Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳ ಗಂಗೋತ್ರಿ ಇವರ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 07 ಜನವರಿ 2026ರಂದು ಅಪರಾಹ್ನ 2-30 ಗಂಟೆಗೆ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಬಿ.ಎ. ವಿವೇಕ ರೈ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜಶ್ರೀ ಟಿ. ರೈ ಪೆರ್ಲ ಇವರ ‘ನೀ ಮಾಯೆಯೋ ನಿನ್ನೊಳು ಮಾಯೆಯೋ’ ಎಂಬ ಕಥಾ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ ಆರ್. ಇವರು ಕೃತಿ ಬಿಡುಗಡೆ ಮಾಡಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಇವರು ಕೃತಿ ಪರಿಚಯ ಮಾಡಲಿದ್ದಾರೆ.
ಮಂಗಳೂರು : ಮಹಾಲಸಾ ಕಾಲೇಜ್ ಆಫ್ ವಿಶುವಲ್ ಆರ್ಟ್ಸ್ ಇದರ ಅಪ್ಲೈಡ್ ಆರ್ಟ್ಸ್ ವಿಭಾಗದ ಮುಖ್ಯಸ್ಥ ಹಾಗೂ ಪ್ರಸಿದ್ದ ಚಿತ್ರಕಲಾವಿದ ಸಯ್ಯದ್ ಆಸಿಫ್ ಅಲಿ (53) ಹೃದಯಾಘಾತದಿಂದ ದಿನಾಂಕ 05 ಜನವರಿ 2026ರಂದು ನಿಧನ ಹೊಂದಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿತ್ರಕಲಾ ಕಾಲೇಜಿನಲ್ಲಿದ್ದ ಅವರಿಗೆ ತೀವ್ರ ಹೃದಯಾಘಾತವಾಗಿದ್ದು ತತ್ಕ್ಷಣ ಸಹೋದ್ಯೋಗಿಗಳು ಕರಂಗಲಪಾಡಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರು ಆದರೆ ದಾರಿಮಧ್ಯೆ ಅವರು ಕೊನೆಯುಸಿರೆಳೆದರು. ಅವರ ಪತ್ನಿ 10 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಮಗಳು ದುಬೈಯಲ್ಲಿ ಉದ್ಯೋಗದಲ್ಲಿದ್ದು ಹಾಗೂ ಮಗ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಲೂರಿನವರಾದ ಅವರು, ಮಂಗಳೂರಿನ ಭಗವತಿ ನಗರದ ನಿವಾಸಿಯಾಗಿದ್ದರು. ತುಮಕೂರಿನ ಆರ್.ಕೆ.ಎನ್. ಚಿತ್ರಕಲಾ ವಿದ್ಯಾಲಯದಲ್ಲಿ ಜಿಡಿ ಆರ್ಟ್ ಪದವಿ ಮತ್ತು ಹಂಪಿ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಇನ್ ವಿಷುವಲ್ ಆರ್ಟ್ ಸ್ನಾತಕೋತ್ತರ ಪದವಿ ಪಡೆದಿದ್ದರು. 30 ವರ್ಷಗಳಿಂದ ಮಂಗಳೂರು ಮಹಾಲಸಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಜಲವರ್ಣ, ಫೋರ್ಟ್ ರೈಟ್ ಚಿತ್ರಕಲಾ ತಜ್ಞರಾಗಿದ್ದರು. ಅಖಿಲ ಭಾರತ ರಾಷ್ಟ್ರಮಟ್ಟದ…
