Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಬೆಂಗಳೂರು ಹಬ್ಬ 2026’ರ ಭಾಗವಾಗಿ ಕಲಾವಿಲಾಸಿ ತಂಡದ ಕಲಾವಿದರು ಪ್ರಸ್ತುತ ಪಡಿಸುವ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು # ಕ್ರಾಂತಿ’ ನಾಟಕ ಪ್ರದರ್ಶನವನ್ನು ದಿನಾಂಕ 20 ಜನವರಿ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಜಯನಗರದ ಯುವಕ ಸಂಘದಲ್ಲಿ ಆಯೋಜಿಸಲಾಗಿದೆ. ಯುವ ನಿರ್ದೇಶಕ ಅಭಿಷೇಕ ಚಕ್ರಣ್ಣವರ ನಿರ್ದೇಶಿಸುತ್ತಿರುವ ನಾಟಕವನ್ನು ಹಿರಿಯ ರಂಗಕರ್ಮಿ ಮಹಾದೇವ ಹಡಪದ ಇವರು ವಿನ್ಯಾಸ ಮಾಡಿದ್ದಾರೆ. ನಾಟಕದ ಅವಧಿ 110 ನಿಮಿಷಗಳು. ಹೆಚ್ಚಿನ ಮಾಹಿತಿಗೆ 9739398819 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮಾಡಬಹುದು. ‘ಕ್ರಾಂತಿ ಬಂತು # ಕ್ರಾಂತಿ’ ನಾಟಕವನ್ನು ಸಾಹಿತಿ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕದ ಪಠ್ಯವನ್ನು ಪ್ರಸ್ತುತಕ್ಕೆ ಅಳವಡಿಸಿಕೊಂಡು ಕಟ್ಟಲಾಗಿದೆ. ಈ ನಾಟಕವು ಮೊದಲ ಬಾರಿಗೆ ಪ್ರಕಟವಾಗಿದ್ದು 1971ರಲ್ಲಿ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಅಂದಿಗೂ – ಇಂದಿಗೂ ಸಾಕಷ್ಟು ಬದಲಾವಣೆಗಳು ಕಂಡುಬಂದರೂ, ಆ ಬದಲಾದ ಪರಿಸ್ಥಿತಿಗಳು ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿರುವುದು ನೋವಿನ ಸಂಗತಿ.…
ವಿಜಯಪುರ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 20 ಮತ್ತು 21 ಜನವರಿ 2026ರಂದು ಹಿಟ್ಟಿನಹಳ್ಳಿ ಶ್ರೀ ಶಿವಮೂರ್ತಿ ಸ್ವಾಮಿ ಚರಂತಿಮಠ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸೋಮಲಿಂಗ ಗೆಣ್ಣೂರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸುಮಾರು ಐದು ದಶಕದ ಸಾಹಿತ್ಯ ಹಾದಿಯಲ್ಲಿ ಮಾಲತಿ ಪಟ್ಟಣಶೆಟ್ಟಿಯವರದ್ದು ಸಹಜ ನಡಿಗೆ. ನದಿ ತನ್ನ ತೆಕ್ಕೆಗೆ ಸಿಕ್ಕಿದ್ದನ್ನು ಸೆಳೆದುಕೊಂಡು ಹರಿಯುವಂತೆ ಇವರ ಕಾವ್ಯವು ಕಾಲದ ಸ್ಪಂದನೆಗೆ ಹೊಂದಿಕೆಯಾಗುವ ವಿಚಾರಗಳನ್ನು ತಮ್ಮ ಕಾವ್ಯದಲ್ಲಿ ಅಳವಡಿಸಿಕೊಂಡು ಮುನ್ನಡೆದಿದ್ದಾರೆ. ‘ಬಾಳೆಂಬ ವ್ರತ’ (2018) ಸಂಕಲನದಲ್ಲಿ ವ್ಯಷ್ಟಿಗಿಂತ ಸಮಷ್ಟಿಯ ಕಡೆ ಗಮನವಿದೆ. ಮೊದಲ ಸಂಕಲನದಲ್ಲಿ ವೈಯಕ್ತಿಕ ನೋವೇ ಕೇಂದ್ರವಾಗಿದ್ದರೆ ನಂತರದ ಕೃತಿಗಳಲ್ಲಿ ವೈಯಕ್ತಿಕ ನೋವಿನ ಮೂಲಕ ಸಾಮಾಜಿಕತೆಯತ್ತ ಮುಖ ಮಾಡಿದ ಕವನಗಳಿವೆ. ಆದರೆ ಇಲ್ಲಿ ವೈಯಕ್ತಿಕ ತವಕ ತಲ್ಲಣಗಳಿಗಿಂತ ಹೆಚ್ಚಾಗಿ ಸಮಾಜದ ಜ್ವಲಂತ ವಿದ್ಯಮಾನಗಳಿಗೆ ಮುಖಾಮುಖಿಯಾಗುವ ತುಡಿತವಿದೆ. ಕವಿತೆಗಳನ್ನು ಬರೆಯದೆ ಮನೆಯ ಹಿತ್ತಿಲು ಮೂಲೆಯಲ್ಲೊಂದು ಸಸಿ ನೆಟ್ಟು ನೀರೆರೆದು ಕಣ್ಣಿಟ್ಟು ಬೆಳೆಸಿದ್ದರೆ ನೂರು ಗರಿ ಬಿಚ್ಚಿದ ನವಿಲಂತೆ ಕಣ್ಣ ತುಂಬುವ ಹಚ್ಚನೆ ಮರವಾಗಿ ಕುಣಿಯುತ್ತಿತ್ತು ಸಾರ್ಥಕತೆಯ ಕಣ್ಣೀರು ತುಂಬುತ್ತಿತ್ತು (ಹೃದಯವಂತಿಕೆ, ಪುಟ 1) ಪುಟ್ಟ ಸೇವೆಗೆ ಬೆಟ್ಟದಂಥ ಸಾರ್ಥಕತೆ! ಇಲ್ಲಿ ಜೀವಪರ ನಿಲುವು ಪ್ರಾಯೊಗಿಕ ರೂಪವನ್ನು ತಾಳಬೇಕಾದ ಅಗತ್ಯವನ್ನು ಕಾಣುತ್ತೇವೆ. ಕುಳಿತುಕೊಂಡು ಬರೆಯುವುದು, ಸಾಮಾಜಿಕ ಕಳಕಳಿಯನ್ನು ಮರೆಯುವುದು…
ಮಂಗಳೂರು : ಮಂಗಳೂರು ರಾಮಕೃಷ್ಣ ಮಿಷನ್ನ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ದಿನಾಂಕ 13 ಜನವರಿ 2026ರಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ‘ಶಕ್ತಿ’ ಮಹಿಳಾ ಸಬಲೀಕರಣ ವಿಚಾರ ಸಂಕಿರಣ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಜೆ.ವಿ. ಗ್ರೂಪ್ ಆಫ್ ಕಂಪನಿಯ ನಿರ್ದೇಶಕರಾದ ಆತ್ಮಿಕಾ ಅಮೀನ್ “ನಮಗೆ ಜೀವನದಲ್ಲಿ ಹಲವಾರು ಅವಕಾಶಗಳು ಸಿಗುತ್ತವೆ. ಅವುಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸಿದ ಬಳಿಕ ಉದ್ಯಮದ ಕಡೆಗೆ ಮುಖ ಮಾಡಬೇಕಾದ ಅಗತ್ಯವಿದೆ. ಮಹಿಳೆಯರಲ್ಲಿ ಅಂತರ್ಗತವಾದ ಕೌಶಲ್ಯವಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಪ್ರತಿಯೊಬ್ಬರು ಗಮನಹರಿಸಬೇಕು. ಉದ್ಯಮಶೀಲತೆ ಎಂದರೆ ಸೋಲುಗಳನ್ನು ಸ್ವೀಕರಿಸಿ ಅದರಲ್ಲಿ ಮುಂದುವರಿಯುವುದು. ಸಾಮಾಜಿಕ ಜಾಲತಾಣದ ಮೂಲಕ ಹಲವಾರು ಮಾಹಿತಿಗಳು ಇಂದು ನಮಗೆ ಸಿಗುತ್ತದೆ. ಹಲವಾರು ಅವಕಾಶಗಳು ನಮ್ಮ ಮುಂದಿವೆ. ಅವುಗಳನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ. ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ನಾವು ಉನ್ನತ ಸ್ಥಾನಕ್ಕೇರಬೇಕಾದರೆ ಗುರಿಯನ್ನು ತಲುಪುವ ಬಲವಾದ ಆತ್ಮಸ್ಥೈರ್ಯ ನಮ್ಮಲ್ಲಿರಬೇಕು. ದೊಡ್ಡ…
ಹಾವೇರಿ : ಹಾವೇರಿಯ ಪ್ರತಿಮಾನ ಸಾಹಿತ್ಯ ಸಂಘವು ದಿನಾಂಕ 07 ಮತ್ತು 08 ಫೆಬ್ರವರಿ 2026ರಂದು ಕಾಗಿನೆಲೆಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕಥಾ ಕಮ್ಮಟ ಆಯೋಜಿಸಿದೆ. ಈ ಕಥಾ ಕಮ್ಮಟಕ್ಕೆ ಮುಕ್ತ ಪ್ರವೇಶವಿದ್ದು, ಆಸಕ್ತ ಲೇಖಕ/ಕಿಯರು, ಓದುಗರು ಮತ್ತು ಸಹೃದಯರು ನಿಯಾಮಾನುಸಾರವಾಗಿ ಅರ್ಜಿ ಸಲ್ಲಿಸಿ, ಭಾಗವಹಿಸಬಹುದು. ನಿಯಮಗಳು : ಹಾವೇರಿ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಕಾಗಿನೆಲೆಯಲ್ಲಿ ಫೆಬ್ರವರಿ 07 ಮತ್ತು 08ರಂದು ಈ ಕಥಾ ಕಮ್ಮಟ ನಡೆಯಲಿದೆ. ಈ ಕಥಾ ಕಮ್ಮಟಕ್ಕೆ ಮುಕ್ತ ಪ್ರವೇಶಿಸಿದ್ದು, ಲೇಖಕ/ಕಿಯರು, ಓದುಗರು ಮತ್ತು ಸಹೃದಯರು ಇದರಲ್ಲಿ ಭಾಗವಹಿಸಬಹುದು. ಎರಡು ದಿನಗಳ ಈ ಕಥಾ ಕಮ್ಮಟಕ್ಕೆ ರೂ.600/- ಫೀಸು ಇದ್ದು ವಿದ್ಯಾರ್ಥಿಗಳಿಗೆ ರೂ.400/- ಫೀಸು ಇರಲಿದೆ. ಕಥಾ ಕಮ್ಮಟದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ತಿಂಡಿ, ಊಟ ಮತ್ತು ವಸತಿ ವ್ಯವಸ್ಥೆ (ಹಾಸಿಗೆ ಮತ್ತು ಹೊದಿಕೆಯನ್ನು ಶಿಬಿರಾರ್ಥಿಗಳೇ ತರಬೇಕು) ಇರಲಿದೆ. ಎಲ್ಲ ಶಿಬಿರಾರ್ಥಿಗಳಿಗೆ ಲೇಖನ ಸಾಮಗ್ರಿ ಮತ್ತು ಪುಸ್ತಕಗಳ ಕಿಟ್ ವೊಂದನ್ನು ನೀಡಲಾಗುವುದು. ಆಸಕ್ತರು ದಿನಾಂಕ 04 ಫೆಬ್ರವರಿ…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ 12ನೇ ಶತಮಾನದ ವಚನಕಾರ್ತಿಯರ ಕುರಿತಾದ ಒಂದು ದಿನದ ಕಮ್ಮಟವನ್ನು ದಿನಾಂಕ 28 ಫೆಬ್ರವರಿ 2026ರಂದು ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಕಮ್ಮಟಕ್ಕೆ 40 ಜನರನ್ನು ಮಾತ್ರ ಆಯ್ಕೆ ಮಾಡಲಾಗುವುದು ಮತ್ತು 40 ವಯಸ್ಸಿನ ಒಳಗಿರುವ ಯುವ ಬರಹಗಾರ್ತಿಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಬೇಕಾದ ಇಮೇಲ್ ವಿಳಾಸ : [email protected] ನಿಮ್ಮ ಅರ್ಜಿಯಲ್ಲಿ ಒಳಗೊಂಡಿರಬೇಕಾದ ವಿವರಗಳು : ವಿಳಾಸ, ಸಂಪರ್ಕ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐ.ಡಿ.ಗಳನ್ನು ತಪ್ಪದೇ ಕಳಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಫೆಬ್ರವರಿ 2026. ಹೆಚ್ಚಿನ ಮಾಹಿತಿಗಾಗಿ ಕಮ್ಮಟದ ಸಂಚಾಲಕರು : ಇಂದಿರಾ ಶಿವಣ್ಣ 98455 35026 ಮತ್ತು ಡಾ. ಮುಕ್ತಾ ಬಿ. ಕಾಗಲಿ 9845689845 ಇವರನ್ನು ಸಂಪರ್ಕಿಸಿರಿ. ಪ್ರೊ. ಆರ್. ಸುನಂದಮ್ಮ ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ (ರಿ.) ಬೆಂಗಳೂರು.
ಕಿನ್ನಿಗೋಳಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇಯಾನ್ ಕೇರ್ಸ್ ಫೌಂಡೇಶನ್ ಇವರ ಸಹಯೋಗದೊಂದಿಗೆ ದಿನಾಂಕ 15 ಜನವರಿ 2026ರಂದು ಕಿನ್ನಿಗೋಳಿಯಲ್ಲಿ ‘ಆಜ್ ಆಮಿ ಕೊಂಕ್ಣಿ ಉಲೊವ್ಯಾಂ’ ಎಂಬ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಹಮ್ಮಿಕೊಂಡಿತ್ತು. ಮೊದಲಿಗೆ ಮೂರುಕಾವೇರಿ ಜಂಕ್ಷನ್ನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆರಂಭವಾದ ಭವ್ಯ ಮೆರವಣಿಗೆಯು ಹೆಚ್ಚಿನ ಮೆರುಗನ್ನು ನೀಡಿತು. ಕಿನ್ನಿಗೋಳಿ ಪರಿಸರದ ಹಿರಿಯರಾದ ಶ್ರೀಮತಿ ಕಾರ್ಮಿಣ್ ರೊಡ್ರಿಗಸ್ಯವರು ಅಕ್ಕಿ ಮುಡಿಯಿಂದ ಅಕ್ಕಿಯನ್ನು ಹೊರ ತೆಗೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಇಯಾನ್ ಕೇರ್ಸ್ ಫೌಂಡೇಶನ್ನ ಸಂಸ್ಥಾಪಕರಾದ ಶ್ರೀ ಹೇಮಾಚಾರ್ಯರವರು ವೇದಿಕೆಯಲ್ಲಿದ್ದರು. ಮಕ್ಕಳಿಗೆ ಪ್ರಕೃತಿಯ ಒಡನಾಟ ಗಳಿಸುವುದಕ್ಕಾಗಿ ಕಾಡಿನ ಸುತ್ತಾಟವನ್ನು