ಉಡುಪಿ : ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಅಭಿಜ್ಞಾನ ಕಲಾಧಾಮ ಉಡುಪಿ ಇವರ ಸಹಯೋಗದಲ್ಲಿ ‘ಮಧುಮಾಸದ ಸಂಜೆ’ ಸಾಹಿತ್ಯ-ಸಂಗೀತ-ಭಾವಪರ್ವ ಕಾರ್ಯಕ್ರಮವನ್ನು ದಿನಾಂಕ 25 ಏಪ್ರಿಲ್ 2026ರಂದು ಸಂಜೆ 4-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದ್ವಾನ್ ನಟರಾಜ ಹೆಚ್.ಎನ್. ಇವರಿಂದ ವಸಂತಗೀತೆ, ಶರತ್ ಕುಮಾರ್ ನಾಡ ಇವರ ಹಿಂದೂಸ್ಥಾನಿ ಸಂಗೀತಕ್ಕೆ ಪ್ರಣಾದ ರಾವ್ ಸಂವಾದಿನಿ ಮತ್ತು ಶಶಿಕಿರಣ ಮಣಿಪಾಲ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ. ಸಾಹಿತ್ಯಪರ್ವದಲ್ಲಿ ‘ಶ್ರೀರಾಮನಿರ್ಯಾಣ’ ಪಲ್ಲವಿ ಕೆದ್ಲಾಯ ಇವರು ವಾಚನ ಹಾಗೂ ಡಾ. ರಾಘವೇಂದ್ರ ರಾವ್ ಇವರು ವ್ಯಾಖ್ಯಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಗೀತ ವಿಶಾರದ ಶ್ರೀ ತುಲಸೀದಾಸ್, ಶ್ರೀಮತಿ ಉಮಾ ಮಂಜುನಾಥ ಮತ್ತು ಶ್ರೀ ಶರತ್ ಕುಮಾರ್ ನಾಡ ಇವರಿಗೆ ಗೌರವಾರ್ಪಣೆ ಮಾಡಲಾಗುವುದು.

