Author: roovari

ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿವೇಕಾನಂದ ಪದವಿ ಕಾಲೇಜು ಘಟಕ ಮತ್ತು ವಿವೇಕಾನಂದ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ‘ಶಿವಾಜಿ ಜೀವನ ಚರಿತ್ರೆ’ ಕುರಿತು ವಿಚಾರ ಸಂಕಿರಣ ದಿನಾಂಕ 20 ಫೆಬ್ರುವರಿ 2026ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ. ಮಾತನಾಡಿ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ನಿರ್ಮಿಸಲಾರ. ಅಂತೆಯೇ ಚರಿತ್ರೆಯನ್ನು ಓದದವನು ಚರಿತ್ರೆಯ ಬಗ್ಗೆ ಹೇಳಲು ಅರ್ಹನಲ್ಲ. ಭಾರತದದುದ್ದಕ್ಕೂ ಶಿವಾಜಿಯನ್ನು ಪೋಜಿಸುವವರೇ ಹೆಚ್ಚು. ಭಾರತದ ಮೇಲೆ ಬಹಳಷ್ಟು ಯುದ್ಧಗಳಾಗಿವೆ. ಅವೆಲ್ಲವನ್ನು ಚಾಕಚಕ್ಯತೆಯಿಂದ ಸರಿಪಡಿಸಿಕೊಂಡು ಹೋದವರು ಶಿವಾಜಿ ಮಹಾರಾಜ್. ಶಿವಾಜಿ ಭಾರತಕ್ಕೆ ಮಾತ್ರ ಸೀಮಿತವಲ್ಲದೇ, ಇಡೀ ಪ್ರಪಂಚವೇ ಅವರನ್ನು ತಿಳಿದಿದೆ. ಶಿವಾಜಿಯ ಧ್ಯೇಯ, ಆತ್ಮವಿಶ್ವಾಸವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ, ಶಿವಾಜಿ ಅಂತರ್ ಶಕ್ತಿ ಹಾಗೂ ಶ್ರದ್ಧೆ ನಮ್ಮೆಲ್ಲರಲ್ಲೂ ಮೂಡಬೇಕು” ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಶ್ರೀ ಕೃಷ್ಣ ಗಣರಾಜ್…

Read More

ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು 14ನೇ ವರ್ಷದ ‘ರಂಗಹಬ್ಬ–14’ ನಾಟಕೋತ್ಸವವನ್ನು ದಿನಾಂಕ 22ರಿಂದ 28 ಫೆಬ್ರವರಿ 2026ರವರೆಗೆ ಪ್ರತಿದಿನ ಸಂಜೆ ಗಂಟೆ 6-30ಕ್ಕೆ ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದೆ. ಈ ಬಾರಿಯ ರಂಗಹಬ್ಬವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ನಗರಸಭೆ, ನವದೆಹಲಿಯ ಸಂಸ್ಕೃತಿ ನಿರ್ದೇಶನಾಲಯವು ಸಹಯೋಗ ನೀಡಿವೆ. ತುಳು ರಂಗಭೂಮಿ ಮತ್ತು ತುಳು ಚಲನಚಿತ್ರ ರಂಗದ ಹಿರಿಯ ರಂಗಕರ್ಮಿ ಡಾ. ಪಿ. ಸಂಜೀವ ದಂಡೆಕೇರಿಯವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್‌ನ ಕೊಡುಗೆ ಇರಲಿದೆ. ಯಕ್ಷಗುರು ಯು.ದುಗ್ಗಪ್ಪ ಇವರ ನೆನಪಿನಲ್ಲಿ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿ. ಕೃಷ್ಣ ಸ್ವಾಮಿ ಜೋಷಿ ಇವರಿಗೆ ಪ್ರದಾನ ಮಾಡಲಾಗುವುದು. ದಿನಾಂಕ 22 ಫೆಬ್ರವರಿ 2026ರಂದು ಜರ್ನಿ ಥೇಟರ್ ಗೂಪ್ ಮಂಗಳೂರು ತಂಡವು ಚೇತನ್ ಗಣೇಶಪುರ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ…