ಹಮ್ಮಿಕೊಂಡು ವಿಧ ವಿಧದ ಮರ-ಗಿಡಗಳು, ಹೂವು- ಬಳ್ಳಿಗಳು, ಔಷದೀಯ ಸಸ್ಯಗಳು, ಪ್ರಾಣಿ- ಪಕ್ಷಿಗಳು, ಕ್ರಿಮಿ-ಕೀಟಗಳು ಹಾಗೂ ಮನುಷ್ಯ ಸಂಬಂಧಗಳ ಬಗ್ಗೆ ಕೊಂಕಣಿ ಹೆಸರುಗಳನ್ನು ಮನವರಿಕೆ ಮಾಡಲಾಯಿತು. ತದನಂತರ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಂಡು…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಒಂದಾದ ಕೈಬುಲಿರ ಬೋಪಯ್ಯ ಜ್ಞಾಪಕಾರ್ಥ ದತ್ತಿಯ ಆಶಯದಂತೆ ಕೊಡಗು ಜಿಲ್ಲೆಯ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಉತ್ತಮ ಪ್ರಬಂಧಕ್ಕೆ ಬಹುಮಾನ ನೀಡುವ ಸಲುವಾಗಿ ವಿದ್ಯಾರ್ಥಿಗಳಿಂದ ಪ್ರಬಂಧವನ್ನು ಸ್ಪರ್ಧೆಗಾಗಿ ಆಹ್ವಾನಿಸಲಾಗಿತ್ತು. ಜಿಲ್ಲೆಯ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 35 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ಕುಮಾರಿ ಮನ ಕೆ.ಆರ್. ರವರು ಪಡೆದಿರುತ್ತಾರೆ. ದ್ವಿತೀಯ ಸ್ಥಾನವನ್ನು ಕೊಟ್ಟಮುಡಿಯ ಮರ್ಕಸ್ ಹಿದಾಯತ್ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಕುಮಾರಿ ಫಹಿನಾ ಟಿ.ಎ.ರವರು ಪಡೆದುಕೊಂಡರೆ ತೃತೀಯ ಸ್ಥಾನವನ್ನು ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಕುಮಾರಿ ಅನುಷಾ ಪಿ.ಆರ್. ಹಾಗೂ ಕುಶಾಲನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಕುಮಾರಿ ಪ್ರೇಕ್ಷ ಜಿ.ಎಂ. ಪಡೆದುಕೊಂಡಿರುತ್ತಾರೆ. ಇವರಿಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ…
ಉಡುಪಿ : ಕಟೀಲು ಮೇಳದ ಪ್ರಧಾನ ಭಾಗವತ ಬಲಿಪ ಶಿವಶಂಕರ ಭಟ್ ಮತ್ತು ಬಹುಮುಖ ಪ್ರತಿಭೆಯ ಹಿರಿಯ ವೇಷಧಾರಿ ನಾರಾಯಣ ಕುಲಾಲ್ ವೇಣೂರು ಇವರಿಗೆ ‘ಪೂಲ ವಿಠ್ಠಲ ಶೆಟ್ಟಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಧಾ ವಿಠ್ಠಲ ಶೆಟ್ಟಿ ಮತ್ತು ಮಕ್ಕಳು ಇವರ ವತಿಯಿಂದ ಎರ್ಮಾಳು ಜನಾರ್ದನ ದೇವಸ್ಥಾನದ ಬಳಿ ದಿನಾಂಕ 18 ಜನವರಿ 