Author: roovari

ಅಮೇರಿಕಾದ ಆಸ್ಟಿನ್ ನಲ್ಲಿ ನೆಲೆಸಿರುವ ನೃತ್ಯ ಕಲಾವಿದೆ ಶ್ರೀಮತಿ ರಮ್ಯ ಸುಧೀರ್ ಪಟೇಲ್, ‘ಕಾವೇರಿ ನಾಟ್ಯಯೋಗ’ ನೃತ್ಯ ಸಂಸ್ಥೆಯ ನಾಟ್ಯಾಚಾರ್ಯ ಡಾ. ಶ್ರೀಧರ್ ಆರ್. ಅಕ್ಕಿಹೆಬ್ಬಾಳು ಇವರ ನುರಿತ ಗರಡಿಯಲ್ಲಿ ರೂಪುಗೊಂಡ ಕಲಾಶಿಲ್ಪ. ಇವರ ಸತತ ಮಾರ್ಗದರ್ಶನದಲ್ಲಿ ನೃತ್ಯದ ವಿವಿಧ ಆಯಾಮಗಳನ್ನು ಅರಿತ ಕಲಾವಿದೆ ರಮ್ಯಾ ಇತ್ತೀಚೆಗೆ ಆಸ್ಟಿನ್ ನಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡಳು. ನೃತ್ಯಕ್ಕೆ ಹೇಳಿ ಮಾಡಿಸಿದಂಥ ಮಾಟವಾದ ಶರೀರ, ಭಾವಪ್ರದ ಕಣ್ಣುಗಳನ್ನು ಹೊಂದಿರುವ ರಮ್ಯ, ಆಕರ್ಷಕ ಆಹಾರ್ಯ- ವೇಷಭೂಷಣಗಳಲ್ಲಿ ಗಂಧರ್ವ ಪುತ್ಥಳಿಯಂತೆ ರಂಗದ ಮೇಲೆ ಗೋಚರಿಸುತ್ತಿದ್ದಳು. ಹಸನ್ಮುಖ -ಆತ್ಮವಿಶ್ವಾಸದಿಂದ ವೇದಿಕೆಯನ್ನು ಪ್ರವೇಶಿಸಿದ ಕಲಾವಿದೆ, ಶುಭಾರಂಭಕ್ಕೆ ಬಸವಣ್ಣನ ವಚನದ ಅಭಿನಯ ಸಮರ್ಪಣೆಯಿಂದ ದೈವೀಕತೆಯನ್ನು ಪಸರಿಸಿದಳು. ‘ವಚನದಲ್ಲಿ ನಾಮಾಮೃತ ತುಂಬಿ’ ಎನ್ನುತ್ತ ಅತ್ಯಂತ ವಿನಮ್ರಶಾಲಿಯಾಗಿ ಭಕ್ತಿಭಾವದಿಂದ ಕೂಡಲ ಸಂಗಮದೇವನಲ್ಲಿ ವಿಲೀನ- ಭಕ್ತಿಭಾವದಲ್ಲಿ, ಶರಣಾಗತಳಾದ ಕಲಾವಿದೆಯ ನೃತ್ಯಾಭಿನಯದಲ್ಲಿ ಸುಕೋಮಲತೆಯೊಂದಿಗೆ ಮಾರ್ದವತೆ ತುಂಬಿತ್ತು. ನಂತರ- ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ – ಎಂಬ ಅಕ್ಕನ ವಚನವನ್ನು ರಮ್ಯ, ತನ್ನ ನವಿರಾದ ಆಂಗಿಕಾಭಿನಯ,…

