ಬೆಂಗಳೂರು : ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಇದರ ವತಿಯಿಂದ ಸುಚಿತ್ರಾ ಹಿರಣ್ಣಯ್ಯ ನಾಟಕೋತ್ಸವವನ್ನು ಶ್ರೀ ಮಾಸ್ಟರ್ ಹಿರಣ್ಣಯ್ಯನವರ ಸ್ಮರಣಾರ್ಥ ದಿನಾಂಕ 16ರಿಂದ 19 ಏಪ್ರಿಲ್ 2026ರವರೆಗೆ ಬೆಂಗಳೂರಿನ ಬನಶಂಕರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರಗಳು, ಮಾಸ್ಟರ್ ಕ್ಲಾಸ್, ಜನಪದ ನೃತ್ಯ ಮತ್ತು ಬೀದಿ ನಾಟಕ ಹಾಗೂ ನಾಟಕ ಪ್ರದರ್ಶನಗಳು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಎಚ್.ಎನ್.ಎನ್. ಸ್ಟುಡಿಯೋ, ಪುರವಂಕರ ಸಭಾಂಗಣ, ಗ್ರ್ಯಾಂಡ್ ಸ್ಟೆಪ್ಸ್ ಮತ್ತು ಪೀರ್ ರಂಗಸ್ಥಳದಲ್ಲಿ ನಡೆಯಲಿದೆ.
ದಿನಾಂಕ 16 ಮತ್ತು 17 ಏಪ್ರಿಲ್ 2026ರಂದು ಬೆಳಗ್ಗೆ 10-00ರಿಂದ ಸಂಜೆ 4-00 ತನಕ ಅಪೂರ್ವ ಆರ್ಥರ್ ಇವರಿಂದ ‘ತಾಳದಿಂದ ಮನಸ್ಸು ಮತ್ತು ಶರೀರದ ಸಿದ್ಧತೆ’ ಹಾಗೂ ದಿನಾಂಕ 18 ಮತ್ತು 19 ಏಪ್ರಿಲ್ 2026ರಂದು ಬೆಳಗ್ಗೆ 10-00ರಿಂದ ಸಂಜೆ 4-00 ತನಕ ಹವಿಶ್ ಶ್ರೀನಾಥ್ ಇವರಿಂದ ‘ರಂಗ ಸಂಗೀತ’ ಎಂಬ ವಿಷಯಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿದೆ.
ದಿನಾಂಕ 16 ಏಪ್ರಿಲ್ 2026ರಂದು ಸಂಜೆ 4-30 ಗಂಟೆಗೆ ಸಿಂಧು ಶ್ರೀನಿವಾಸ ಮೂರ್ತಿ ಇವರಿಂದ ಮಾಸ್ಟರ್ ಕ್ಲಾಸ್, 6-15 ಗಂಟೆಗೆ ಆರ್.ಸಿ. ಕಾಲೇಜಿನ ತಂಡದಿಂದ ‘ಡೊಳ್ಳು ಕುಣಿತ’, ಪುನೀತ್ ರಂಗಾಯಣ ಇವರ ನಿರ್ದೇಶನದಲ್ಲಿ ಶ್ರೀ ದಕ್ಷ ಅಕಾಡೆಮಿ ಕಾಲೇಜಿನ ದಕ್ಷತರಂಗ ತಂಡದವರಿಂದ ‘ಜ್ಞಾತಪರ್ವ’,
ದಿನಾಂಕ 17 ಏಪ್ರಿಲ್ 2026ರಂದು ಸಂಜೆ 4-30 ಗಂಟೆಗೆ ಬಾಬು ಹಿರಣ್ಣಯ್ಯ ಇವರಿಂದ ಮಾಸ್ಟರ್ ಕ್ಲಾಸ್, 6-15 ಗಂಟೆಗೆ ಕಾರ್ತಿಕ್ ಎಂ.ಜಿ. ಇವರ ನಿರ್ದೇಶನದಲ್ಲಿ ನಾಗಾರ್ಜುನ ಪದವಿ ಕಾಲೇಜಿನ ತಂಡದಿಂದ ‘ನಮ್ಮ ರಂಗಭೂಮಿ ನಮ್ಮ ಶಕ್ತಿ’ ಬೀದಿ ನಾಟಕ, ಪ್ರೊ. ಮಧುರಾ ಡಿ. ಇವರ ನಿರ್ದೇಶನದಲ್ಲಿ ನಾಗಾರ್ಜುನ ಪದವಿ ಕಾಲೇಜಿನ ರಂಗ ಚೈತನ್ಯ ತಂಡದವರಿಂದ ‘ಸೇವಂತಿ ಪ್ರಸಂಗ’,
ದಿನಾಂಕ 18 ಏಪ್ರಿಲ್ 2026ರಂದು ಸಂಜೆ 4-30 ಗಂಟೆಗೆ ಪವನ್ ಕುಮಾರ್ ಇವರಿಂದ ಮಾಸ್ಟರ್ ಕ್ಲಾಸ್, 6-15 ಗಂಟೆಗೆ ಡಾ. ಬೇಲೂರು ರಘುನಂದನ ಇವರ ನಿರ್ದೇಶನದಲ್ಲಿ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡದಿಂದ ‘ಯು ಆರ್ ಆಲ್ಸೋ ಎನ್ ಅನಿಮಲ್ ಲೈಕ್ ಅಸ್’ ಬೀದಿ ನಾಟಕ, ದಾಕ್ಷಾಯಿಣಿ ಭಟ್ ಎ. ಇವರ ನಿರ್ದೇಶನದಲ್ಲಿ ಕ್ರೈಸ್ಟ್ ವಿಶ್ವ ವಿದ್ಯಾಲಯ ಕಾಲೇಜಿನ ರಂಗ ಸಾಂಗತ್ಯ ತಂಡದವರಿಂದ ‘ಅಭಿಯಾನ’,
ದಿನಾಂಕ 19 ಏಪ್ರಿಲ್ 2026ರಂದು ಸಂಜೆ 4-30 ಗಂಟೆಗೆ ಬಾಲಾಜಿ ಮನೋಹರ್ ಇವರಿಂದ ಮಾಸ್ಟರ್ ಕ್ಲಾಸ್, 6-15 ಗಂಟೆಗೆ ಗೌರವ್ ಶೇಷಗಿರಿ ಇವರ ನಿರ್ದೇಶನದಲ್ಲಿ ರೇವಾ ವಿಶ್ವವಿದ್ಯಾಲಯ ಕಾಲೇಜು ತಂಡದಿಂದ ‘ಆಪರೇಷನ್ ಸಿಂಧೂರ’ ಬೀದಿ ನಾಟಕ, ವೆಂಕನಗೌಡ ಆನೇರ್ ಇವರ ನಿರ್ದೇಶನದಲ್ಲಿ ಚಿಂತಾಮಣಿ ರೇಷ್ಮೆ ಕೃಷಿ ಮಹಾ ವಿದ್ಯಾಲಯ ಕಾಲೇಜಿನ ಚಿಗುರು ಕಲಾ ತಂಡದವರಿಂದ ‘ಮಹೋರ್ಣ’ ನಾಟಕಗಳು ಪ್ರದರ್ಶನಗೊಳ್ಳಲಿದೆ.

