Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀಮತಿ ಬಿ. ಸರೋಜಮ್ಮ ಪ್ರಾಯೋಜಿತ ಶ್ರೀ ಪುಂಡಲೀಕ ಹಾಲಂಬಿ ದತ್ತಿ ಕಾರ್ಯಕ್ರಮವು ದಿನಾಂಕ 15 ಸೆಪ್ಟೆಂಬರ್ 2024ರಂದು ಸಂಜೆ 4-00 ಗಂಟೆಗೆ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇವರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಐರೋಡಿ ಗೋವಿಂದಪ್ಪ ಇವರಿಗೆ ‘ಪುಂಡಲೀಕ ಹಾಲಂಬಿ ಪ್ರಶಸ್ತಿ 2024’ಯನ್ನು ಹಿರಿಯ ಪತ್ರಕರ್ತರಾದ ಶ್ರೀ ಎಸ್. ಜನಾರ್ದನ್ ಮರವಂತೆ ಇವರು ಪ್ರದಾನ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಶ್ರೀ ಅಶೋಕ ಆಚಾರ್ಯ ಸಾಯಿಬ್ರಕಟ್ಟೆ ಮತ್ತು ಬಳಗದವರಿಂದ ಭಾವಗಾನ ಕಾರ್ಯಕ್ರಮ ನಡೆಯಲಿದೆ.
ಮಂಜೇಶ್ವರ : ಕರ್ನಾಟಕ ಗಮಕ ಕಲಾ ಪರಿಷತ್ ಮತ್ತು ಸಿರಿಗನ್ನಡ ವೇದಿಕೆ ಸಂಸ್ಥೆಗಳ ಕೇರಳ ಗಡಿನಾಡು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಶ್ರಾವಣ ಮಾಸದ ಗಮಕ ಶ್ರಾವಣ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ದಿನಾಂಕ 4 ಸೆಪ್ಟೆಂಬರ್ 2024ರಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಗಾಯತ್ರಿ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ “ಕಲೆ ಮತ್ತು ಸಾಹಿತ್ಯಗಳು ಸರಸ್ವತೀ ದೇವಿಯು ಮನುಜರಿಗೆ ಕರುಣಿಸುವ ಮಹೋನ್ನತವಾದ ವರಗಳು. ಅವುಗಳು ಭಾರತೀಯ ಸಂಸ್ಕೃತಿಯ ಕಣ್ಣುಗಳು. ಗಮಕ ಕಲಾ ಪರಿಷತ್ ಮತ್ತು ಸಿರಿಗನ್ನಡ ವೇದಿಕೆಗಳು ಸಂಯುಕ್ತವಾಗಿ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಸಮಾರಾಧನೆಗಳು ಸಂಪೂರ್ಣ ಯಶಸ್ವಿಯಾಗಿ ನೆರವೇರುತ್ತಿವೆ” ಎಂದು ಹೇಳಿದ್ದಾರೆ. ಗಮಕ ಕಲಾ ಪರಿಷತ್ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ, ಸಿರಿಗನ್ನಡ ವೇದಿಕೆಯ ಗಡಿನಾಡ ಘಟಕದ…
ಮಂಗಳೂರು : ಉಡುಪಿ, ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಇದರ ವತಿಯಿಂದ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆ ಸುರತ್ಕಲ್ ಸಹಯೋಗದಲ್ಲಿ 31ನೇ ವರ್ಷದ ‘ಮಕ್ಕಳ ಧ್ವನಿ 2024’ – ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನವು ದಿನಾಂಕ 14 ಸೆಪ್ಟೆಂಬರ್ 2024ರಂದು ಸುರತ್ಕಲ್ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ. ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆಯನ್ನು ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಕಡಂದಲೆ ಇವರು ವಹಿಸಲಿದ್ದು, ಮಂಗಳೂರಿನ ವಾಗೀಶ್ವರೀ ಪ್ರಕಾಶನದ ಶ್ರೀ ವಾಗೀಶ್ವರೀ ಶಿವರಾಂ ಇವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್ನ ಅಧ್ಯಕ್ಷ ಜಯಚಂದ್ರ ಹತ್ವಾರ್, ಧರ್ಮದರ್ಶಿ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ಅಭಿನಯ ಗೀತೆಗೋಷ್ಠಿ, ವಿವೇಕ ಬಾಲಕಿಯರ ಪ್ರೌಢ ಶಾಲೆಯ ಕುಮಾರಿ ಮಾನಸ ಜಿ. ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನ…
ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಕೊಡವ ಸಂಸ್ಕೃತಿ ಹಾಗೂ ಚರಿತ್ರೆಗಳ ಸಂಶೋಧನೆ-ಅಧ್ಯಯನದ ದಿಸೆಯಲ್ಲಿ ಕಾರ್ಯಯೋಜನೆ ರೂಪಿಸಿದೆ. ಈ ದಿಸೆಯಲ್ಲಿ ಕೊಡವ ಭಾಷೆ-ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ-ಪರಂಪರೆಗಳ ಹಾಗೂ ಕೊಡವ-ಕೊಡಗಿನ ಸಂಬಂಧಿತ ಚರಿತ್ರೆಗಳ ಬಗ್ಗೆ ಆಳವಾದ ಸಂಶೋಧನೆಗೆ ಅಕಾಡೆಮಿಯ ಕಾರ್ಯಸೂಚಿಯನ್ವಯ ಅರ್ಹ-ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕಾರ್ಯನಿರ್ವಹಿಸಲು ಬಯಸಿದ್ದಲ್ಲಿ ಹೆಚ್ಚಿನ ವಿವರಗಳಿಗೆ ಅಧ್ಯಕ್ಷರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಮತ್ತು ಗೈಡ್ಸ್ ಭವನ, ಮ್ಯಾನ್ಸ್ ಕಾಪೌಂಡ್ ಹತ್ತಿರ ಮಡಿಕೇರಿ ಇವರಿಗೆ ಪತ್ರ ಬರೆಯುವಂತೆ ತಿಳಿಸಲಾಗಿದೆ ಎಂದು ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಇವರು ತಿಳಿಸಿದ್ದಾರೆ.
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಗೋಣಿಕೊಪ್ಪಲು ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ದಿನಾಂಕ 11 ಸೆಪ್ಟೆಂಬರ್ 2024ರಂದು ಜರುಗಿದ ಕಲಾವಿದ ದಿ. ಶ್ರೀನಿವಾಸ್ ನೆನಪು ನುಡಿ ಮತ್ತು ಗಾನ ನಮನ ಕಾರ್ಯಕ್ರಮವನ್ನು ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನ್ನು’ ಎನ್ನುವ ಗಾಯನದೊಂದಿಗೆ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿನಾದ ಸಂಗೀತ ನೃತ್ಯ ಸಂಸ್ಥೆಯ ಅಧ್ಯಕ್ಷೆ ಚೇಂದಿರ ನಿರ್ಮಲ ಬೋಪಣ್ಣ ಇವರು ಮಾತನಾಡಿ “ದಿ. ವಿ.ಟಿ. ಶ್ರೀನಿವಾಸ್ ಸಂಗೀತ ರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದಂತಹ ಕಲಾವಿದರಾಗಿದ್ದು, ತಬಲ ಕ್ಯಾಸಿಯೋ ವಾದನಗಳಲ್ಲಿ ಪರಿಣಿತರಾಗಿದ್ದರು. ಯಾವುದೇ ರಾಗವನ್ನು ನಿಮಿಷ ಮಾತ್ರದಲ್ಲಿ ಕ್ಯಾಸಿಯೋದಲ್ಲಿ ಅಳವಡಿಸುವ ಕಲೆ ಹೊಂದಿದ್ದರು. ಅಜಾತಶತ್ರುವಾಗಿದ್ದ ಅವರು ಸಾವಿರಾರು ಸಂಗೀತ ಮತ್ತು ನೃತ್ಯ ಶಿಷ್ಯರನ್ನು ಹೊಂದಿದ್ದು ಅವರ ನಿಧನವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು…
