Subscribe to Updates
Get the latest creative news from FooBar about art, design and business.
Author: roovari
ಮೂಲ್ಕಿ : ಕಟೀಲು ದೇಗುಲದ ನಂದಿನಿ ನದಿಯ ಕುದ್ರುವಿನಲ್ಲಿ ದಿನಾಂಕ 01 ಮಾರ್ಚ್ 2026ರಂದು ನಡೆಯಲಿರುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸಲು ಮೂಲ್ಕಿ ತಾಲೂಕಿನ ಕವಿಗಳಿಗೆ ಹಾಗೂ ಕಥಾಗೋಷ್ಟಿಯಲ್ಲಿ ಭಾಗವಹಿಸಿ, ಸ್ವರಚಿತ ಕಥೆಯನ್ನು ಓದಲು ಮೂಲ್ಕಿ ತಾಲೂಕಿನ ಕಥಾಗಾರರಿಗೆ ಮುಕ್ತ ಅವಕಾಶ ನೀಡಲಾಗಿದೆ. ಮೂಲತಃ ಮೂಲ್ಕಿ ತಾಲೂಕಿನವರಾಗಿದ್ದು, ಬೇರೆ ಕಡೆ ವಾಸವಾಗಿರುವ ಅಥವಾ ಬೇರೆ ತಾಲೂಕಿನವರಾಗಿದ್ದು, ಪ್ರಸ್ತುತ ಮೂಲ್ಕಿ ತಾಲೂಕಿನಲ್ಲಿರುವ ಕವಿಗಳು, ಕಥಾಗಾರರು ಈ ಗೋಷ್ಟಿಗಳಲ್ಲಿ ಭಾಗವಹಿಸಬಹುದಾಗಿದೆ. ಪಾಲ್ಗೊಂಡವರಿಗೆ ಪ್ರಮಾಣಪತ್ರ, ಪುಸ್ತಕದ ಗೌರವ ಇದೆ. ಭಾಗವಹಿಸಲು ಇಚ್ಚಿಸುವವರು ಮುಂಚಿತವಾಗಿ ತಮ್ಮ ಹೆಸರನ್ನು ಹೆರಿಕ್ ಪಾಯಸ್ 9449913995 ಅಥವಾ ದೇವದಾಸ ಮಲ್ಯ 9448623247 ಇವರಲ್ಲಿ ನೋಂದಾಯಿಸಬಹುದು.
ಬೆಂಗಳೂರು : ಸಮುದಾಯ ಬೆಂಗಳೂರು ಇವರು ಪ್ರಸ್ತುತ ಪಡಿಸುವ ಕೆ.ಆರ್. ಮೀರಾ ಇವರ ಮಲಯಾಳಂ ಕಥೆ ಆಧಾರಿತ ‘ಭಗವಂತನ ಮರಣ’ ನಾಟಕ ಪ್ರದರ್ಶನವನ್ನು ದಿನಾಂಕ 22 ಫೆಬ್ರವರಿ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮತ್ತು 26 ಫೆಬ್ರವರಿ 2026ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗ ಶಂಕರದಲ್ಲಿ ಆಯೋಜಿಸಲಾಗಿದೆ. ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಇವರ ರಂಗರೂಪ, ವಿನ್ಯಾಸ, ರಂಗಸಜ್ಜಿಕೆ, ಸಂಗೀತ ಮತ್ತು ನಿರ್ದೇಶನ ಹಾಗೂ ಪದ್ಮಾ ಶಿವಮೊಗ್ಗ ಇವರು ಸಹ ನಿರ್ದೇಶನ ಮಾಡಿರುತ್ತಾರೆ. ನಾಟಕದ ಬಗ್ಗೆ : ಧಾರ್ಮಿಕ ಅಸಹಿಷ್ಣತೆಯಿಂದ ಹೆಚ್ಚಾಗುತ್ತಿರುವ ಹಿಂಸೆಯ ನಿರರ್ಥಕತೆ ಹಾಗೂ ಮೂಲಭೂತವಾದಿ ಸಂಘಟನೆಗಳು ಇಂತಹ ಹಿಂಸಾಚಾರಕ್ಕೆ ಯುವಕರನ್ನು ಬಳಸಿಕೊಳ್ಳುತ್ತಿರುವುದು ಖೇದಕರ. ಅಮಾಯಕರಾದ ಯುವಕರು ಧರ್ಮದ ಅಮಲಿಗೆ ಬಿದ್ದು ಹಿಂಸೆಯನ್ನ ಕೈಗೆತ್ತಿಕೊಳ್ಳುತ್ತಿರುವುದನ್ನು ಭಗವಂತನ ಸಾವು ನಾಟಕ ತೀರ್ವವಾಗಿ ವಿಶ್ಲೇಷಿಸುತ್ತದೆ. ನಾಟಕ ಹಿಂಸೆಯ ನಿರರ್ತಕತೆಯನ್ನು ಹೇಳುತ್ತಲೇ ಜ್ಞಾನದ ಬಲದಿಂದ ಜ್ಞಾನದ ಕೇಡನ್ನು ನೋಡುವಂತೆ ಪ್ರೇರೇಪಿಸುತ್ತದೆ. ಸಂಘಟನೆಯೊಂದರ ಕಾರ್ಯಕರ್ತನಾದ ಅಮರ ಎಂಬ ಯುವಕ ತಾನು…
