Author: roovari

ಧಾರವಾಡ : ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ದಿನಾಂಕ 22 ಡಿಸೆಂಬರ್ 2025ರಂದು ಸಾಧನಕೇರಿಯ ‘ಚೈತ್ರ’ದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಆನಂದಕಂದರ ಐತಿಹಾಸಿಕ ಕಾದಂಬರಿಗಳು’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಖ್ಯಾತ ವಿಮರ್ಶಕ, ಚಿಂತಕ ಡಾ. ಶ್ಯಾಮಸುಂದರ ಬಿದರಕುಂದಿಯವರು “ಆನಂದಕಂದರ (ದಿ. ಡಾ. ಬೆಟಗೇರಿ ಕೃಷ್ಣಶರ್ಮರ) ಐತಿಹಾಸಿಕ ಕಾದಂಬರಿ ತ್ರಿವಳಿಗಳು ವಿಜಯನಗರ ಸಾಮ್ರಾಜ್ಯದ 14ನೇ ಶತಮಾನದ ಮೂರು ತಲೆಮಾರಿನ ಕಥಾನಕವನ್ನು ನಮ್ಮಿಂದಿನ ರಾಜಕೀಯ-ಧಾರ್ಮಿಕ ಆಗುಹೋಗುಗಳನ್ನೇ ನೆನಪಿಸುವುದರ ಜೊತೆಗೆ ನಮ್ಮಿಂದಿನ ಇತಿಹಾಸದ ಪಾಠಗಳನ್ನು ಕಲಿಸುವಂತಿವೆ. ಕೃಷ್ಣಶರ್ಮರ ಸಮಕಾಲೀನ ಇತಿಹಾಸ ಪ್ರಜ್ಞೆಯಿಂದ ಒಡಮೂಡಿದ ಮಲ್ಲಿಕಾರ್ಜುನ, ರಾಜಯೋಗಿ ಮತ್ತು ಅಶಾಂತಿ ಪರ್ವ ಈ ಮೂರು ಐತಿಹಾಸಿಕ ಕಾದಂಬರಿಗಳು ಅಸಾಧಾರಣ ಜ್ಞಾನವನ್ನು, ಸೂಕ್ಷ್ಮ ಸಂವೇದನೆಗಳನ್ನು ಓದುಗರಲ್ಲಿ ಹುಟ್ಟಿಸುತ್ತವೆ. ಇವುಗಳನ್ನು ಪುನ: ಪ್ರಕಟಿಸುವ ಮೂಲಕ ಓದುಗರಲ್ಲಿ ಸದಭಿರುಚಿಯನ್ನು ಬೆಳೆಸಬೇಕಾಗಿದೆ” ಎಂದು ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನೋರ್ವ ಹಿರಿಯ ಚಿಂತಕ ಪ್ರೊ. ಹರ್ಷ ಡಂಬಳ ಅವರು ಮಾತನಾಡಿ “ನಿಜವಾಗಿಯೂ ಕವಿಭೂಷಣರಾಗಿದ್ದ,…

Read More

ಉಡುಪಿ : ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳ ಕಲಾತಂಡವು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಸಾರ್ವಜನಿಕ ಅರಿವು ಮತ್ತು ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ, ಕರ್ನಾಟಕ ರಾಜ್ಯ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರ ಸಂಘ, ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರ ಸಂಘ ಮಣಿಪಾಲ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಮಹಿಳಾ ವೇದಿಕೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಜೆ.ಸಿ.ಐ. ಉಡುಪಿ ಸಿಟಿ ಸಹಯೋಗದಲ್ಲಿ ಉಡುಪಿ ಜಿಲ್ಲೆಯ 30 ಕಡೆ ಯಶಸ್ವಿಯಾಗಿ ಪ್ರದರ್ಶಿಸಿದ ತಾಯಿ ಮತ್ತು ಮಕ್ಕಳ ಆರೋಗ್ಯ, ಕ್ಷಯ ರೋಗ ಮತ್ತು ಮಾನಸಿಕ ಖಿನ್ನತೆ ಕುರಿತಾದ ಮಾಹಿತಿ ನೀಡುವ ಬೀದಿನಾಟಕವು ದಿನಾಂಕ 23 ಡಿಸೆಂಬರ್ 2025ರಂದು ಉಡುಪಿಯ ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ಪ್ರದರ್ಶಿಸಲ್ಪಟ್ಟು ಸಮಾಪನಗೊಂಡಿತು. ಈ ಸಂದರ್ಭದಲ್ಲಿ…

