Author: roovari

ಕಾಸರಗೋಡು : ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ದಿನಾಂಕ 04 ನವೆಂಬರ್ 2025ರಂದು ನಡೆದ ಶಿವರಾಮ ಕಾಸರಗೋಡು ಇವರ 60ನೇ ಜನ್ಮವರ್ಷಾಚರಣೆಯ ಸಂಭ್ರಮದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀಯುತರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ದ. ಕ. ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಸುರೇಶ ನೆಗಳಗುಳಿ, ಕಾಸರಗೋಡು ಗಡಿನಾಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿ. ಸೋಮಶೇಖರ್, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷರಾದ ಕೆ.ಪಿ. ಮಂಜುನಾಥ ಸಾಗರ್ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು. ಬಳಿಕ ಡಾ. ಸುರೇಶ ನೆಗಳಗುಳಿ ಅಧ್ಯಕ್ಷತೆಯಲ್ಲಿ ಹದಿನಾಲ್ಕು ಭಾಷೆಗಳ ಬಹುಭಾಷಾ ಕವಿಗೋಷ್ಠಿ ಸಂಪನ್ನವಾಯಿತು.

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ದಿನಾಂಕ 03 ನವೆಂಬರ್ 2025ರಂದು ‘ಭೀಷ್ಮ ಸೇನಾಧಿಪತ್ಯ’ ಪ್ರಸಂಗದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಪರೀಕ್ಷಿತ್ ಹಂದ್ರಟ್ಟ, ಸಮರ್ಥ ವಿಷ್ಣು ಈಶ್ವರಮಂಗಲ ಸಹಕರಿಸಿದರು. ಮುಮ್ಮೇಳದಲ್ಲಿ ಭೀಷ್ಮ (ಭಾಸ್ಕರ್ ಶೆಟ್ಟಿ ಸಾಲ್ಮರ ಮತ್ತು ಭಾಸ್ಕರ್ ಬಾರ್ಯ), ಕೌರವ (ಗುಡ್ಡಪ್ಪ ಬಲ್ಯ), ಕರ್ಣ (ದುಗ್ಗಪ್ಪ ನಡುಗಲ್ಲು), ದ್ರೋಣ‌ (ಲಕ್ಷ್ಮೀ ಕಾಂತ ಹೆಗ್ಡೆ ಪುತ್ತೂರು) ಸಹಕರಿಸಿದರು. ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ಅಗಲಿದ ಯಕ್ಷಗಾನದ ಹಿರಿಯ ಕಲಾವಿದ ಶಂಭುಶರ್ಮ ವಿಟ್ಲರವರ ಕುರಿತು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಇವರ ಉಪಸ್ಥಿತಿಯಲ್ಲಿ ಭಾಸ್ಕರ್ ಶೆಟ್ಟಿ ಸಾಲ್ಮರ, ಗುಡ್ಡಪ್ಪ ಬಲ್ಯ ಹಾಗೂ ಭಾಸ್ಕರ್ ಬಾರ್ಯರು ನುಡಿನಮನ ಸಲ್ಲಿಸಿದರು. ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.

Read More

ಮಡಿಕೇರಿ : ಕನ್ನಡ ಭವನ ಕೊಡಗು ಜಿಲ್ಲಾ ಘಟಕ ಇವರ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಕಣ್ಣಾ ಮುಚ್ಚಾಲೆ..!!’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 09 ನವೆಂಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಮಡಿಕೇರಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕೊಡಗು ಕನ್ನಡ ಭವನದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಇವರ ಅಧ್ಯಕ್ಷತೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರಾದ ಅನಂತಶಯನ ಬಿ.ಜಿ., ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀಮತಿ ಬಿ.ಆರ್. ಸವಿತಾ ರೈ, ಕೇಂದ್ರ ಸಮಿತಿ ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್, ಹಿರಿಯ ಸಾಹಿತಿಗಳಾದ ಭಾರದ್ವಾಜ್ ಕೆ. ಆನಂದತೀರ್ಥ, ‘ಕಣ್ಣಾ ಮುಚ್ಚಾಲೆ’ ಪುಸ್ತಕದ ಬರಹಗಾರರಾದ ಶ್ರೀಮತಿ ರುಬೀನಾ ಎಂ.ಎ. ಮತ್ತು ಮರ್ಕರ ಪೋಸ್ಟ್ ಪತ್ರಿಕೆಯ ಸಂಪಾದಕರಾದ ಜೈರೋಸ್ ಧೋಮಸ್ ಅಲೆಕ್ಸಾಂಡರ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More

ಹೃಷೀಕೇಶ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇವರ ವತಿಯಿಂದ ‘ಬನ್ನಂಜೆ 90ರ ವಿಶ್ವನಮನ’ ಸಮಾರಂಭವನ್ನು ದಿನಾಂಕ 05ರಿಂದ 11 ನವೆಂಬರ್ 2025ರಂದು ಹೃಷೀಕೇಶದ ಮುನಿ ಕಿ ರೇತಿ ಸ್ವರ್ಗಾಶ್ರಮ ವಾನಪ್ರಸ್ಥ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ 08-00 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸತ್ಸಂಗ, ಭಜನೆ, ಮಂತ್ರ ಮತ್ತು ಉಪನ್ಯಾಸ ನಡೆಯಲಿದೆ. ಡಾ. ಪ್ರತೋಷ ಏ.ಪಿ. ಇವರಿಂದ ‘ಮಧ್ವಸಿದ್ಧಾಂತ ವಿಜ್ಞಾನ ಬನ್ನಂಜೆ’, ಡಾ. ಗುರುರಾಜ ಕರ್ಜಗಿ ಇವರಿಂದ ದಿನಕ್ಕೊಂದು ಬನ್ನಂಜೆಯವರ ಕೃತಿ ಪರಿಚಯ ಮತ್ತು ಅಭಿಪ್ರಾಯ’, ವಿಜಯ ಸಿಂಹ ಆಚಾರ್ಯರು ‘ಆಚಾರ್ಯರ ಸರ್ವಮೂಲ ಗ್ರಂಥ’, ವಿಷ್ಣು ಸಹಸ್ರನಾಮ ಪಠನ, ಶ್ರೀ ಬ್ರಹ್ಮಣ್ಯಾಚಾರ್ಯರು ‘ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮ ವಿರಚಿತ ಶ್ರೀ ರಾಮಚಾರಿತ್ರಮಂಜರೀ’, ಶ್ರೀ ಶ್ರೀ ವಿದ್ಯಾಧೀಶ ತೀರ್ಥರು ಇವರಿಂದ ‘ಶ್ರೀಮದ್ಭಾಗವತ ಪ್ರವಚನ’, ಶ್ರೀಮತಿ ಕವಿತಾ ಉಡುಪ ಮತ್ತು ಶ್ರೀಮತಿ ಸುಮಾ ಶಾಸ್ತ್ರಿಯರಿಂದ ಹಾಡುಗಳ ಭಜನೆ ಹಾಗೂ ದಿನಾಂಕ 11 ನವೆಂಬರ್ 2025ರಂದು 4-00 ಗಂಟೆಗೆ ಶ್ರೀ ವಿದ್ಯಾಭೂಷಣರು ಮತ್ತು ತಂಡದವರಿಂದ…