ಮೈಸೂರು : ಜಾನಪದ ಕಲಾವಿದರ ಒಕ್ಕೂಟ (ರಿ.) ಮೈಸೂರು ವಿಭಾಗ ಕರ್ನಾಟಕ ಇದರ ವತಿಯಿಂದ ರಾಜ್ಯಮಟ್ಟದ ‘ಜಾನಪದ ಕಲಾರತ್ನ ಪ್ರಶಸ್ತಿ’ ಮತ್ತು ‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 21 ಫೆಬ್ರವರಿ 2026ರಂದು ಬೆಳಗ್ಗೆ 11-00 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಮಾನ್ಯಶ್ರೀ ಟಿ.ಎಸ್. ಶ್ರೀವತ್ಸ ಇವರು ವಹಿಸಲಿದ್ದು, ಮೈಸೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಮಡ್ಡೀಕೆರೆ ಶ್ರೀ ಗೋಪಾಲ್ ಇವರು ಉದ್ಘಾಟನೆ ಮಾಡಲಿದ್ದಾರೆ. ನಾಡಿನ ಸುಪ್ರಸಿದ್ಧ ಕವಿ ಡಾ. ಜಯಪ್ಪ ಹೊನ್ನಾಳಿ ಇವರು ‘ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಹಾಗೂ ಸಂಪನ್ಮೂಲ ವ್ಯಕ್ತಿ ಡಿ. ನಾಗರಾಜು ಇವರು ‘ಜಾನಪದ ಕಲೆಗಳ’ ಕುರಿತು ವಿಶೇಷ ನೀಡಲಿದ್ದಾರೆ. ಖ್ಯಾತ ಸಾಹಿತಿ ಟಿ. ಸತೀಶ್ ಜವರೇಗೌಡ ಮತ್ತು ಸಂಸ್ಥಾಪಕ ಕಾರ್ಯದರ್ಶಿ ಕುಮಾರಿ ಪ್ರಮೀಳಾ ಭಾಗ್ಯರಾಮ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ದಿನಾಂಕ 14 ಫೆಬ್ರವರಿ 2026ರಂದು ಪೆರ್ಮನ್ನೂರು ತೊಕ್ಕೊಟ್ಟು ಒಳಪೇಟೆಯ ಡಾ. ಅಂಬೇಡ್ಕರ್ ರಂಗ ಮಂದಿರದಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳದ ರಾಣಿ ಅಬ್ಬಕ್ಕ ವಂಶಸ್ಥರಾದ ಅನಿತಾ ಸುರೇಂದ್ರ ಕುಮಾರ್ “ರಾಣಿ ಅಬ್ಬಕ್ಕ 1525ರಿಂದ 1570ರವರೆಗೆ ಪೋರ್ಚುಗೀಸರ ವಿರುದ್ಧ ಹೋರಾಟ ಮಾಡಿದ ಹೆಗ್ಗಳಿಕೆ ಪಡೆದಿದ್ದಳು. ಯುದ್ಧದ ಮೂಲಕ ಅವರನ್ನು ಸೆದೆ ಬಡಿದು ರಾಜ್ಯ ರಕ್ಷಣೆಗೆ ಪಣ ತೊಟ್ಟಿದ್ದ ರಾಣಿ ಆಗಿದ್ದಾಳೆ. ಅಬ್ಬಕ್ಕಳ ಹೆಸರಿನಲ್ಲಿ ನಾನಾ ಕಡೆ ಅಬ್ಬಕ್ಕ ಉತ್ಸವ ಆಗುತ್ತಿರುವುದು ಶ್ಲಾಘನೀಯ. ಅವಳ ಹೆಸರಿನಲ್ಲಿ ನಡೆಯುವ ಉತ್ಸವ ಶಾಶ್ವತವಾಗಿ ಉಳಿಸಬೇಕು” ಎಂದು ಹೇಳಿದರು. ಹಾವೇರಿ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅಭಿನಂದನಾ ನುಡಿ ಸಲ್ಲಿಸಿ, “ಇತಿಹಾಸದಲ್ಲಿ 13 ಮಂದಿ ಶೂರ ಯೋಧರ ಪೈಕಿ 5 ಮಂದಿ ಮಹಿಳೆಯರು ಇದ್ದಾರೆ. ಅವರಲ್ಲಿ ರಾಣಿ ಅಬ್ಬಕ್ಕಳ…
