Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ ಕವನ ಸಂಕಲನ ಬಿಡುಗಡೆ | ಸೆಪ್ಟೆಂಬರ್ 21

    September 19, 2026

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಸಂಸ್ಕೃತಿ ಸಿರಿ ಸಂಗಮ’ | ಸೆಪ್ಟೆಂಬರ್ 20

    September 19, 2026

    ಧಾರವಾಡ ರಂಗಾಯಣದಲ್ಲಿ ‘ಕವಿ ಕಾವ್ಯ ಸಮ್ಮೇಳನ’ | ಸೆಪ್ಟೆಂಬರ್ 20

    September 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಹಿರಿಯ ಯಕ್ಷಗಾನ ಕಲಾವಿದ ಎಂ.ಟಿ. ಸುಂದರ ಕುಲಾಲ್ ನಿಧನ
    Yakshagana

    ಹಿರಿಯ ಯಕ್ಷಗಾನ ಕಲಾವಿದ ಎಂ.ಟಿ. ಸುಂದರ ಕುಲಾಲ್ ನಿಧನ

    September 19, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಟೀಲು ಶ್ರೀ ದುರ್ಗಾ ಪರಮೇಶ್ವರಿ, ಧರ್ಮಸ್ಥಳ ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಒಟ್ಟು ಆರು ದಶಕಗಳ ಕಾಲ ಕಲಾವಿದರಾಗಿ ತಿರುಗಾಟ ನಡೆಸಿದ ಮುಳಿಗದ್ದೆ ತಾಳ್ತಜೆ ಸುಂದರ ಕುಲಾಲ್ (79) ಅವರು ಕಾಸರಗೋಡಿನ ಬೇಡಗುಡ್ಡೆಯಲ್ಲಿರುವ ಸ್ವಗೃಹದಲ್ಲಿ ದಿನಾಂಕ 15 ಸೆಪ್ಟೆಂಬರ್ 2026ರಂದು ನಿಧನ ಹೊಂದಿದರು. ಮೃತರು ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಯಕ್ಷಗಾನ ಕಲಾವಿದರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಅವರು ತಮ್ಮ ವೃತ್ತಿಬದುಕಿನ ಕೊನೆಯ ಎರಡು ದಶಕಗಳನ್ನು ಕಟೀಲು ಮೇಳದಲ್ಲೇ ಕಳೆದಿದ್ದರು.

    ಎಂ.ಟಿ.ಎಸ್. ಕುಲಾಲರು ಯಕ್ಷಗಾನದ ಆಡುಂಬೊಲದಲ್ಲಿ ಹುಟ್ಟಿ ಬೆಳೆದವರು. ಅವರು ತಮ್ಮ ಮಾವ ಬೇತಕುಂಞ ಕುಲಾಲ್ ಇವರಲ್ಲಿ ಯಕ್ಷಗಾನ ಹೆಜ್ಜೆಗಾರಿಕೆ ಅಭ್ಯಾಸಮಾಡಿ, ಧರ್ಮಸ್ಥಳ ಮೇಳ ಸೇರಿ ಕೋಡಂಗಿ ವೇಷದಿಂದ ವೃತ್ತಿ ಬದುಕು ಆರಂಭಿಸಿದರು. ಬಾಲಗೋಪಾಲ, ಮುಖ್ಯ ಸ್ತ್ರೀವೇಷಗಳನ್ನೂ ಮಾಡಿದರು. ಮುಂದೆ, ಮೂಲ್ಕಿ, ಸುರತ್ಕಲ್, ಕುಂಬ್ಳೆ, ಕದ್ರಿ, ಬಪ್ಪನಾಡು ಮೇಳಗಳಲ್ಲಿ ವೃತ್ತಿ ಬದುಕು ಮುಂದುವರಿಸಿ, ಕಟೀಲು ಮೇಳಕ್ಕೆ ಸೇರಿ, ನಿವೃತ್ತರಾದರು.

    ತೆಂಕುತಿಟ್ಟಿನ ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಕುಲಾಲ್ ಅವರು ರಾಜವೇಷ, ಪೋಷಕ ವೇಷ, ಸ್ತ್ರೀವೇಷ, ಹಾಸ್ಯ ಹೀಗೆ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರು. ಭಾಗವತಿಕೆಯಲ್ಲೂ ಪರಿಣತಿ ಪಡೆದಿದ್ದರು. ಒಂದೇ ತಿರುಗಾಟದಲ್ಲಿ ಕಾರ್ತವೀರ್ಯನಾಗಿ, ವನಪಾಲಕನಾಗಿ, ರಾವಣನಾಗಿ, ರೇಣುಕೆಯಾಗಿ, ಜಮದಗ್ನಿಯಾಗಿ, ಭಾರ್ಗವನಾಗಿ ಪಾತ್ರವಹಿಸಿದ ಅಸಾಧಾರಣ ಪ್ರತಿಭೆ ಅವರು. ಕೋಟಿ ಚೆನ್ನಯ, ಸಾವಿರೊಡೊರ್ತಿ ಸಾವಿತ್ರಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಕಟೀಲು ಮೇಳದ ಅಭಿಮಾನಿಗಳು ಅವರ ಮನೆಗೆ ತೆರಳಿ ಅವರನ್ನು ಗೌರವಿಸಿದ್ದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಹೆಚ್.ಕೆ.ಎಸ್. ಕಾಲೇಜಿನಲ್ಲಿ ‘ಕಾವ್ಯ ಪರ್ವ’ ಕಾರ್ಯಕ್ರಮ
    Next Article ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ಕ್ಕೆ ವಿವಿಧ ಸಮಿತಿಗಳ ರಚನೆ
    roovari

    Add Comment Cancel Reply


    Related Posts

    ಶ್ರೀ ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ ಕವನ ಸಂಕಲನ ಬಿಡುಗಡೆ | ಸೆಪ್ಟೆಂಬರ್ 21

    September 19, 2026

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಸಂಸ್ಕೃತಿ ಸಿರಿ ಸಂಗಮ’ | ಸೆಪ್ಟೆಂಬರ್ 20

    September 19, 2026

    ಧಾರವಾಡ ರಂಗಾಯಣದಲ್ಲಿ ‘ಕವಿ ಕಾವ್ಯ ಸಮ್ಮೇಳನ’ | ಸೆಪ್ಟೆಂಬರ್ 20

    September 19, 2026

    ಕನ್ನಡ ಭವನದಲ್ಲಿ ‘ಮುಧೋಳ ಕವಿ-ಕಾವ್ಯ ಸಮ್ಮೇಳನ ಹಾಗೂ ರತ್ನ ಸನ್ಮಾನ 2026’ | ಸೆಪ್ಟೆಂಬರ್ 20

    September 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.