Read More

ಬೆಳಗಾವಿ : ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಮತ್ತು ಕನ್ನಡ ಭವನ ಬೆಳಗಾವಿ ಇವರ ಆಶ್ರಯದಲ್ಲಿ ‘ನಾಟ್ಯಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ’ವನ್ನು ದಿನಾಂಕ 07ರಿಂದ 09 ನವೆಂಬರ್ 2025ರವರೆಗೆ ಪ್ರತಿದಿನ 6-30 ಗಂಟೆಗೆ ಬೆಳಗಾವಿಯ ರಾಮದೇವ ಹೊಟೇಲ್ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 07 ನವೆಂಬರ್ 2025ರಂದು ಬೆಳಗಾವಿಯ ರಂಗಸಂಪದ ಇವರಿಂದ ಸವಿತಾ ಭೈರಪ್ಪ ಇವರ ನಿರ್ದೇಶನದಲ್ಲಿ ‘ನಕ್ಷತ್ರ ಯಾತ್ರಿಕರು’, ದಿನಾಂಕ 08 ನವೆಂಬರ್ 2025ರಂದು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ ಝಕೀರ ನದಾಫ ಇವರ ನಿರ್ದೇಶನದಲ್ಲಿ ‘ಹಾಲು ಬಟ್ಟಲದೊಳಗಿನ ಪಾಲು’ ಮತ್ತು ದಿನಾಂಕ 09 ನವೆಂಬರ್ 2025ರಂದು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ ಝಕೀರ ನದಾಫ ಇವರ ನಿರ್ದೇಶನದಲ್ಲಿ ‘ನೆಲಮುಗಿಲು’ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಹೇರಿಕುದ್ರು : ಶ್ರೀ ಮಹಾಗಣಪತಿ ಯಕ್ಷೋತ್ಸವ ಸಮಿತಿ ಹೇರಿಕುದ್ರು ಇವರ ಸಂಯೋಜನೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಯಕ್ಷಹಬ್ಬ ಹೇರಿಕುದ್ರು 2025’ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 05ರಿಂದ 08 ನವೆಂಬರ್ 2025ರಂದು ಪ್ರತಿ ದಿನ ಸಂಜೆ 7-00 ಗಂಟೆಗೆ ಹೇರಿಕುದ್ರು ಶ್ರೀ ಮಹಾಗಣಪತಿ ಮಾನಸ ಮಂದಿರದಲ್ಲಿ ಆಯೋಜಿಸಲಾಗಿದೆ. ದಿನಾಂಕ 05 ನವೆಂಬರ್ 2025ರಂದು ಶ್ರೀಕಾಂತ್ ಕಲ್ಕೂರ್, ಸಂತೋಷ್ ಶೀರೂರ್, ಪ್ರವೀಣ್ ಬಾಳೆಕೆರೆ, ವಿಘ್ನೇಶ್ ಗಂಗೊಳ್ಳಿ, ವಿನಯ ಹಟ್ಟಿಯಂಗಡಿ ಇವರುಗಳಿಗೆ ‘ಯಕ್ಷಸಿಂಚನ ಪ್ರಶಸ್ತಿ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಯಕ್ಷಕಲ್ಪ ಕಮಲಶಿಲೆ ಇವರಿಂದ ‘ಸಹ್ಯಾದ್ರಿ ಶಿಲೆ’, ದಿನಾಂಕ 06 ನವೆಂಬರ್ 2025ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಲಿ ಹೇರಿಕುದ್ರು ಇವರಿಂದ ಯಕ್ಷ ತಪಸ್ವಿ ಮಹಾಬಲ ಹೇರಿಕುದ್ರು ವಿರಚಿತ ‘ನಾಗ ನಮನ’, ದಿನಾಂಕ 07 ನವೆಂಬರ್ 2025ರಂದು ಗೆಜ್ಜೆನಾದ ಯಕ್ಷಗಾನ ಕಲಾಮಂಡಳಿ ಕುಂದಾಪುರ ಇವರಿಂದ ದಿನೇಶ್ ಕೊಡವೂರು ವಿರಚಿತ ‘ಮಧುರ ಮಾಂಗಲ್ಯ’ ಮತ್ತು ದಿನಾಂಕ 08 ನವೆಂಬರ್ 2025ರಂದು ಯಕ್ಷಕಲಾ ಸಂಘ ಗುಲ್ವಾಡಿ ಇವರಿಂದ ನಾಗೇಶ್ ಗುಲ್ವಾಡಿ…