Read More

ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ ಧಾರವಾಡ ಇವರ ವತಿಯಿಂದ ಆರ್ಯರ ಎಂಬತ್ತನೆಯ ಹುಟ್ಟುಹಬ್ಬದ ನೆನಪಿಗಾಗಿ ‘ಆರ್ಯ ನೆನಪು’ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2025ರಂದು ಧಾರವಾಡದ ಮನೋಹರ ಗ್ರಂಥ ಮಾಲಾ ಅಟ್ಟದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಮತ್ತು ಚಿಂತಕ ಜಿ.ಸಿ. ತಲ್ಲೂರ ಮಾತನಾಡಿ “ಸನ್ಯಾಸತ್ವ ತ್ಯಜಿಸಿ ಧಾರವಾಡಕ್ಕೆ ಬಂದು ನೆಲೆಸಿ ಆರ್ಯರು ಸಾಹಿತ್ಯ, ಚಿತ್ರಕಲೆ, ನಾಟಕ ನಿರ್ದೇಶನ, ಚಲನಚಿತ್ರ ನಿರ್ದೇಶನ, ಅನುವಾದ, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧಿಸಿದ ಸಾಧನೆ ಊಹಾತೀತ. ಅವರ ನಾಟಕಗಳು, ಕಥೆಗಳು, ಕವನಗಳು, ಕಾದಂಬರಿ ಹೀಗೆ ವಿವಿಧ ಬಗೆಯ ಎಲ್ಲ ಬರಹಗಳನ್ನು ಸಮಗ್ರವಾಗಿ ಹೊರತರಬೇಕು. ಮನೋಹರ ಗ್ರಂಥಮಾಲೆ ಈ ಕೆಲಸ ಮಾಡಲಿ. ಅದಕ್ಕೆ ನಾವೆಲ್ಲರೂ ಗ್ರಂಥಮಾಲೆ ಜತೆ ಕೈ ಜೋಡಿಸೋಣ. ಹಾಗೆಯೇ ಅವರ ಚಿತ್ರಕಲೆ, ಸಾಹಿತ್ಯ ಕುರಿತು ವಿಮರ್ಶೆ ಹೊರಬರಬೇಕು. ಸಂವಾದ ಗೋಷ್ಠಿ ಏರ್ಪಾಡಾಗಬೇಕು. ಅವರಿಗೆ ಯಥೋಚಿತ ಗೌರವ ಸಿಗಬೇಕು” ಎಂದು ಹೇಳಿದರು. ಮತ್ತೋರ್ವ ಅತಿಥಿಯಾಗಿದ್ದ ಆನಂದ ನಿಲೇಕಣಿ ಮಾತನಾಡುತ್ತಾ…

Read More

ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಸಂತೋಷಿ ಕಲಾಮಂಟಪದಲ್ಲಿ ದಿನಾಂಕ 29 ಡಿಸೆಂಬರ್ 2025ರಂದು ವಿದುಷಿ ಜ್ಞಾನ ಐತಾಳ್ ಇವರ ‘ಜ್ಞಾನ ನೃತ್ಯ ವಂದನಂ’ ಗುರು ವಂದನ ಕಾರ್ಯಕ್ರಮ ಸಂಪನ್ನಗೊಂಡಿತು. ಶಿವನನ್ನು ಸ್ತುತಿಸುವ ಪುಷ್ಪಾಂಜಲಿಯೊಂದಿಗೆ ನೃತ್ಯ ಕಾರ್ಯಕ್ರಮ ಪ್ರಾರಂಭಗೊಂಡಿತು. ಅಷ್ಟದಿಕ್ಷಾಲಕರಿಗೆ, ಗುರುಗಳಿಗೆ ಹಾಗೂ ಪ್ರೇಕ್ಷಕರಿಗೆ ವಂದಿಸುವ ನೃತ್ಯವಿದು. ಎರಡನೆಯದಾಗಿ ‘ಯಮನಲ್ಲಿ ಕಾಣನೆಂದು ಹೇಳಬೇಡ… ಯಮನೇ ಶ್ರೀ ರಾಮನು ಸಂದೇಹ ಬೇಡ..’ ಎನ್ನುವ ಪುರಂದರ ದಾಸರ ರಚನೆಯ ಶಿವರಂಜಿನಿ ರಾಗ ಆದಿ ತಾಳದ ನೃತ್ಯ ಕಲಾರಸಿಕರನ್ನು ಭಾವಪರವಶರಾಗಿಸಿತು. ರಾಮ ರಾವಣನಿಗೆ, ನರಹರಿ ಹಿರಣ್ಯಕಶಿಪುವಿಗೆ, ಕಂಸನಿಗೆ ಕೃಷ್ಣನು ಹೇಗೆ ಯಮನಾದ ಎನ್ನುವ ಕಥನವನ್ನು ನೃತ್ಯದ ಮೂಲಕ ವಿಹಂಗಮವಾಗಿ ನಾಟ್ಯರೂಪದಲ್ಲಿ ವೇದಿಕೆಯ ಮೇಲೆ ಕಟ್ಟಿ ತೊಟ್ಟ ಜ್ಞಾನಳ ಹಾವ-ಭಾವ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸಿತು. ಪದವರ್ಣದಲ್ಲಿ ಕೈಲಾಸವಾಸಿ ಶಿವನ ಮನ್ಮಥ ದಹನ, ತಾಂಡವ ನೃತ್ಯ, ಬೇಡರ ವೇಷದಲ್ಲಿ ಬಂದ ಅರ್ಜುನನಿಗೆ ಪಾಶುಪತಾಸ್ತ್ರ ನೀಡುವ ಪ್ರಸಂಗ ವೀಕ್ಷಕರ ಕಣ್ಮನ ತಣಿಸಿತು. ಶಿವ ತಾಂಡವ ನೃತ್ಯದಲ್ಲಿ ಶಿವನ ಗೆಜ್ಜೆಯ…