ಕೊಂಚಾಡಿ : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ ಇದರ ಆಶ್ರಯದಲ್ಲಿ ಹಾಗೂ ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ) ಇವರ ಆಯೋಜನೆಯಲ್ಲಿ ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮವು ದಿನಾಂಕ 1ರಿಂದ 8 ಮಾರ್ಚ್ 2026ರವರೆಗೆ ದೇವಸ್ಥಾನ ಆವರಣದಲ್ಲಿರುವ ಶ್ರೀಮತಿ ಲೀಲಾವತಿ ಬೈಪಡಿತ್ತಾಯ ವೇದಿಕೆಯಲ್ಲಿ ನಡೆಯಲಿದೆ. ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಆಯೋಜಿಲಾದ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದಿನಾಂಕ 18 ಫೆಬ್ರವರಿ 2026ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುಗಳಾದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಕರಾವಳಿಯ ಗಂಡುಕಲೆ ಎಂದೇ ಖ್ಯಾತಿಯನ್ನ ಪಡೆದ ಯಕ್ಷಗಾನದಲ್ಲಿ ಮಹಿಳೆಯರ ಸಾಧನೆ, ಸಮರ್ಪಣೆ ಹಾಗೂ ಕಲಾ ಸಾಮರ್ಥ್ಯವನ್ನು ಸಮಾಜದ ಮುಂದಿಡುವ ಉದ್ದೇಶದಿಂದ ಈ ಅಷ್ಟಾಹ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ನೇಹಿತರ ಬಳಗವಾಗಿ ಆರಂಭಗೊಂಡ ಈ ಕಲಾ ಚಟುವಟಿಕೆ, ಮದ್ದಳೆ ಕಲಾವಿದ ಹಾಗೂ ಛಾಯಾಗ್ರಾಹಕರಾದ ಮಧುಸೂದನ್ ಅಲೆವೂರಾಯರ ಮಾರ್ಗದರ್ಶನದಲ್ಲಿ ಬೆಳೆದು, ಇಂದು ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು…
ಸೋಮೇಶ್ವರ : ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ದಿನಾಂಕ 15 ಫೆಬ್ರವರಿ 2026ರಂದು ಆಯ್ದ ಹಿರಿಯ ಕವಿಗಳ ಕವಿಗೋಷ್ಠಿ ಜರಗಿತು. ಅರ್ಚಕ ಶ್ರೀಶ ದೀಪ ಬೆಳಗಿಸಿದರು. ಸೋಮೇಶ್ವರ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ನಾಯ್ಕರು ಸಮಾಜದ ಮುಖಂಡ ಹರಿಶ್ಚಂದ್ರ ಗಟ್ಟಿ ಉಪಸ್ಥಿತರಿದ್ದರು. ಕವಿಗೋಷ್ಠಿ ಸಂಯೋಜಕ ಎಂ.ಎಸ್. ವೆಂಕಟೇಶ ಗಟ್ಟಿ ಸ್ವಾಗತಿಸಿದರು. ಈ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ರೇಮಂಡ್ ಡಿ.ಕುನ್ಹಾ ತಾಕೊಡೆ ಮಾತನಾಡಿ “ಕವಿಯ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ. ಜಾನಪದ, ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಬದ್ಧತೆಯ ವಿಷಯಗಳು ಕವಿತೆಗಳಿಗೆ ಪ್ರೇರಣೆಯಾಗುತ್ತವೆ” ಎಂದು ಹೇಳಿದರು. ಡಾ. ಸುರೇಶ್ ನೆಗಳಗುಳಿ ಕವಿಗೋಷ್ಠಿಗೆ ಚಾಲನೆ ನೀಡುತ್ತಾ ‘ಹರನೊಲಿದರೆ ಕೊರಡು ಕೊನರುವುದು’ ಎಂಬಂತೆ ಶಿವರಾತ್ರಿ ಕಾಲದ ಜಾಗರಣೆ ಮನಸ್ಸನ್ನು ಜಾಗೃತ ಮಾಡುತ್ತದೆ ಎನ್ನುತ್ತಾ ಶಿವರಾತ್ರಿಯ ಮಹತ್ವ ಸಾರುವ ಭಕ್ತಿಗೀತೆ ಹಾಗೂ ಗಝಲ್ ಓದಿದರು. ಕವಿಗಳಾದ ವಿಜಯಲಕ್ಷ್ಮೀ ಕಟೀಲು, ಅನಾರ್ಕಲಿ ಸಲೀಂ, ಸುಮಂಗಲ ದಿನೇಶ್, ಗಣೇಶ್ ಪ್ರಸಾದ್ ಜೀ,…