Read More

ಬೆಂಗಳೂರು : ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯು ಅರು ಕ್ರಿಯೇಶನ್ಸ್ ಮತ್ತು ಬುಕ್ ಬ್ರಹ್ಮದ ಸಹಯೋಗದೊಂದಿಗೆ ಆಯೋಜಿಸಿದ್ದ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2025ರಂದು ಬೆಂಗಳೂರಿನ ಚಾಮರಾಜಪೇಟೆಯ ಕ.ಸಾ.ಪ. ಆವರಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ “ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಬರಬೇಕು. ಯುವಜನರು ಸಾಹಿತ್ಯಾಸಕ್ತಿ ಬೆಳೆಸಿಕೊಂಡರೆ ಮಾತ್ರ ಸಾಹಿತ್ಯದ ಉಳಿವು. ಸರ್ಕಾರವು ಪುಸ್ತಕಗಳನ್ನು ಕೊಂಡು ಪ್ರಕಾಶಕರು ಮತ್ತು ಲೇಖಕರನ್ನು ಬೆಂಬಲಿಸಬೇಕು” ಎಂದು ಅಭಿಪ್ರಾಯಪಟ್ಟರು. ಹೊಸ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತಿರುವ ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ ಪ್ರಯತ್ನವು ಸ್ವಾಗತಾರ್ಹ ಎಂದು ಲೇಖಕಿ ಮೇಘನ ಸುಧೀಂದ್ರ ಇವರು ಅಭಿಪ್ರಾಯ ಹಂಚಿಕೊಂಡರೆ, ಪ್ರಕಟಣೆಯಾಗಿರುವ ಕೃತಿಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿಯೂ, ಆಸಕ್ತಿದಾಯಕವೂ ಆಗಿವೆಯೆಂದು ಕೃತಿ ಪರಿಚಯ ಮಾಡಿದ ಲೇಖಕಿ ನಿವೇದಿತಾ ಎಚ್.ರವರು ಅಭಿಪ್ರಾಯಪಟ್ಟರು. ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯು ಉಷಾ ರಾಣಿ ಟಿ.ಎನ್., ಗಿರಿಜಾ…

Read More

ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಪರಂಪರೆ 350 ವರ್ಷಗಳ ಸುದೀರ್ಘ ಇತಿಹಾಸ, ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವುದು ಸ್ತುತ್ಯಾರ್ಹ. ಈ ಕಲೆಯ ಭವಿಷ್ಯತ್ತಿನ ಭದ್ರ ಬುನಾದಿಗಾಗಿ ಹುಟ್ಟು ಹಾಕಿರುವ ಸಂಸ್ಥೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ದಿನಾಂಕ 29 ಅಕ್ಟೋಬರ್ 2025ರಂದು ಪರಮಾದರಣೀಯ ಶ್ರೀ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಚಿತ್ತೈಸಿ, ತಮ್ಮ ಅಮೃತ ಹಸ್ತದಿಂದ ‘ಗೊಂಬೆ ಮ್ಯೂಜಿಯಂ’ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೆಂಚುರಿ ಬಿಲ್ಡರ್ಸ್ ಇದರ ಆಡಳಿತ ನಿರ್ದೇಶಕರಾದ ಡಾ. ಪಿ. ದಯಾನಂದ ಪೈ ಹಾಗೂ ಪತ್ನಿ ಶ್ರೀಮತಿ ಮೋಹಿನಿ ಡಿ. ಪೈ ದಂಪತಿಗಳು ಪಾಲ್ಗೊಂಡು ಗೊಂಬೆಯಾಟದ ಉಳಿವಿಗಾಗಿ ತಮ್ಮಿಂದಾದ ಪ್ರೋತ್ಸಾಹ ನೀಡುತ್ತೇವೆ ಅಂತ ಆಶ್ವಾಸನೆ ನೀಡಿದರು. ಜಿ.ಎಸ್.ಬಿ. ಸಮಾಜದ ಹಲವಾರು ಗಣ್ಯರೂ ನೆರೆದಿದ್ದರು. ತದನಂತರ ಭಾಸ್ಕರ್ ಕೊಗ್ಗ ಕಾಮತ್ ನೇತೃತ್ವದಲ್ಲಿ ನಡೆದ ಗೊಂಬೆಯಾಟ ಪ್ರಾತ್ಯಕ್ಷಿಕೆಯನ್ನೂ ಶಾಂತ ಚಿತ್ತದಿಂದ ನೋಡಿ ಹರಸಿ, ಹಾರೈಸಿದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ ಭಂಡಾರ್‌ಕಾರ್…