ಉಡುಪಿ : ಹೆಜ್ಜೆ ಗೆಜ್ಜೆ ಫೌಂಡೇಶನ್ (ರಿ.) ಉಡುಪಿ-ಮಣಿಪಾಲ್ ಇದರ ವತಿಯಿಂದ ‘ಪುರಂದರ ಗಾನ ನರ್ತನ’ ಶ್ರೀ ಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ ಕಾರ್ಯಕ್ರಮವು ದಿನಾಂಕ 03 ಜನವರಿ 2026ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಲಾವಿದೆ ವಿದುಷಿ ದೀಕ್ಷಾ ರಾಮಕೃಷ್ಣ ನಿರಂತರ 6 ಗಂಟೆ 13 ನಿಮಿಷ ಪುರಂದರ ದಾಸರ ಗೀತೆ ಹಾಡುತ್ತ ಅದಕ್ಕೆ ತಕ್ಕದಾಗಿ ನರ್ತಿಸುತ್ತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (ಜಿಬಿಒಡಬ್ಲ್ಯು) ದಾಖಲಿಸಿದರು. ಜಿಬಿಒಡಬ್ಲ್ಯುವಿನ ಏಷಿಯಾ ಹೆಡ್ ಡಾ. ಮನಿಶ್ ವಿಷ್ಣೋಯಿ ಪ್ರಮಾಣ ಪತ್ರ ವಿತರಿಸಿ “ದೀಕ್ಷಾರವರು ಪುರಂದರ ದಾಸರ ಗೀತೆ ಗಾಯನದ ಜತೆಗೆ ನೃತ್ಯ ಮಾಡಿರುವುದು ವಿಶೇಷವಾದುದು” ಎಂದರು. ದೀಕ್ಷಾ ರಾಮಕೃಷ್ಣರವರು ಮಾತನಾಡಿ “ಭರತನಾಟ್ಯ ಹಾಗೂ ಸಂಗೀತ ಎರಡಲ್ಲೂ ನಾನು ಸಕ್ರಿಯವಾಗಿರುವುದರಿಂದ ಅವೆರಡನ್ನೂ ಒಟ್ಟಿಗೆ ತರಲು ಯೋಚಿಸಿದ್ದೆ. ಹಾಗಾಗಿ ಈ ಪುರಂದರ ಗಾನ ನರ್ತನ ಪರಿಕಲ್ಪನೆ ಮೂಡಿತು. ನಿರಂತರ ಪ್ರಯತ್ನದಿಂದ ಸಾಧ್ಯವಾಗದೆ. ದೇವ ಹಾಗೂ ದೈವ ಶಕ್ತಿಯ…
ವಿಜಯಪುರ : ಶ್ರೀ ಕುಮಾರವ್ಯಾಸ ಭಾರತ ವೇದಿಕೆ ವತಿಯಿಂದ ದಿನಾಂಕ 29 ಡಿಸೆಂಬರ್ 2025ರಂದು ವಿಜಯಪುರದ ಕುಮಾರವ್ಯಾಸ ಭಾರತ ಭವನದಲ್ಲಿ ಕುವೆಂಪು ಜಯಂತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ಉದಯ್ ಕುಲಕರ್ಣಿ “ಕುವೆಂಪು ಸಾರಿದ ಮೌಲ್ಯಗಳು ಮನುಕುಲದ ಅಭ್ಯುದಯಕ್ಕಾಗಿ ಇವೆ. ತಮ್ಮ ಕಥೆ, ಕಾದಂಬರಿ, ಕವಿತೆಗಳು ಹಾಗೂ ವೈಚಾರಿಕ ಲೇಖನಗಳ ಮೂಲಕ ಕುವೆಂಪು ತಮ್ಮ ನಿಲುವುಗಳನ್ನು ಕನ್ನಡ ಜನತೆಗೆ ತಿಳಿಸಿದರು. ಪರರಿಗಾಗಿ ಯಾರು ಬದುಕುವರೋ ಅವರೇ ನಿಜವಾಗಿ ಬದುಕುತ್ತಾರೆ. ಶಿಕ್ಷಣ, ಉದ್ಯೋಗಕ್ಕಾಗಿ ಅಥವಾ ಮಾಹಿತಿಗಾಗಿ ಅಲ್ಲ. ಮೌಲ್ಯಯುತವಾದ ಶಿಕ್ಷಣ ಸಮಾನತೆ, ಸಹೋದರತ್ವ, ವಿಶಾಲ ರಾಷ್ಟ್ರೀಯತೆ, ಮಾನವ ಏಕತೆ, ಜಾತಿ ಭೇದ ನಿರಾಕರಣೆ ಮುಂತಾದವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವದು. ವ್ಯಕ್ತಿಗೆ ಗೌರವ ಸಿಗಬೇಕು. ಶೋಷಣೆ, ಅಂಧಶ್ರದ್ಧೆ, ಅಂಧಾನುಕರಣೆ ಇವುಗಳು ತೊಲಗಬೇಕು. ಮಾನವನು ಪ್ರಕೃತಿಯ ಜೊತೆ ಬೆಳೆಯಬೇಕು. ಪ್ರಕೃತಿ, ಪ್ರಾಣಿ ಸಂಕುಲ ರಕ್ಷಿಸಬೇಕು. ಕನ್ನಡ ಭಾಷೆ ರಕ್ಷಣೆ ನಮ್ಮ ಅಸ್ಮಿತೆ. ಕನ್ನಡದ ಬಗ್ಗೆ ಅಭಿಮಾನ…