Read More

ಮಂಗಳೂರು : ಅಲೆವೂರಾಯ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ದಿ. ಲಕ್ಷ್ಮೀನಾರಾಯಣ ಅಲೆವೂರಾಯರ ಸಂಸ್ಮರಣೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ದಿನಾಂಕ 25, 26 ಮತ್ತು 27 ಡಿಸೆಂಬರ್ 2025ರಂದು ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ‘ಯಕ್ಷ ತ್ರಿವೇಣಿ’ಯಾಗಿ ಆಚರಿಸಲ್ಪಡುತ್ತದೆ. ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ಕಾಲ ಅಂದರೆ 50 ವರ್ಷಗಳ ತಿರುಗಾಟ ನಡೆಸಿದ ‘ಯಕ್ಷ ಸಾಧಕರು’ ಸರಣಿಯ ಶ್ರವಣ ಕಾರಂತ ಕುಡುಪು, ವಸಂತ ಗೌಡ ಕಾಯರ್ತ್ಕಡ ಹಾಗೂ ಸಂಘಟಕ ಸತೀಶ ಅಡಪ ಸಂಕಬೈಲು ಇವರಿಗೆ ಪ್ರತಿಷ್ಠಾನದ ಗೌರವ ಸನ್ಮಾನವೂ ನಡೆಯಲಿದೆ. ದಿನಾಂಕ 25 ಡಿಸೆಂಬರ್ 2025ರಂದು ಶ್ರೀ ಕ್ಷೇತ್ರದ ಮೊಕ್ತೇಸರ ಅರುಣ್ ಐತಾಳ್ ಇವರು ದೀಪ ಪ್ರಜ್ವಲಿಸಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮದ ಬಳಿಕ ‘ಮಂಡೋದರಿ ಪರಿಣಯ’ ಯಕ್ಷಗಾನ ನಡೆಯಲಿದೆ. ದಿನಾಂಕ 26 ಡಿಸೆಂಬರ್ 2025ರಂದು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ದೀಪ ಪ್ರಜ್ವಲಿಸಲಿದ್ದು, ‘ಶಾಂಭವಿ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ದಿನಾಂಕ 27 ಡಿಸೆಂಬರ್ 2025ರಂದು ಮಂಗಳಾದೇವಿಯ ವೇದಮೂರ್ತಿ ಭಾಸ್ಕರ…

Read More

ಉಡುಪಿ : ಸಾಹಿತಿ, ನಾಟಕಕಾರ, ರಂಗನಟ, ದೊಡ್ಡಣಗುಡ್ಡೆ ನಿವಾಸಿ ಪ್ರೊ. ರಾಮದಾಸ್ (86) ಇವರು ದಿನಾಂಕ 23 ಡಿಸೆಂಬರ್ 2025ರ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಅವರು ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಉಡುಪಿ ರಂಗಭೂಮಿಯ ಮುಖ್ಯ ಕಲಾವಿದರಾಗಿ ವೀರ ಪುರೂರವ, ಸಂಕ್ರಾಂತಿ, ಹರಕೆಯ ಕುರಿ, ಧರ್ಮಚಕ್ರ, ಸಾಕ್ಷಾತ್ಕಾರ ನಾಟಕ ಹಾಗೂ ಸದಾನಂದ ಸುವರ್ಣ ನಿರ್ದೇಶನದ ಗುಡ್ಡೆದ ಭೂತ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಲೆದಂಡ, ನಾಯಿಕತೆ, ಸೂರ್ಯ ಶಿಕಾರಿ ನಾಟಕ ನಿರ್ದೇಶನ ಮಾಡಿದ್ದರು. ಸಾಕ್ಷಾತ್ಕಾರ ನಾಟಕ ಕೃತಿಗೆ ಕರ್ನಾಟಕ ನಾಟಕ ಅಕಾಡೆಮಿಯ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿತ್ತು. ಸಂಕ್ರಾಂತಿ ನಾಟಕದ ಉಜ್ಜ, ಸೂರ್ಯ ಶಿಕಾರಿಯ ರಾಜ, ಹರಕೆಯ ಕುರಿ ನಾಟಕದ ರಾಜಕಾರಣಿ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 7 ಕವನ ಸಂಕಲನ, 3 ಕಾದಂಬರಿ, 15…