ಮೈಸೂರು : ಧ್ವನಿ ಫೌಂಡೇಷನ್ ಇದರ ವತಿಯಿಂದ ‘ಸ್ವರ ಕುಟೀರ’ ಸಂಗೀತ ನೃತ್ಯ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ದಿನಾಂಕ 22 ಸೆಪ್ಟೆಂಬರ್ 2024ರಂದು ಸಂಜೆ 5-30 ಗಂಟೆಗೆ ಮೈಸೂರಿನ ದಟ್ಟಗಳ್ಳಿ, ಸೋಮನಾಥ ನಗರದಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಹಿಂದೂಸ್ತಾನಿ ಗಾಯಕರಾದ ಶ್ರೀಮತಿ ಶಾರದಾ ಭಟ್ ಕಟ್ಟಿಗೆ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಸನ್ಮಾನ್ಯ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಇವರು ಉದ್ಘಾಟಿಸಲಿದ್ದು, ಚಲನಚಿತ್ರ ನಟರಾದ ಶ್ರೀ ಬಿ. ಸುರೇಶ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾದ ಖ್ಯಾತ ಹಿಂದೂಸ್ತಾನಿ ಗಾಯಕರಾದ ಉಸ್ತಾದ್ ಫಯಾಜ್ ಖಾನ್ ಇವರಿಂದ ಗಾಯನ ಪ್ರಸ್ತುತಿ ನಡೆಯಲಿದೆ. ಮಂಗಳೂರಿನ ಸಂದೇಶ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ನಾನು ಪದವಿ ಓದಿದ್ದು, ಅಲ್ಲಿ ಭರತನಾಟ್ಯಮ್ ನನ್ನ ಪದವಿ ಅಧ್ಯಯನದ ಒಂದು ವಿಷಯವಾಗಿತ್ತು. ಸಂದೇಶದ ತರಗತಿ ಕೋಣೆಗಳಿಂದ ಏಕಕಾಲದಲ್ಲಿ ಸಂಗೀತದ ನಾದ, ನೃತ್ಯದ ಹೆಜ್ಜೆಯ ಸದ್ದು, ತಬಲದ ಲಯ, ವಯಲಿನ್ ನ ನಿನಾದ ಕೇಳುವಾಗ ಗಂಧರ್ವ ಲೋಕವೊಂದರಲ್ಲಿ ವಿಹರಿಸುವ ಹಾಗಿನ ಅನುಭೂತಿಯೊಂದು ನನ್ನೊಳಗೆ…
ಬೆಂಗಳೂರು : ಯಕ್ಷದೇಗುಲ (ರಿ.) ಬೆಂಗಳೂರು ಇವರ ಸಂಯೋಜನೆಯಲ್ಲಿ ಕೆ. ಮೋಹನ್ ನಿರ್ದೇಶನದ ‘ಯಕ್ಷಗಾನ ಉತ್ಸವ’ವನ್ನು ದಿನಾಂಕ 5 ಅಕ್ಟೋಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಗವಿಪುರಂ ಉದಯ ಭಾನು ಕಲಾ ಸಂಘ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ಮತ್ತು ‘ಕೃಷ್ಣಂ ವಂದೇ ಜಗದ್ಗುರುಂ’ ಮಕ್ಕಳಿಂದ ಯಕ್ಷಗಾನ ಪ್ರದರ್ಶನವಿದೆ. ಮಧ್ಯಾಹ್ನ ಯಕ್ಷಗಾನ ನೃತ್ಯ ಸ್ಪರ್ಧೆ ಹಾಗೂ ಹಿರಿಯ ಯಕ್ಷಗಾನ ಕಲಾವಿದರಾದ ಆರ್ಗೋಡು ಮೋಹನ್ ದಾಸ್ ಶೆಣೈ ಇವರಿಗೆ ಯಕ್ಷದೇಗುಲ ಸನ್ಮಾನ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ‘ರಾವಣ ವದೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪುತ್ತೂರು : ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 131ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ʼವಿವೇಕ ವಿಜಯʼ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 11 ಸೆಪ್ಟೆಂಬರ್ 2024ರಂದು ಕಾಲೇಜಿನ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಕೆ. ಎಮ್. ಕೃಷ್ಣ ಭಟ್ ಇವರು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.