ಕಾಸರಗೋಡು : ಡಾ. ವಾಮನ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ಇವರ ಮುಂದಾಳುತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ‘ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ -2026’ ದಿನಾಂಕ 22 ಫೆಬ್ರವರಿ 2026ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಆಯೋಜಿತವಾಗಿದೆ. ಇಂತಹ ಸಮ್ಮೇಳನ ಕ್ಷೀಣಿಸುತ್ತಿರುವ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮಾಡುವ ನಿರಂತರ ಪ್ರಯತ್ನಗಳಲ್ಲಿ ಒಂದು. ಇಲ್ಲಿನ ಕನ್ನಡಿಗರ ಮಾತೃಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನಗಳ ದ್ಯೋತಕಗಳು. ಸಂಘ-ಸಂಸ್ಥೆಗಳು ಕನ್ನಡದ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿವೆ. ಅವುಗಳಲ್ಲಿ ಕನ್ನಡ ಭವನ ಮತ್ತು ಅಂಗ ಸಂಸ್ಥೆಗಳು ಅನವರತ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿವೆ. ಈಗ ಉದ್ದೇಶಿಸಿರುವ ಈ ಕಾರ್ಯಕ್ರಮವು ಅವುಗಳಲ್ಲಿ ಒಂದು. ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನವು ಬೆಳಿಗ್ಗೆ 7-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ದಿನಪೂರ್ತಿ ನಡೆಯುವುದಾಗಿ ರೂವಾರಿಗಳಾದ ಡಾ. ವಾಮನರಾವ್ ಬೇಕಲ್ ತಿಳಿಸಿದ್ದಾರೆ. ಕಾರ್ಯಕ್ರಮವು ನುಳ್ಳಿಪಾಡಿಯ ಕನ್ನಡ ಭವನದ…
ಉಡುಪಿ : ರಾಗ ಧನ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ರಾಗರತ್ನಮಾಲಿಕೆ – 46’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ದಿನಾಂಕ 21 ಫೆಬ್ರವರಿ 2026ರಂದು ಉಡುಪಿ ಶ್ರೀ ಕೃಷ್ಣ ಮಠದ ಬಳಿಯಿರುವ ಗೀತಾ ಮಂದಿರ 6ನೇ ಮಹಡಿಯಲ್ಲಿರುವ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 5-35 ಗಂಟೆಗೆ ಕುಮಾರಿ ಶ್ರೇಯ ಯು. ನಾಯಕ್ ಇವರ ವೀಣಾವಾದನಕ್ಕೆ ಧೀಮಂತ ಭಟ್ಟ ಹರಿಹರಪುರ ಮೃದಂಗ ವಾದನದಲ್ಲಿ ಹಾಗೂ ಸಂಜೆ ಗಂಟೆ 6-55ಕ್ಕೆ ಬೆಂಗಳೂರಿನ ಡಾ. ಸಂಜನ ಕೌಶಿಕ ಇವರ ಹಿಂದುಸ್ತಾನಿ ಗಾಯನಕ್ಕೆ ತಬ್ಲಾದಲ್ಲಿ ಉಡುಪಿಯ ದೀಪಕ್ ನಾಯಕ್ ಮತ್ತು ಹಾರ್ಮೋನಿಯಂನಲ್ಲಿ ಮಣಿಪಾಲದ ಶಶಿಕಿರಣ್ ಸಹಕರಿಸಲಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.