Read More

ಕುಂದಾಪುರ : ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಇವರ ಹೆಸರಿನಲ್ಲಿ ನೀಡುವ 2025-26ರ ಸಾಲಿನ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನ್ ದಾಸ್ ಶೆಣೈಯವರನ್ನು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ. ದಿ. ಗೋವಿಂದರಾಯ ಶೆಣೈ ಹಾಗೂ ದಿ. ಮುಕ್ತಾ ಶೆಣೈಯವರ ಪುತ್ರರಾಗಿ 1950 ಫೆಬ್ರವರಿ 10ರಂದು ಜನಿಸಿದ ಇವರು ಶಂಕರನಾರಾಯಣ ಜೂನಿಯರ್ ಕಾಲೇಜಿನಲ್ಲಿ ಪಿ.ಯು.ಸಿ. ತನಕ ವಿದ್ಯಾಭ್ಯಾಸ ಪಡೆದರು. ನಂತರ ಬೈಲೂರು ರಾಮರಾಯ ಮಂಜುನಾಥ ಶ್ಯಾನುಭಾಗ್‌ರಲ್ಲಿ ಬರ್ಮಾಶೆಲ್ ಡಿಪೋದಲ್ಲಿ ಕ್ಲರ್ಕ್ ಆಗಿ ಸೇರ್ಪಡೆಗೊಂಡರು. ಇವರಿಗೆ ತಂದೆಯವರೇ ಯಕ್ಷಗಾನದ ಪ್ರಪ್ರಥಮ ಗುರುಗಳು. ನಂತರ ಹಿರಿಯಡಕ, ಪೆರ್ಡೂರು, ಮೂಲ್ಕಿ, ಸಾಲಿಗ್ರಾಮ, ಕಮಲಶಿಲೆ, ಮಂದಾರ್ತಿ, ಅಮೃತೇಶ್ವರಿ ಮೇಳಗಳಲ್ಲಿ ವೇಷಧಾರಿಗಳಾಗಿ ತಿರುಗಾಟ ನಡೆಸಿದರು. ಸುಧನ್ವ, ಶ್ರೀರಾಮ, ಕೃಷ್ಣ ಜಾಂಬವ, ಕೌರವ, ದಶರಥ, ವಾಲಿ, ರಾವಣ, ನಾರದ, ಅಕ್ರೂರ, ಋತುಪರ್ಣ, ಬಾಹುಕ ಮುಂತಾದ ಪಾತ್ರಗಳನ್ನು ನಿರ್ವಹಿಸಿ ಜನಮನ್ನಣೆ ಗಳಿಸಿದರು. ಶ್ರೀ…

