ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಈ ಒಂದು ವಾರದ ರಂಗ ಶಿಬಿರ-2026 ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿದ್ದು ಬಹಳ ಸಂತೋಷ ತಂದಿತು. ಮಕ್ಕಳ ಪ್ರದರ್ಶನಗಳು, ಹಾವಭಾವಗಳ ಮನಸೂರೆಗೊಳ್ಳುವ ನಟನೆ ಹಾಗೂ ವೇಷಭೂಷಣ ಎಲ್ಲವೂ ಮನಸ್ಸಿಗೆ ಹತ್ತಿರವಾದ ಅನುಭವ ನೀಡಿದವು.
ಪ್ರಯೋಜಕರು ಈ ಕಾರ್ಯಕ್ರಮದ ಮೂಲಕ ಬೇಸಿಗೆ ರಜೆಯನ್ನು ಹೀಗೂ ಕಳೆಯಲು ಸಾಧ್ಯವೆಂಬುದನ್ನು ಸ್ಪಷ್ಟಪಡಿಸಿದರು. ವೇಷಭೂಷಣ, ನಟನೆ ಹಾಗೂ ಸಂಗೀತ ಮಕ್ಕಳಿಗೆ ಜೀವನ ಪಾಠಗಳನ್ನು ಕಲಿಸುವ ಸಾಧನಗಳಾಗಿ ಪರಿಣಮಿಸಿದವು.
ನೀನಾಸಂನಂತಹ ದೊಡ್ಡ ಶಾಲೆಯಲ್ಲಿ ತರಬೇತಿ ಪಡೆದ ರಂಗ ಕಲಾವಿದೆ ತೃಷಾ ಶೆಟ್ಟಿ, ಮಕ್ಕಳು ಅತ್ಯುತ್ತಮವಾಗಿ ಸಿದ್ಧರಾಗುವಂತೆ ಮಾರ್ಗದರ್ಶನ ನೀಡಿದರು. ಅವರ ಶ್ರಮದಿಂದ ಮಕ್ಕಳು ತಮ್ಮ ಪ್ರತಿಭೆಯನ್ನು ಮೆರೆದರು.
ಒಟ್ಟಾರೆ, ಮಕ್ಕಳಲ್ಲಿನ ಪ್ರತಿಭೆ ಹೊರಗೆ ತರುವಂತಹ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇದು ನಿಜವಾಗಿಯೂ ಅದ್ಭುತವಾದ ಕಾರ್ಯಕ್ರಮವಾಯಿತು.

ವಿಮರ್ಶಕಿ : ಶಿಲ್ಪಾ ಎಂ.ಬಿ. ಮಂಗಳೂರು
ಎಂ.ಕಾಂ. ಕ್ಷೇತ್ರದಲ್ಲಿ ಶಿಕ್ಷಣ ಪಡೆದಿದ್ದು, ಪ್ರಸ್ತುತ ಪ್ರವೇಶ ವಿಭಾಗದ ವ್ಯವಸ್ಥಾಪಕಳಾಗಿ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ 14 ವರ್ಷ ಅಂತರ ರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇದೆ. ನಾಟಕ, ಕಲೆ ವಿಷಯದಲ್ಲಿ ವಿಶೇಷ ಆಸಕ್ತಿ ಇದ್ದು, ತಂಡದೊಂದಿಗೆ ಕೆಲಸ ಮಾಡುವುದನ್ನು, ಹೊಸ ವಿಷಯಗಳನ್ನು ಕಲಿಯುವುದನ್ನು ಮತ್ತು ನನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದನ್ನು ನಾನು ಇಷ್ಟಪಡುತ್ತೇನೆ.
