Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ವತಿಯಿಂದ ಆಯೋಜಿಸಿದ್ದ ‘ನಾಡೋಜ ಡಾ. ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಸಮಾರಂಭವು ದಿನಾಂಕ 28 ಜೂನ್ 2025ರಂದು ಮುಂಜಾನೆ 10-30 ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಡಾ. ಸಂಜೀವ ಕುಲಕರ್ಣಿ ಇವರು ವಹಿಸಲಿದ್ದು, ಹೊಸಕೋಟೆಯ ಹಿರಿಯ ವಿಮರ್ಶಕ ಡಾ. ರಹಮತ್ ತುರೀಕೆರೆ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಧಾರವಾಡದ ಸಾಹಿತಿ ಡಾ. ಜಿ.ಎಂ. ಹೆಗಡೆ ಇವರು ಬಹುಮಾನ ಪ್ರದಾನ ಮಾಡಲಿದ್ದು, ಧಾರವಾಡದ ಸಾಹಿತಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರು ನಿರ್ಣಾಯಕರ ನುಡಿಗಳನ್ನಾಡಲಿದ್ದಾರೆ.
ಮೈಸೂರು : ಡಿ.ವಿ.ಜಿ. ಬಳಗ ಪ್ರತಿಷ್ಠಾನ (ನೋಂ) ಇದರ ವತಿಯಿಂದ ಆಯೋಜಿಸಿದ ‘ಡಿ. ವಿ. ಜಿ. ಪ್ರಶಸ್ತಿ – 2025’ ಪ್ರದಾನ ಸಮಾರಂಭವು ದಿನಾಂಕ 22 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರಿನ ಕುವೆಂಪು ನಗರದ ರಮಾ ಗೋವಿಂದ ಕಲಾವೇದಿಕೆಯಲ್ಲಿ ನಡೆಯಿತು. ಖ್ಯಾತ ವಾಗ್ಮಿಗಳಾದ ಶಿವಮೊಗ್ಗದ ವಿದ್ವಾನ್ ಜಿ. ಎಸ್. ನಟೇಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಶ್ರೀ ಟಿ. ಎನ್. ಶಿವಕುಮಾರ್ (ತ. ನಾ. ಶಿ.) ಇವರಿಗೆ ಈ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ತ. ನಾ. ಶಿ. ಯವರ ವಚನಗಳ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಸಮಾರಂಭದಲ್ಲಿ ಶ್ರೀಹರ್ಷ ಇವರು ತ. ನಾ. ಶಿ. ಯವರ ಕಾವ್ಯಗಳ, ಕಗ್ಗಗಳ ಬಗ್ಗೆ ಮಾತಾಡಿದರು. ತುಮಾಕೂರಿನ ಪುಟಾಣಿಯರಾದ ಆರ್ಯ ಮತ್ತು ಗಾರ್ಗಿಯವರ ಕಗ್ಗದ ವ್ಯಾಖ್ಯಾನ ಉತ್ತಮವಾಗಿ ಮೂಡಿಬಂದಿತ್ತು. ಕಾರ್ಯಕ್ರಮದಲ್ಲಿ ಶ್ರೀಹರ್ಷ ಪ್ರಾರ್ಥಿಸಿ, ಕನಕರಾಜು ಸ್ವಾಗತಿಸಿ, ಸಮುದ್ಯತಾ ಹಾಗೂ ತೇಜಸ್ ನಿರೂಪಿಸಿದರು. ಸಮಾರಂಭದ ಅಂತ್ಯದಲ್ಲಿ ನಟೇಶ್ ಇವರಿಂದ ‘ಕಗ್ಗ ಮಾತು’…
ಬೆಂಗಳೂರು : ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘ಅನುಮಾನದ ಅವಾಂತರ’ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 28 ಜೂನ್ 2025ರಂದು ಸಂಜೆ 7-00 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಆಯೋಜಿಲಾಗಿದೆ. ಮೋಲಿಯರ್ ವಿರಚಿತ ‘ದ ಇಮಾಜಿನರಿ ಕುಕೋಲ್ಡ್’ ಮೂಲ ಕಥೆಯನ್ನು ಎಂ. ರಾಮಾರಾವ್ ಕನ್ನಡಕ್ಕೆ ಅನುವಾದಿಸಿದ್ದು, ವಿಕಾಸ್ ಎಸ್. ಇವರು ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು. ಹವ್ಯಾಸಿ ರಂಗಭೂಮಿಯಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದಂತಹ ಹತ್ತಾರು ಹುಡುಗರು ಸೇರಿ ಸ್ಥಾಪಿಸಲ್ಪಟ್ಟ ಸಂಸ್ಥೆಯೇ ‘ಅಂತರಂಗ ಬಹಿರಂಗ’. ಈ ತಂಡದ ಮುಖ್ಯ ಉದ್ದೇಶ ಹೊಸ ಕಲಾವಿದರಿಗೆ ಅವಕಾಶ ಹಾಗೂ ಆಧುನಿಕ ಕಾಂಟೆಂಪರರಿ ವಿಷಯ ಆಧಾರಿತ ಕಥಾ ವಸ್ತು ಕೊಡುವುದು. ಅದರಂತೆಯೇ ನಡೆದು ಬರುತ್ತಿದ್ದು, ಇದರ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಒಯ್ಯುವುದು ಹಾಗೂ ಆದಷ್ಟು ಹಳೆ ಪ್ರೇಕ್ಷಕರ ಜೊತೆ ಜೊತೆಗೆ ಹೊಸ…
ಉಡುಪಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಸಂಘಟನೆ ಉಡುಪಿ ಹಾಗೂ ಕಥೊಲಿಕ್ ಸಭಾ ಮಿಲಾಗ್ರಿಸ್ ಘಟಕ ಕಲ್ಯಾಣ್ಪುರ ಇವರ ಜಂಟಿ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ‘ವೊವಿಯೊ- ವೇರ್ಸ್’ ಎಂಬ ಕೊಂಕಣಿ ಮದುವೆ ಸಮಾರಂಭದ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರವನ್ನು ದಿನಾಂಕ 29 ಜೂನ್ 2025ರಂದು ಪೂರ್ವಾಹ್ನ 9-30 ಗಂಟೆಗಫೆ ಕಲ್ಯಾಣ್ಪುರದ ಮಿಲಾಗ್ರಿಸ್ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟ ಧರ್ಮಗುರುಗಳಾದ ಮೊನ್ಸಿ. ಫರ್ಡಿನಾಂಡ್ ಗೊನ್ಸಾಲ್ವಿಸ್ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು, ಕಲ್ಯಾಣ್ಪುರದ ಮಿಲಾಗ್ರಿಸ್ ಕಾಲೇಜಿನ ಪ್ರಿನ್ಸಿಪಾಲ್ ಆದ ಡಾ. ವಿನ್ಸೆಂಟ್ ಆಳ್ವಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಥೊಲಿಕ್ ಸಭಾ ಮಿಲಾಗ್ರಿಸ್ ಘಟಕದ ಅಧ್ಯಕ್ಷರಾದ ಶ್ರೀಮತಿ ಮಾರ್ಸೆಲಿನ್ ಸೆರಾ ಹಾಗೂ ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಡಾ. ಫ್ಲಾವಿಯಾ ಕ್ಯಾಸ್ತೆಲಿನೊರವರು ಉಪಸ್ಥಿತರಿರುವರು. ಸಂಪನ್ಮೂಲ ವ್ಯಕ್ತಿಗಳಾಗಿ…
ಕೊಡಗು : ನೀನಾಸಂ ರಂಗ ಶಿಕ್ಷಣ ಕೇಂದ್ರ ಹೆಗ್ಗೋಡು ಇಲ್ಲಿನ ರಂಗ ಪದವಿ ಪಡೆಯಲು ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಹಾರಂಬಿ ಯತಿನ್ ವೆಂಕಪ್ಪ ಆಯ್ಕೆಯಾಗಿದ್ದಾರೆ. ಸುಳ್ಯದ ರಂಗಮನೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ನಡೆಸಿದ ಅರೆಭಾಷೆ ರಂಗ ಶಿಬಿರದಲ್ಲಿ ಭಾಗವಹಿಸಿದ ಯತಿನ್ ರಂಗ ಮಾಂತ್ರಿಕ ಡಾ. ಜೀವನ್ ರಾಂ ಸುಳ್ಯರ ಗರಡಿಯಲ್ಲಿ ಪಳಗಿದವರು. ಪ್ರಪ್ರಥಮವಾಗಿ ‘ಸಾಹೇಬ್ರು ಬಂದವೇ’ ಅರೆಭಾಷೆ ನಾಟಕದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದವರು. ತನ್ನ ಮೊದಲ ನಾಟಕದಲ್ಲೇ ರಾಜ್ಯದ ರಂಗಾಸಕ್ತರ ಪ್ರಶಂಸೆಗೆ ಪಾತ್ರವಾದ ಯತಿನ್ ನಂತರದಲ್ಲಿ ಆಳ್ವಾಸ್ ರಂಗ ತಂಡದ ‘ದೂತವಾಕ್ಯ’ ನಾಟಕದ ದುರ್ಯೋಧನನಾಗಿ, ಕಾರ್ಕಳ ಯಕ್ಷ ರಂಗಾಯಣದ ‘ಪರುಶುರಾಮ’ ನಾಟಕದ ಪರಶುರಾಮನಾಗಿ ಮತ್ತು ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ’ದ ಕಲ್ಯಾಣಸ್ವಾಮಿಯಾಗಿ, ಆಳ್ವಾಸ್ ನ ‘ನಾಯಿಮರಿ’ ನಾಟಕದ ಅಜ್ಜನಾಗಿ, ನೀನಾಸಂ ರಂಗ ಶಿಬಿರದಲ್ಲಿ ಸಿದ್ಧವಾದ ‘ಆಷಾಡದ ಒಂದು ದಿನ’ ನಾಟಕದ ಕಾಳಿದಾಸನಾಗಿ ಮಿಂಚಿದವರು. ಒಂದಷ್ಟು ಕಿರುಚಿತ್ರಗಳಲ್ಲೂ ಅಭಿನಯಿಸಿದ ಯತಿನ್ ಭರತನಾಟ್ಯವನ್ನೂ ಅಭ್ಯಸಿಸಿದ್ದಾರೆ. ರಂಗಮನೆ ಮತ್ತು ಆಳ್ವಾಸ್ ನ…
ಕಾರ್ಕಳ : ನಮ್ಮ ಕರಾವಳಿಯ ಆರಾಧನಾ ಕಲೆಯಾದ ಯಕ್ಷಗಾನವನ್ನು ಮುಂದಿನ ಜಾನಂಗಕ್ಕೆ ಪರಿಚಯಿಸುವ ಉದ್ದೇಶದಿಂದ ಕಾರ್ಕಳದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಯಕ್ಷ ಶಿಕ್ಷಣವನ್ನು ಕಳೆದ 13 ವರ್ಷಗಳಿಂದ ನೀಡುತ್ತಾ ಬಂದಿದ್ದು, ಇದೀಗ 14ನೇ ವರ್ಷದಲ್ಲಿ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸಹಯೋಗದೊಂದಿಗೆ ಕಾರ್ಕಳದಲ್ಲಿ ಹತ್ತು ವಿದ್ಯಾ ಸಂಸ್ಥೆಗಳಲ್ಲಿ ಉಚಿತವಾಗಿ ಯಕ್ಷ ಶಿಕ್ಷಣ ನೀಡುತ್ತಿದೆ. ನಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ-ಯಕ್ಷಶಿಕ್ಷಣ ‘ಯಕ್ಷಗಾನ ಶಿಕ್ಷಣ ಅಭಿಯಾನ’ವು ದಿನಾಂಕ 21 ಜೂನ್ 2025ರ ಶನಿವಾರದಂದು ಉದ್ಘಾಟನೆಗೊಂಡಿತು. ಯಕ್ಷ ಕಲಾರಂಗದ ಅಧ್ಯಕ್ಷರಾದ ವಿಜಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಲ್ಲೂರಿನ ಉದ್ಯಮಿ ಸತೀಶ್ ಶೆಟ್ಟಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲಾರಂಗದ ಕೋಶಾದ್ಯಕ್ಷ ಶ್ರೀ ವರ್ಮ ಅಜ್ರಿ, ಯಕ್ಷ ಗುರು ಮಹಾವೀರ ಪಾಂಡಿ, ಉಪಾಧ್ಯಕ್ಷ ಶಿವಸುಭ್ರಹ್ಮಣ್ಯ ಭಟ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪ್ರಸಾದ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಅಧ್ಯಾಪಕ ನಾಗೇಶ್ ಇವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಯಕ್ಷ ನಾಟ್ಯ ಗುರು ಮಹಾವೀರ ಪಾಂಡಿಯವರು ಯಕ್ಷಗಾನ…
ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಸಹಕಾರದೊಂದಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ, ಕ.ಚು.ಸಾ.ಪ. ಕಾಸರಗೋಡು ಘಟಕ, ಅಭಿರುಚಿ ಬಳಗ ಮೈಸೂರು ಇವುಗಳ ವತಿಯಿಂದ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ 5ನೇ ಸಮ್ಮೇಳನವನ್ನು ದಿನಾಂಕ 29 ಜೂನ್ 2025ರ ಆದಿತ್ಯವಾರ ಪೂರ್ವಾಹ್ನ ಗಂಟೆ 10-00ಕ್ಕೆ ಕಾಸರಗೋಡು ಸಿರಿಬಾಗಿಲು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಹಿರಿಯ ಕವಿ ಪತ್ರಕರ್ತರಾದ ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ದೀಪ ಪ್ರಜ್ವಲನೆ ಮಾಡಿ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದು, ಕಾಸರಗೋಡಿನ ಹಿರಿಯ ಚಿಂತಕರಾದ ಶ್ರೀ ವಿ.ಬಿ.ಕುಳಮರ್ವ ಇವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರಿಂದ ಚುಟುಕು ಸಾಹಿತ್ಯ ಪುಸ್ತಕಗಳ ಅನಾವರಣ ಮತ್ತು ‘ಚುಟುಕು ಚೇತನ ಗೌರವ ಪ್ರಶಸ್ತಿ’ ಪುರಸ್ಕಾರ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕುಮಾರಿ ಅವನೀಶ ಎಸ್. ನೀಲಗುಂದ ಉಣಕಲ್ ಇವರಿಂದ…
ರಂಗಕರ್ಮಿಗಳಿಗೆ ಹಾಗೂ ನಾಟಕ ಪ್ರಿಯರಿಗೆ ಸಿ.ಜಿ.ಕೆ. ಚಿರಪರಿಚಿತ ಹೆಸರು. ಸಿ. ಜಿ. ಕೃಷ್ಣಸ್ವಾಮಿ ಎಂದರೆ ಸ್ವಲ್ಪ ಯೋಚಿಸಿ ತಿಳಿದುಕೊಳ್ಳಬೇಕಾಗುತ್ತದೆ. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದವರು. 90ರ ದಶಕರಲ್ಲಿ ತೀರಾ ತಳಮಟ್ಟಕ್ಕಿಳಿದ ರಂಗಭೂಮಿಯನ್ನು ‘ರಂಗ ನಿರಂತರ’ದ ಮೂಲಕ ಪುನಶ್ಚೇತನಗೊಳಿಸುವುದರೊಂದಿಗೆ, ‘ಸಮುದಾಯ ತಂಡ’ ಕಟ್ಟಿ ಬೆಳೆಸಿದವರೂ ಇವರೇ. 1950 ಜೂನ್ 27ರಂದು ಜನಿಸಿದ ಇವರ ತಂದೆ ಗೋವಿಂದ ನಾಯ್ಕ, ತಾಯಿ ತಿಮ್ಮಾಜಮ್ಮ. ಶಾಲಾ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಮುಗಿಸಿದ ಇವರು ನ್ಯಾಷನಲ್ ಕಾಲೇಜು ಬೆಂಗಳೂರಿನಲ್ಲಿ ಕಾಲೇಜ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸ್ನಾತಕೋತ್ತರ ಪದವಿಯನ್ನು ಸೆಂಟ್ರಲ್ ಕಾಲೇಜು ಬೆಂಗಳೂರಿನಲ್ಲಿ ಪಡೆದರು. ಮೂರು ವರ್ಷದ ಮಗುವಿದ್ದಾಗ ಪೋಲಿಯೋಗೆ ತುತ್ತಾಗಿ ಎರಡೂ ಕಾಲುಗಳು ದುರ್ಬಲಗೊಂಡವು. ರಂಗಭೂಮಿಗೆ ಪಾದಾರ್ಪಣೆ ಮಾಡುವಾಗ, ರಂಗಭೂಮಿಯ ಯಾವುದೇ ಸಾಂಪ್ರದಾಯಿಕ ತರಬೇತಿಯನ್ನು ಪಡೆಯದ ಹಳ್ಳಿಗಾಡಿನ ಹಿಂದುಳಿದ ಜಾತಿಯ ಒಬ್ಬ ಬಾಲಕನಾಗಿದ್ದರು. ಆದರೆ ಮಾಡಿದ ಸಾಧನೆಯಿಂದ ಇವರು ಹಲವಾರು ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ. ಸಿ.ಜಿ.ಕೆ.ಯವರು ರಂಗಭೂಮಿಯಲ್ಲಿ ನಿರ್ದೇಶಕರಾಗಿ, ರಂಗಸಂಘಟಕರಾಗಿ, ಧ್ವನಿ ಬೆಳಕಿನ ತಂತ್ರಜ್ಞರಾಗಿ, ರಂಗ ವಿನ್ಯಾಸಕರಾಗಿ ದುಡಿದವರು. ಎಲ್ಲಾ…