Read More

ಮಂಗಳೂರು : ಕಲೆಯ ಬೆಳವಣಿಗೆಗೆ ಉತ್ತಮ ಸಂಘಟಕರು, ಕಲಾಪ್ರೇಕ್ಷಕರೂ ಬೇಕಂತೆ. ಅದರಲ್ಲೂ ನೃತ್ಯ ಕಾರ್ಯಕ್ರಮದ ಆಯೋಜನೆಗೆ ಆಯೋಜಕರಾಗಿ ನೃತ್ಯಕಲಾಸಂಸ್ಥೆಗಳೇ ಮುಂದಾದಾಗ ಆ ಪ್ರದರ್ಶನಕ್ಕೇ ಒಂದಷ್ಟು ಮೆರುಗು ಹೆಚ್ಚೇ ಎನ್ನಬಹುದು. ಹೀಗೊಂದು ಸುಂದರವಾಗಿ ಮೂಡಿ ಬಂದ ಕಾರ್ಯಕ್ರಮ ‘ನೃತ್ಯ ವಾಹಿನಿ’. ಸನಾತನ‌ ನಾಟ್ಯಾಲಯ ಮಂಗಳೂರು ಹಾಗೂ ನೃತ್ಯಾಂಗನ್ ಮಂಗಳೂರು ಎರಡೂ ನೃತ್ಯ ಸಂಸ್ಥೆಗಳು ಜಂಟಿಯಾಗಿ ನಾಲ್ಕನೇ ವರ್ಷದ ಕಾರ್ಯಕ್ರಮವನ್ನು ದಿನಾಂಕ 07 ಡಿಸೆಂಬರ್ 2025ರಂದು ಸಂಘಟಿಸಿದ್ದರು. ಈ ಬಾರಿ ಮೂರು ವಿಭಿನ್ನ ನೃತ್ಯ ಪ್ರಯೋಗಗಳನ್ನು ಸವಿಯುವ ಭಾಗ್ಯ ನೋಡುಗರದ್ದಾಗಿತ್ತು. ಮೊದಲನೆಯದಾಗಿ ನರ್ತಿಸಿದವರು ಯುವಕಲಾವಿದೆ ಅನಘ ಜಿ.ಎಸ್. ಸ್ಪಷ್ಟವಾದ ಹೆಜ್ಜೆಗಳು, ಚೆಲುವಾದ ಅಂಗಶುದ್ಧಿ ಹಾಗೂ ಪ್ರಬುದ್ದತೆಯಿಂದ ಕೂಡಿದ ಅಭಿನಯದೊಂದಿಗೆ ಕಾರ್ಯಕ್ರಮಕ್ಕೇ ಉತ್ತಮವಾದ ಚಾಲನೆಯೇ ದೊರಕಿತು. ಎರಡನೆಯದಾಗಿ ಪ್ರದರ್ಶನಗೊಂಡಿರುವುದು ‘ಪೂತನ’ ರಂಗರೂಪಾತ್ಮಕ ಪ್ರಯೋಗ. ಪುಣೆಯ ಸ್ವರದ ಭಾವೆ ಹಾಗೂ ಈಶ ಪಿಂಗ್ಳೈ ಇಬ್ಬರು ಕಲಾವಿದರ ಜೋಡಿ ರಾಕ್ಷಸಿ ಪೂತನಿಯ ಮನದ ಮಾತುಗಳನ್ನು ತೆರೆದಿಟ್ಟರು. ದೇಹ ಭಾಷೆಯನ್ನು ಬಳಸಿಕೊಂಡು, ರಂಗಭೂಮಿಯ ಚಲನೆಗಳನ್ನು ಅಳವಡಿಸಿಕೊಂಡು, ಭರತನಾಟ್ಯದ ಜತಿಗಳ ಮೂಲಕವೇ…

Read More

ಮಂಗಳೂರು : ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇದರ ಮಂಗಳೂರು ಘಟಕದ ವತಿಯಿಂದ ಮಂಗಳೂರಿನ ಕವಿ ಮನದವರಿಗೆ ಈ ತಿಂಗಳು ಮಹಿಳಾ ಸಾಹಿತ್ಯ ವಿಮರ್ಶೆಗಾಗಿ ಕನ್ನಡದ ಶಿವಶರಣೆ ಅಕ್ಕಮಹಾದೇವಿರವರ ಎರಡು ವಚನಗಳನ್ನು ಆಯ್ಕೆ ಮಾಡಿ ವಾಚನ ಮತ್ತು ಭಾವಾರ್ಥ ವ್ಯಕ್ತಪಡಿಸುವ ಮೂಲಕ ವಿಚಾರ ಸಂಕಿರಣವನ್ನು ‘ಕನ್ನಡದ ಕಂಪು ಸರಣಿ -5’ ದಿನಾಂಕ 21 ಡಿಸೆಂಬರ್ 2025 ರವಿವಾರ ಸಂಜೆ 3-00 ಗಂಟೆಗೆ ಮಂಗಳೂರು ಲಾಲ್ ಭಾಗ್ ಪಬ್ಬಾಸ್ ಎದುರು ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು 7259586907 ಈ ನಂಬರಿಗೆ ಹೆಸರು ನೊಂದಾಯಿಸಿಕೊಳ್ಳಬಹುದು.