Read More

ಬೆಂಗಳೂರು : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024, 2025ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು 2024ನೇ ಸಾಲಿನ ‘ಶಿಲ್ಪಶ್ರೀ ಪ್ರಶಸ್ತಿ’ಯನ್ನು ಪ್ರಕಟಿಸಿದೆ. ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಗೌರವ ಪ್ರಶಸ್ತಿಗೆ ಹತ್ತು ಶಿಲ್ಪಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ತಲಾ ರೂ.50,000/- ನಗದು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಬೀದ‌ರ್ ಅಥವಾ ಚಾಮರಾಜನಗರದಲ್ಲಿ ಸಮಾರಂಭ ಆಯೋಜಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಸಿ. ರಮೇಶ್ ತಿಳಿಸಿದ್ದಾರೆ. ಅಲ್ಲದೇ, 2024ನೇ ಸಾಲಿನ ‘ಶಿಲ್ಪಶ್ರೀ ಪ್ರಶಸ್ತಿ’ಗೆ ಹತ್ತು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ತಲಾ ರೂ.25,000/- ನಗದು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ. ಅಕಾಡೆಮಿಯ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ 2025ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ ಆರು ಶಿಲ್ಪ ಕಲಾಕೃತಿಗಳನ್ನು ಅಕಾಡೆಮಿಯ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. 2024ನೇ ಸಾಲಿನ ಗೌರವ ಪ್ರಶಸ್ತಿ : ಎ.ಪಿ. ಶ್ರೀಕಂಠಾಚಾರ್ಯ (ಸಂಪ್ರದಾಯ…

Read More

ಮಾಲತಿ ಪಟ್ಟಣಶೆಟ್ಟಿಯವರು ಮಕ್ಕಳಿಗಾಗಿ ಬರೆದ ‘ಇಂದಿನ ನಚಿಕೇತ’, ‘ತುಂಬಿ ಬಂದಿತ್ತು’, ‘ಕೊಡಿ ನನ್ನ ಬಾಲ್ಯವ’ ಎಂಬ ನಾಟಕಗಳು ‘ಮಕ್ಕಳ ಮೂರು ನಾಟಕಗಳು’ (2014) ಎಂಬ ಸಂಕಲನದಲ್ಲಿವೆ. ಇವುಗಳು ಆಧುನಿಕ ಶಿಕ್ಷಣ ಪದ್ಧತಿ, ಬದುಕಿನ ರೀತಿನೀತಿ, ನಗರಜೀವನದ ಕಡೆಗಿನ ತುಡಿತ, ಪರಿಸರದಿಂದ ವಿಮುಖವಾಗುತ್ತಿರುವ ಬಾಲ್ಯ, ರೈತರ ಬವಣೆ, ನಿರ್ಲಕ್ಷ್ಯಕ್ಕೊಳಗಾಗುತಿರುವ ವೃದ್ಧರ ಪರಿಸ್ಥಿತಿ ಮುಂತಾದ ಗಂಭೀರ ಸಮಸ್ಯೆಗಳನ್ನು ಒಳಗೊಂಡಿವೆ. ಮಗನನ್ನು ಡಾಕ್ಟರ್, ಇಂಜಿನಿಯರ್ ಮಾಡಬೇಕೆಂಬ ಹಟ ಹಿಡಿದ ಹೆತ್ತವರ ನಡುವೆ ನಲುಗುವ ಮಗನ ಪರಿಸ್ಥಿತಿಯನ್ನು ‘ಇಂದಿನ ನಚಿಕೇತ’ ನಾಟಕವು ಹಿಡಿದಿಡುತ್ತದೆ. ನಿಜಜೀವನದಲ್ಲಿ ಮಾಡಲಾಗದ ಪ್ರತಿರೋಧವನ್ನು ಅವರು ನಾಟಕದಲ್ಲಿ ಅಭಿನಯಿಸುವ ಮೂಲಕ ವ್ಯಕ್ತಪಡಿಸುತ್ತಾರೆ. ಇದು ಅವರ ಸೃಜನಶೀಲ ನೆಲೆಯಾಗಿದ್ದು ನಾಟಕದೊಳಗೆ ನಾಟಕವನ್ನು ಅಳವಡಿಸುವ ರಂಗತಂತ್ರವನ್ನು ಅನುಸರಿಸಿದ್ದಾರೆ. ಇಲ್ಲಿನ ನಾಟಕಗಳಲ್ಲಿ ಮಕ್ಕಳು ಗಂಭೀರ ವಿಷಯವನ್ನು ತಮ್ಮ ವಯೋಮಾನಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಾರೆ ಎಂಬುದು ನಿಜವಾದರೂ “ನಮ್ಮ ದೇಶದ್ಯಾಗ ಸಾಹಿತ್ಯ, ಕಲೆ, ಸಂಸ್ಕೃತಿಗಳೆಲ್ಲ ಸಾಯಲಿಕತ್ಯಾವ. ಸರಕಾರದವರು, ದೊಡ್ಡ ಶ್ರೀಮಂತರೆಲ್ಲ ಬರೇ ಕಾರಖಾನಿ ಸ್ಥಾಪಿಸ್ತಾ ಹೊಂಟಾರ. ಕಡೇ ಪಕ್ಷ ನಾಲ್ಕ ಕಾರಖಾನಿಗೆ…

