ಬೆಂಗಳೂರು : ಪ್ರಯೋಗರಂಗ ಬೆಂಗಳೂರು ಇವರ ವತಿಯಿಂದ ರಂಗಭೂಮಿ ಒಡನಾಡಿ ಕೃಷ್ಣಮೂರ್ತಿ ಊರುಫ್ ಕಿಟ್ಟಿ ಅಲಿಯಾಸ್ ಮಹಿಷಾಸುರ ಇವರಿಗೆ ‘ರಂಗ ನಮನ’ ಶ್ರದ್ದಾಂಜಲಿ ಸಭೆಯು ದಿನಾಂಕ 09 ಮೇ 2026ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಅವರಣದಲ್ಲಿ ನಡೆಯಿತು.
ಪ್ರಯೋಗರಂಗದ ಜಗದೀಶ್ ಮತ್ತು ಶ್ರೀನಿವಾಸ್ ಮೇಷ್ಟ್ರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು. ವಿಶೇಷವಾಗಿ ರೋಹಿಣಿ ರಘುನಂದನ್ ನೇತೃತ್ವದಲ್ಲಿ ನಡೆದ ರಂಗಗಿಗೀತೆ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಮೂಡಿಬಂತು. ಶ್ರೀನಿವಾಸ್ ಮೇಷ್ಟ್ರ ಕುಟುಂಬದ ಸದಸ್ಯರು ಸೇರಿದಂತೆ 100ಕ್ಕೂ ಹೆಚ್ಚು ಕಿಟ್ಟಿ ಅಭಿಮಾನಿಗಳು ಭಾಗವಹಿಸಿ ಗೌರವ ನಮನ ಸಲ್ಲಿಸಿದರು. ಕೆ.ವಿ. ನಾಗರಾಜಮೂರ್ತಿ, ಬಿ.ವಿ. ರಾಜರಾಮ್, ನಾಗೇಂದ್ರ ಶಾ, ಅಂತರಂಗ ಶಾಮ್, ಮುರುಡಯ್ಯ, ಜಿ.ಪಿ.ಓ. ಚಂದ್ರು, ಎಂ.ಎಸ್. ವಿದ್ಯಾ, ಸಿದ್ದಪ್ಪಾಜಿ ರಘು, ಬಿ.ಇ.ಎಂ.ಎಲ್. ಅನಿಲ್, ಸ್ಪಂದನ ರಾಘು, ಚಂದ್ರಕಾಂತ, ಮಾಧುರಿ, ಸಂಚಯ ಗಣೇಶ್, ಪೌರಾಣಿಕ ನಾಟಕಗಳ ಕಲಾವಿದರು ಸೇರಿದಂತೆ ದೊಡ್ದ ರಂಗಸಮೂಹವೇ ಸೇರಿ ತಮ್ಮ ಅಭಿಮಾನ ಮತ್ತು ಗೌರವವನ್ನು ಕಿಟ್ಟಿಗೆ ಅರ್ಪಿಸಿದರು. ನಿಜಕ್ಕೂ ಇದೊಂದು ಅಪರೂಪದ ಭಾವ ಪೂರ್ಣ ಕಾರ್ಯಕ್ರಮ.

