Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಯುವ ಕವಿ ಮತ್ತು ಕತೆಗಾರರಿಗೆ ವಿಶೇಷ ಆಹ್ವಾನ | ಕೊನೆಯ ದಿನಾಂಕ ಸಪ್ಟೆಂಬರ್ 10
    Literature

    ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಯುವ ಕವಿ ಮತ್ತು ಕತೆಗಾರರಿಗೆ ವಿಶೇಷ ಆಹ್ವಾನ | ಕೊನೆಯ ದಿನಾಂಕ ಸಪ್ಟೆಂಬರ್ 10

    August 9, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು ಮತ್ತು ಕವಿತಾ ಕುಟೀರ ಪೆರಡಾಲ ಇವರ ಸಹಯೋಗದಲ್ಲಿ ಕಾಸರಗೋಡಿನ ಪೆರಡಾಲದ ನವಜೀವನ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಆಯೋಜಿಸಲಾಗುವ ನೂರ ಒಂದು (101) ಕತೆಗಳ ಮತ್ತು ಕವನಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವರೇ, ಅವಕಾಶ ಪಡೆಯುವುದಕ್ಕಾಗಿ ತಮ್ಮ ಬರಹಗಳನ್ನು ಸಲ್ಲಿಸಲು ಕೋರಲಾಗಿದೆ.

    1) ನಾಡೋಜ ಕವಿ ಕೈಯ್ಯಾರ ಕಿಂಞಣ್ಣ ರೈ ಅವರ ಸ್ಮರಣಾರ್ಥವಾಗಿ ಪ್ರಕಟಿಸಲಾಗುವ ಈ ಕೃತಿಗೆ ನೀವು ಕಳುಹಿಸುವ ಬರಹಗಳು ಕನ್ನಡ ಭಾಷೆಯಲ್ಲಿ ಇರಬೇಕು.

    2) 18ರಿಂದ 35 ವರ್ಷ ವಯೋಮಾನದವರು ಅಂದರೆ ಜನವರಿ 1988ರಿಂದ ದಶಂಬರ 2004ರ ಮಧ್ಯೆ ಜನಿಸಿದವರು ಅರ್ಹರಾಗಿರುತ್ತಾರೆ.

    3) ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಬೆಳೆದ ಹಾಗೂ ವಿದ್ಯಾರ್ಥಿಗಳಾಗಿರುವ ಎಲ್ಲರಿಗೂ ಭಾಗವಹಿಸುವ ಅವಕಾಶವಿದೆ.

    4) ಬರಹಗಳ ಶಬ್ದ ಮಿತಿಯು 300 ಪದಗಳನ್ನು ಮೀರದಂತೆ ಕವನ ಮತ್ತು 500 ಪದಗಳನ್ನು ಮೀರದಂತೆ ಸಣ್ಣ ಕತೆ (micro stories) ಆಯ್ಕೆಗಾಗಿ 3ರಿಂದ 5 ಕತೆ-ಕವನಗಳು ಅಥವಾ 10ರಿಂದ 12 ಚುಟುಕುಗಳನ್ನು ಕಳುಹಿಸಬಹುದು.

    5) ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ 10-09-2023

    6) ಬರಹ ಯೂನಿಕೋಡ್ನಲ್ಲಿ ಇರಬೇಕು. ಸ್ವಂತ ರಚನೆ ಆಗಿರಬೇಕು. ಯಾವುದೇ ಪತ್ರಿಕೆಗಳಲ್ಲಿ ಯಾ ಬ್ಲಾಗ್ ಗಳಲ್ಲಿ ಪ್ರಕಟವಾಗಿರಬಾರದು. ಕೃತಿ ಚೌರ್ಯಕ್ಕೆ ಅವಕಾಶವಿಲ್ಲ, ಮಾಡಿದಲ್ಲಿ ಅವರೇ ಜವಾಬ್ದಾರರು.

    7) ಪ್ರತ್ಯೇಕ ಪುಟದಲ್ಲಿ ಹೆಸರು, 80 ಪದಗಳಿಗೆ ಮೀರದ ಕಿರು ಪರಿಚಯ, ಅಂಚೆ ವಿಳಾಸ, ಮೊಬೈಲ್ ನಂಬರ್, ಇಮೇಲ್, ಭಾವಚಿತ್ರ, ಕಾಲೇಜಿನ ಐಡಿ ಅಥವಾ ಆಧಾರ್ ಪ್ರತಿಯನ್ನು ಕಳುಹಿಸತಕ್ಕದ್ದು.

    8) ಆಯ್ಕೆಯಾದ ಬರಹಗಳನ್ನು ಸಂಬಂಧಪಟ್ಟವರಿಗೆ ಅಕ್ಟೋಬರ್ 31ರ ಒಳಗೆ ತಿಳಿಸಲಾಗುವುದು. ಆಯ್ಕೆಯಲ್ಲಿ ತೀರ್ಪುಗಾರರದ್ದೇ ಅಂತಿಮ ನಿರ್ಧಾರ.

    9) ಬರಹಗಳನ್ನು ಕಳುಹಿಸಬೇಕಾದ ಇಮೇಲ್ – [email protected]

    10) ವಿಳಾಸ : ಕೊಡಿಯಾಲ್ ಗುತ್ತು, ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ, 12/1139/1, ಕೊಡಿಯಾಲ್ ಗುತ್ತು (ಪಶ್ಚಿಮ), ಬಂಗಾರ್‌ ಗುತ್ತು ರಸ್ತೆ, ಮಂಗಳೂರು – 575003.

    Share. Facebook Twitter Pinterest LinkedIn Tumblr WhatsApp Email
    Previous Articleಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ‘ಮಳೆ ಹಾಡುಗಳ ಕಲರವ’ 
    Next Article ಕೀಲಿಮಣೆ ವಿನ್ಯಾಸಕಾರ ಡಾ. ಕೆ.ಪಿ.ರಾವ್ ಇವರಿಂದ ಉಪನ್ಯಾಸ ಹಾಗೂ ಸಂವಾದ
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.