ದಾವಣಗೆರೆ : ಅನ್ವೇಷಕರು ಆರ್ಟ್ ಫೌಂಡೇಷನ್ (ರಿ.) ದಾವಣಗೆರೆ ಇದರ ವತಿಯಿಂದ 2026ರ ‘ರಾಷ್ಟ್ರೀಯ ಬಹು ಭಾಷಾ ನಾಟಕೋತ್ಸವ’ವನ್ನು ದಿನಾಂಕ 17 ಏಪ್ರಿಲ್ 2026ರಿಂದ 17 ಮೇ 2026ರವರೆಗೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳ ಳಾಗಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಗಂಟೆ 6:45ಕ್ಕೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿದೆ.
ಈಗಾಗಲೇ ಏಪ್ರಿಲ್ 17ರಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಕಾದಂಬರಿ ಆಧಾರಿತ ‘ಒಮ್ಮೆ ಹೆಣ್ಣಾಗು’, ರಾಷ್ಟ್ರಕವಿ ಕುವೆಂಪು ಅವರ ‘ನನ್ನ ಗೋಪಾಲ’, ಡಾ. ಜಿ.ಎಚ್. ಶಿವರುದ್ರಪ್ಪ ಅವರ ‘ಹಾಡು ಹಕ್ಕಿ’, ಟಿ.ಪಿ. ಕೈಲಾಸಂ ಇವರ ‘ನಂ ಕಂಪನಿ’ ನಾಟಕಗಳು ಪ್ರದರ್ಶನಗೊಂಡಿದ್ದು, ದಿನಾಂಕ 02 ಮೇ 2026ರಂದು ಪ್ರವರ ಥಿಯೇಟರ್ ಅಭಿನಯಿಸುವ ಪೂರ್ಣಚಂದ್ರ ತೇಜಸ್ವಿ ಇವರ ‘ಅಣ್ಣನ ನೆನಪು’, ದಿನಾಂಕ 03 ಮೇ 2026ರಂದು ಅನಾವರಣ ಬೆಂಗಳೂರು ಅಭಿನಯಿಸುವ ಕೆ.ವೈ. ನಾರಾಯಣ ಸ್ವಾಮಿ ಇವರ ‘ವರ್ಣ ಪಲ್ಲಟ’, ದಿನಾಂಕ 09 ಮೇ 2026ರಂದು ನಾವು ನೀವು ಸಾಂಸ್ಕೃತಿಕ ವೇದಿಕೆ-ದಾವಣಗೆರೆ ಅಭಿನಯಿಸುವ ಮಂಜುನಾಥ್ ಎಸ್.ಟಿ. ನಿರ್ದೇಶನದ ‘ಅಂಗೈರೇಖೆ’, ದಿನಾಂಕ 10 ಮೇ 2026ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ತಂಡ ಅಭಿನಯಿಸುವ ‘ಹ್ಯಾಂಗ್ ಆನ್’ ಕೊಂಕಣಿ ನಾಟಕ, ದಿನಾಂಕ 15 ಮೇ 2026ರಂದು ಚೆನ್ನೈಯ ಪರ್ಚ್ ಪ್ರೊಡಕ್ಷನ್ ಅಭಿನಯಿಸುವ ರಾಜೀವ್ ಕೃಷ್ಣನ್ ಇವರ ನಿರ್ದೇಶನದ ತಮಿಳು ನಾಟಕ ‘ಕಿಂದನ್ ಚರಿತಿರಂ’, ದಿನಾಂಕ 16 ಮೇ 2026ರಂದು ಕೇರಳದ ಲಿಟ್ಲಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಅಭಿನಯಿಸುವ ಅರುಣ್ ಲಾಲ್ ವಿನ್ಯಾಸದ ಮಲಯಾಳಂ ನಾಟಕ ‘ಚಿಲ್ಲರ ಸಮರಮ್’ ಹಾಗೂ ದಿನಾಂಕ 17 ಮೇ 2026ರಂದು ಸಂಕಲ್ಪ ಮೈಸೂರು ಅಭಿನಯಿಸುವ ಹುಲುಗಪ್ಪ ಕಟ್ಟೀಮನಿ ನಿರ್ದೇಶನದ ಜಯಂತ್ ಕಾಯ್ಕಿಣಿ ರೂಪಾಂತರದ ‘ಜೊತೆಗಿರುವ ಚಂದಿರ’ ನಾಟಕ ಪ್ರದರ್ಶನ ನಡೆಯಲಿದೆ.