ನಾನು ಚೌಕಿಯಲ್ಲಿ ಮುಖಕ್ಕೆ ಸಪೇತು ಹಚ್ಚಿ ಕೊಳ್ಳುವಾಗ ಯಾರ ಹತ್ತಿರವೂ ಮಾತಾಡುವುದಿಲ್ಲ. ಆ ಹೊತ್ತಿನಲ್ಲಿ ನಾನು ಅಂದಿನ ನನ್ನ ಪಾತ್ರದ ಬಗ್ಗೆ ಚಿಂತನೆ ಮಾಡುತ್ತಾ ಒಂದು ರೀತಿಯ ಧ್ಯಾನಸ್ಥ ಸ್ಥಿತಿಯಲ್ಲಿ ಇರುತ್ತೇನೆ. ಯಾರಾದರೂ ನನ್ನ ಅಭಿಮಾನಿಗಳು ಮಿತ್ರರು ನನ್ನನ್ನು ಮಾತಾಡಿಸಲು ಬಂದರೆ ನಿಷ್ಠುರವಾಗಿ, ‘ನನ್ನ ವೇಷ ಮುಗಿದ ಮೇಲೆ ಬನ್ನಿ. ಮಾತಾಡುವ’ ಅಂದುಬಿಡುತ್ತೇನೆ. ಚೌಕಿಯಲ್ಲಿ ಇತರ ಕಲಾವಿದರು ಎಷ್ಟೇ ಗೌಜಿ ಗದ್ದಲ ಮಾಡಿದರೂ ನನ್ನ ಧ್ಯಾನಕ್ಕೆ ಭಂಗ ಬರುವುದಿಲ್ಲ. ಎಲ್ಲರಿಗೂ ವಿಷಯ ಗೊತ್ತಿರುವುದರಿಂದ ಅವರೂ ನನ್ನ ತಂಟೆಗೆ ಬರುವುದಿಲ್ಲ ಮಾತ್ರವಲ್ಲ ನಾನು ಅಲ್ಲಿ ವೇಷಮಾಡಿಕೊಳ್ಳುತ್ತಿದ್ದೇನೆ ಎಂದು ಗೊತ್ತಾದರೆ ನನಗೆ ತೊಂದರೆ ಆಗದಂತೆ ಮೆಲ್ಲಗೇ ಮಾತಾಡುತ್ತಾರೆ. ಇವತ್ತು ಕುಂದಾಪುರದ ಗಾಂಧಿ ಮೈದಾನದಲ್ಲಿ ನಮ್ಮ ಮೇಳದ ಆಟ. ಪಟ್ಟಾಭಿಷೇಕ. ನನ್ನದು ದಶರಥನ ಪಾತ್ರ. ನನಗೇನೂ ಇದು ಮೊದಲಲ್ಲ. ನನ್ನ ಅತೀ ಮೆಚ್ಚುಗೆಯ ಪಾತ್ರವೂ ಹೌದು. ನನ್ನ ನಲವತ್ತು ವರ್ಷದ ಕಲಾಸೇವೆಯ ಜೀವನದಲ್ಲಿ ಸಾವಿರಾರು ದಶರಥ ಮಾಡಿರಬಹುದು. ಆದರೆ ನನಗೆ ಪ್ರತೀ ಪ್ರದರ್ಶನವೂ ಹೊಸದು. ನನ್ನ…
ಮಡಿಕೇರಿ : ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಕೂಡಿಗೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ದಿನಾಂಕ 25 ಜೂನ್ 2025ರಂದು ನಡೆಯಿತು. ‘ನಮ್ಮ ಬೆಂಗಳೂರು ಹೇಗೆ ಇದ್ದರೆ ಚೆನ್ನ’ ಹಾಗೂ ‘ನಾಡಪ್ರಭು ಕೆಂಪೇಗೌಡರ ಕೊಡುಗೆ’ ಕುರಿತು ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಿತು. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಗೌಡ ಮಾತನಾಡಿ “ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಸದಾ ಸ್ಮರಿಸುವಂತಾಗಬೇಕು. ಅವರ ದೂರ ದೃಷ್ಟಿಯಿಂದ ಹಿಂದೆಯೇ ಬೆಂಗಳೂರು ಅಭಿವೃದ್ಧಿಯತ್ತ ಸಾಗಿತ್ತು. ಕೆರೆ ಕಟ್ಟೆಗಳ ನಿರ್ಮಾಣ, ಮರಗಿಡಗಳನ್ನು ಬೆಳೆಸಿ ಪರಿಸರ ಶುಚಿತ್ವಕ್ಕೆ ಒತ್ತು ನೀಡಿದ್ದರು. ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ಮತ್ತು ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನ ವೃದ್ಧಿಯಾಗುತ್ತದೆ” ಎಂದರು. ಕನ್ನಡ ಮತ್ತು ಸಂಸ್ಕೃಂತಿ ಇಲಾಖೆಯ…