Subscribe to Updates
Get the latest creative news from FooBar about art, design and business.
Author: roovari
ಬೆಳಗಾವಿ : ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ, ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಮತ್ತು ಕನ್ನಡ ಭವನ ಬೆಳಗಾವಿ ಇವರ ಆಶ್ರಯದಲ್ಲಿ ‘ನಾಟ್ಯಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ’ವನ್ನು ದಿನಾಂಕ 07ರಿಂದ 09 ನವೆಂಬರ್ 2025ರವರೆಗೆ ಪ್ರತಿದಿನ 6-30 ಗಂಟೆಗೆ ಬೆಳಗಾವಿಯ ರಾಮದೇವ ಹೊಟೇಲ್ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 07 ನವೆಂಬರ್ 2025ರಂದು ಬೆಳಗಾವಿಯ ರಂಗಸಂಪದ ಇವರಿಂದ ಸವಿತಾ ಭೈರಪ್ಪ ಇವರ ನಿರ್ದೇಶನದಲ್ಲಿ ‘ನಕ್ಷತ್ರ ಯಾತ್ರಿಕರು’, ದಿನಾಂಕ 08 ನವೆಂಬರ್ 2025ರಂದು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ ಝಕೀರ ನದಾಫ ಇವರ ನಿರ್ದೇಶನದಲ್ಲಿ ‘ಹಾಲು ಬಟ್ಟಲದೊಳಗಿನ ಪಾಲು’ ಮತ್ತು ದಿನಾಂಕ 09 ನವೆಂಬರ್ 2025ರಂದು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ ಝಕೀರ ನದಾಫ ಇವರ ನಿರ್ದೇಶನದಲ್ಲಿ ‘ನೆಲಮುಗಿಲು’ ನಾಟಕ ಪ್ರದರ್ಶನಗೊಳ್ಳಲಿದೆ.
ಹೇರಿಕುದ್ರು : ಶ್ರೀ ಮಹಾಗಣಪತಿ ಯಕ್ಷೋತ್ಸವ ಸಮಿತಿ ಹೇರಿಕುದ್ರು ಇವರ ಸಂಯೋಜನೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಯಕ್ಷಹಬ್ಬ ಹೇರಿಕುದ್ರು 2025’ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 05ರಿಂದ 08 ನವೆಂಬರ್ 2025ರಂದು ಪ್ರತಿ ದಿನ ಸಂಜೆ 7-00 ಗಂಟೆಗೆ ಹೇರಿಕುದ್ರು ಶ್ರೀ ಮಹಾಗಣಪತಿ ಮಾನಸ ಮಂದಿರದಲ್ಲಿ ಆಯೋಜಿಸಲಾಗಿದೆ. ದಿನಾಂಕ 05 ನವೆಂಬರ್ 2025ರಂದು ಶ್ರೀಕಾಂತ್ ಕಲ್ಕೂರ್, ಸಂತೋಷ್ ಶೀರೂರ್, ಪ್ರವೀಣ್ ಬಾಳೆಕೆರೆ, ವಿಘ್ನೇಶ್ ಗಂಗೊಳ್ಳಿ, ವಿನಯ ಹಟ್ಟಿಯಂಗಡಿ ಇವರುಗಳಿಗೆ ‘ಯಕ್ಷಸಿಂಚನ ಪ್ರಶಸ್ತಿ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಯಕ್ಷಕಲ್ಪ ಕಮಲಶಿಲೆ ಇವರಿಂದ ‘ಸಹ್ಯಾದ್ರಿ ಶಿಲೆ’, ದಿನಾಂಕ 06 ನವೆಂಬರ್ 