ಮಂಗಳೂರು : ಮಾಂಡ್ ಸೊಭಾಣ್ ಕಲಾಂಗಣದಲ್ಲಿ ದಿನಾಂಕ 04 ಜನವರಿ 2026ರಂದು ಆಯೋಜಿಸಿದ ತಿಂಗಳ ವೇದಿಕೆ ಸರಣಿಯ ರಜತ ವರ್ಷಕ್ಕೆ ಚಾಲನೆ ನೀಡಲಾಯಿತು. ಕಿಕ್ಕಿರಿದ ಬಯಲು ರಂಗಮಂದಿರದಲ್ಲಿ, ಕಬ್ಬಿನ ಗಾಣದ ಪ್ರತಿಕೃತಿಯನ್ನು ತಿರುಗಿಸಿ 289 ತಿಂಗಳ ಕಾರ್ಯಕ್ರಮಗಳ ಹೆಸರುಗಳನ್ನು ತೆರೆಯುವ ಮೂಲಕ ವಿಶಿಷ್ಟವಾಗಿ ಈ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ “ಮಾಂಡ್ ಸೊಭಾಣ್ ತಿಂಗಳ ವೇದಿಕೆ ದಾಖಲೆ ಪುಸ್ತಕಗಳಲ್ಲಿ ದಾಖಲಿಸುವಂತಹ ಸಾಧನೆ. ಕಲಾವಿದರಿಗೆ ವೇದಿಕೆ ಕೊಟ್ಟ ಈ ಸರಣಿಯಿಂದ ಕೊಂಕಣಿಗೆ ಬಹು ದೊಡ್ಡ ಗೌರವ ಲಭಿಸಿದೆ. ಇಂತಹ ಸಾಧನೆಗಾಗಿ ಮಾಂಡ್ ಸೊಭಾಣ್ ಸಂಸ್ಥೆಯನ್ನು ಸರಕಾರ ಗೌರವಿಸಬೇಕು. ಈ ಬಾಬ್ತು ನನ್ನ ಸಹಕಾರ ಇರಲಿದೆ.” ಎಂದು ಹೇಳಿದರು. ಗೌರವ ಅತಿಥಿ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಬೆಂಗಳೂರು ಇವರು ಸಂಸ್ಥೆಯ ನವೀಕೃತ ಜಾಲತಾಣ www.manddsobhann.org ಕೊಂಕಣಿ ಪುಸ್ತಕಗಳ ಇ-ಲೈಬ್ರೆರಿ, ಕೊಂಕಣಿ ಸಾಹಿತ್ಯದ ಅವಕಾಶ ಇ-ಬೊಂಗ್ಸಾಳ್ ಮತ್ತು ಕೊಂಕಣಿ ಕಾರ್ಯಕ್ರಮಗಳ ಮಾಹಿತಿಯ ಕೊಂಕಣಿಶೋ ಡೊಟ್ ಕೊಮ್ ಇವನ್ನು ಸಾಂಕೇತಿಕವಾಗಿ…
ಭರವಸೆಯ ಯುವ ಲೇಖಕರಾದ ಡಾ. ಸುಭಾಷ್ ಪಟ್ಟಾಜೆಯವರ ಎರಡನೆಯ ಕಥಾ ಸಂಕಲನ ‘ಕಾಡುಸಂಪಿಗೆ’. ಸುಮಾರು ಹನ್ನೆರಡು ವರ್ಷಗಳ ಹಿಂದೆ ಅವರು ವಿದ್ಯಾರ್ಥಿಯಾಗಿದ್ದಾಗ ಪ್ರಕಟಿಸಿದ್ದ ‘ಗೋಡೆ ಮೇಲಿನ ಗೆರೆಗಳು’ ಎಂಬ ಸಂಕಲನದ ಶೀರ್ಷಿಕೆ ಕತೆಯೂ ಸೇರಿದಂತೆ ಈ ಸಂಕಲನದಲ್ಲಿ ಒಟ್ಟು ಹದಿನೇಳು ಕಥೆಗಳಿವೆ. ಸುಭಾಷರು ಪ್ರತಿಭಾವಂತರಾದರೂ ಮೃದುಭಾಷಿ ಮತ್ತು ಸಂಕೋಚ ಸ್ವಭಾವದ ವ್ಯಕ್ತಿ. ಒಂದರ್ಥದಲ್ಲಿ ಅಂತರ್ಮುಖಿ. ಅವರ ಸ್ವಭಾವವೇ ಇಲ್ಲಿನ ಬಹುತೇಕ ಕಥಾ ನಾಯಕರಿಗಿರುವುದು ಆಕಸ್ಮಿಕವಲ್ಲ. ಕನ್ನಡ ಮತ್ತು ಮಲಯಾಳಂ ಕಥಾ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿರುವ ಸುಭಾಷರು, ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು’ ಎಂಬ ವಿಷಯದಲ್ಲಿ ಅಧ್ಯಯನವನ್ನು ಮಾಡಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳ ಕುರಿತು ಅವರಿಗೆ ಸಾಕಷ್ಟು ಗೊತ್ತಿದೆ. ತುಂಬ ಒಳ್ಳೆಯ ಓದುಗ ಮತ್ತು ಪ್ರೇಕ್ಷಕರಾದ ಸುಭಾಷರ ಮೇಲೆ ಉತ್ತಮ ಸಾಹಿತ್ಯ ಮತ್ತು ಸದಭಿರುಚಿಯ ಚಲನಚಿತ್ರಗಳ ಪ್ರಭಾವವಿದೆ. ಇದು ಅವರ ಕಥೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಸಂಕೀರ್ಣವಾದ…
