Subscribe to Updates
Get the latest creative news from FooBar about art, design and business.
Author: roovari
ಕೇರಳ : ಕರಾವಳಿಯ ಯುವ ಭರತನಾಟ್ಯ ಕಲಾವಿದರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರು ಕೇರಳದ ಪುಲ್ಪಲ್ಲಿ ಎಂಬಲ್ಲಿ ದೇವ್ ದಕ್ಷ ಕಲಾಕ್ಷೇತ್ರ ನೃತ್ಯ ಸಂಸ್ಥೆಯು ದಿನಾಂಕ 24 ಡಿಸೆಂಬರ್ 2025ರಂದು ಬೆಳಗ್ಗೆ 8-30 ಗಂಟೆಗೆ ನಡೆಸುತ್ತಿರುವ ನೃತ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಗಾರವು ಮಂಜುನಾಥ್ ಇವರ 100ನೇಯ ಕಾರ್ಯಾಗಾರವಾಗಿದ್ದು, ನೃತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಮೈಲುಗಲ್ಲು ಇದಾಗಿರುತ್ತದೆ ಎಂದು ದೇವ್ ದಕ್ಷ ನೃತ್ಯ ಕಲಾಕ್ಷೇತ್ರದ ಗುರುಗಳಾದ ಶ್ರೀಮತಿ ರೆಸ್ಮಿ ಶಬು ತಿಳಿಸಿರುತ್ತಾರೆ. ಜನವರಿ 3ರಂದು ನಡೆಯುವ ಪುಲ್ಪಲ್ಲಿ ಉತ್ಸವದ ದಿನ ಮಂಜುನಾಥ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಉಡುಪಿ : ಕಾಲೇಜು ವಿದ್ಯಾರ್ಥಿಗಳಲ್ಲಿ ಶಾಸ್ತ್ರೀಯ ಕಲೆಯ ಬಗೆಗಿನ ಸಂವೇದನೆಯನ್ನು ಮೂಡಿಸುವಂಥ ಕಲಾಚಟುವಟಿಕೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿಕೊಂಡು ಬರುತ್ತಿರುವ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಈ ಬಾರಿಯ ವಾರ್ಷಿಕೋತ್ಸವದಲ್ಲಿ ಸುಮಾರು 26 ಮಂದಿ ವಿದ್ಯಾರ್ಥಿನಿಯರು ಯತಿಕವಿ ಶ್ರೀವಾದಿರಾಜ ವಿರಚಿತ ಶ್ರೀರುಗ್ಮಿಣೀಶ ವಿಜಯ ಎಂಬ ಸಂಸ್ಕೃತಕಾವ್ಯವನ್ನು ಆಧರಿಸಿದ ‘ಭಾವ ನೃತ್ಯ ನಮನ’ ಎಂಬ ನೃತ್ಯನಾಟಕವನ್ನು ದಿನಾಂಕ 22 ಡಿಸೆಂಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪ್ರಸ್ತುತಪಡಿಸಲಿದ್ದಾರೆ. ಉಡುಪಿಯ ಸಮೂಹ ಕಲಾಲಾಂಛನದ ರಂಗನಿರ್ದೇಶಕರಾದ ಪ್ರೊ. ಉದ್ಯಾವರ ಮಾಧವ ಆಚಾರ್ಯರ ರಂಗಕೃತಿ ಹಾಗೂ ನಿರ್ದೇಶನದ ಈ ನೃತ್ಯನಾಟಕವನ್ನು ವಿದುಷಿ ಡಾ. ಭ್ರಮರಿ ಶಿವಪ್ರಕಾಶ್ ಸಂಯೋಜಿಸಿದ್ದು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರುಗಳ ಪೂರ್ಣ ಬೆಂಬಲದೊಂದಿಗೆ ಪ್ರದರ್ಶನಗೊಳ್ಳಲಿದೆ. ಕಲಾಸಕ್ತರಿಗೆ ಮುಕ್ತಪ್ರವೇಶವಿದೆ.
ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಹತ್ತಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ದಿನಾಂಕ 28 ಡಿಸೆಂಬರ್ 2025ರ ರವಿವಾರದಂದು ದ್ವಿತೀಯ ಬಾರಿಗೆ ಉಡುಪಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ‘ಹಿರಿಯರೊಟ್ಟುಗೊಂಜಿ ದಿನ’ ಕಾರ್ಯಕ್ರಮ ಆಯೋಜಿಸಿದೆ. ಬದುಕಿನುದ್ದಕ್ಕೂ ತನ್ನವರಿಗಾಗಿ ದುಡಿದು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಯೌವನವನ್ನು ಸವೆಸಿ ಬದುಕಿನ ಮುಸ್ಸಂಜೆಯಲ್ಲಿರುವ ಜೀವಗಳಿಗೆ ಪ್ರೀತಿಯ, ಮಮತೆಯ, ಸಂತೃಪ್ತಿಯ ಭಾವನೆ ಮೂಡಿಸುವುದು ಕಿರಿಯರಾದ ನಮ್ಮೆಲ್ಲರ ಕರ್ತವ್ಯ. ಅವರು ಹಾಕಿಕೊಟ್ಟ ಬದುಕಿನ ಅಡಿಪಾಯದಿಂದಾಗಿ ನಾವಿಂದು ನೆಮ್ಮದಿಯ ಗೂಡು ಕಟ್ಟಿಕೊಂಡಿದ್ದೇವೆ. ನಮ್ಮ ಬಾಲ್ಯದಲ್ಲಿ ಅವರು ತೋರಿದ ಪ್ರೀತಿ, ಕಾಳಜಿ, ಮಮಕಾರವನ್ನು ನಾವಿಂದು ಅವರಿಗೆ ಮರಳಿಸಬೇಕಾಗಿದೆ. ಎಲ್ಲ ಗೌರವಾನ್ವಿತ ಹಿರಿಯ ನಾಗರಿಕರನ್ನು ದಿನವಿಡೀ ರಂಜಿಸಿ ಅವರ ಮನಸ್ಸಂತೋಷ ಪಡಿಸಿ ತನ್ಮೂಲಕ ಹಿರಿಯರ ಸೇವೆಗೈಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಡು, ನೃತ್ಯ, ಛದ್ಮವೇಷ, ಮೋಜಿನ ಆಟಗಳು, ಹಾಸ್ಯ, ಸ್ಕಿಟ್ ಐದು ನಿಮಿಷ (ಸಹ ಕಲಾವಿದರಾಗಿ ಮನೆಯ ಸದಸ್ಯರು…
ಧಾರವಾಡ : ಧಾರವಾಡದ ಸಂಗೀತ ಪರಿಚಾರಕ ಅನಂತ ಹರಿಹರ ಅವರು ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾದವರು. ಕಲಾವಿದರಿಗೆ ಸ್ಫೂರ್ತಿಯ ಸೆಲೆಯಾದ ಯಶಸ್ವಿ ಸಂಘಟಕ, ಸಾಂಸ್ಕೃತಿಕ ರಾಯಭಾರಿ ಎನಿಸಿಕೊಂಡವರು. ಅನಂತ ಹರಿಹರ ಅವರು ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಅವರ ಸಂಸ್ಮರಣೆಯಲ್ಲಿ ಧಾರವಾಡದ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವವನ್ನು ಕ್ಷಮತಾ ಹುಬ್ಬಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ಜೀವನ ಬೀಮಾ ನಿಗಮ, ಸಂಗೀತಾಚಾರ್ಯ ಪಂ. ಡಿ. ವಿ. ಕಾಣೆಬುವಾ ಪ್ರತಿಷ್ಠಾನ ಪುಣೆ, ನಾನಾಸಾಹೇಬ ಅಳವಣಿ ಟ್ರಸ್ಟ್ ಪುಣೆ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿವೆ. ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 22ರಿಂದ 24 ಡಿಸೆಂಬರ್ 2025ರವರೆಗೆ ಪ್ರತಿದಿನ ಸಂಜೆ ಸಪ್ತಸ್ವರಗಳ ಕಲರವ ರಿಂಗಣಿಸಲಿದೆ. ದಿನಾಂಕ 22 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಸಂಗೀತೋತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಶ್ರೀ ಅರವಿಂದ ಬೆಲ್ಲದ…
ಭರತನಾಟ್ಯದ ಪರಂಪರೆಯಂತೆ ರಂಗಪ್ರವೇಶ/ಅರಗೇಟ್ರಂ ಗುರುಕುಲ ಪದ್ದತಿಯಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿರುವ ಶಿಷ್ಯ/ಶಿಷ್ಯೆ ಕಡ್ಡಾಯವಾಗಿ ಮಾಡಲೇಬೇಕಾದ ಒಂದು ಧಾರ್ಮಿಕ ವಿಧಿ ಹಾಗೂ ಗುರುವಂದನೆ. ಇಂತಹ ಒಂದು ರಂಗಪ್ರವೇಶವು ಸನಾತನ ನಾಟ್ಯಾಲಯ (ರಿ.) ಮಂಗಳೂರು ಇದರ ಗುರುಗಳಾದ ವಿದುಷಿ ಶಾರದಾ ಮಣಿಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ರವರ ಶಿಷ್ಯೆ ವಿದುಷಿ ಅಮೃತಾ ವಾಸುದೇವ್ರವರು ಹೆತ್ತವರ ಬೆಂಬಲದೊಂದಿಗೆ, ಸಂಪ್ರದಾಯಬದ್ದವಾಗಿ ಸುಮಾರು ಎರಡು ಗಂಟೆಗಳ ಕಾಲ ನೃತ್ಯ ಪ್ರದರ್ಶಿಸಿ, ರಸಿಕರ ಮೆಚ್ಚುಗೆ ಪಡೆದರು. ಕಲಾ ಹಿನ್ನೆಲೆಯಿಂದ ಬಂದ ಅಮೃತಾ ಕಂಪ್ಯೂಟರ್ ಎಂಜಿನಿಯರ್, ಕರ್ನಾಟಕ ಸಂಗೀತ, ಸಿತಾರ್ ವಾದನ ಹಾಗೂ ನೃತ್ಯ ಕಲಿಕೆಯ ಪ್ರತಿಭಾನ್ವಿತ ನೃತ್ಯಾಂಗನೆ. ಈ ಕಾರ್ಯಕ್ರಮವು ಭರತನಾಟ್ಯ ಕಾರ್ಯಕ್ರಮದಲ್ಲಿರಲೇಬೇಕಾದ ಬಂಧಗಳನ್ನು ಒಳಗೊಂಡಿದ್ದವು. ಆರಂಭವು ಗಾಯಕ ಕಾರ್ತಿಕ ಹೆಬ್ಬಾರ್ರವರ ಸುಶ್ರಾವ್ಯವಾದ ಪುಟ್ಟ ‘ಓಂ ಪ್ರಣವಾಕಾರ’ ಶ್ಲೋಕದಿಂದ ಮೊದಲ್ಗೊಂಡು ಹೇಮಾವತಿ ರಾಗ ಆದಿತಾಳದ ಕೆ. ಮುರಲೀಧರ ಉಡುಪಿ ವಿರಚಿತ ಪುಷ್ಪಾಂಜಲಿ ಹಾಗೂ ಗಣಪತಿ ಸ್ತುತಿಯಾಗಿ ಪುರಂದರದಾಸರ ಪಿಳ್ಳಾರಿ ಗೀತೆ ‘ಶ್ರೀ ಗಣನಾಥ’ ಪದವು ಚಿಕ್ಕ ಹಾಗೂ ಚೊಕ್ಕ…
ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ಪ್ರಕಟಿಸಲು ಉದ್ದೇಶಿಸಿರುವ ವಿಷಯಾಧಾರಿತ ಪುಸ್ತಕಗಳ ಪ್ರಕಟಣೆಗೆ ಅರ್ಹ ಆಸಕ್ತ ಯುವ ಬರಹಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಕಾಡೆಮಿ ವತಿಯಿಂದ ಕೊಡ ಮಾಡುವ ಅಂದಾಜು 20 ವಿಭಿನ್ನ ರೀತಿಯ ವಿಷಯಗಳ ಮೇಲೆ ಅಧ್ಯಯನ, ಸಂಶೋಧನೆ ನಡೆಸಿ, ನಿಖರವಾದ ಮಾಹಿತಿ ಸಂಗ್ರಹಿಸಿ ಕನಿಷ್ಟ ನೂರು ಪುಟಗಳ ಸಚಿತ್ರ ವಿವರವುಳ್ಳ ಪುಸ್ತಕಗಳನ್ನು ಹೊರತರಲಾಗುವುದು. ಆಯ್ಕೆಯಾಗುವ ಬರಹಗಾರರಿಗೆ ಪುಸ್ತಕದ ವಿಷಯ ಹಾಗೂ ತಲಾ ರೂ.25 ಸಾವಿರ ಪ್ರೋತ್ಸಾಹ ಧನವನ್ನು ಷರತ್ತುಗಳೊಂದಿಗೆ ನೀಡಲಾಗುವುದು. ಆಸಕ್ತ ಬರಹಗಾರರು ಅಧ್ಯಯನ ಕ್ಷೇತ್ರದಲ್ಲಿ ತಮ್ಮ ಅನುಭವ, ಅರ್ಹತೆ ಹಾಗೂ ಆಸಕ್ತಿಯೊಂದಿಗಿನ ಸ್ವ ವಿವರವುಳ್ಳ ಅರ್ಜಿಯನ್ನು ಅಕಾಡೆಮಿ ಕಚೇರಿಗೆ ತಲುಪಿಸಲು ದಿನಾಂಕ 25 ಡಿಸೆಂಬರ್ 2025 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮೊಬೈಲ್ ಸಂಖ್ಯೆ 8762942976 ಯನ್ನು ಸಂಪರ್ಕಿಸಬಹುದು. ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ-571201 ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಅಧ್ಯಕ್ಷರಾದ ಅಜ್ಜಿನಿಕಂಡ ಸಿ.…
ಮಂಗಳೂರು : ಸುರತ್ಕಲ್ ತಡಂಬೈಲ್ ಇಲ್ಲಿರುವ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಇದರ ‘ದಶಮಾನ ವರ್ಷ ಸಂಭ್ರಮಾಚರಣೆ’ ಸಮಾರೋಪ ಸಮಾರಂಭ ಹತ್ತು ದಿನಗಳ ಕಾರ್ಯಕ್ರಮವನ್ನು ದಿನಾಂಕ 22ರಿಂದ 31 ಡಿಸೆಂಬರ್ 2025ರವರೆಗೆ ಪ್ರತಿ ದಿನ ಸಂಜೆ 4-00 ಗಂಟೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 22 ಡಿಸೆಂಬರ್ 2025ರಂದು ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದವರಿಂದ ಕವಿ ಹೊಸ್ತೋಟ ಮಂಜುನಾಥ ವಿರಚಿತ ‘ಶ್ರೀ ರಾಮ ನಿರ್ಯಾಣ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ದಶದಿಶಾ, ದಶಯಶಾ ಹತ್ತರಹೊತ್ತು’ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಸ್ಥಾಪಕ ಸದಸ್ಯರಾದ ಬಾಲಕೃಷ್ಣ ಸುವರ್ಣ ಇವರನ್ನು ಸನ್ಮಾನಿಸಲಾಗುವುದು. ದಿನಾಂಕ 23 ಡಿಸೆಂಬರ್ 2025ರಂದು ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಕವಿ ಮಧುಕುಮಾರ್ ಬೋಳೂರು ವಿರಚಿತ ‘ಸುದರ್ಶನ…
ಧಾರವಾಡ : ಅನುಷ್ಕಾ ಪ್ರಕಾಶನ ಧಾರವಾಡ, ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ ಇವರ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 26 ಡಿಸೆಂಬರ್ 2025ರಂದು ಅಪರಾಹ್ನ 3-30 ಗಂಟೆಗೆ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಪ್ರೊ. ಶಶಿಧರ ತೋಡಕಲ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರೊ. ರಾಘವೇಂದ್ರ ಪಾಟೀಲ ಇವರು ಪುಸ್ತಕ ಬಿಡುಗಡೆ ಮಾಡಿ ಆಶಯ ನುಡಿಗಳನ್ನಾಡಲಿದ್ದಾರೆ. ಪ್ರೊ. ಆರುಂಧತಿ ಸವದತ್ತಿ, ಡಾ. ಅನಿತಾ ಗುಡಿ ಮತ್ತು ಲಿಂಗರಾಜ ಸೊಟ್ಟಪ್ಪನವರ ಇವರುಗಳು ಕೃತಿ ಪರಿಚಯ ಮಾಡಲಿದ್ದಾರೆ. ‘ಕಣ್ಮಂಚಿನ ತಾರೆ’, ‘ಮಾಲತಿ ಪಟ್ಟಣಶೆಟ್ಟಿ’, ‘ಕಾಡುಸಂಪಿಗೆ’ ಮತ್ತು ‘ಜೀವ ಸಂವಾದ’ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.
ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ ‘ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ (ರಿ.) ಮಂಗಳೂರು’ ಪ್ರಸ್ತುತ ಪಡಿಸುವ ‘ಸಮೂಹ ನೃತ್ಯ’ ಪ್ರದರ್ಶನವನ್ನು ದಿನಾಂಕ 21 ಡಿಸೆಂಬರ್ 2025ರಂದು ಅಪರಾಹ್ನ 3-00 ಗಂಟೆಗೆ ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಇದರ ಅಧ್ಯಕ್ಷರಾದ ವಿದುಷಿ ರಾಜಶ್ರೀ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅರುಣ್ ಐತಾಳ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಾಟ್ಯನಿಕೇತನ ಕೊಲ್ಕ ಮ೦ಗಳೂರು, ಸನಾತನ ನಾಟ್ಯಾಲಯ ಬಲ್ಲಾಳಭಾಗ್, ಗಾನ ನೃತ್ಯ ಅಕಾಡೆಮಿ ಮ೦ಗಳೂರು, ಶಿವಪ್ರಣಾಮ್ ಸ್ಕೂಲ್ ಆಫ್ ಡ್ಯಾನ್ಸ್ ಕಿನ್ನಿಗೋಳಿ, ನಾದ ನೃತ್ಯ ಸ್ಕೂಲ್ ಆಫ್ ಡಾನ್ಸ್ ಅಂಡ್ ಕಲ್ಬರಲ್ ಟ್ರಸ್ಟ್ ಮ೦ಗಳೂರು, ಶ್ರೀ ಶಾರದಾ ನಾಟ್ಯಾಲಯ ಕುಳಾಯಿ ಹೊಸಬೆಟ್ಟು, ಸವಿಜೀವನಂ ನೃತ್ಯ ಕಲಾಕ್ಷೇತ್ರ ಉಪ್ಪಳ, ಭಾರತಿ ನೃತ್ಯಾಲಯ ಮುಡಿಪು, ನೃತ್ಯ ವಿದ್ಯಾನಿಲಯ ಕದ್ರಿ…
ಮೈಸೂರು : ಸುಗಮ ಸಂಗೀತ ಅಕಾಡೆಮಿ ಅರ್ಪಿಸುವ ‘ಮಿಶ್ರ ಮಾಧುರ್ಯ’ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮವನ್ನು ದಿನಾಂಕ 20 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ಮೈಸೂರು ಜೆ.ಎಲ್.ಬಿ. ರಸ್ತೆಯಲ್ಲಿರುವ ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯ ಭವನ ನಾದ ಬ್ರಹ್ಮ ಸಂಗೀತ ಸಭಾದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಇದರ ಅಧ್ಯಕ್ಷರಾದ ಕೆ. ನಾಗರಾಜು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಂಶಿ ಪ್ರನ್ನಕುಮಾರ್ ಮತ್ತು ರಾಮಮೂರ್ತಿ ರಾವ್ ಇವರನ್ನು ಸನ್ಮಾನಿಸಲಾಗುವುದು. ನಿತಿನ್ ರಾಜಾರಾಂ ಶಾಸ್ತ್ರಿ ಮತ್ತು ಶ್ರೀದೇವಿ ಮಂಜುನಾಥ್ ಇವರ ಹಾಡುಗಾರಿಕೆಗೆ ಸಮೀರ್ ರಾವ್, ಪುರುಷೋತ್ತಮ ಕಿರಗಸೂರು, ವೇದಶ್ರೀ ಸಿ.ಎಸ್., ಆತ್ಮಾರಾಂ ನಾಯಕ್ ಇವರುಗಳು ವಾದ್ಯ ಸಹಕಾರ ನೀಡಲಿದ್ದಾರೆ.