Subscribe to Updates

    Get the latest creative news from FooBar about art, design and business.

    What's Hot

    “ನುಡಿಮುತ್ತು” ಕೃತಿಲೋಕಾರ್ಪಣೆ | ಜೂನ್ 18

    June 16, 2025

    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಬೈಠಕ್ @ ಕೊಡಿಯಾಲ್‌ಗುತ್ತು ಸಂಗೀತ ಕಛೇರಿ | ಜೂನ್ 21

    June 16, 2025

    ಪುಸ್ತಕ ವಿಮರ್ಶೆ | ನಿರಂಜನರ ‘ಚಿರಸ್ಮರಣೆ’

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಲಿಗ್ರಾಮ ಗುರುನರಸಿಂಹ ದೇವಳದಲ್ಲಿ ‘ರಾಜಾ ದ್ರುಪದ’ ಯಕ್ಷಗಾನ ಪ್ರದರ್ಶನ
    Cultural

    ಸಾಲಿಗ್ರಾಮ ಗುರುನರಸಿಂಹ ದೇವಳದಲ್ಲಿ ‘ರಾಜಾ ದ್ರುಪದ’ ಯಕ್ಷಗಾನ ಪ್ರದರ್ಶನ

    January 22, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಾಲಿಗ್ರಾಮ ಗುರುನರಸಿಂಹ ದೇವಳದ ವಾರ್ಷಿಕ ರಥೋತ್ಸವ ದೇವರ ಅವಭೃತೋತ್ಸವದ ಅಂಗವಾಗಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಯಕ್ಷ ಚಿಂತಕ ಸುಜಯೀಂದ್ರ ಹಂದೆ ಹೆಚ್. ವಿರಚಿತ “ರಾಜಾ ದ್ರುಪದ” ಯಕ್ಷಗಾನದ ಪ್ರದರ್ಶನ ದಿನಾಂಕ 17 ಜನವರಿ 2025 ರಂದು ನಡೆಯಿತು.

    ಕೋಟ ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಾಲಯದ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ನಡೆದ ಈ ಕಾರ್ಯಕ್ರಮವನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಸಾಹಿತಿ ಹಾಗೂ ಕಲಾಪೋಷಕರಾದ ಹೆಚ್. ಜನಾರ್ದನ ಹಂದೆ ಮಾತನಾಡಿ “ಕಲಾಸೇವೆ ಮಾಡುವ ಕಲಾವಿದರಿಗೆ ಹಾಗೂ ಸಂಘಟಕರಿಗೆ ಪ್ರೋತ್ಸಾಹ ನೀಡಬೇಕಾದುದು ಕಲಾಭಿಮಾನಿಗಳ ಮತ್ತು ದಾನಿಗಳ ಕರ್ತವ್ಯ. ಆಗ ಮಾತ್ರ ನಮ್ಮ ಶ್ರೀಮಂತ ಸಂಸ್ಕೃತಿಯ ಉಳಿವು ಸಾಧ್ಯ. ರಥೋತ್ಸವ ಹಾಗೂ ಅವಭೃತದ ಸಂದರ್ಭದಲ್ಲಿ ಯಕ್ಷಗಾನ ಆಯೋಜಿಸಿರುವುದರಿಂದ ಹಂದೆ ದೇವಳದ ಆಡಳಿತ ಮಂಡಳಿ ಮತ್ತು ಸಂಘಟಕರು ಅಭಿನಂದನಾರ್ಹರು” ಎಂದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರಿನ ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಯಕ್ಷ ಚಿಂತಕರಾದ ಡಾ. ಆನಂದ ರಾಮ ಉಪಾಧ್ಯ ಮಾತನಾಡಿ “ನೂರಾರು ವರ್ಷಗಳ ಇತಿಹಾಸದ ಯಕ್ಷಗಾನ ಕಲೆಗೆ ಕಲಾವಿದರ ಕೊಡುಗೆ ಅಪಾರ. ಅಂತೆಯೇ ಡಾ. ಕಾರಂತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಯೋಗ್ಯವಾದ ಯಕ್ಷಗಾನ ಬಯಲಾಟ ಪ್ರಕಟಿಸಿದ ಬಳಿಕ ಹೆಚ್ಚಿನ ಜನಸ್ಪಂದನೆ ದೊರೆಯಿತು. ಆಟ, ಬಯಲಾಟ, ದಶಾವತಾರ ಆಟ, ಯಕ್ಷಗಾನ ಹೀಗೆ ಹಲವಾರು ಹೆಸರಿನಲ್ಲಿ ಪರಿಷ್ಕರಣೆಗೊಂಡು ವಿದ್ಯಾವಂತರು ಹಾಗೂ ವಿದ್ವಜ್ಜನರು ಹೆಚ್ಚು ಹೆಚ್ಚು ಕಲೆಯ ಕುರಿತು ಆಕರ್ಷಿತರಾದರು ಮತ್ತು ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಕೃಷಿ ಮಾಡಿದರು. ಹಾಗಾಗಿ ಯಕ್ಷಗಾನಕ್ಕೆ ವಿಶ್ವ ಮಾನ್ಯತೆ ದೊರೆಯಿತು. ಇಂದು ಶಾಲಾ ಶಿಕ್ಷಣದ ಜೊತೆಗೆ ಯಕ್ಷಗಾನ ಶಿಕ್ಷಣ ನೀಡುತ್ತಿರುವುದು ಸಂತೋಷದಾಯಕ ಬೆಳವಣಿಗೆ. ಎಲ್ಲರೂ ಕಲಾವಿದರಾಗದಿದ್ದರೂ ಉತ್ತಮ ಪ್ರೇಕ್ಷಕರಾಗಿ ರೂಪುಗೊಂಡರೆ ಕಲೆಗೆ ಅದೇ ಪೂರಕ ಎಂದರು”.

    ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಕಲಾ ಪೋಷಕರಾದ ಕಾರ್ಕಡ ತಾರಾನಾಥ ಹೊಳ್ಳ ಮತ್ತು ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಅಮರ ಹಂದೆಯವರು ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಕೆ. ಕಾರ್ಯಕ್ರಮವನ್ನು ನಿರ್ವಹಿಸಿದರು.


    ಸಭಾಕಾರ್ಯಕ್ರಮದ ಬಳಿಕ ಕೋಟ ಸುದರ್ಶನ ಉರಾಳ ಇವರ ಸಂಯೋಜನೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಕಲಾವಿದರಾಗಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಸಂಜೀವ ಹೆನ್ನಾಬೈಲು, ಡಾ. ಶಿವಕುಮಾರ್ ಅಲಗೋಡು, ಆದಿತ್ಯ ಹೆಗಡೆ, ನರಸಿಂಹ ತುಂಗ, ಶ್ರೀರಾಮ್ ಹೆಬ್ಬಾರ್, ಶಶಾಂಕ ಉರಾಳ, ರಾಜು ಪೂಜಾರಿ ಭಾಗವಹಿಸಿದರು.

    Cultural kannada yakshagana
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ವಿದ್ಯಾಗಣಪತಿ ದೇವಸ್ಥಾನದ ಆಶ್ರಯದಲ್ಲಿ ತಿಂಗಳ ಸರಣಿ ತಾಳಮದ್ದಳೆ
    Next Article ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ‘ತಾಲೂಕು ಮಟ್ಟದ ಗಮಕ ಸಮ್ಮೇಳನ’ | ಜನವರಿ 25
    roovari

    Add Comment Cancel Reply


    Related Posts

    ಡಾ.ತಲ್ಲೂರು ಶಿವರಾಮ ಶೆಟ್ಟರಿಗೆ ‘ಕರುನಾಡ ಸೇವಾ ಕಣ್ಮಣಿ’ ರಾಜ್ಯ ಪ್ರಶಸ್ತಿ

    June 16, 2025

    ಪ್ರಸಿದ್ಧ ಚಂಡೆ ವಾದಕರಾದ ಸೂರ್ಯ ದೇವಾಡಿಗ ನಿಧನ

    June 16, 2025

    ನಮ್ಮ್ ಮದ್ದಳೆ ರಾಘು ಹೆಗಡೆ ಯು. ಕೆ. ಗೆ (ಇಂಗ್ಲೆಂಡ್ ಗೆ)

    June 16, 2025

    ಯಕ್ಷಧ್ರುವ – ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆ

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.