತ್ಪರತೆ ಮತ್ತು ಕಲಾಸಾಧನೆ ಎಲ್ಲವೂ ಮೇಳೈಸಿದ…

Read More