Read More

ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಗೆ ಈಗ ನಲ್ವತ್ತರ ಹರಯ. 1986ರಲ್ಲಿ ಕೊಂಕಣಿ ಸಂಸ್ಕೃತಿಯನ್ನು ದೇಸಿಯ ಅಸ್ಮಿತೆಯಿಂದ ಶೃಂಗರಿಸಲು ಆರಂಭಗೊಂಡ ಈ ಸಂಸ್ಥೆ ನಂತರ ಭಾಷೆ, ಕಲೆ, ಸಂಸ್ಕೃತಿಯ ಎಲ್ಲಾ ಮಜಲುಗಳಲ್ಲಿ ಶ್ರಮಿಸಿ, 35 ಪ್ರಯೋಗಗಳ 2200ಕ್ಕೂ ಮಿಕ್ಕಿ ಪ್ರದರ್ಶನಗಳ ಮೂಲಕ, ಜಗದ ಕೊಂಕಣಿ ಜನರಲ್ಲಿ ಭಾಷಾಭಿಮಾನವನ್ನು ಉದ್ದೀಪನಗೊಳಿಸಿ, ಕೊಂಕಣಿ ಸಂಸ್ಕೃತಿಯ ರಕ್ಷಕ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. 2008ರಲ್ಲಿ, 1711 ಗಾಯಕರ ಮೂಲಕ 645 ಹಾಡುಗಳಿಂದ, 40 ಗಂಟೆಗಳಷ್ಟು ಸುದೀರ್ಘ ಅವಧಿಯ ಸಮೂಹ ಗಾಯನದ ಒಂದು ಗಿನ್ನೆಸ್ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡ ಮಾಂಡ್ ಸೊಭಾಣ್ ಈಗ ಇನ್ನೊಂದು ದಾಖಲೆಗೆ ಸಜ್ಜಾಗುತ್ತಿದೆ. ದಿನಾಂಕ 03 ನವೆಂಬರ್ 2026ರಿಂದ – 15 ನವೆಂಬರ್ 2026ರವರೆಗೆ ಮಂಗಳೂರಿನಲ್ಲಿ, ಉದ್ದೇಶಿತ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮಾವೇಶದಲ್ಲಿ 12 ದಿನ, 12 ಗಂಟೆ ಮತ್ತು 12 ನಿಮಿಷಗಳ (ಸುಮಾರು 300 ಗಂಟೆ 12 ನಿಮಿಷ) ನಿರಂತರ ಸಮೂಹ ಗಾಯನದ ನೂತನ ದಾಖಲೆಗಾಗಿ…