ಸಾಣೇಹಳ್ಳಿ : ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 2025-26ನೆಯ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ರಂಗ ಪ್ರಯೋಗವನ್ನು ದಿನಾಂಕ 20 ಫೆಬ್ರವರಿ 2026ರಂದು ಸಂಜೆ 7-00 ಗಂಟೆಗೆ ಸಾಣೇಹಳ್ಳಿಯ ಶ್ಯಾಮನೂರು ಶಿವಶಂಕರಪ್ಪ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಪೂಜ್ಯಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಪ್ರಸ್ತುತಗೊಳ್ಳುವ ‘ಕಾಯಕ ಯೋಗಿ ನುಲಿಯಚಂದಯ್ಯ’ ನಾಟಕ ಪರಿಕಲ್ಪನೆ ಮತ್ತು ನಿರ್ದೇಶನ ಮಹಾಂತೇಶ್ ರಾಮದುರ್ಗಾ ಇವರದ್ದು. ಚಂದ್ರಶೇಖರ್ ವಸ್ತ್ರದ ಮತ್ತು ಜೆ.ಹೆಚ್. ಹನ್ನೆರಡುಮಠ ಇವರು ರಚಿಸಿದ್ದು, ಶರಣ್ ಕುಮಾರ್ ಇವರು ಸಂಗೀತ ನೀಡಿರುತ್ತಾರೆ.
ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗವು ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾ ಭೂಷಣ ಪ್ರಶಸ್ತಿ’ಯನ್ನು 2026ರಿಂದ ಎಚ್.ಎನ್. ಶೃಂಗೇಶ್ವರರ ಹೆಸರನ್ನು ಸೇರಿಸಿ ಈರ್ವರ ನೆನಪಿನಲ್ಲಿ ನೀಡಲು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಎಸ್. ಗೋಪಾಲ ಕೃಷ್ಣ ಅವರು 27 ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಎಚ್.ಎನ್. ಶೃಂಗೇಶ್ವರರು ಕಾರ್ಯಕರ್ತರಾಗಿ, ಜೊತೆ ಕಾರ್ಯದರ್ಶಿಯಾಗಿ 35 ವರ್ಷಗಳ ಕಾಲ ಸಂಸ್ಥೆಯ ಬೆಳವಣಿಗೆಗೆ ಕಾರಣರಾಗಿದ್ದರು. ಈ ವರ್ಷದ ಸೇವಾ ಭೂಷಣ ಪ್ರಶಸ್ತಿಗೆ ನಿವೃತ್ತ ಬ್ಯಾಂಕ್ ಅಧಿಕಾರಿ, ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆಯಾಗಿದ್ದು, ಇವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವೋಪದೇಶವನ್ನು ಸ್ವತಃ ಮೈಗೂಡಿಸಿಕೊಂಡು ಗುರುಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅದನ್ನು ಉಚಿತವಾಗಿ ಹಂಚುತ್ತಾ ಅವರ ಜೀವನ ಮೌಲ್ಯಗಳನ್ನು ಪ್ರಸಾರ ಮಾಡುತ್ತಾ ನೊಂದವರು, ಸಂಸ್ಥೆಗಳಿಗೆ ನೆರವು ನೀಡುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 27 ಫೆಬ್ರವರಿ 2026ರಂದು ಸಂಸ್ಥೆಯ ಐ.ವೈ.ಸಿ. ಸಭಾಂಗಣದಲ್ಲಿ ಜರಗಲಿದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ…