ಬೆಂಗಳೂರು : ಚಿತ್ರಾ ಭಾರತಿ ಇದರ ವತಿಯಿಂದ ‘ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ’ಗಳನ್ನು ದಿನಾಂಕ 22ರಿಂದ 25 ಜೂನ್ 2026 ರವರೆಗೆ ಪ್ರತಿದಿನ 5-00 ಗಂಟೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನನಲ್ಲಿ ಆಯೋಜಿಸಲಾಗಿದೆ.
ದಿನಾಂಕ 22 ಜೂನ್ 2026ರಂದು ಚೇತನ್ ಗಂಗವಾಣೆ ಇವರಿಂದ ‘ಚಿತ್ರಕಥಿ ಗಣೇಶ್ ವಂದನಾ’ ಮಹಾರಾಷ್ಟ್ರದ ಚಿತ್ರಕಥಿ ಸಂಪ್ರದಾಯದ ಸಾಂಪ್ರದಾಯಿಕ ಕಥೆ ಹೇಳುವ ಪ್ರದರ್ಶನ, ದಿನಾಂಕ 23 ಜೂನ್ 2026ರಂದು ಡಾ. ಸುರೇಶ್ ಕುಮಾರ್ ಇವರಿಂದ ‘ಪಹಾಡಿ ವರ್ಣಚಿತ್ರಗಳ ಕಥೆಗಳು’ ಪಹಾಡಿ ಚಿಕಣಿ ಚಿತ್ರಕಲೆಯ ನಿರೂಪಣೆ, ಸಂಕೇತ ಮತ್ತು ಪರಂಪರೆ, ದಿನಾಂಕ 24 ಜೂನ್ 2026ರಂದು ಶ್ರೀಮತಿ ಮೋನಿಮಾಲಾ ಚಿತ್ರಕಾರ್ ಇವರಿಂದ ‘ಬಂಗಾಳ ಪಟಚಿತ್ರ ಪ್ರದರ್ಶನ’ ಸಂಗೀತ ಮತ್ತು ನಿರೂಪಣೆಯೊಂದಿಗೆ ಸಾಂಪ್ರದಾಯಿಕ ಚಿತ್ರಿಸಿದ ಸುರುಳಿ ಕಥೆ, ದಿನಾಂಕ 25 ಜೂನ್ 2026ರಂದು ಡಾ. ಜನಾರ್ದನ ರಾವ್ ಹವಾಂಜೆ ಇವರಿಂದ ‘ಕರಾವಳಿಯ ಕಾವಿ ಕಲೆ’ ಕಾವಿ ಭಿತ್ತಿ ಚಿತ್ರ ಸಂಪ್ರದಾಯದ ಇತಿಹಾಸ, ತಂತ್ರಗಳು ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಮಾಹಿತಿ ನೀಡಲಾಗುವುದು.

