ಬೆಂಗಳೂರು : ಬೆಂಗಳೂರಿನ ಆಧಾರಿತ ನೃತ್ಯ, ನಾಟಕ ಮತ್ತು ಸಂಗೀತ ತಂಡ ಕ್ರಾನಿಕಲ್ಸ್ ಆಫ್ ಇಂಡಿಯಾ ಇದರ ವತಿಯಿಂದ ‘ಋತಮ್’ ಕನ್ನಡ ರಂಗಭೂಮಿ ಸಂಗೀತದ ಸಂಭ್ರಮದ ಸಂಜೆ ದಿನಾಂಕ 16 ಮೇ 2026ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಬನಶಂಕರಿಯ ನಾಣಿ ಅಂಗಳದ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಆಯೋಜಿಸಲಾಗಿದೆ.
ಮೇಘನಾ ಎನ್.ಕೆ., ಅನನ್ಯ ಸುರೇಶ್, ವಿವೇಕ್ ಗೋವಿಂದರಾಜು, ಪುನೀತ್ ವಿ. ಭಾರದ್ವಾಜ್, ಸುಧೀಫ್ ಎ., ಅಭಿಷೇಕ್ ವಿ. ಗೋಖವಿ, ಯಶಸ್ವಿನಿ ಪ್ರಕಾಶ್ ಮತ್ತು ಶ್ರೀನಿಧಿ ಎಂ.ಎಸ್. ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಮಾಹಿತಿಗೆ 88674 19347 ಸಂಖ್ಯೆಯನ್ನು ಸಂಪರ್ಕಿಸಿರಿ.