Read More

ಮಂಗಳೂರು : ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಗುರು ಡಾ. ಭ್ರಮರಿ ಶಿವಪ್ರಕಾಶರ ನಿರ್ದೇಶನದಲ್ಲಿ ಆಯೋಜಿಸುತ್ತಿರುವ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಈ ಬಾರಿ ಕುಮಾರಿ ವರ್ಣಿಕಾ ಆಚಾರ್ಯ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವರ್ಣಿಕಾ ಕಳೆದ ಎಂಟು ವರುಷಗಳಿಂದ ಡಾ. ಭ್ರಮರಿಯವರಲ್ಲಿ ನೃತ್ಯಾಭ್ಯಾಸಗೈಯುತ್ತಿದ್ದಾಳೆ. ಕಾವೂರಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ವಠಾರದಲ್ಲಿರುವ ಶ್ರೀ ರವಿಚಂದ್ರನ್ ಸಭಾಭವನದಲ್ಲಿ ದಿನಾಂಕ 25 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಶ್ರೀಮಠದ ಆಡಳಿತ ವ್ಯವಸ್ಥಾಪಕರಾದ ಶ್ರೀ ಸುದರ್ಶನ ಬನ್ನಿಂತಾಯರು ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದು, ಹೈದರಾಬಾದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ವಿದ್ಯಾಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ವಸಂತಿ ಸಿರಿಗುರಿಯವರು ಶುಭಹಾರೈಸಲಿದ್ದಾರೆ. ಸಹೃದಯರಿಗೆ ಮುಕ್ತ ಪ್ರವೇಶವಿದೆ.

Read More

ಮಂಗಳೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಇದರ ದಶಮಾನ ವರ್ಷ ಸಂಭ್ರಮಾಚರಣೆ ಪ್ರಯುಕ್ತ ದಿನಾಂಕ 22 ಡಿಸೆಂಬರ್ 2025ರಂದು ತಾಳಮದ್ದಳೆ ಕಾರ್ಯಕ್ರಮವು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ‘ಶ್ರೀ ರಾಮ ನಿರ್ಯಾಣ’ ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಚೆಂಡೆ ಮದ್ದಳೆಗಳಲ್ಲಿ ಶಿವಪ್ರಸಾದ್ ಪುನರೂರು, ಕೆ. ರಾಮ ಹೊಳ್ಳ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಲಕ್ಷ್ಮಣ), ಹರಿಣಾಕ್ಷಿ ಜೆ. ಶೆಟ್ಟಿ (ದೂರ್ವಾಸ), ಸತ್ಯಭಾಮ ಕಾರಂತ (ಕಾಲಪುರುಷ) ಸಹಕರಿಸಿದರು. ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಸಂಘದ ಸಂಚಾಲಕರಾದ ವಾಸುದೇವ ರಾವ್ ಸ್ವಾಗತಿಸಿ, ಅಧ್ಯಕ್ಷೆ ಸುಲೋಚನಾ ವಿ. ರಾವ್ ವಂದಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಂಜನೇಯ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತು ಸಂಘದ ಹಿರಿಯ ಕಲಾವಿದೆ ಶುಭಾ ಅಡಿಗ ದಶಮಾನ…

