ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು 112ನೆಯ ‘ಸಂಸ್ಥಾಪನಾ ದಿನಾಚರಣೆ’ ಕಾರ್ಯಕ್ರಮವನ್ನು ದಿನಾಂಕ 05 ಮೇ 2026ರಂದು ಬೆಳಿಗ್ಗೆ 10-30 ಗಂಟೆಗೆ ಶಿವಮೊಗ್ಗದಗೋಪಿ ಶೆಟ್ಟಿ ಕೊಪ್ಪ ಚಾಲುಕ್ಯ ನಗರ ಸಾಹಿತ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಶಿವಮೊಗ್ಗ ಇದರ ಅಧ್ಯಕ್ಷರಾದ ಡಿ. ಮಂಜುನಾಥ ಇವರು ವಹಿಸಲಿದ್ದು, ಶಾಸಕರಾದ ಎಸ್.ಎನ್. ಚನ್ನಬಸಪ್ಪ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಗುವುದು. ಶ್ರೀಮತಿ ನಳಿನಾಕ್ಷಿ ಮತ್ತು ತಂಡ, ಚಂದ್ರಶೇಖರ ಮತ್ತು ತಂಡ, ಷರೀಫ್ ಮತ್ತು ತಂಡ, ಡಾ. ನೇತ್ರಾವತಿ ಮತ್ತು ತಂಡ ಇವರಿಂದ ಕನ್ನಡ ಗೀತೆಗಳ ಗಾಯನ, ಡಾ. ಕಲೀಮ್ ಉಲ್ಲಾ, ಡಾ. ಜಿ.ಆರ್. ಲವ, ಶ್ರೀಮತಿ ಗಾಯತ್ರಿ ಸುರೇಂದ್ರ, ಬಾಲರಾಜ್ ಚುರ್ಚುಗುಂಡಿ ಇವರಿಂದ ಕಥೆ ಹಾಗೂ ಕೆ.ಎಸ್. ಮಂಜಪ್ಪ, ಬಿ.ಟಿ. ಅಂಬಿಕಾ, ಶ್ರೀಮತಿ ಊರ್ಮಿಳಾ ರಾವ್, ಅನನ್ಯ ಗಿರೀಶ್, ಪಿ.ಕೆ. ಸತೀಶ್, ವಾಗೀಶ್ ಆರಾಧ್ಯಮಠ, ಕುಮಾರಿ ಗೌರಿಶ್ರೀ, ಶ್ರೀಮತಿ ಶಶಿಕಲಾ, ಶ್ರೀಮತಿ ಗಾಯತ್ರಿ ಎಸ್.ಕೆ., ಡಾ. ನೇತ್ರಾವತಿ, ಶ್ರೀಮತಿ ಆಶಾ ಶ್ರೀಧರ ಇವರಿಂದ ಕವಿಗಳ ಕಾವ್ಯ ಕಲರವ ಪ್ರಸ್ತುತಗೊಳ್ಳಲಿದೆ.