ಮಂಗಳೂರು : ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ, ಶ್ರೀ ಶಾರದಾ ದೇವಿಯವರ ಹಾಗೂ ಸ್ವಾಮಿ ವಿವೇಕಾನಂದರ ಪಾವನ ಸಂದೇಶಗಳಿಂದ ಪ್ರೇರಣೆಯನ್ನು ಪಡೆದ ರಾಮಕೃಷ್ಣ ಮಿಷನ್, ಮಂಗಳೂರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತನ್ನ 75ನೇ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಈ ಅಮೃತ ವರ್ಷಾಚರಣೆಯ ಅಂಗವಾಗಿ ಭಕ್ತಿ, ಸಂಸ್ಕೃತಿ ಮತ್ತು ಚಿಂತನೆಯ ಸಂಗಮವಾಗಿ ಎರಡು ವಿಶೇಷ ಕಾರ್ಯಕ್ರಮಗಳನ್ನು ದಿನಾಂಕ 11 ಜನವರಿ 2026ರ ಭಾನುವಾರ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ. ಸ್ವಾಮಿ ವಿವೇಕಾನಂದರ ತ್ಯಾಗಮಯ ಜೀವನ ಹಾಗೂ ವೀರ ಸಂನ್ಯಾಸ ಪರಂಪರೆಯನ್ನು ಆಧರಿಸಿದ ‘ತಾಳ ಮದ್ದಳೆ –ವೀರ ಸಂನ್ಯಾಸಿ’ ಎಂಬ ಮನಮುಟ್ಟುವ ಸಾಂಸ್ಕೃತಿಕ ಕಾರ್ಯಕ್ರಮವು ಮಧ್ಯಾಹ್ನ 1-00 ಗಂಟೆಗೆ ರಾಮಕೃಷ್ಣ ಮಠದ ಅಮೃತ ಭವನ ಸಭಾಂಗಣದಲ್ಲಿ ನಡೆಯಲಿದೆ. ಈ ತಾಳಮದ್ದಳೆ ಕಾರ್ಯಕ್ರಮವನ್ನು ಹಿಮ್ಮೇಳದಲ್ಲಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಮತ್ತು ಬಳಗ ಹಾಗೂ ಮುಮ್ಮೇಳದಲ್ಲಿ ಶ್ರೀ ವಾಸುದೇವ ರಂಗ ಭಟ್, ಶ್ರೀ ಪವನ್ ಕಿರಣ್ಕೆರೆ, ಶ್ರೀ ಗಣೇಶ ಕನ್ನಡಿಕಟ್ಟೆ, ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಮತ್ತು ಶ್ರೀ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ ದಿನಾಂಕ 05 ಜನವರಿ 2026ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ರಾಜಗೋಪುರದಲ್ಲಿ ‘ಅತಿಕಾಯ ಮೋಕ್ಷ’ ತಾಳಮದ್ದಳೆಯೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಎಲ್.ಯನ್. ಭಟ್ ಬಟ್ಯಮೂಲೆ, ನಿತೀಶ್ ಎಂಕಣ್ಣ ಮೂಲೆ, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ, ಶ್ರೀಪತಿ ಭಟ್ ಉಪ್ಪಿನಂಗಡಿ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಕಡಂಬಳಿಕೆ, ಹರೀಶ್ ಕೃಷ್ಣ ಪುಣಚ ಸಹಕರಿಸಿದ್ದರು. ಮುಮ್ಮೇಳದಲ್ಲಿ ಶ್ರೀರಾಮ (ಭಾಸ್ಕರ್ ಬಾರ್ಯ), ರಾವಣ (ಹರಿಣಾಕ್ಷಿ ಜೆ. ಶೆಟ್ಟಿ), ಅತಿಕಾಯ (ಗುಂಡ್ಯಡ್ಕ ಈಶ್ವರ ಭಟ್ ಮತ್ತು ಗುಡ್ಡಪ್ಪ ಬಲ್ಯ), ವಿಭೀಷಣ (ಲಕ್ಷ್ಮಿಕಾಂತ ಹೆಗಡೆ ಪುತ್ತೂರು) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಟಿ. ರಂಗನಾಥ ರಾವ್ ವಂದಿಸಿದರು.
