Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ನಯನ ರಂಗಮಂದಿರದಲ್ಲಿ ‘ಕರ್ಣಾಂತರಂಗ’ ಏಕವ್ಯಕ್ತಿ ಪ್ರಸ್ತುತಿ | ಆಗಸ್ಟ್ 02

    August 1, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಸಂಸ ನಾಟಕೋತ್ಸವ’ | ಆಗಸ್ಟ್ 3, 4 ಮತ್ತು 5

    August 1, 2026

    ಕಾರಂತ ಥೀಮ್ ಪಾರ್ಕಿನಲ್ಲಿ ತೆಂಕುತಿಟ್ಟಿನ ಯಕ್ಷಗಾನ ಗೊಂಬೆಯಾಟ ಪ್ರದರ್ಶನ

    August 1, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯಕ್ಷಗಾನದ ಹಾಸ್ಯ ಕಲಾವಿದ ಕಾಸರಕೋಡು ಶ್ರೀಧರ ಭಟ್ ನಿಧನ
    Yakshagana

    ಯಕ್ಷಗಾನದ ಹಾಸ್ಯ ಕಲಾವಿದ ಕಾಸರಕೋಡು ಶ್ರೀಧರ ಭಟ್ ನಿಧನ

    August 1, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹೊನ್ನಾವರ : ಬಡಗು ತಿಟ್ಟಿನ ಪ್ರತಿಭಾಸಂಪನ್ನ ಹಾಸ್ಯಕಲಾವಿದ ಕಾಸರಕೋಡು ಶ್ರೀಧರ ಸುಬ್ರಾಯ ಭಟ್ (51) ದಿನಾಂಕ 31 ಜುಲೈ 2026ರಂದು ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಹೊನ್ನಾವರ ತಾಲೂಕಿನ ಕಾಸರಗೋಡಿನವರಾದ ಇವರು ಪ್ರಸ್ತುತ ಸಾಲ್ಕೋಡು ಗ್ರಾಮದ ಮುಲ್ಲೆಮಕ್ಕಿ ಎಂಬಲ್ಲಿ ವಾಸವಾಗಿದ್ದರು.

    ‘ಹಾಸ್ಯ ಚಕ್ರವರ್ತಿ’ ಎಂದೇ ಪ್ರಸಿದ್ಧರಾಗಿದ್ದ ಅವರು ಮೂರೂವರೆ ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಹಿತಮಿತ ಹಾಸ್ಯದೊಂದಿಗೆ ಮುಖ್ಯ ಕಲಾವಿದರಿಗೆ ಪೂರಕವಾಗುತ್ತಿದ್ದರು. ತಮ್ಮ ಸಮಯ ಪ್ರಜ್ಞೆಯಿಂದ ದಿನನಿತ್ಯದ ಘಟನಾವಳಿಗಳನ್ನು ತಮ್ಮ ಸಂಭಾಷಣೆಯಲ್ಲಿ ಸೇರಿಸಿ ಜನರನ್ನು ನಗಿಸುವಳ್ಳಿ ಸಿದ್ಧಹಸ್ತರಾಗಿದ್ದರು. ಕೆರೆಮನೆ ಶಿವರಾಮ ಹೆಗಡೆ ಮತ್ತು ದೊಡ್ಡತಂದೆ ನರಸಿಂಹ ಭಟ್ಟರಿಂದ ಪ್ರೇರಿತರಾಗಿ ಹದಿನಾರರ ಹರೆಯದಲ್ಲೇ ಕೆರೆಮನೆ ಕೇಂದ್ರದಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ಯಕ್ಷಗಾನ ಕಲಿತು ಹದಿನೆಂಟನೆ ವಯಸ್ಸಿಗೆ ಮೇಳ ಸೇರಿ 33 ವರ್ಷಗಳ ಕಲಾಸೇವೆ ಗೈದಿರುತ್ತಾರೆ. ಇಡಗುಂಜಿ, ಸಾಲಿಗ್ರಾಮ, ಮಂದಾರ್ತಿ, ಜಲವಳ್ಳಿ, ಗುಂಡಬಾಳ ಮೇಳಗಳಲ್ಲಿ 13 ವರ್ಷಗಳ ತಿರುಗಾಟ ಮಾಡಿ ಮುಂದೆ ವಿವಿಧ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಯಾರ ಅನುಕರಣೆಯೂ ಇಲ್ಲದ ತುಂಬಾ ಚುರುಕಿನ ಮಾತು, ಕುಣಿತ, ಅಭಿನಯಗಳಿಂದ ಕಲಾರಸಿಕರಿಗೆ ಸಂತೋಷ ನೀಡುತ್ತಿದ್ದರು. ಕನಕಾಂಗಿ ಕಲ್ಯಾಣದ ದೂತ, ಕೀಚಕ ವಧೆಯ ವಿಜಯ, ದುಷ್ಟಬುದ್ಧಿ ಪ್ರಸಂಗದ ಕಪ್ಪದ ದೂತ, ಕಾರ್ತವೀರ್ಯಾರ್ಜುನದ ಬಾಗಿಲ ಭಟ, ಕೃಷ್ಣಾರ್ಜುನ ಪ್ರಸಂಗದ ದಾರುಕ ಹೀಗೆ ಹಲವು ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಚಂದಗೋಪ, ರಜಕ, ನಂದಿಶೆಟ್ಟಿ, ಬೇಹಿನಚರ, ಅಜ್ಜಿ ಹೀಗೆ ಎಲ್ಲಾ ರೀತಿಯ ಪೌರಾಣಿಕ ಹಾಸ್ಯಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸುತ್ತಿದ್ದರು. ಅಸಾಧಾರಣ ಪ್ರತ್ಯುತ್ಪನ್ನ ಮತಿತ್ವ ಅವರದಾಗಿತ್ತು. ಚಂಡೆವಾದನದಲ್ಲೂ ಪರಿಣತರಾಗಿದ್ದರು. ಅವರ ಯಕ್ಷಗಾನ ಸೇವೆ ಗುರುತಿಸಿ ಹಲವೆಡೆ ಗೌರವಿಸಲಾಗಿತ್ತು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಪಂಜ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಯಕ್ಷಾಷಾಢ -7’ ತಾಳಮದ್ದಳೆ
    Next Article ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ತಿಂಗಳ ಕಾರ್ಯಕ್ರಮದಲ್ಲಿ ‘ಯಕ್ಷಗಾನ ತಾಳಮದ್ದಲೆ’
    roovari

    Add Comment Cancel Reply


    Related Posts

    ಬೆಂಗಳೂರಿನ ನಯನ ರಂಗಮಂದಿರದಲ್ಲಿ ‘ಕರ್ಣಾಂತರಂಗ’ ಏಕವ್ಯಕ್ತಿ ಪ್ರಸ್ತುತಿ | ಆಗಸ್ಟ್ 02

    August 1, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಸಂಸ ನಾಟಕೋತ್ಸವ’ | ಆಗಸ್ಟ್ 3, 4 ಮತ್ತು 5

    August 1, 2026

    ಕಾರಂತ ಥೀಮ್ ಪಾರ್ಕಿನಲ್ಲಿ ತೆಂಕುತಿಟ್ಟಿನ ಯಕ್ಷಗಾನ ಗೊಂಬೆಯಾಟ ಪ್ರದರ್ಶನ

    August 1, 2026

    ತುಳು ಸಾಹಿತ್ಯ ಅಕಾಡೆಮಿಯಿಂದ ‘ಮರಿಯಲದ ಮಿನದನ’ | ಆಗಸ್ಟ್ 02

    August 1, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.