ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ ಧಾರವಾಡ ಇದರ ವತಿಯಿಂದ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 15 ಏಪ್ರಿಲ್ 2026ರಂದು ಸಂಜೆ 5-00 ಗಂಟೆಗೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ರೂಪಾ ಜೋಶಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಶ್ರೀಮತಿ ಮಾಲತಿ ಮುದಕವಿ ರಚಿತ ಕೃತಿಗಳಾದ ‘ಜಗವೇ ನಾಟಕ ರಂಗಾ’, ‘ರಾಮರಾಜ್ಯ’ – ಅನುವಾದಿತ ಕಾದಂಬರಿ ಮತ್ತು ‘ಸಂಸಾರದಲ್ಲಿ ಸರಿಗಮ’ – ಕಥಾ ಸಂಕಲನ ಹಾಗೂ ಶ್ರೀಮತಿ ಸರಸ್ವತಿ ಭೋಸಲೆ ಇವರ ಕೃತಿಗಳಾದ ‘ಕೇಡಿಲ್ಲದ ನುಡಿ’ – ಲಲಿತ ಪ್ರಬಂಧಗಳು ಮತ್ತು ‘ದೇವರ ದುಡ್ಡು’ – ಮಕ್ಕಳ ಕಥಾಸಂಕಲನ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಶ್ರೀಮತಿ ರೂಪಾ ಜೋಶಿ, ಶ್ರೀಮತಿ ವಿನುತಾ ಹಂಚಿನಮನೆ ಮತ್ತು ಶ್ರೀಧರ ಗಸ್ತಿ ಇವರುಗಳು ಕೃತಿ ಪರಿಚಯ ಮಾಡಲಿದ್ದಾರೆ.

