Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮಾಸಿಕ ಕೂಟ

    May 21, 2025

    ವಿನಮ್ರ ಇಡ್ಕಿದು ಹಾಡಿದ ದೃಶ್ಯ ಗೀತೆಗಳು ಬಿಡುಗಡೆ ಕಾರ್ಯಕ್ರಮ

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯಲ್ಲಿ “ಸಾರ್ವಕಾಲಿಕ” ಪುಸ್ತಕ ಬಿಡುಗಡೆ ಸಮಾರಂಭ
    Book Release

    ಉಡುಪಿಯಲ್ಲಿ “ಸಾರ್ವಕಾಲಿಕ” ಪುಸ್ತಕ ಬಿಡುಗಡೆ ಸಮಾರಂಭ

    April 12, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    12 ಏಪ್ರಿಲ್ 2023, ಉಡುಪಿ: ರಥಬೀದಿ ಗೆಳೆಯರು ವತಿಯಿಂದ ರವಿವಾರ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಹಿರಿಯ ಅಂಕಣಕಾರ ಡಾ. ಬಿ. ಭಾಸ್ಕರ್ ರಾವ್ ಅವರ ‘ಸಾರ್ವಕಾಲಿಕ’ ಪುಸ್ತಕವನ್ನು ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

    ಶಿಕ್ಷಣ, ಮಕ್ಕಳು, ಪರಿಸರ, ಸಂವಿಧಾನ, ಧರ್ಮ, ಪ್ರೀತಿ ಹೀಗೆ ವೈವಿಧ್ಯಮಯ ವಿಷಯ ಆಧರಿಸಿ ಬರೆದ ಹಲವು ಲೇಖನಗಳು ಈ ಕೃತಿಯಲ್ಲಿವೆ. ಇದರ ಆಳ, ಹರವು, ವೈವಿಧ್ಯ ಬೆರಗುಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ‘ಸಾರ್ವಕಾಲಿಕ’ ಎಂಬ ಶೀರ್ಷಿಕೆ ಅರ್ಥಪೂರ್ಣವಾದುದು ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವ‌ರ್ ರಾವ್ ಕೃತಿ ಅವಲೋಕನದಲ್ಲಿ ತಿಳಿಸಿದರು.

    ಎಲ್ಲ ಬರಹಗಳು ಸಾರ್ವಕಾಲಿಕವಾಗದು. ಇತಿಮಿತಿ ಹೊಂದಿದ ಅಂಕಣಕಾರ ಕೆಲವೇ ಲೇಖನಗಳನ್ನು ಸಾರ್ವಕಾಲಿಕ ಮೌಲ್ಯಗಳಿಂದ ಬರೆಯಬಹುದು. ಆಯಾ ಸಂದರ್ಭಕ್ಕೆ ಸರಿಯಾಗಿ ಹೊಸ ಸಮಾಜ ಹೇಗಿರಬೇಕು ಎಂಬ ಸೂಕ್ಷ್ಮ ಸಂವೇದನೆಗಳಿಂದ ಭಾಸ್ಕರ ರಾವ್ ಬರೆದ ಅನೇಕ ಲೇಖನ ಸಾರ್ವಕಾಲಿಕ ಮೌಲ್ಯವುಳ್ಳದ್ದಾಗಿದೆ. ಓದುಗರನ್ನು ಶಿಕ್ಷಿತ, ವಿಚಾರವಂತರನ್ನಾಗಿಸುವ ಅವರ ಪ್ರಯತ್ನ ಶ್ಲಾಘನೀಯ ಎಂದರು.

    ತಮಗೆ ಬರೆಯಬೇಕೆಂದು ಕಾಣಿಸಿದ ತುಡಿತ, ಉದಯವಾಣಿ, ತರಂಗ ಸಹಿತ ಪತ್ರಿಕೆಗಳು ಕೊಟ್ಟ ಅವಕಾಶಗಳನ್ನು ಓದುಗರು ಸ್ಪಂದಿಸಿದ ರೀತಿಗಳನ್ನು ಲೇಖಕ ಡಾ. ಬಿ. ಭಾಸ್ಕರ್ ರಾವ್ ಉಲ್ಲೇಖಿಸಿದರು. ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ವ೦ದಿಸಿದರು. ಕಾರ್ಯಕ್ರಮ ಸಂಯೋಜಕ ಜೆ.ಪಿ. ಪ್ರಭಾಕರ ತುಮರಿ ನಿರ್ವಹಿಸಿದರು. ‘ಉದಯವಾಣಿ’, ‘ತರಂಗ’, ‘ತುಷಾರ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ ‘ಸಾರ್ವಕಾಲಿಕ’ ಪ್ರಥಮ ಸಂಪುಟದಲ್ಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Article“ತುಳು ಹರಿಕಥೆ ಉಚ್ಚಯ-2023” ಸಮಾರೋಪ
    Next Article ಪೆರ್ಲ ಶಿವಾಂಜಲಿ ಕಲಾಕೇಂದ್ರದಲ್ಲಿ ನೃತ್ಯ ಕಾರ್ಯಾಗಾರ – ‘ಜ್ಞಾನ ವಿಕಾಸ -2023’
    roovari

    Add Comment Cancel Reply


    Related Posts

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣುಗಳ ‘ಕವಿಗೋಷ್ಠಿ’ | ಜೂನ್ 06 

    May 21, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಮತ್ತು ದತ್ತಿ ಪುರಸ್ಕಾರ ಪ್ರದಾನ | ಮೇ 21

    May 20, 2025

    ಕೊಂಕಣಿ ಲೇಖಕಿಯರ ಸಾಹಿತ್ಯ ಪ್ರಸ್ತುತಿ ‘ಅಸ್ಮಿತಾ’ ವಿಶೇಷ ಕಾರ್ಯಕ್ರಮ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.