Subscribe to Updates

    Get the latest creative news from FooBar about art, design and business.

    What's Hot

    ಬೋಳಾರದ ಪಾಲೆಮಾರ್ ಗಾರ್ಡನ್ ನಲ್ಲಿ ‘ಸ್ವರಾಲಯ ಸಾಧನಾ ಶಿಬಿರ’

    July 1, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ವಿಗಡ ವಿಕ್ರಮರಾಯ’ ನಾಟಕ ಪ್ರದರ್ಶನ | ಜುಲೈ 06

    July 1, 2025

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಚಿತ್ರಕಲಾ ಪ್ರವೀಣೆ – ರಾಧಿಕಾ ಮಕರಂದ ಬಾಯರಿ
    Article

    ಚಿತ್ರಕಲಾ ಪ್ರವೀಣೆ – ರಾಧಿಕಾ ಮಕರಂದ ಬಾಯರಿ

    February 9, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಲೆ ನೀವು ನೋಡುವುದಲ್ಲ ಆದರೆ ಇತರರರು ಕಲೆಯನ್ನು ನೋಡುವಂತೆ ಮಾಡುವುದು ಎಂಬ ಒಂದು ಮಾತಿದೆ. ಅದೇ ರೀತಿ ಮಂಡಲ ಆರ್ಟ್ ನಲ್ಲಿ ಸತತ ಪರಿಶ್ರಮ, ತಾಳ್ಮೆ, ಆಸಕ್ತಿಯಿಂದ ಕಲಿತು ಇಂದು ಈ ಕಲೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಓರ್ವ ಕಲಾವಿದೆ ರಾಧಿಕಾ ಮಕರಂದ ಬಾಯರಿ.

    ರಾಮಕೃಷ್ಣ ಹೆಬ್ಬಾರ್ ಮತ್ತು ಗೀತಾ ಇವರ ಮಗಳಾಗಿ 18.06.1994 ರಂದು ಜನನ. MSc (organic chemistry) ಇವರ ವಿದ್ಯಾಭ್ಯಾಸ. ಚಿಕ್ಕ ವಯಸ್ಸಿನಿಂದ ಆಸಕ್ತಿ ಇತ್ತು. ಲಾಕ್ ಡೌನ್ ಆಗಿದ್ದು, ಆಸಕ್ತಿ ಪೂರಕವಾಗಿ ಸಹಾಯವಾಯಿತು. ಯೂಟ್ಯೂಬ್ ಅಲ್ಲಿ “Goodness In You” ಎಂಬ ಆರ್ಟ್ ಚಾನೆಲ್ ನೋಡಿ ಅಭ್ಯಾಸ ಮಾಡಿ ಇಂದು ಒಳ್ಳೆಯ ಚಿತ್ರ ಕಲಾವಿದೆಯಾಗಿ ಬೆಳೆಯಲು ಸಾಧ್ಯವಾಯಿತು ಎಂದು ರಾಧಿಕಾ ಅವರು ಹೇಳುತ್ತಾರೆ.

    ಡಾಟ್ ಮಂಡಲ ಆರ್ಟ್ ಇವರ ನೆಚ್ಚಿನ ಚಿತ್ರಕಲೆ.ಡೆಮಿ ಡೇವಿಡ್ಸನ್, ನೈರೋಬಿ, ಪ್ರಸುನ್ ಬಾಲಸುಬ್ರಮಣ್ಯಂ (Mandala Artist) ನೆಚ್ಚಿನ ಚಿತ್ರಕಲಾಕಾರರು. ಒಂದು ಡಾಟ್ ಮಂಡಲ ಆರ್ಟ್ ಮಾಡಲು 6 ರಿಂದ 8 ದಿನ ಬೇಕು ಆಗುತ್ತದೆ ಎಂದು ಹೇಳುತ್ತಾರೆ ರಾಧಿಕಾ.

    ಚಿತ್ರ ಕಲೆ ಕ್ಷೇತ್ರದ ಇಂದಿನ ಸ್ಥಿತಿ ಗತಿ ಹಾಗೂ ಮುಂದಿನ ಯೋಜನೆಗಳು:-
    ಹೊಸ- ಹೊಸ ಪ್ರಯೋಗಗಳು ಈಗೀಗ ಜಾಸ್ತಿ. ಚಿಕ್ಕ ಮಕ್ಕಳಿಗೆ ಕಲಿಯುವ ಅವಕಾಶಗಳು ಜಾಸ್ತಿ ಆಗಿವೆ. ಮಂಡಲ ಆರ್ಟ್ ಅಲ್ಲಿ ಬೇರೆ ಬೇರೆ ಪ್ರಯೋಗಗಳನ್ನು ಮಾಡುವ ಇಚ್ಛೆ ಇದೆ ಎಂದು ಹೇಳುತ್ತಾರೆ ರಾಧಿಕಾ. ಪುಸ್ತಕ ಓದುವುದು ಇವರ ಹವ್ಯಾಸಗಳು.

    ರಾಧಿಕಾ ಅವರು 09.02.2018ರಂದು ಮಕರಂದ ಬಾಯರಿ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

    ಇವರು ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಕಲಾಮಾತೆಯು ಆಶೀರ್ವಾದ ಇವರ ಮೇಲೆ ಸದಾ ಇರಲಿ, ಕಲಾ ಲೋಕಕ್ಕೆ ಇನ್ನಷ್ಟು ಕೊಡುಗೆ ಇವರಿಂದ ಬರಲಿ ಎಂಬುದು ಎಲ್ಲಾ ಕಲಾಭಿಮಾನಿಗಳ ಅಪೇಕ್ಷೆ.
    – ಶ್ರವಣ್ ಕಾರಂತ್ ಕೆ., ಮಂಗಳೂರು

    Share. Facebook Twitter Pinterest LinkedIn Tumblr WhatsApp Email
    Previous ArticleSandesha Awards 2023
    Next Article ಅಂತರಂಗ ಬಹಿರಂಗ ತಂಡದ ‘ಹಿಂಗ್ ಮಾಡಿದ್ರೆ ಹೇಗೆ?’ – ನಾಟಕ ವಿಮರ್ಶೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಉದಯಕುಮಾರ್ ಹಬ್ಬುರವರ ಪೌರಾಣಿಕ ಕಾದಂಬರಿ ‘ಉತ್ತರೆ’

    June 28, 2025

    ವಿಶೇಷ ಲೇಖನ – ಛಂದೋಬದ್ಧ ಕವಿತೆಗಳ ಕರ್ತೃ ವಿ. ಬಿ. ಮೊಳೆಯಾರ

    June 26, 2025

    Book Review | ‘The Aquarium’

    June 25, 2025

    ವಿಶೇಷ ಲೇಖನ – ಅನನ್ಯ ರಂಗಕರ್ಮಿ ಜಿ. ಕೆ. ಐತಾಳ್

    June 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.