2026ರಂದು ನಡೆದ ಕಟೀಲು ಮೇಳದ 28ನೇ ವರ್ಷದ ಯಕ್ಷಗಾನ ಸೇವೆ ಬಯಲಾಟ ವೇದಿಕೆಯಲ್ಲಿ ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣರು ಸನ್ಮಾನಿಸಿ ಅಭಿನಂದಿಸಿದರು. ಬಲಿಪ ಪರಂಪರೆ ಹಾಗೂ ಕಟೀಲು ಮೇಳದ ಅನುಬಂಧವನ್ನು ಉಲ್ಲೇಖಿಸಿ ಬಲಿಪ ಭಾಗವತರುಗಳ ಸಾಧನೆಯನ್ನು ಸ್ಮರಿಸಿದರು. ಕಟೀಲು ಮೂಲ ಕುದುರಿನ ಸ್ಥಳ ದಾನಿಗಳಾಗಿ ನಿರಂತರ ಧಾರ್ಮಿಕ ಸೇವೆಗೈಯುವ ಸೇವಾಕರ್ತ, ಉದ್ಯಮಿ ಎರ್ಮಾಳ್ ಸತೀಶ್ ವಿಠ್ಠಲ ಶೆಟ್ಟಿ ಪರಿವಾರದ ಕಲಾಪ್ರೀತಿಯನ್ನು ಶ್ಲಾಘಿಸಿದರು. “ಕಂಬಳ ಕ್ಷೇತ್ರದಲ್ಲಿ ಕೋಣಗಳ ಯಜಮಾನರಾಗಿ ಮೂರು ದಶಕಗಳ ಹಿಂದೆ ದಾಖಲೆ ಮಾಡಿದ್ದ ಘಾಟ್ ಕೋಪರ್ ನ ಭಾರತ್ ಕೆಫೆಯ ಸ್ಥಾಪಕ ಪೂಲ ವಿಠ್ಠಲ ಶೆಟ್ಟಿಯವರ…
ಪುತ್ತೂರು : ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ದಿನಾಂಕ 11 ಜನವರಿ 2026ರಂದು ನಡೆದ ‘ನೃತ್ಯೋತ್ಕ್ರಮಣ’ ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ರಂಗಪ್ರವೇಶ ಸ್ಮೃತಿ ಸಂಧ್ಯಾ ಭರತನಾಟ್ಯ ಕಾರ್ಯಕ್ರಮ ಕಲಾರಾಧಕರನ್ನು ಮಂತ್ರಮುಗ್ಧಗೊಳಿಸಿತು. ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಇವರು 1996ರ ಜನವರಿ 12ರಂದು ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ಭರತ ನಾಟ್ಯ ರಂಗಪ್ರವೇಶವನ್ನು 30 ವರ್ಷಗಳ ಬಳಿಕ ಮತ್ತೆ ಅದನ್ನೇ ನೆನಪಿಸಿ ಮರುಸೃಷ್ಟಿಸುವ ಮೂಲಕ ಕಲೆಗೆ ಗೌರವ ಸಲ್ಲಿಸಿದರು. ವಿದ್ವಾನ್ ದೀಪಕ್ ಕುಮಾರ್ ಇವರ ರಂಗಪ್ರವೇಶಕ್ಕೆ ಹಿನ್ನೆಲೆ ನುಡಿಸಿದವರ ಪೈಕಿ ಮೃದಂಗ ವಾದನ ಮಾಡಿದ ಕರ್ನಾಟಕ ಕಲಾಶ್ರೀ ಜಿ. ಗುರುಮೂರ್ತಿ ಬೆಂಗಳೂರು ಅವರು ಮತ್ತೊಮ್ಮೆ ಮೃದಂಗ ನುಡಿಸಿದರು. ಅಂದು ನೃತ್ಯದ ಅಮೂಲ್ಯ ಕ್ಷಣಗಳನ್ನು ಸೆರಹಿಡಿದ ಯಜ್ಞ ಮಂಗಳೂರು ಇವರು ನೃತ್ಯದ ಕ್ಷಣಗಳನ್ನು ಮತ್ತೊಮ್ಮೆ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ನೃತ್ಯ ಗುರು ಡಾ. ವೀಣಾ ಮೂರ್ತಿ ವಿಜಯ್ ಬೆಂಗಳೂರು…