ಸಮಾರಂಭದಲ್ಲಿ ‘ವಿವೇಕ – ವಿಜಯ’ ಉಪನ್ಯಾಸ ಕಾರ್ಯಕ್ರಮದ ಮೊದಲ ಹಂತವಾಗಿ ವಿದ್ಯಾರ್ಥಿಗಳಿಗಾಗಿ “ವಿವೇಕ ಚಿಂತನ – ಭಾರತ ವಂದನಾ” ಶೀರ್ಷಿಕೆಯಡಿ ಉಪನ್ಯಾಸ ನೀಡಿದ ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಮಾತನಾಡಿ “ಸಿಂಹಸದೃಶವಾದ ಹಿಂದೂಧರ್ಮಕ್ಕೆ ಪುನರ್ಜನ್ಮವನ್ನು ನೀಡಿದವರು ಸ್ವಾಮಿ ವಿವೇಕಾನಂದರು. ಹಿಂದೂಧರ್ಮವೆಂದರೆ ಅತ್ಯಂತ ಪ್ರಾಚೀನವಾದ ಹಾಗೂ ಶ್ರೇಷ್ಠವಾದ ಧರ್ಮ ಎಂದು ಜಗತ್ತಿನ ಕಣ್ಣಿನಲ್ಲಿ ಸಾಕ್ಷೀಕರಿಸಿದವರು ಸ್ವಾಮಿ ವಿವೇಕಾನಂದರು. ವ್ಯಕ್ತಿತ್ವದ ಅಮೂಲಾಗ್ರ ಬದಲಾವಣೆಯಾಗಲು ವಿವೇಕಾನಂದರ ಜೀವನವನ್ನು ಓದಿ ಪ್ರೇರಣೆಗೊಳ್ಳಬೇಕು. ಈ ಮಹಾನ್ ಸಂತನನ್ನು ಅಧ್ಯಯನ ಮಾಡಿದವರು ಹಾಗೂ ಅವರನ್ನು ಹೃದಯದಲ್ಲಿ ಇರಿಸಿಕೊಂಡವರು ಎಂದಿಗೂ ಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು…
ನಿರಂತರ ಪ್ರಯೋಗಶೀಲತೆ ಮತ್ತು ಸೃಜನಾತ್ಮಕತೆಯನ್ನು ತಮ್ಮ ಪರಿಕಲ್ಪನೆಗಳಲ್ಲಿ ಕಾಪಾಡಿಕೊಂಡು ಬಂದ`ಅಭಿವ್ಯಕ್ತಿ ಡಾನ್ಸ್ ಸೆಂಟರ್’ ಇದರ ಪ್ರತಿಭಾವಂತ ನಾಟ್ಯಗುರು – ನೃತ್ಯ ಕಲಾವಿದ ರಘುನಂದನ್, ಇತ್ತೀಚಿಗೆ ಸೇವಾಸದನದಲ್ಲಿ ಪ್ರದರ್ಶಿಸಿದ ‘ಹರಪನಹಳ್ಳಿ ಭೀಮವ್ವ- ವಾಗ್ಗೇಯ ನೃತ್ಯವೈಭವ-5’ ಸಂಶೋಧನಾತ್ಮಕ ಮತ್ತು ನಾಟಕೀಯ ಆಯಾಮಗಳಿಂದ ಗಮನಾರ್ಹವಾಗಿತ್ತು. ಸದಾ ಹೊಸತನಕ್ಕೆ ತುಡಿಯುವ ರಘುನಂದನ್ ಪ್ರತಿಬಾರಿಯೂ ಏನಾದರೊಂದು ವಿಶಿಷ್ಟವಾದುದನ್ನು ಸಾಕಾರಗೊಳಿಸುವ ಬದ್ಧತೆಯುಳ್ಳವರು. ಹೊಸ ವಿಷಯಗಳ ಆಯ್ಕೆ, ಯಾಂತ್ರಿಕವಲ್ಲದ ರೂಪು-ರೇಷೆಗಳಿಗೆ ಜೀವ ಕೊಡುವ ಪರಿಕಲ್ಪನೆ ಇವರ ವೈಶಿಷ್ಟ್ಯ. ಇದುವರೆಗೂ ಇಂಥ ಅನ್ವೇಷಕ ಬಗೆಯ ‘ವಾಗ್ಗೇಯ ನೃತ್ಯ ವೈಭವ’ಗಳ ಸರಣಿಯನ್ನೇ ಅನಾವರಣಗೊಳಿಸುತ್ತ ಬಂದಿದ್ದು, ಇದೀಗ ದಾಸ ಸಾಹಿತ್ಯದಲ್ಲಿ ಪ್ರಮುಖ ಕೊಡುಗೆಯನ್ನಿತ್ತ ಅಪರೂಪದ ಹರಿದಾಸ ಮಹಿಳೆ ಎನಿಸಿರುವ ‘ಹರಪನಹಳ್ಳಿ ಭೀಮವ್ವ’ ಅವರು ರಚಿಸಿದ ಮೂರು ಕೃತಿಗಳನ್ನು ರಂಗದ ಮೇಲೆ ತಂದ ಖ್ಯಾತಿ ಇವರದು. ಅಂದು ‘ಅಭಿವ್ಯಕ್ತಿ’ ಡ್ಯಾನ್ಸ್ ಸೆಂಟರ್, ಭೀಮವ್ವ ಅವರು ರಚಿಸಿದ ‘ಸಂಕ್ಷೇಪ ರಾಮಾಯಣ’, ಶಿವ-ಪಾರ್ವತಿ ಸಲ್ಲಾಪ’ ಮತ್ತು ‘ಸುಧಾಮ ಚರಿತೆ’- ಎಂಬ ಮೂರು ಕೃತಿಗಳನ್ನು ಪ್ರದರ್ಶಿಸಿತು. ‘ಸಂಕ್ಷಿಪ್ತ ರಾಮಾಯಣ’ವನ್ನು ರಘುನಂದನ್ ತಮ್ಮ…
ಬೆಂಗಳೂರು : ಅನಂತ್ ಹರಿತ್ಸ ಇವರು ರಚಿಸಿರುವ ‘ಆನ ಬಂದಳು’ ಮತ್ತು ಇತರ ಕಥೆಗಳು ಚೊಚ್ಚಲ ಕಥಾ ಸಂಕಲನ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 14 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಕವಿಗಳು ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಟಿ.ಎಸ್. ನಾಗಾಭರಣ ಇವರು ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ‘ಗಾನ ಸೌರಭ’ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.