ಉಡುಪಿ : ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ 01 ಜನವರಿ 2026ರಂದು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ “ಶಿಲ್ಪಿ ಜಕಣಾಚಾರಿಯ ಶಿಲ್ಪಕಲಾ ಕುಶಲತೆ ಎಲ್ಲೆಡೆ ಪಸರಿಸಿದ್ದು, ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಅವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿರುವುದು ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಸಾಕ್ಷಿ. ಹೊಯ್ಸಳ ಮತ್ತು ಚಾಲುಕ್ಯ ಶೈಲಿಯ ಅದ್ಭುತ ದೇವಾಲಯಗಳನ್ನು ನಿರ್ಮಿಸಿದ ಪೌರಾಣಿಕ ಶಿಲ್ಪಿಯಾದ ಜಕಣಾಚಾರಿ, ಬೇಲೂರು ಮತ್ತು ಹಳೆಬೀಡಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಭಾರತೀಯ ಕಲೆಯ ಸುವರ್ಣ ಯುಗಕ್ಕೆ ಕೊಡುಗೆ ನೀಡಿದ್ದಾರೆ. ಅವರು ನಿರ್ಮಿಸಿದ ದೇವಾಲಯಗಳು ಅತ್ಯಂತ ಸೂಕ್ಷ್ಮ ಮತ್ತು ನಾಜೂಕಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ನಶಿಸಿ ಹೋಗುತ್ತಿರುವ ಕಲೆಗಳನ್ನು ಪುನರುಜ್ಜಿವನಗೊಳಿಸುವ ನಿಟ್ಟಿನಲ್ಲಿ…
ಬೆಂಗಳೂರು : ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ದಿನಾಂಕ 07 ಮತ್ತು 08 ಫೆಬ್ರುವರಿ 2026ರಂದು ವಿದ್ಯಾರ್ಥಿ ಜಾನಪದ ಲೋಕೋತ್ಸವ ಆಯೋಜಿಸಲಾಗಿದೆ. ರಾಜ್ಯದ ಶಾಲಾ-ಕಾಲೇಜುಗಳ 8ನೇ ತರಗತಿಯಿಂದ ಕಾಲೇಜು ವಿದ್ಯಾರ್ಥಿಗಳು ಜನಪದ ಕಲೆ, ನೃತ್ಯ ರೂಪಕದ ವಿದ್ಯಾರ್ಥಿ ತಂಡಗಳು ಶಾಲಾ-ಕಾಲೇಜು ಮುಖ್ಯಸ್ಥರ ಅನುಮತಿ ಪಡೆದು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಸೂಕ್ತ ಸಂಭಾವನೆ, ಪ್ರಮಾಣ ಪತ್ರ ದೊರೆಯಲಿದೆ. ಕಲಾ ಪ್ರದರ್ಶನದ ಯೂಟ್ಯೂಬ್- ಲಿಂಕ್ ಮತ್ತು ಭಾಗವಹಿಸುವ ಕುರಿತು ಮನವಿಯನ್ನು ಪರಿಷತ್ತಿನ ಇ-ಮೇಲ್ ವಿಳಾಸ [email protected] ಗೆ ದಿನಾಂಕ 10 ಜನವರಿ 2026ರೊಳಗೆ ಕಳುಹಿಸಬೇಕು ಎಂದು ಪರಿಷತ್ತು ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ತಿಳಿಸಿದ್ದಾರೆ.