Read More

ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ 2026ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಹಿತ್ಯ – ಸಾಂಸ್ಕೃತಿಕ ವೈಭವ ದಿನಾಂಕ 28 ಫೆಬ್ರವರಿ 2026ರಂದು ಕುಟ್ಟ ಕೊಡವ ಸಮಾಜದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅಪಾರವಾದ, ಸೇವೆಗೈದಿರುವ 15 ಮಂದಿಗೆ ಗೌರವ ಪ್ರಶಸ್ತಿಯನ್ನಿತ್ತು ಗೌರವಿಸಲಾಗುವುದೆಂದು ಅಕಾಡೆಮಿ ತಿಳಿಸಿದೆ. ಸಮಾರಂಭದಲ್ಲಿ ಮಲ್ಲೇಂಗಡ ದಾದ ಬೆಳ್ಯಪ್ಪ (ಸಮಾಜ ಸೇವೆ ಕ್ಷೇತ್ರ), ಚೆಪ್ಪುಡಿರ ತಿಲಕ್ ಸುಬ್ಬಯ್ಯ (ಸಮಾಜ-ಸಂಸ್ಕೃತಿ ಕ್ಷೇತ್ರ), ತೀತಮಾಡ ಅರ್ಜುನ್ ದೇವಯ್ಯ (ವ್ಯಕ್ತಿತ್ವ-ಸಮಾಜ ಕ್ಷೇತ್ರ), ಉದಿಯಂಡ ರೋಷನ್ ಸೋಮಣ್ಣ (ಸಾಹಿತ್ಯ-ಸಮಾಜ ಕ್ಷೇತ್ರ), ಚೆನಿಯಪಂಡ ಮನು ಮಂದಣ್ಣ (ಸಾಹಿತ್ಯ-ಸಂಸ್ಕೃತಿ ಕ್ಷೇತ್ರ), ಚೊಟ್ಟೆಯಂಡ ಅಪ್ಪಾಜಿ (ಸಂಸ್ಕೃತಿ ಕ್ಷೇತ್ರ), ಕಣಿಯರ ನಾಣಯ್ಯ (ಜಾನಪದ ಕ್ಷೇತ್ರ), ನಡಿಕೇರಿಯಂಡ ವಿಕ್ರಂ ಅಪ್ಪಯ್ಯ (ಕಲೆ-ಸಂಸ್ಕೃತಿ ಕ್ಷೇತ್ರ), ಚಮ್ಮಣಮಡ ವಾಣಿ ರಾಘವೇಂದ್ರ (ಸಾಹಿತ್ಯ ಕ್ಷೇತ್ರ), ಕುಡಿಯರ ಕೆ. ಚಿಣ್ಣಪ್ಪ (ಜಾನಪದ ಕ್ಷೇತ್ರ), ಸುಳ್ಳಿಮಾಡ ಗೌರಿ ನಂಜಪ್ಪ (ಜಾನಪದ ಕ್ಷೇತ್ರ), ಚೋಕಂಡ ಸಂಜು ಸುಬ್ಬಯ್ಯ (ಸಮಾಜ…

Read More

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 21 ಫೆಬ್ರವರಿ 2026ರಂದು ಕಡಂದಲೆ ಪಾಲಡ್ಕ ಪೂಪಾಡಿಕಲ್ಲು ಇಲ್ಲಿರುವ ಶ್ರೀ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9-00 ಗಂಟೆಗೆ ಸಾಹಿತಿ ಅಬ್ದುಲ್ ಹಮೀದ್ ಪಕ್ಕಲಡ್ಕ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಈ ಸಾಹಿತ್ಯ ಸಮ್ಮೇಳನವನ್ನು ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಇವರ ಉದ್ಘಾಟಿಸಲಿದ್ದಾರೆ. ಎಂ. ರಾಘವೇಂದ್ರ ಭಂಡಾರ್ಕರ್ ಉವಾರ ‘ಓ ಮನಸ್ಸೇ’ ಕವನ ಸಂಕಲನ, ಅಬ್ದುಲ್ ಹಮೀದ್ ಪಕ್ಕಲಡ್ಕ ಇವರ ‘ಹಾದಿಯೇ ಇಲ್ಲದ ಹಾದಿ’ ಹಾಗೂ ಅಮೋಗಸಿದ್ದ ವಿಠಲಗೌಡ ಪಾಟೀಲ ಇವರ ‘ಭಾವಾಮೋಘ’ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಆಳ್ವಾಸ್ ಸ್ವಾಯತ್ತ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಪ್ರಸ್ತುತಗೊಳ್ಳಲಿದೆ. ‘ಶಿಕ್ಷಣ ಮತ್ತು ರಂಗಭೂಮಿ’ ಎಂಬ ವಿಷಯದ ಬಗ್ಗೆ ಜೀವನ್ ರಾಂ ಸುಳ್ಯ ಇವರು ವಿಶೇಷೋಪನ್ಯಾಸ ನೀಡಲಿದ್ದಾರೆ. ಧವಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಭಾವಗಾನ, ‘ಶಿಕ್ಷಣ ಮತ್ತು ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ಶ್ರೀಮತಿ…

