ಮೈಸೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕ ಮತ್ತು ಶ್ರೀ ಅನಂತೇಶ್ವರ ಟ್ರಸ್ಟ್ (ರಿ.) ಮೈಸೂರು ಇವರ ಆಯೋಜನೆಯಲ್ಲಿ ಎರಡು ದಿನದ ‘ಸುಗಮ ಸಂಗೀತ ಕಾರ್ಯಾಗಾರ’ವನ್ನು ದಿನಾಂಕ 16 ಮತ್ತು 17 ಮೇ 2026ರಂದು ಬೆಳಿಗ್ಗೆ 9-30ರಿಂದ ಸಂಜೆ 6-00 ಗಂಟೆ ತನಕ ಮೈಸೂರಿನ ಕೆ.ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ಶ್ರೀ ಅನಂತೇಶ್ವರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಾಡಿನ ಖ್ಯಾತ ಸಂಗೀತ ನಿರ್ದೇಶಕರಾದ ಎನ್.ಎಸ್. ಪ್ರಸಾದ್ (ಮ್ಯಾಂಡೋಲಿನ್ ಪ್ರಸಾದ್) ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಸಂಗೀತದ ಒಳಗೆ, ಸುಗಮ ಸಂಗೀತದ ಬಗ್ಗೆ ಮತ್ತು ಧ್ವನಿ ಸಂಸ್ಕರಣೆ ಇವುಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಾಂಕೇತಿಕ ನೋಂದಣಿ ಫೀ ರೂ.100/- ಆಗಿದ್ದು, ಸಂಚಾಲಕರಾದ ಸುಜಾತ ಜಯಕುಮಾರ್ 94836 38973 ಮತ್ತು ಗೀತಾಲಕ್ಷ್ಮಿ ಕಿಣಿ 98861 27640 ಇವರನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬಹುದು.

