ಬೆಂಗಳೂರು : ಡಾ. ಡಿ.ಆರ್. ನಾಗರಾಜ್ ಬಳಗ (ನೋ) ದೊಡ್ಡಬಳ್ಳಾಪುರ ಹಾಗೂ ಕರ್ನಾಟಕ ಗಜಲ್ ಅಕಾಡೆಮಿ (ರಿ.) ಬೆಂಗಳೂರು ಇವರ ಸಹಯೋಗದಲ್ಲಿ ‘ಗಜಲ್ ಸಂಭ್ರಮ’ ವಾಚನ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 19 ಏಪ್ರಿಲ್ 2026ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕಲಾಭವನ ಮುದ್ದನಾಯಕನ ಪಾಳ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ. ರವಿಕುಮಾರ್ ಇವರು ಮಾಡಲಿದ್ದು, ಸಾಹಿತಿ ಡಾ. ಪ್ರಕಾಶ್ ಮಂಟೇದ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಾಚನ ಮತ್ತು ಗಾಯನ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಗಜಲ್ ಕಾರ ಬಹುಭಾಷಾ ಕವಿ ಮಹಮದ್ ಬಡ್ಡೂರು ಇವರು ವಹಿಸಲಿದ್ದು, ಡಾ. ಹಸೀನಾ ಹೆಚ್.ಕೆ., ಶ್ರೀಮತಿ ಪ್ರೇಮ ಹೂಗಾರ, ಹಾ.ಮ ಸತೀಶ್, ರಂಗಸ್ವಾಮಿ ಸಿದ್ಧಯ್ಯ, ಶ್ರೀಮತಿ ಉಷಾ ಜ್ಯೋತಿ, ರವಿ ವಿಠಲ, ಶ್ರೀಮತಿ ಮಮತ ಕೆ.ಎಸ್., ದಾಸ್, ಲಕ್ಷ್ಮೀನಾರಾಯಣ ಕೆ. ವಾಣಿಗರಹಳ್ಳಿ ಮತ್ತು ಶ್ರೀಮತಿ ರಮ್ಯಾ ಕೆ.ಜಿ. ಇವರು ಗಜಲ್ ವಾಚನ ಮಾಡಲಿದ್ದಾರೆ. ಶರಣು ಗೊಗಿ ಇವರು ತಬಲದಲ್ಲಿ, ಗಿರೀಶ್ ಕೊಳಾಲು ಇವರು ವಯೋಲಿನ್ ಮತ್ತು ಪ್ರಮೋದ್ ಜೀವ ಇವರು ಕೀಬೋರ್ಡ್ ನಲ್ಲಿ ಸಹಕರಿಸಲಿದ್ದಾರೆ.