2025ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಲಿ ಹೇರಿಕುದ್ರು ಇವರಿಂದ ಯಕ್ಷ ತಪಸ್ವಿ ಮಹಾಬಲ ಹೇರಿಕುದ್ರು ವಿರಚಿತ ‘ನಾಗ ನಮನ’, ದಿನಾಂಕ 07 ನವೆಂಬರ್ 2025ರಂದು ಗೆಜ್ಜೆನಾದ ಯಕ್ಷಗಾನ ಕಲಾಮಂಡಳಿ ಕುಂದಾಪುರ ಇವರಿಂದ ದಿನೇಶ್ ಕೊಡವೂರು ವಿರಚಿತ ‘ಮಧುರ ಮಾಂಗಲ್ಯ’ ಮತ್ತು ದಿನಾಂಕ 08 ನವೆಂಬರ್ 2025ರಂದು ಯಕ್ಷಕಲಾ ಸಂಘ ಗುಲ್ವಾಡಿ ಇವರಿಂದ ನಾಗೇಶ್ ಗುಲ್ವಾಡಿ…
ಬೆಂಗಳೂರು : ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯು ಅರು ಕ್ರಿಯೇಶನ್ಸ್ ಮತ್ತು ಬುಕ್ ಬ್ರಹ್ಮದ ಸಹಯೋಗದೊಂದಿಗೆ ಆಯೋಜಿಸಿದ್ದ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2025ರಂದು ಬೆಂಗಳೂರಿನ ಚಾಮರಾಜಪೇಟೆಯ ಕ.ಸಾ.ಪ. ಆವರಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಸಾಹಿತಿ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ “ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಬರಬೇಕು. ಯುವಜನರು ಸಾಹಿತ್ಯಾಸಕ್ತಿ ಬೆಳೆಸಿಕೊಂಡರೆ ಮಾತ್ರ ಸಾಹಿತ್ಯದ ಉಳಿವು. ಸರ್ಕಾರವು ಪುಸ್ತಕಗಳನ್ನು ಕೊಂಡು ಪ್ರಕಾಶಕರು ಮತ್ತು ಲೇಖಕರನ್ನು ಬೆಂಬಲಿಸಬೇಕು” ಎಂದು ಅಭಿಪ್ರಾಯಪಟ್ಟರು. ಹೊಸ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತಿರುವ ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ ಪ್ರಯತ್ನವು ಸ್ವಾಗತಾರ್ಹ ಎಂದು ಲೇಖಕಿ ಮೇಘನ ಸುಧೀಂದ್ರ ಇವರು ಅಭಿಪ್ರಾಯ ಹಂಚಿಕೊಂಡರೆ, ಪ್ರಕಟಣೆಯಾಗಿರುವ ಕೃತಿಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿಯೂ, ಆಸಕ್ತಿದಾಯಕವೂ ಆಗಿವೆಯೆಂದು ಕೃತಿ ಪರಿಚಯ ಮಾಡಿದ ಲೇಖಕಿ ನಿವೇದಿತಾ ಎಚ್.ರವರು ಅಭಿಪ್ರಾಯಪಟ್ಟರು. ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯು ಉಷಾ ರಾಣಿ ಟಿ.ಎನ್., ಗಿರಿಜಾ…