Read More

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಶಿಷ್ಯ ವೃಂದ ಇವರ ಸಹಕಾರದೊಂದಿಗೆ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಸುರತ್ಕಲ್ ಇದರ ‘ನಾಟ್ಯಾಂಜಲಿ ನಲವತ್ತರ ನಲಿವು’ 31ರಿಂದ 40ನೇ ಸರಣಿ ಕಾರ್ಯಕ್ರಮವನ್ನು ದಿನಾಂಕ 25 ಡಿಸೆಂಬರ್ 2025ರಿಂದ 03 ಜನವರಿ 2026ರವರೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 25 ಡಿಸೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 31ನೇ ಸರಣಿ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ರಸಿಕ ಆರ್ಟ್ಸ್ ಫೌಂಡೇಶನ್ ಇದರ ಕಲಾವಿದೆಯರಾದ ರಸಿಕ ಕಿರಣ್, ಅರ್ಚನಾ ಎಚ್.ಆರ್., ಶ್ರದ್ಧಾ ಶ್ರೀನಿವಾಸ್, ಹರ್ಷಿನಿ ಸಿ., ದಿವ್ಯ ಪಿ., ಭಾವನಾ ಸಿ.ಜೆ. ಇವರಿಂದ ‘ಭರತ ಪಲ್ಲವಿ’ ಹಾಗೂ ವಿದುಷಿ ಪ್ರತಿಭಾ ರಾಮಸ್ವಾಮಿ ಮತ್ತು ವಿದುಷಿ ಸಂಧ್ಯಾ ಉಡುಪ ಬೆಂಗಳೂರು…

Read More

‘ಸುಳ್ಳೇ ನಮ್ಮನೆ ದೇವರು’ ಇದು ಕೆ.ವಿ. ಭಟ್ ಕುದಬೈಲ್ ಇವರ ಇತ್ತೀಚಿನ ನಾಟಕ ಕೃತಿ. ಇದೊಂದು ವಿಡಂಬನಾತ್ಮಕ ಸರಳ ಸುಂದರ ನಾಟಕ. ನಮ್ಮ ವರ್ತಮಾನದ ಬದುಕು ಹಿಡಿದಿರುವ ದಾರಿ, ಪತನಮುಖಿ ಸಮಾಜ ಸಂಸ್ಕೃತಿ, ಮಾತು ಕೃತಿಗಳ ನಡುವೆ ಎದ್ದು ಕಾಣುವ ವಿರೋಧಾಭಾಸ, ಸಾಂಪ್ರತ ಜೀವನಶೈಲಿ, ನಿರುದ್ಯೋಗ, ಭ್ರಷ್ಟಾಚಾರ, ಸಂಶಯ ಪ್ರವೃತ್ತಿ ಮೊದಲಾದ ಅಂಶಗಳು ಇಲ್ಲಿ ವೈನೋದಿಕ ನೆಲೆಯಲ್ಲಿ ಜಿಜ್ಞಾಸೆಗೊಳಗಾಗಿವೆ. ಈ ನಾಟಕದಲ್ಲಿ ಎದ್ದು ಕಾಣುವುದು ಹಾಸ್ಯ ಪ್ರಜ್ಞೆ, ವ್ಯಂಗ್ಯ ದೃಷ್ಟಿ ಹಾಗೂ ವಿಚಾರ ಪರತೆ. ವಿಡಂಬನೆಯ ಮೂಲಕ ಸಮಕಾಲಿನ ಸಮಾಜದ ಆಗುಹೋಗುಗಳನ್ನು ವಿಶಿಷ್ಟವಾಗಿ ಇಲ್ಲಿ ವಿಶ್ಲೇಷಣೆಗೆ ಗುರಿಪಡಿಸಲಾಗಿದೆ. ಮೇಲುನೋಟಕ್ಕೆ ಇದು ಹಾಸ್ಯ ಪ್ರಧಾನ ನಾಟಕ ಅನಿಸಿದರೂ ಆಳದಲ್ಲಿ ಗಂಭೀರ ಚಿಂತನೆ ಇರುವುದನ್ನು ನಾವು ಕಾಣಬಹುದಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ನಡೆಯುವ ನಾನಾ ಪ್ರಸಂಗಗಳಿಗೆ ಹಾಸ್ಯದ ಲೇಪ ನೀಡಿ ಸಮಾಜದ ವಿಡಂಬನೆಯ ಜತೆಗೆ ಮನರಂಜನೆಯನ್ನು ನೀಡುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ಇಲ್ಲಿ ಲೇಖಕರ ಚಿಕಿತ್ಸಕ ದೃಷ್ಟಿಕೋನ ಎದ್ದು ಕಾಣುತ್ತದೆ ಈ ನಾಟಕ ಬದುಕಿಗೆ…

