ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ನಾರಾಯಣ ಗುರು ಯುವವೇದಿಕೆ (ರಿ.) ಮಂಗಳೂರು ಇವರ ಸಹಯೋಗದಲ್ಲಿ ‘ಮರಿಯಲದ ಮಿನದನ’ ಕಾರ್ಯಕ್ರಮವನ್ನು ದಿನಾಂಕ 02 ಆಗಸ್ಟ್ 2026ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಕಲಾಕುಂಜದ ಎದುರು ಉನ್ನತಿ ಸಪ್ತವರ್ಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ವಕೀಲರಾದ ಅರುಣ್ ಬಂಗೇರ ಇವರು ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ‘ತುಳು ಬದ್ಕ್ ದ ಪೊರ್ಲು ತಿರ್ಲ್’ ಎಂಬ ವಿಷಯದ ಬಗ್ಗೆ ನೀಲಯ ಎಂ. ಅಗರಿ ಮತ್ತು ಸ್ಮಿತೇಶ್ ಎಸ್. ಬಾರ್ಯ ಇವರು ಉಪನ್ಯಾಸ ನೀಡಲಿದ್ದಾರೆ. ಖ್ಯಾತ ಸಂಗೀತ ಹರಿಕಥೆ ವಿದ್ವಾಂಸರಾದ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ಪದರಂಗಿತ : ‘ಕೋಟಿ ಚೆನ್ನಯ ಕಥಾ ಪ್ರಸಂಗ’ ಪ್ರಸ್ತುತಿ ನಡೆಯಲಿದೆ.