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಪರಂಪರೆ 350 ವರ್ಷಗಳ ಸುದೀರ್ಘ ಇತಿಹಾಸ, ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವುದು ಸ್ತುತ್ಯಾರ್ಹ. ಈ ಕಲೆಯ ಭವಿಷ್ಯತ್ತಿನ ಭದ್ರ ಬುನಾದಿಗಾಗಿ ಹುಟ್ಟು ಹಾಕಿರುವ ಸಂಸ್ಥೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ದಿನಾಂಕ 29 ಅಕ್ಟೋಬರ್ 2025ರಂದು ಪರಮಾದರಣೀಯ ಶ್ರೀ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಚಿತ್ತೈಸಿ, ತಮ್ಮ ಅಮೃತ ಹಸ್ತದಿಂದ ‘ಗೊಂಬೆ ಮ್ಯೂಜಿಯಂ’ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೆಂಚುರಿ ಬಿಲ್ಡರ್ಸ್ ಇದರ ಆಡಳಿತ ನಿರ್ದೇಶಕರಾದ ಡಾ. ಪಿ. ದಯಾನಂದ ಪೈ ಹಾಗೂ ಪತ್ನಿ ಶ್ರೀಮತಿ ಮೋಹಿನಿ ಡಿ. ಪೈ ದಂಪತಿಗಳು ಪಾಲ್ಗೊಂಡು ಗೊಂಬೆಯಾಟದ ಉಳಿವಿಗಾಗಿ ತಮ್ಮಿಂದಾದ ಪ್ರೋತ್ಸಾಹ ನೀಡುತ್ತೇವೆ ಅಂತ ಆಶ್ವಾಸನೆ ನೀಡಿದರು. ಜಿ.ಎಸ್.ಬಿ. ಸಮಾಜದ ಹಲವಾರು ಗಣ್ಯರೂ ನೆರೆದಿದ್ದರು. ತದನಂತರ ಭಾಸ್ಕರ್ ಕೊಗ್ಗ ಕಾಮತ್ ನೇತೃತ್ವದಲ್ಲಿ ನಡೆದ ಗೊಂಬೆಯಾಟ ಪ್ರಾತ್ಯಕ್ಷಿಕೆಯನ್ನೂ ಶಾಂತ ಚಿತ್ತದಿಂದ ನೋಡಿ ಹರಸಿ, ಹಾರೈಸಿದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ ಭಂಡಾರ್ಕಾರ್…
ಮಂಗಳೂರು : ದಿನಾಂಕ 02 ನವೆಂಬರ್ 2025ರಂದು ಕಲಾಂಗಣದಲ್ಲಿ ಅವಳಿ ಸಂಭ್ರಮ – 21ನೇ ಕಲಾಕಾರ್ ಪುರಸ್ಕಾರ ಹಾಗೂ 287ನೇ ತಿಂಗಳ ವೇದಿಕೆ. ಕೊಂಕಣಿ ರಂಗಭೂಮಿಗೆ ಹಿರಿಮೆ ತಂದುಕೊಟ್ಟ, ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ರಂಗದಲ್ಲೂ ತಮ್ಮ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ಗೆದ್ದ, ‘ಕಾಸರಗೋಡು ಚಿನ್ನಾ’ ಎಂದೇ ಖ್ಯಾತರಾದ ಶ್ರೀನಿವಾಸ ರಾವ್ ಎಸ್. ಇವರಿಗೆ 21ನೇ ಕಲಾಕಾರ್ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಕಾರ್ವಾಲ್ಹೊ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ ಈ ಕಲಾಕಾರ್ ಪುರಸ್ಕಾರವನ್ನು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಇವರು ಹಸ್ತಾಂತರಿಸಿದರು. ಈ ಪ್ರಶಸ್ತಿಯು ಶಾಲು, ಹಾರ, ಫಲ-ತಾಂಬೂಲ, ಸ್ಮರಣಿಕೆ ಮತ್ತು ರೂ.50,000/- ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಮತ್ “ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಕೊಂಕಣಿ ಸಮುದಾಯವು ಬಹು ದೊಡ್ಡ ಪಾತ್ರವನ್ನು ವಹಿಸಿದೆ. ಇದರಲ್ಲಿ ಕಾಸರಗೋಡು ಚಿನ್ನಾ ಅವರಂತಹ ನಾಟಕಕಾರರ ಮತ್ತು ಎರಿಕ್ ಒಝಾರಿಯೊ ಅವರಂತಹ ಸಂಗೀತಗಾರರ ಕೊಡುಗೆಗಳು ಮಹತ್ತರದ್ದಾಗಿವೆ. ಈಗ ಲೋಕಸಭೆಯಲ್ಲೂ ಕೊಂಕಣಿ…