Read More

ಮಂಗಳೂರು : ದಿನಾಂಕ 02 ನವೆಂಬರ್ 2025ರಂದು ಕಲಾಂಗಣದಲ್ಲಿ ಅವಳಿ ಸಂಭ್ರಮ – 21ನೇ ಕಲಾಕಾರ್ ಪುರಸ್ಕಾರ ಹಾಗೂ 287ನೇ ತಿಂಗಳ ವೇದಿಕೆ. ಕೊಂಕಣಿ ರಂಗಭೂಮಿಗೆ ಹಿರಿಮೆ ತಂದುಕೊಟ್ಟ, ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ರಂಗದಲ್ಲೂ ತಮ್ಮ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ಗೆದ್ದ, ‘ಕಾಸರಗೋಡು ಚಿನ್ನಾ’ ಎಂದೇ ಖ್ಯಾತರಾದ ಶ್ರೀನಿವಾಸ ರಾವ್ ಎಸ್. ಇವರಿಗೆ 21ನೇ ಕಲಾಕಾರ್ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಕಾರ್ವಾಲ್ಹೊ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ ಈ ಕಲಾಕಾರ್ ಪುರಸ್ಕಾರವನ್ನು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಇವರು ಹಸ್ತಾಂತರಿಸಿದರು. ಈ ಪ್ರಶಸ್ತಿಯು ಶಾಲು, ಹಾರ, ಫಲ-ತಾಂಬೂಲ, ಸ್ಮರಣಿಕೆ ಮತ್ತು ರೂ.50,000/- ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಮತ್ “ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಕೊಂಕಣಿ ಸಮುದಾಯವು ಬಹು ದೊಡ್ಡ ಪಾತ್ರವನ್ನು ವಹಿಸಿದೆ. ಇದರಲ್ಲಿ ಕಾಸರಗೋಡು ಚಿನ್ನಾ ಅವರಂತಹ ನಾಟಕಕಾರರ ಮತ್ತು ಎರಿಕ್ ಒಝಾರಿಯೊ ಅವರಂತಹ ಸಂಗೀತಗಾರರ ಕೊಡುಗೆಗಳು ಮಹತ್ತರದ್ದಾಗಿವೆ. ಈಗ ಲೋಕಸಭೆಯಲ್ಲೂ ಕೊಂಕಣಿ…

Read More

ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿಯವರು ಅನಿಕೇತನ ಕನ್ನಡ ಬಳಗ ಮತ್ತು ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟಿನ ಸಹಕಾರದಲ್ಲಿ ದಿನಾಂಕ 08 ನವೆಂಬರ್ 2025ರಂದು ಶನಿವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು, ಶರಣ ಸಂಸ್ಕೃತಿ ಚಿಂತಕಿ ಶ್ರೀಮತಿ ಪುಷ್ಪಾ ಬಸವರಾಜ ಬಣಕಾರ್ ಇವರ ಸರ್ವಾಧ್ಯಕ್ಷತೆಯಲ್ಲಿ ‘ರಾಜ್ಯ ಮಟ್ಟದ ಆರನೇ ಮಹಿಳಾ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ 2025’ವನ್ನು ಏರ್ಪಡಿಸಲಾಗಿದೆ. ಸಮಾವೇಶವನ್ನು ಹಿರಿಯ ಲೇಖಕಿ ಡಾ. ಕೆ. ಷರೀಫಾ ಇವರು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡರು 10 ಮಂದಿ ಸಾಧಕರಿಗೆ ‘ಗಾಂಧಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡುವರು. ನಂತರ ನಡೆಯುವ ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಕುಂಚ ಕಲಾವಿದೆ ಶ್ರೀಮತಿ ಶಾಂತಿ ವಾಸು ವಹಿಸುವರು, ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಲೇಖಕಿ ಇಂದಿರಾ ಕೃಷ್ಣಪ್ಪ ಇವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಮಂದಿ ಮಹನೀಯರಿಗೆ ‘ಬಿಎಂಶ್ರೀ ಪುಸ್ತಕ ಪ್ರಶಸ್ತಿ’…

Read More