Read More

ಬೆಂಗಳೂರು : ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನವು ರಾಜ್ಯಮಟ್ಟದ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗಾಗಿ ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ರೂ.25,000/- ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಾದಂಬರಿಗಳು 2025ರಲ್ಲಿ ಪ್ರಕಟವಾಗಿರಬೇಕು. ಕಾದಂಬರಿಯ ಮೂರು ಪ್ರತಿಗಳನ್ನು ದಿನಾಂಕ 30 ಜನವರಿ 2026ರ ಒಳಗೆ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ತಿಳಿಸಿದ್ದಾರೆ. ವಿಳಾಸ : ಅಧ್ಯಕ್ಷರು, ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ, ನಂ.118, ‘ಹೊಂಬೆಳಕು’, 5ನೇ ಕ್ರಾಸ್, ಒಂದನೇ ಬ್ಲಾಕ್, ಎಚ್.ಎಂ.ಟಿ. ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು – 560073, ಮಾಹಿತಿಗೆ : 96860 73837, 77603 50244.

Read More

ಬ್ರಹ್ಮಾವರ : ಉಡುಪಿ ಅಮ್ಮುಂಜೆಯ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಅಂಗವಾಗಿ ‘ನೃತ್ಯ ಪರಂಪರಾ’ ಭರತನಾಟ್ಯ ಪ್ರಾತ್ಯಕ್ಷಿಕೆಯ ಉದ್ಘಾಟನ ಕಾರ್ಯಕ್ರಮವು ದಿನಾಂಕ 22 ಡಿಸೆಂಬರ್ 2025ರಂದು ಕೆ.ಪಿ.ಎಸ್. ಪ್ರೌಢಶಾಲೆ ಬ್ರಹ್ಮಾವರದಲ್ಲಿ ನಡೆಯಿತು. ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ…1 ಇದರ ಅಂಗವಾಗಿ ‘ನೃತ್ಯ ಪರಂಪರಾ’ ಸಂಸ್ಕೃತಿ-ಆರೋಗ್ಯ-ಶಿಕ್ಷಣ ಎಂಬ ವಿಷಯದಲ್ಲಿ ಭರತನಾಟ್ಯ ಪ್ರಾತ್ಯಕ್ಷಿಕೆ ಪ್ರಸ್ತುತಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಉಡುಪಿ ಇಲಾಖೆಯ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವು ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ನೃತ್ಯ ಪರಂಪರೆ ಬಗ್ಗೆ ಮಾತನಾಡುತ್ತಾ “ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಎಷ್ಟು ಮುಖ್ಯವೋ ಅದೇ ರೀತಿ ಈ ಕಲೆ ಸಂಸ್ಕೃತಿಯ ಕಲಿಕೆ ಕೂಡ ಅತ್ಯವಶ್ಯ. ಪುರಾಣ ಕಥೆಗಳ ಅರಿವಿನ ಭರತನಾಟ್ಯದಿಂದ ಧರ್ಮ ಸಂಸ್ಕೃತಿ ಉಳಿವು ಸಾಧ್ಯ” ಎಂಬ ಸಂದೇಶ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ನಿರ್ದೇಶಕರು ಹಾಗೂ ವಿದ್ವಾನ್ ಭವಾನಿಶಂಕರ್ ಅವರ ಗುರುಗಳಾದ ವಿದುಷಿ ವೀಣಾ ಎಂ.…

Read More