Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ಕಲಾಮಂದಿರದಲ್ಲಿ ‘ಕೂಡಲಸಂಗಮ’ ದೃಶ್ಯ ರೂಪಕ | ಏಪ್ರಿಲ್ 19

    April 18, 2026

    ಮಾಲತಿ ಮುದಕವಿ ಮತ್ತು ಸರಸ್ವತಿ ಭೋಸಲೆ ಇವರ ಕೃತಿಗಳ ಲೋಕಾರ್ಪಣೆ

    April 18, 2026

    ಯಕ್ಷಗಾನ ಕಲಾ ಕೇಂದ್ರದಿಂದ ಯಕ್ಷಗಾನ ತರಬೇತಿ | ಕೊನೆಯ ದಿನಾಂಕ ಮೇ 25 

    April 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನೆಂಪು ನರಸಿಂಹ ಭಟ್ ಇವರ ಸಂಸ್ಮರಣೆ ಮತ್ತು ಕೃತಿಯ ಅನಾವರಣ ಕಾರ್ಯಕ್ರಮ
    Book Release

    ನೆಂಪು ನರಸಿಂಹ ಭಟ್ ಇವರ ಸಂಸ್ಮರಣೆ ಮತ್ತು ಕೃತಿಯ ಅನಾವರಣ ಕಾರ್ಯಕ್ರಮ

    April 18, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಕವಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕ, ದಿವಂಗತ ನೆಂಪು ನರಸಿಂಹ ಭಟ್ ಇವರ ಸಂಸ್ಮರಣೆ ಮತ್ತು ‘ನಭ’ ಜೀವನ ಯಾನ ಕೃತಿಯ ಅನಾವರಣ ಕಾರ್ಯಕ್ರಮವು ದಿನಾಂಕ 28 ಮಾರ್ಚ್ 2026ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು.

    “ನಭ ನೆಂಪುರವರ ಜೀವನ ಚರಿತ್ರೆಯನ್ನು ಒಂದು motivational story (ಪ್ರೇರಣಾತ್ಮಕ ಕಥೆ)ಯಾಗಿ ತೆಗೆದುಕೊಳ್ಳಬಹುದು. ಬದುಕಿನಲ್ಲಿ ತಾಪತ್ರಯಗಳು ಎದುರಾದಾಗ, ಅವುಗಳನ್ನು ಎದುರಿಸುವ ಬದಲು ಪಲಾಯನ ಮಾಡುವವರು, ನಿಂತು, ಗಮನಿಸಿ, ತಮ್ಮ ದಾರಿಯನ್ನು ಬದಲಿಸಿಕೊಳ್ಳಬೇಕು ಎನ್ನಿಸುವಂತಹ ಬದುಕು ಅವರದ್ದು” ಎಂದು ಕೃತಿಯ ಪ್ರಧಾನ ಸಂಪಾದಕರಾದ ಕವಿ, ಕತೆಗಾರ, ವಿಮರ್ಶಕ ಬೆಳಗೋಡು ರಮೇಶ ಭಟ್ ಅಭಿಪ್ರಾಯಪಟ್ಟರು.

    ‘ನಭ ಜೀವನ ಯಾನ’ ಕೃತಿಯನ್ನು ಪರಿಚಯಿಸಿದ ಲಕ್ಷ್ಮೀ ಮಚ್ಚಿನ ಪುಸ್ತಕದ ಸಮಗ್ರ ಚಿತ್ರಣ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, “ಮಕ್ಕಳ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದ ನಭ, ಬರೆದಂತೆಯೇ ಬದುಕಿದ್ದರು. ಕೃತಿಗೂ ಹಾಗೂ ಅವರ ಜೀವನಕ್ಕೂ ಸಾಮ್ಯತೆ ಇತ್ತು. ಸಂಸಾರ, ಸಂಸ್ಕಾರ ಹಾಗೂ ಸಂಸ್ಕೃತಿ ಈ ಮೂರೂ ಸಹ ಅವರ ವ್ಯಕ್ತಿತ್ವದೊಳಗಿತ್ತು” ಎಂದರು.

    ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ತಮ್ಮ ಗುರುಗಳಾದ ನೆಂಪು ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ನಭ ಅವರ ಹಿರಿಯ ಸೋದರ ನೆಂಪು ಶ್ರೀಧರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಹರಿದಾಸ ಬಿ.ಸಿ. ರಾವ್ ಶಿವಪುರ ಹಾಗೂ ಡಾ. ಡಿ. ಸದಾಶಿವ ಭಟ್ ಇವರು ನೀಡಿದ ವೀಡಿಯೋ ಸಂದೇಶಗಳನ್ನು ಈ ಸಂದರ್ಭದಲ್ಲಿ ಬಿತ್ತರಿಸಲಾಯಿತು. ಮುಖ್ಯ ಅತಿಥಿಗಳು ನೆಂಪು ನರಸಿಂಹ ಭಟ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

    ರಾಘವೇಂದ್ರ ಉಡುಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಮುರಳೀಧರ ಭಟ್ ವಂದಿಸಿದರು. ಪುಸ್ತಕ ಬಿಡುಗಡೆಗೂ ಮೊದಲು, ನಭರವರ ಆಯ್ದ ಭಾವಗೀತೆಗಳನ್ನು ಶ್ರೀಮತಿ ಇಂದಿರಾ ಮಂಜುನಾಥ ಭಟ್ ಮತ್ತು ಅವರ ತಂಡ ಸೊಗಸಾಗಿ ಪ್ರಸ್ತುತ ಪಡಿಸಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ, ಕಾಸರಗೋಡು ಇವರಿಂದ ಪ್ರದರ್ಶನಗೊಂಡ ಯಕ್ಷಗಾನ ಗೊಂಬೆಯಾಟ ಪ್ರಸಂಗ ‘ಲಂಕಾದಹನ’ ನೆರೆದವರೆಲ್ಲರನ್ನೂ ರಂಜಿಸಿತು.

    baikady Book release commemoration Literature Puppetry roovari
    Share. Facebook Twitter Pinterest LinkedIn Tumblr WhatsApp Email
    Previous Articleಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ | ಕೊನೆಯ ದಿನಾಂಕ ಏಪ್ರಿಲ್ 30
    Next Article ‘ಕನ್ನಡ ಪುಸ್ತಕ ಸೊಗಸು ಬಹುಮಾನ’ಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಮೇ 11
    roovari

    Add Comment Cancel Reply


    Related Posts

    ಮೈಸೂರಿನ ಕಲಾಮಂದಿರದಲ್ಲಿ ‘ಕೂಡಲಸಂಗಮ’ ದೃಶ್ಯ ರೂಪಕ | ಏಪ್ರಿಲ್ 19

    April 18, 2026

    ಮಾಲತಿ ಮುದಕವಿ ಮತ್ತು ಸರಸ್ವತಿ ಭೋಸಲೆ ಇವರ ಕೃತಿಗಳ ಲೋಕಾರ್ಪಣೆ

    April 18, 2026

    ಯಕ್ಷಗಾನ ಕಲಾ ಕೇಂದ್ರದಿಂದ ಯಕ್ಷಗಾನ ತರಬೇತಿ | ಕೊನೆಯ ದಿನಾಂಕ ಮೇ 25 

    April 18, 2026

    ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ‘ಭರತನಾಟ್ಯ ರಂಗಪ್ರವೇಶ’ | ಏಪ್ರಿಲ್ 26

    April 18, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.