Read More

ಮೂಲ್ಕಿ : ಕಟೀಲು ದೇಗುಲದ ನಂದಿನಿ ನದಿಯ ಕುದ್ರುವಿನಲ್ಲಿ ದಿನಾಂಕ 01 ಮಾರ್ಚ್ 2026ರಂದು ನಡೆಯಲಿರುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸಲು ಮೂಲ್ಕಿ ತಾಲೂಕಿನ ಕವಿಗಳಿಗೆ ಹಾಗೂ ಕಥಾಗೋಷ್ಟಿಯಲ್ಲಿ ಭಾಗವಹಿಸಿ, ಸ್ವರಚಿತ ಕಥೆಯನ್ನು ಓದಲು ಮೂಲ್ಕಿ ತಾಲೂಕಿನ ಕಥಾಗಾರರಿಗೆ ಮುಕ್ತ ಅವಕಾಶ ನೀಡಲಾಗಿದೆ. ಮೂಲತಃ ಮೂಲ್ಕಿ ತಾಲೂಕಿನವರಾಗಿದ್ದು, ಬೇರೆ ಕಡೆ ವಾಸವಾಗಿರುವ ಅಥವಾ ಬೇರೆ ತಾಲೂಕಿನವರಾಗಿದ್ದು, ಪ್ರಸ್ತುತ ಮೂಲ್ಕಿ ತಾಲೂಕಿನಲ್ಲಿರುವ ಕವಿಗಳು, ಕಥಾಗಾರರು ಈ ಗೋಷ್ಟಿಗಳಲ್ಲಿ ಭಾಗವಹಿಸಬಹುದಾಗಿದೆ. ಪಾಲ್ಗೊಂಡವರಿಗೆ ಪ್ರಮಾಣಪತ್ರ, ಪುಸ್ತಕದ ಗೌರವ ಇದೆ. ಭಾಗವಹಿಸಲು ಇಚ್ಚಿಸುವವರು ಮುಂಚಿತವಾಗಿ ತಮ್ಮ ಹೆಸರನ್ನು ಹೆರಿಕ್ ಪಾಯಸ್ 9449913995 ಅಥವಾ ದೇವದಾಸ ಮಲ್ಯ 9448623247 ಇವರಲ್ಲಿ ನೋಂದಾಯಿಸಬಹುದು.