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿಯವರು ಅನಿಕೇತನ ಕನ್ನಡ ಬಳಗ ಮತ್ತು ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟಿನ ಸಹಕಾರದಲ್ಲಿ ದಿನಾಂಕ 08 ನವೆಂಬರ್ 2025ರಂದು ಶನಿವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು, ಶರಣ ಸಂಸ್ಕೃತಿ ಚಿಂತಕಿ ಶ್ರೀಮತಿ ಪುಷ್ಪಾ ಬಸವರಾಜ ಬಣಕಾರ್ ಇವರ ಸರ್ವಾಧ್ಯಕ್ಷತೆಯಲ್ಲಿ ‘ರಾಜ್ಯ ಮಟ್ಟದ ಆರನೇ ಮಹಿಳಾ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ 2025’ವನ್ನು ಏರ್ಪಡಿಸಲಾಗಿದೆ. ಸಮಾವೇಶವನ್ನು ಹಿರಿಯ ಲೇಖಕಿ ಡಾ. ಕೆ. ಷರೀಫಾ ಇವರು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡರು 10 ಮಂದಿ ಸಾಧಕರಿಗೆ ‘ಗಾಂಧಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡುವರು. ನಂತರ ನಡೆಯುವ ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ಕುಂಚ ಕಲಾವಿದೆ ಶ್ರೀಮತಿ ಶಾಂತಿ ವಾಸು ವಹಿಸುವರು, ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಲೇಖಕಿ ಇಂದಿರಾ ಕೃಷ್ಣಪ್ಪ ಇವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಮಂದಿ ಮಹನೀಯರಿಗೆ ‘ಬಿಎಂಶ್ರೀ ಪುಸ್ತಕ ಪ್ರಶಸ್ತಿ’…
ಬೆಳಗಾವಿ : ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರ (ಹಳೆ ರೀಝ ಟಾಕೀಜ್)ದಲ್ಲಿ ದಿನಾಂಕ 02 ನವೆಂಬರ್ 2025 ರವಿವಾರದಂದು ಬೆಂಗಳೂರಿನ ರಂಗಶಂಕರ ಸಹಯೋಗದೊಂದಗೆ ಬೆಳಗಾವಿಯ ರಂಗಸಂಪದ ತಂಡದವರು ಅಭಿನಯಿಸಿರುವ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನಗೊಂಡಿತು. ನಕ್ಷತ್ರ ಯಾತ್ರಿಕರು ಇದೊಂದು ವಿಭಿನ್ನ ರೀತಿಯ ನಾಟಕ. ಹಲವಾರು ನಾಟಕಗಳಿಂದ ಪ್ರೇಕ್ಷಕರನ್ನು ನಕ್ಕು ಹಗುರಾಗಿಸಿದ ರಂಗ ಸಂಪದ ತಂಡ ‘ನಕ್ಷತ್ರ ಯಾತ್ರಿಕರು’ ನಾಟಕದಿಂದ ಅತ್ತು ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳುವಂತೆ ಮಾಡುತ್ತದೆ. ಹೊಟ್ಟೆಪಾಡಿಗಾಗಿ ಅಲಿಯುವ ಜನರ ದಾರುಣ ಜೀವನ ಚಿತ್ರಣವೇ ‘ನಕ್ಷತ್ರ ಯಾತ್ರಿಕರು’ ನಾಟಕದ ಮುಖ್ಯ ಕಥಾವಸ್ತು. ಕಾರ್ಮಿಕ ಕುಟುಂಬದ ಹೊಟ್ಟೆ ನೋವಿನಿಂದ ಬಳಲುತ್ತಿರುವ ಹೆಣ್ಣಿನ ಶರಣವ್ವನ ಪಾತ್ರವನ್ನು ಮಾಡಿದ ಉಜ್ವಲಾ ಪವಾರ ರಂಗದ ಮೇಲೆ ಬಂದೊಡನೆ ಇವರದ್ದು ಅಭಿನಯವೋ ನಿಜವಾಗಲೂ ನೋವನ್ನು ಅನುಭವಿಸುತ್ತಿರುವವರೋ ಎಂಬ ಸಂಶಯವನ್ನುಂಟು ಮಾಡುವಂಥ ಗಂಭೀರ ವಾತಾವರಣ ನಿರ್ಮಿಸಿ ಬಿಡುತ್ತಾರೆ. ಈ ಪಾತ್ರದ ಸಾವನ್ನು ಸೂಚ್ಯವಾಗಿ ಹೇಳಬಹುದಿತ್ತಾದರೂ ಅದೇಕೋ ನಿರ್ದೇಶಕರು ಬೆಳೆಸಿದಂತೆ ಅನ್ನಿಸುತ್ತದೆ. ಪಾತ್ರದಲ್ಲಿ ಕಾಣಿಸಿಕೊಂಡ ಸ್ನೇಹಾ ಕುಲಕರ್ಣಿಯವರ ಅಭಿನಯ ತುಂಬ…
ಬೆಂಗಳೂರು : ಬೆಂಗಳೂರು ಏಷಿಯನ್ ಥಿಯೇಟರ್ ಇದರ ವತಿಯಿಂದ ಒಡನಾಡಿ ಬಂಧು ಸಿ.ಜಿ.ಕೆ. – 75 ಮಾಸದ ನೆನಪು ಸರಣಿ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆಯನ್ನು ದಿನಾಂಕ 05 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಏಷಿಯನ್ ಥಿಯೇಟರ್ ಇದರ ಅಧ್ಯಕ್ಷರಾದ ಸೂರ್ಯಕಾಂತ ಗುಣಕಿಮಠ ಇವರು ವಹಿಸಲಿದ್ದು, ಹಿರಿಯ ರಂಗ ಸಂಘಟಕರಾದ ಶ್ರೀನಿವಾಸ್ ಜಿ. ಕಪ್ಪಣ್ಣ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಾಟಕಕಾರರಾದ ಹೂಲಿಶೇಖರ್ ಮತ್ತು ಆಕೃತಿ ಕನ್ನಡ ಪತ್ರಿಕೆಯ ಸಂಪಾದಕಿ ಶ್ರೀಮತಿ ಶಾಲಿನಿ ಪ್ರದೀಪ್ ಇವರ ಗೌರವ ಉಪಸ್ಥಿತಿಯಲ್ಲಿ ರಂಗ ನಿರ್ದೇಶಕರಾದ ಶಶಿಧರ್ ಭಾರಿಘಾಟ್ ಇವರು ‘ಸ್ವಾತಂತ್ರ್ಯದ ಕಿಡಿಗಳು’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಹೂಲಿಶೇಖರ್ ರಚನೆಯ ‘ಬೆಕುವ’ ನಾಟಕ ಸಿದ್ದರಾಮ ಕೊಪ್ಪರ್ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಸುರತ್ಕಲ್ : ಶ್ರೀ ಶಾರದಾ ನಾಟ್ಯಾಲಯದ 30ನೇ ವರ್ಷದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭವು ದಿನಾಂಕ 26 ಅಕ್ಟೋಬರ್ 2025ರಂದು ಸುರತ್ಕಲ್ಲಿನ ವಿದ್ಯಾದಾಯಿನೀ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಇವರ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿದುಷಿ ಶ್ರೀಮತಿ ಭಾರತಿ ಸುರೇಶ್ ಹಾಗೂ ಅವರ ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಭರತನಾಟ್ಯ ನಡೆಯಿತು. ಅದೇ ಸಮಯದಲ್ಲಿ ‘ನೃತ್ಯ ಕುಂಚ’ ಕಾರ್ಯಕ್ರಮದಲ್ಲಿ ಶ್ರೀಮತಿ ಅಪೂರ್ವ ಆರ್. ತಂತ್ರಿಯವರು ಶ್ರೀ ಕೃಷ್ಣನ ಚಿತ್ರವನ್ನು ಅನಾಯಾಸವಾಗಿ ಬಿಡಿಸಿ ಜನರ ಚಪ್ಪಾಳೆಯನ್ನು ತಮ್ಮದಾಗಿಸಿಕೊಂಡರು. ಮುಂದಿನ ಕಾರ್ಯಕ್ರಮವಾಗಿ ಚಕ್ರಪಾಣಿ ನೃತ್ಯ ಕಲಾ ಕೇಂದ್ರ (ರಿ.) ಅತ್ತಾವರ ಮಂಗಳೂರು, ಇದರ ನೃತ್ಯ ಗುರುಗಳಾದ ನಾಟ್ಯ ಕಲಾ ರತ್ನ ವಿದ್ವಾನ್ ಶ್ರೀ ಸುರೇಶ್ ಅತ್ತಾವರ್ ಅವರ ಶಿಷ್ಯ ವೃಂದದವರಿಂದ ‘ಮಣಿಕಂಠ ಜನನ’ ನೃತ್ಯ ರೂಪಕ ಜನರ ಮೆಚ್ಚುಗೆಗೆ…
ಮಂಗಳೂರು : ಕೋಡಿಕಲ್ ನ ವಿಪ್ರವೇದಿಕೆಯ ದಶಮಾನೋತ್ಸವ ಸರಣಿಯ ಷಷ್ಠಿ ಕಾರ್ಯಕ್ರಮ ‘ಗೀತ-ನೃತ್ಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ 02 ನವೆಂಬರ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ.ಸಿ.ಎಫ್.ನ ನಿವೃತ್ತ ಹಿರಿಯ ಅಧಿಕಾರಿ ಗೋಪಾಲಕೃಷ್ಣ ರಾವ್ ರವರು “ನಮ್ಮ ದೇಶ ಸನಾತನ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಕಲೆ – ಸಂಸ್ಕೃತಿಯ ಆಧಾರದ ಮೇಲೆ ನಿಂತಿದೆ. ಎಂತಹಾ ಕಠಿಣ ಸನ್ನಿವೇಶಗಳು ಬಂದರೂ ಕಲಾಪ್ರಕಾರಗಳ ವೀಕ್ಷಣೆಯಿಂದ ಮನಸ್ಸು ಮುದಗೊಳ್ಳುತ್ತದೆ. ಸಂಸ್ಕೃತಿಯ ಅಭ್ಯಸಿಸುವಿಕೆಯಿಂದ ನಾವೆಲ್ಲಿದ್ದೇವೆ ಎಂಬುದರ ಸಿಂಹಾವಲೋಕನ ಮಾಡಿ ಮುಂದುವರಿಯಲು ಸಾಧ್ಯವಾಗುತ್ತದೆ. ಅದನ್ನೇ ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಮೈಕುಣಿಸುವ ಸಂಸ್ಕಾರವನ್ನು ಬಿಟ್ಟು ಮನಸ್ಸನ್ನು ಪ್ರಫುಲ್ಲಿಸುವ ಕಲೆ ಈಗಿನ ಕಾಲದ ಒತ್ತಡ. ಈ ಕಲಾ ಶಿಕ್ಷಣ ಚಿಣ್ಣರಿಗೆ ಎಲ್ಲೆಡೆ ದೊರಕಲಿ” ಎಂದು ಹೇಳಿದರು. ಶ್ರೀ ಅವಿನಾಶ್ ಇವರು ನೃತ್ಯ ಸಂಭ್ರಮ ಕಾರ್ಯಕ್ರಮ ನಿರ್ವಹಿಸಿದರು. ಸ್ವಪ್ನಾ ಅವಿನಾಶ್ ಹಾಗೂ ಸುಧಾ ಭಟ್ ರವರು ವೀಣಾವಾದನವನ್ನು ನಡೆಸಿಕೊಟ್ಟರೆ ಶ್ರೇಯಸ್ ಮೃದಂಗದಲ್ಲಿ ಸಹಕರಿಸಿದರು. ಶ್ರೀಮತಿ ವಿದ್ಯಾಗಣೀಶರವರು…