Subscribe to Updates

    Get the latest creative news from FooBar about art, design and business.

    What's Hot

    ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ‘ಕಲಾಧಾರಾ 12’ ನೃತ್ಯ ಪ್ರಸ್ತುತಿ

    August 10, 2026

    ‘ಕರಾವಳಿ ಮಹಿಳಾ ಕಥಾ ಸ್ಪರ್ಧೆ’ಯ ಬಹುಮಾನ ವಿತರಣಾ ಸಮಾರಂಭ

    August 10, 2026

    ಕೋಡಿಕಲ್ ಸರಯೂ ಸಭಾಭವನದಲ್ಲಿ ಯಕ್ಷಗಾನ ಪ್ರದರ್ಶನ

    August 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ನಾಗರಾಜ ಹಂದೆ ಸಂಸ್ಮರಣೆ
    Commemoration

    ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ನಾಗರಾಜ ಹಂದೆ ಸಂಸ್ಮರಣೆ

    August 10, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಲಿಗ್ರಾಮ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಆಯೋಜಿಸಿಕೊಂಡ ‘ಅರ್ಥಾಂಕುರ-27’ರಲ್ಲಿ ‘ನಾಗರಾಜ ಹಂದೆ ಸಂಸ್ಮರಣೆ’ ಕಾರ್ಯಕ್ರಮವು ದಿನಾಂಕ 08 ಆಗಸ್ಟ್ 2026ರಂದು ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿದ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ತಾರಾನಾಥ ಹೊಳ್ಳ “ದಿವಂಗತ ನಾಗರಾಜ ಹಂದೆಯವರು ಬಹಳಷ್ಟು ಕಾಲ ಸಾಲಿಗ್ರಾಮ ದೇಗುಲದಲ್ಲಿ ಮ್ಯಾನೆಜರ್ ಆಗಿ ದುಡಿದವರು. ಕಲಾಸಕ್ತಿಯಿಂದ ಹೆಚ್ಚು ಕಲಾ ತಂಡಗಳಿಗೆ ಸ್ಪೂರ್ತಿಯಾಗಿ ಕಾರ್ಯಕ್ರಮ ನೆರವೇರಿಸಿಕೊಡುವಲ್ಲಿ ಶ್ರಮಿಸಿದವರು. ಕಲಾ ತಂಡಗಳನ್ನು ಆಹ್ವಾನಿಸಿಕೊಂಡು ವಿಶೇಷ ಆಹ್ವಾನವೀಯುತ್ತಾ ಅತಿಥಿ ಸತ್ಕಾರದಿಂದ ಮನ ಗೆದ್ದವರು. ಅವರಿಲ್ಲ ಎಂಬುದು ಅತ್ಯಂತ ನೋವು ತಂದಿದೆ” ಎಂದು ಹೇಳಿದರು.

    ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯ ಮಾತನಾಡಿ, “ಕುಟುಂಬದ ಸದಸ್ಯನಂತೆ ದೇಗುಲದ ಏಳ್ಗೆಗಾಗಿ ಶ್ರಮಿಸಿದ ನಾಗರಾಜ ಹಂದೆಯವರ ಅಕಾಲ ಮರಣ ಮನಸ್ಸಿಗೆ ಬೇಸರ ತಂದಿದೆ” ಎಂದರು. ಮೃತರ ಸಹೋದರ ಭಾಸ್ಕರ ಹಂದೆ ಮಾತನಾಡಿ ಅನವರತವೂ ದೇಗುಲದ ಸಮಸ್ತ ಏಳ್ಗೆಗೆ ಶ್ರಮಿಸಿದ ಸಹೋದರನ ಸಾವಿನ ಬಾಧೆಯನ್ನು ತೋಡಿಕೊಂಡರು. ದೇಗುಲದ ಸಿಬ್ಬಂದಿ ಗಣೇಶ್ ಭಟ್, ಹಿರಿಯ ಭಾಗವತ ಕರ್ಜೆ ಶ್ರೀಧರ ಹೆಬ್ಬಾರ್, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಡಾ. ಜಗದೀಶ್ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ತೆಂಕುತಿಟ್ಟಿನ ಹಿಮ್ಮೇಳದೊಂದಿಗೆ ‘ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ರಂಗ ಪ್ರಸ್ತುತಿಗೊಂಡಿತು.

    baikady commemoration Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಪಾಂಡವಪುರ ಕುಂತಿ ಬೆಟ್ಟದಲ್ಲಿ ‘ಜಿಲ್ಲಾ ನಾಟಕೋತ್ಸವ’ | ಆಗಸ್ಟ್ 09
    Next Article ಬೆಂಗಳೂರಿನ ನಯನ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಆಗಸ್ಟ್ 10
    roovari

    Add Comment Cancel Reply


    Related Posts

    ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ‘ಕಲಾಧಾರಾ 12’ ನೃತ್ಯ ಪ್ರಸ್ತುತಿ

    August 10, 2026

    ‘ಕರಾವಳಿ ಮಹಿಳಾ ಕಥಾ ಸ್ಪರ್ಧೆ’ಯ ಬಹುಮಾನ ವಿತರಣಾ ಸಮಾರಂಭ

    August 10, 2026

    ಕೋಡಿಕಲ್ ಸರಯೂ ಸಭಾಭವನದಲ್ಲಿ ಯಕ್ಷಗಾನ ಪ್ರದರ್ಶನ

    August 10, 2026

    ಖ್ಯಾತ ಯಕ್ಷಗಾನ ಪ್ರಸಂಗಕರ್ತ, ಭಾಗವತ ಬೋಳೂರು ಮಧುಕುಮಾರ್ ವಿಧಿ ವಶ

    August 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.