Read More

ಬೆಂಗಳೂರು : ಸಮುದಾಯ ಬೆಂಗಳೂರು ಇವರು ಪ್ರಸ್ತುತ ಪಡಿಸುವ ಕೆ.ಆರ್. ಮೀರಾ ಇವರ ಮಲಯಾಳಂ ಕಥೆ ಆಧಾರಿತ ‘ಭಗವಂತನ ಮರಣ’ ನಾಟಕ ಪ್ರದರ್ಶನವನ್ನು ದಿನಾಂಕ 22 ಫೆಬ್ರವರಿ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮತ್ತು 26 ಫೆಬ್ರವರಿ 2026ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗ ಶಂಕರದಲ್ಲಿ ಆಯೋಜಿಸಲಾಗಿದೆ. ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಇವರ ರಂಗರೂಪ, ವಿನ್ಯಾಸ, ರಂಗಸಜ್ಜಿಕೆ, ಸಂಗೀತ ಮತ್ತು ನಿರ್ದೇಶನ ಹಾಗೂ ಪದ್ಮಾ ಶಿವಮೊಗ್ಗ ಇವರು ಸಹ ನಿರ್ದೇಶನ ಮಾಡಿರುತ್ತಾರೆ. ನಾಟಕದ ಬಗ್ಗೆ : ಧಾರ್ಮಿಕ ಅಸಹಿಷ್ಣತೆಯಿಂದ ಹೆಚ್ಚಾಗುತ್ತಿರುವ ಹಿಂಸೆಯ ನಿರರ್ಥಕತೆ ಹಾಗೂ ಮೂಲಭೂತವಾದಿ ಸಂಘಟನೆಗಳು ಇಂತಹ ಹಿಂಸಾಚಾರಕ್ಕೆ ಯುವಕರನ್ನು ಬಳಸಿಕೊಳ್ಳುತ್ತಿರುವುದು ಖೇದಕರ. ಅಮಾಯಕರಾದ ಯುವಕರು ಧರ್ಮದ ಅಮಲಿಗೆ ಬಿದ್ದು ಹಿಂಸೆಯನ್ನ ಕೈಗೆತ್ತಿಕೊಳ್ಳುತ್ತಿರುವುದನ್ನು ಭಗವಂತನ ಸಾವು ನಾಟಕ ತೀರ್ವವಾಗಿ ವಿಶ್ಲೇಷಿಸುತ್ತದೆ. ನಾಟಕ ಹಿಂಸೆಯ ನಿರರ್ತಕತೆಯನ್ನು ಹೇಳುತ್ತಲೇ ಜ್ಞಾನದ ಬಲದಿಂದ ಜ್ಞಾನದ ಕೇಡನ್ನು ನೋಡುವಂತೆ ಪ್ರೇರೇಪಿಸುತ್ತದೆ. ಸಂಘಟನೆಯೊಂದರ ಕಾರ್ಯಕರ್ತನಾದ ಅಮರ ಎಂಬ ಯುವಕ ತಾನು…

Read More

ಮೈಸೂರು : ಜಾನಪದ ಕಲಾವಿದರ ಒಕ್ಕೂಟ (ರಿ.) ಮೈಸೂರು ವಿಭಾಗ ಕರ್ನಾಟಕ ಇದರ ವತಿಯಿಂದ ರಾಜ್ಯಮಟ್ಟದ ‘ಜಾನಪದ ಕಲಾರತ್ನ ಪ್ರಶಸ್ತಿ’ ಮತ್ತು ‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 21 ಫೆಬ್ರವರಿ 2026ರಂದು ಬೆಳಗ್ಗೆ 11-00 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಮಾನ್ಯಶ್ರೀ ಟಿ.ಎಸ್. ಶ್ರೀವತ್ಸ ಇವರು ವಹಿಸಲಿದ್ದು, ಮೈಸೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಮಡ್ಡೀಕೆರೆ ಶ್ರೀ ಗೋಪಾಲ್ ಇವರು ಉದ್ಘಾಟನೆ ಮಾಡಲಿದ್ದಾರೆ. ನಾಡಿನ ಸುಪ್ರಸಿದ್ಧ ಕವಿ ಡಾ. ಜಯಪ್ಪ ಹೊನ್ನಾಳಿ ಇವರು ‘ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಹಾಗೂ ಸಂಪನ್ಮೂಲ ವ್ಯಕ್ತಿ ಡಿ. ನಾಗರಾಜು ಇವರು ‘ಜಾನಪದ ಕಲೆಗಳ’ ಕುರಿತು ವಿಶೇಷ ನೀಡಲಿದ್ದಾರೆ. ಖ್ಯಾತ ಸಾಹಿತಿ ಟಿ. ಸತೀಶ್ ಜವರೇಗೌಡ ಮತ್ತು ಸಂಸ್ಥಾಪಕ ಕಾರ್ಯದರ್ಶಿ ಕುಮಾರಿ ಪ್ರಮೀಳಾ ಭಾಗ್ಯರಾಮ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More