Read More

ಮಂಗಳೂರು : ವಿದ್ಯಾರ್ಥಿಗಳಲ್ಲಿರುವ ಕಲೆಯ ಆಸಕ್ತಿಯನ್ನು ವ್ಯವಸ್ಥಿತ ರೀತಿಯಲ್ಲಿ ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ರೂಪುಗೊಂಡ ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮಗಳು ನಡೆದವು. ನಾದನೃತ್ಯ ಕಲಾಶಾಲೆಯ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶರ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವು ಕಳೆದೆರಡು ವರುಷಗಳಿಂದ ಮೂಡಿಬರುತ್ತಿದೆ. ದಿನಾಂಕ 28 ಆಗಸ್ಟ್ 2025ರಂದು ಚಿಲಿಂಬಿಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಹಾಗೂ ದಿನಾಂಕ 28 ನವೆಂಬರ್ 2025ರಂದು ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಡಾ. ಭ್ರಮರಿಯ ಶಿಷ್ಯೆಯರಾದ ಕುಮಾರಿ ಮಹಾಲಕ್ಷ್ಮೀ ಶೆಣೈ ಹಾಗೂ ಕುಮಾರಿ ಮೇಧಾ ರಾವ್ ಇವರ ವೈಯಕ್ತಿಕ ನೃತ್ಯ ಪ್ರದರ್ಶನಗಳು ಗಣ್ಯರು ಹಾಗೂ ಸಹೃದಯರ ಸಮ್ಮುಖ ನಡೆಯಿತು. ಕಲಿಕೆಯ ಹಂತಗಳಾದ ಅಧ್ಯಯನ-ಮನನ-ಧ್ಯಾನ-ಧಾರಣದ ಕೌಶಲ್ಯಗಳನ್ನು ಭರತನಾಟ್ಯದ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಈ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿತ್ತು. ಪ್ರದರ್ಶನ ನೀಡುವ ವಿದ್ಯಾರ್ಥಿಗಳು ತಮ್ಮ ಇಷ್ದದ ನೃತ್ಯಬಂಧಗಳನ್ನು ಸುಮಾರು ಒಂದು ತಾಸಿನವರೆಗೆ ನರ್ತಿಸಿ ನೆರೆದ ಸಹೃದಯರನ್ನು ರಂಜಿಸಿದರು. ಕುಮಾರಿ ಮಹಾಲಕ್ಷ್ಮೀಯು ವಿನಾಯಕ ಸ್ತುತಿಯಿರುವ ತೋಡಯ ಮಂಗಲ, ನಟೇಶ ಕೌತ್ವಂ, ಗುಮ್ಮನ…

Read More

ಮಂಗಳೂರು : ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯತಿಥಿ ದಿನಾಂಕ 29 ಡಿಸೆಂಬರ್ 2025ರಂದು ನಡೆಯಲಿದ್ದು, ಆ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನವು ವಿಶ್ವೇಶತೀರ್ಥ ಶ್ರೀಪಾದರ ಚಿತ್ರ ರಚನಾ ಸ್ಪರ್ಧೆ ಹಮ್ಮಿಕೊಂಡಿದೆ. ಅಂಚೆ ಕಾರ್ಡ್‌ನಲ್ಲಿ ಪೆನ್ಸಿಲ್ ಮೂಲಕ ಕಪ್ಪು ಬಿಳುಪು ಚಿತ್ರ ರಚನೆ, ಡ್ರಾಯಿಂಗ್‌ ಶೀಟ್‌ನಲ್ಲಿ ವರ್ಣಚಿತ್ರ ರಚನೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎಸ್‌.ಎಸ್.ಎಲ್‌.ಸಿ.ವರೆಗಿನ ವಿದ್ಯಾರ್ಥಿಗಳು ಮತ್ತು ಮುಕ್ತ ವಿಭಾಗ ಎಂಬ ವಿಭಾಗ ಮಾಡಲಾಗಿದೆ. ಆಸಕ್ತರು ತಾವು ರಚಿಸಿದ ಚಿತ್ರಗಳನ್ನು ಸ್ವವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ, ಜಾನ್ ಚಂದ್ರನ್ (ಸಂಚಾಲಕರು) ಪೇಜಾವರ ವಿಶ್ವೇಶ-ತೀರ್ಥರ ಚಿತ್ರ ರಚನಾ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ. ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು. ಈ ವಿಳಾಸಕ್ಕೆ ದಿನಾಂಕ 25 ಡಿಸೆಂಬರ್ 2025ರೊಳಗೆ ತಲುಪಿಸಬಹುದು ಎಂದು ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Read More

ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಘಟಕ, ಸುರತ್ಕಲ್ ಹೋಬಳಿ ಘಟಕ ಇವರ ಆಶ್ರಯದಲ್ಲಿ ಸುರತ್ಕಲ್ ಹೋಬಳಿ ‘ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 11 ಡಿಸೆಂಬರ್ 2025ರಂದು ಕಾಟಿಪಳ್ಳ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ವಠಾರದಲ್ಲಿ ನಡೆಯಲಿದೆ. ಪೂರ್ವಾಹ್ನ 9-30 ಗಂಟೆಗೆ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಿ. ದಯಾಕರ್ ಇವರಿಂದ ರಾಷ್ಟ್ರ ಧ್ವಜಾರೋಹಣ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರಿಂದ ಪರಿಷತ್ತಿನ ಧ್ವಜಾರೋಹಣ, ಕ.ಸಾ.ಪ. ಮಂಗಳೂರು ತಾಲೂಕು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ರೇವಣ್ಕರ್ ಇವರು ಕನ್ನಡ ಧ್ವಜಾರೋಹಣ ಹಾಗೂ ಗಣೇಶಪುರ ಧರ್ಮೇಂದ್ರ ಇವರು ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ರಂಗಭೂಮಿ ಕಲಾವಿದೆ ಗೀತಾ ಸುರತ್ಕಲ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಕರ್ಮಯೋಗಿ ಡಾ. ಹರಿಕೃಷ್ಣ ಪುನರೂರು ಇವರು ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಡಾ. ಎಂ.ಪಿ. ಶ್ರೀನಾಥ ಮತ್ತು…

Read More

ಮಂಗಳೂರು : ತುಳುಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ದಿನಾಂಕ 09 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿಯ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು.  ಈ ದಿನದ ಸಪ್ತಾಹವನ್ನು ಆತ್ಮಶಕ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಚಿತ್ತರಂಜನ್ ಬೋಳಾರ ಇವರು ದೀಪ ಪ್ರಜ್ವಲಿಸಿ “ದಾಮೋದರ ನಿಸರ್ಗರ ಹೆಸರನ್ನು ತುಳುವರೆಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ತುಳು ಭಾಷೆಯ ಉಳಿವಿಗಾಗಿ, ತುಳು ಸಾಹಿತ್ಯಗಳ ಪ್ರಕಟಣೆ, ನಾಟಕಗಳ ಪ್ರದರ್ಶನ ಇಲ್ಲೆಲ್ಲಾ ನಿಸರ್ಗರು ಮತ್ತೆ ಮತ್ತೆ ನೆನಪಾಗುತ್ತಾರೆ. ಯಕ್ಷಗಾನ ಅಭಿಮಾನಿಯಾಗಿರುವ ಅವರ ನೆನಪಲ್ಲಿ ತುಳು ತಾಳಮದ್ದಳೆ ಸಪ್ತಾಹ ನಡೆಸುತ್ತಿರುವ ತುಳುಕೂಟ ಹಾಗೂ ಸರಯೂ ಸಂಸ್ಥೆಯ ಕಾರ್ಯ ಸ್ತುತ್ತರ್ಹ” ಎಂದು ಹೇಳಿದರು.  ಸುಧಾಕರ ರಾವ್ ಪೇಜಾವರ, ಕಲಾವತಿ ಸುರತ್ಕಲ್, ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ದೀಪ್ತಿ ಭಟ್, ಲಲಿತಾ, ಜಯಂತಿ ಹೊಳ್ಳ, ನಾಟಕಕಾರ ನಾಗೇಶ ದೇವಾಡಿಗ ಉಪಸ್ಥಿತರಿದ್ದರು.…

Read More